
ಸಂದೀಪ್ ರೆಡ್ಡಿ ವಂಗಾ ತೆಲುಗಿನಲ್ಲಿ ‘ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ಸಂಚಲನ ಮೂಡಿಸಿದರು. ಇದಾದ ಬಳಿಕ ಅವರ ಖ್ಯಾತಿ ಹೆಚ್ಚಾಯಿತು. ಈ ಸಿನಿಮಾನ ಹಿಂದಿಯಲ್ಲಿ ‘ಕಬೀರ್ ಸಿಂಗ್ ಮಾಡಿ ಗೆದ್ದರು. ಆ ಬಳಿಕ ಅವರು ‘ಅನಿಮಲ್ ಸಿನಿಮಾ ಮಾಡಿ ಗೆಲುವು ಕಂಡರು. ಈ ಸಿನಿಮಾ ಮೂಲಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದರು. ಈ ಸಿನಿಮಾದಲ್ಲಿ ಮಹಿಳೆಯರನ್ನು ಕೆಳಕ್ಕೆ ಹಾಕುವಂತಿದೆ, ಬಹಳಷ್ಟು ಹಿಂಸೆ ಮತ್ತು ರಕ್ತಪಾತವಿದೆ ಎಂಬ ಟೀಕೆಗಳಿದ್ದವು. ಆದರೂ ಸಿನಿಮಾ ಗೆದ್ದಿದೆ. ಈಗ ಅವರ ಉಡುಗೆಯ ಬಗ್ಗೆ ಚರ್ಚೆ ನಡೆಉತ್ತಿದೆ.
ಸಿನಿಮಾಗಳ ಮೂಲಕ ಸದ್ದು ಮಾಡುವಂತೆ ಅವರು ತಮ್ಮ ಉಡುಗೆಯ ಮೂಲಕವೂ ಗಮನ ಸೆಳೆಯುತ್ತಾರೆ. ಸಂದೀಪ್ ರೆಡ್ಡಿ ಅವರ ಡ್ರೆಸ್ಸಿಂಗ್ ಶೈಲಿಯೂ ವಿಭಿನ್ನವಾಗಿದೆ. ಈ ನಿರ್ದೇಶಕರು ಯಾವುದೇ ಸಂದರ್ಭದಲ್ಲಿ ಕುರ್ತಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಸಂದೀಪ್ ಚಲನಚಿತ್ರ ಕಾರ್ಯಕ್ರಮಗಳು, ಸಮಾರಂಭಗಳು ಮತ್ತು ಸಂದರ್ಶನಗಳಿಗೆ ವರ್ಣರಂಜಿತ ಕುರ್ತಾಗಳಲ್ಲಿ ಹಾಜರಾಗುತ್ತಾರೆ. ಅವರು ಜೀನ್ಸ್ ಮತ್ತು ಟೀ ಶರ್ಟ್ಗಳಲ್ಲಿ ವಿರಳವಾಗಿ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಒಂದು ಮಹತ್ವದ ಕಾರಣ ಇದೆ.
ಚಿತ್ರರಂಗಕ್ಕೆ ಬರುವ ಮೊದಲು ಸಂದೀಪ್ ರೆಡ್ಡಿ ಅವರು ನಾಗಾರ್ಜುನ ನಟನೆಯ ‘ಕೆಡಿ’ ಚಿತ್ರದಲ್ಲಿ ಕೆಲಸ ಮಾಡಿದ್ದರು. ನಿರ್ದೇಶಕರು ನಾಗಾರ್ಜುನ ನಟಿಸಿದ ಈ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ, ಈ ಚಿತ್ರ ಹೆಚ್ಚು ಯಶಸ್ಸು ಗಳಿಸಲಿಲ್ಲ. ‘ಕೆಡಿ’ ನಂತರ ಸಂದೀಪ್ ಬೇರೆ ಚಿತ್ರದಲ್ಲಿ ಕೆಲಸ ಮಾಡಲು ಇಷ್ಟವಿರಲಿಲ್ಲ. ನಿರ್ದೇಶನ ಮಾತ್ರ ಮಾಡುತ್ತೇನೆ ಎಂದು ಭಾವಿಸಿ ಕಥೆಗಳನ್ನು ಬರೆಯಲು ಪ್ರಾರಂಭಿಸಿದರು.
ಸಂದೀಪ್ ಅವರು ಹೆಚ್ಚಾಗಿ ಮನೆಯಲ್ಲಿಯೇ ಇದ್ದು ಕಥೆಗಳನ್ನು ಬರೆಯುತ್ತಿದ್ದರಿಂದ, ರಾತ್ರಿಯಲ್ಲಿ ಧರಿಸುತ್ತಿದ್ದ ಕುರ್ತಾ ಮತ್ತು ಪೈಜಾಮವನ್ನೇ ಇರುತ್ತಿದ್ದರು. ಎರಡು ಅಥವಾ ಮೂರು ದಿನಗಳ ಕಾಲ ಅದನ್ನು ಧರಿಸಿದ ನಂತರ, ಕುರ್ತಾ ತುಂಬಾ ಆರಾಮದಾಯಕವೆನಿಸಿತು. ಇದರೊಂದಿಗೆ, ಅವರು ಹಗಲಿನಲ್ಲಿ ಮನೆಯಲ್ಲಿ ಜೀನ್ಸ್ ಮತ್ತು ಶರ್ಟ್ ಧರಿಸುವ ಬದಲು ಕುರ್ತಾ ಮತ್ತು ಪೈಜಾಮ ಧರಿಸಲು ಒಗ್ಗಿಕೊಂಡರು. ಈ ಕಾರಣಕ್ಕಾಗಿ, ಈಗ ಸಂದೀಪ್ ರೆಡ್ಡಿ ಹೆಚ್ಚಿನ ಸಂದರ್ಭಗಳಲ್ಲಿ ಹೊರಗೆ ಕುರ್ತಾ ಮತ್ತು ಪೈಜಾಮ ಧರಿಸುವುದನ್ನು ಕಾಣಬಹುದು.