
ಕಳೆದ ವರ್ಷದ ಸಿಸಿಎಲ್ನಲ್ಲಿ (CCL) ರನ್ನರ್ ಅಪ್ ಆಗಿರೋ ಕರ್ನಾಟಕ ಬುಲ್ಡೋಜರ್ಸ್ ತಂಡವು ಒಂದು ಪಂದ್ಯವನ್ನೂ ಸೋಲದೇ ಈ ಬಾರಿ ಫಿನಾಲೆಗೆ ಏರಿರುವುದು ವಿಶೇಷ. ಚೆನ್ನೈ ಕಿಂಗ್ಸ್ ವಿರುದ್ಧ ಜನವರಿ 31ರಂದು ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದರು ಮತ್ತು ಫಿನಾಲೆಗೆ ಏರಿದರು. ಕಿಚ್ಚ ಸುದೀಪ್ ಅವರ ನೇತೃತ್ವದ ತಂಡವು ಸಾಕಷ್ಟು ಉತ್ತಮವಾಗಿ ಕಾಣಿಸುತ್ತಿದೆ. ಈ ಬಾರಿ ಅವರು ಕಪ್ ಗೆಲ್ಲುವ ಎಲ್ಲಾ ಸಾಧ್ಯತೆ ಇದೆ.
ಮೊದಲ ಮೂರು ಪಂದ್ಯಗಳನ್ನು ಗೆದ್ದ ಕರ್ನಾಟಕ ಬುಲ್ಡೋಜರ್ಸ್ ತಂಡವು ನೇರವಾಗಿ ಸೆಮಿಫೈನಲ್ಗೆ ಅವಕಾಶ ಪಡೆಯಿತು. ಹಲವು ತಂಡಗಳ ಕನಸನ್ನು ಇವರು ನುಚ್ಚು ನೂರು ಮಾಡಿದರು. ಚೆನ್ನೈನಲ್ಲಿ ನಡೆದ ಸೆಮಿಫೈನಲ್ ಅಲ್ಲಿ ಕರ್ನಾಟಕ ತಂಡವು ಗೆಲುವು ಕಂಡಿತು.
ಇದನ್ನೂ ಓದಿ: CCL 2025: ತೆಲುಗು ವಾರಿಯರ್ಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ಗೆ ಬೃಹತ್ ಜಯ
ಚೆನ್ನೈ ಕಿಂಗ್ಸ್ ತಂಡ ಮೊದಲ 10 ಓವರ್ಗೆ 108 ರನ್ ಗಳಿಸಿತು. ಆ ಪಂದ್ಯದಲ್ಲಿ ಯಾರಿಂದಲೂ ಉತ್ತಮ ಪ್ರದರ್ಶನ ಬರಲಿಲ್ಲ. ಆ ಬಳಿಕ ಕರ್ನಾಕಟ ಬುಲ್ಡೋಜರ್ಸ್ 142 ರನ್ ಗಳಿಸಿ, 34 ರನ್ಗಳ ಲೀಡ್ ಪಡೆಯಿತು. ನಂತರ ಚೆನ್ನೈ ತಂಡವು ಎರಡನೇ ಇನ್ನಿಂಗ್ಸ್ಗೆ ಬ್ಯಾಟಿಂಗ್ಗೆ ಇಳಿಯಿತು. ನಂತರ 103 ರನ್ಗಳಿಗೆ ಚೆನ್ನೈ ಆಲ್ ಔಟ್ ಆಯಿತು. ಕರ್ನಾಟಕ ತಂಡದವರದ್ದು 34 ರನ್ ಲೀಡ್ ಇದ್ದಿದ್ದರಿಂದ, ನಂತರ ತಂಡಕ್ಕೆ ಬೇಕಾಗಿದ್ದುದು 69 ರನ್ ಮಾತ್ರ. ಹೀಗಾಗಿ, ತಂಡದವರು ಸುಲಭದಲ್ಲಿ ಗೆಲುವು ಕಂಡಿತು. ಕೇವಲ 6.5 ಓವರ್ಗೆ ಈ ಚೇಸನ ತಲುಪಿದರು. ಈ ಮೂಲಕ ದಾಖಲೆ ಬರೆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.