12 ವರ್ಷದ ಹಿಂದೆ ಬಿಡುಗಡೆ ರಜನಿಕಾಂತ್ ಸಿನಿಮಾದ ನಿರ್ಮಾಪಕರಿಗೆ ಈಗ ಸಂಕಷ್ಟ

Rajinikanth movie: ರಜನೀಕಾಂತ್ ಅವರ ಪುತ್ರಿ ಸೌಂದರ್ಯ ರಜನೀಕಾಂತ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹೀನಾಯ ಸೋಲು ಕಂಡಿತ್ತು. ಸಿನಿಮಾ ಬಿಡುಗಡೆ ಆಗಿ 12 ವರ್ಷಗಳ ಬಳಿಕ ಇದೀಗ ಈ ಸಿನಿಮಾದ ನಿರ್ಮಾಪಕರಿಗೆ ದೊಡ್ಡ ಸಂಕಷ್ಟವೊಂದು ಎದುರಾಗಿದೆ. ನ್ಯಾಯಲಯದ ಆದೇಶದಲ್ಲಿ ಕೋಟ್ಯಂತರ ಹಣ ಕಟ್ಟಬೇಕಿದೆ ಅಥವಾ ಜೈಲು ಪಾಲಾಗಬೇಕಿದೆ.

12 ವರ್ಷದ ಹಿಂದೆ ಬಿಡುಗಡೆ ರಜನಿಕಾಂತ್ ಸಿನಿಮಾದ ನಿರ್ಮಾಪಕರಿಗೆ ಈಗ ಸಂಕಷ್ಟ
Rajinikanth

Updated on: Feb 10, 2026 | 3:36 PM

ರಜನೀಕಾಂತ್ (Rajinikanth) ವೃತ್ತಿ ಜೀವನದಲ್ಲಿ ಬಹಳ ಕಡಿಮೆ ಸಿನಿಮಾಗಳು ಫ್ಲಾಪ್ ಎನಿಸಿಕೊಂಡಿವೆ. ರಜನೀಕಾಂತ್ ಅವರ ಸಿನಿಮಾ ಫ್ಲಾಪ್ ಆದರೂ ಹಾಕಿರುವ ಬಂಡವಾಳಕ್ಕಿಂತಲೂ ತುಸು ಹೆಚ್ಚೇ ವಾಪಸ್ ಬಂದಿರುತ್ತದೆ. ಆದರೆ ರಜನೀಕಾಂತ್ ಅವರ ಕೆಲ ಸಿನಿಮಾಗಳಿವೆ, ಅವು ಇನ್ನಿಲ್ಲದಂತೆ ಬಾಕ್ಸ್ ಆಫೀಸ್​​ನಲ್ಲಿ ಸೋತಿವೆ. ಅವುಗಳಲ್ಲಿ ‘ಕೊಚಡಿಯನ್’ ಸಹ ಒಂದು. ರಜನೀಕಾಂತ್ ಅವರ ಪುತ್ರಿ ಸೌಂದರ್ಯ ರಜನೀಕಾಂತ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹೀನಾಯ ಸೋಲು ಕಂಡಿತ್ತು. ಸಿನಿಮಾ ಬಿಡುಗಡೆ ಆಗಿ 12 ವರ್ಷಗಳ ಬಳಿಕ ಇದೀಗ ಈ ಸಿನಿಮಾದ ನಿರ್ಮಾಪಕರಿಗೆ ದೊಡ್ಡ ಸಂಕಷ್ಟವೊಂದು ಎದುರಾಗಿದೆ.

‘ಕೊಚಡಿಯನ್’ ಸಿನಿಮಾನಲ್ಲಿ ರಜನೀಕಾಂತ್ ನಾಯಕರಾದರೂ ಇದು ಕಾರ್ಟೂನ್ ಮಾದರಿಯ ಸಿನಿಮಾ. ಹಾಲಿವುಡ್​​ನಲ್ಲಿ ಆಗಷ್ಟೆ ಬಳಕೆಗೆ ಬಂದಿದ್ದ ಲೈವ್ ಆಕ್ಷನ್ ಅಥವಾ ಫರ್ಪಾಮೆನ್ಸ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದ್ದ ಅನಿಮೇಷನ್ ಸಿನಿಮಾ ಇದಾಗಿತ್ತು. ಸಿನಿಮಾನಲ್ಲಿ ರಜನೀಕಾಂತ್ ನಾಯಕ, ದೀಪಿಕಾ ಪಡುಕೋಣೆ ನಾಯಕಿ. ‘ಅವತಾರ್’, ‘ಅಡ್ವೇಂಚರ್ ಆಫ್ ಟಿನ್​​ಟಿನ್’ ಅಂಥಹಾ ಕೆಲವು ಸಿನಿಮಾಗಳು ಅದಾಗಲೇ ಈ ತಂತ್ರಜ್ಞಾನ ಬಳಸಿದ್ದವು. ‘ಕೊಚಡಿಯನ್’ ಸಿನಿಮಾನಲ್ಲಿ ಇದೇ ತಂತ್ರಜ್ಞಾನ ಬಳಸಲಾಗಿತ್ತಾದರೂ ಸಿನಿಮಾದ ಗುಣಮಟ್ಟ ಬಹಳ ಕಳಪೆಯಾಗಿತ್ತು. ಹಾಗಾಗಿ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಫ್ಲಾಪ್ ಆಯ್ತು.

ಸಿನಿಮಾದ ನಿರ್ಮಾಪಕರಾದ ಸುನಿಲ್ ಲುಲ್ಲ, ಸುನಂದ ಮುರಳಿ ಮನೋಹರ್, ಪ್ರಶಿತಾ ಚೌಧರಿ ಅವರುಗಳು ಭಾರಿ ನಷ್ಟ ಅನುಭವಿಸಿದ್ದರು. ಹಲವು ಬಾಕಿಗಳನ್ನು ಉಳಿಸಿಕೊಂಡಿದ್ದರು. ಕೆಲವರು ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಇದೇ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದ್ದು, ‘ಕೊಚಡಿಯನ್’ ನಿರ್ಮಾಪಕರು ಇನ್ನು ನಾಲ್ಕು ವಾರಗಳಲ್ಲಿ 2.50 ಕೋಟಿ ರೂಪಾಯಿ ಹಣವನ್ನು ನಿಗದಿತ ಸಂಸ್ಥೆಗೆ ನೀಡಬೇಕು ಎಂದಿದೆ.

ಇದನ್ನೂ ಓದಿ:ಸ್ವಚ್ಛತಾ ಕಾರ್ಮಿಕ ಮಹಿಳೆ ಪದ್ಮಮ್ಮನ ಸನ್ಮಾನಿಸಿದ ರಜನೀಕಾಂತ್: ಕಾರಣ?

ಅಭಿರ್ಚಂದ್ರ ನಹರ್ ಎಂಬುವರು ‘ಕೊಚಡಿಯನ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಮೀಡಿಯಾ ಒನ್ ಗ್ಲೋಬಲ್​ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಂಡು 20 ಕೋಟಿ ರೂಪಾಯಿ ಸಾಲವನ್ನು ನೀಡಿದ್ದರು. ಆದರೆ ಒಪ್ಪಂದಂತೆ ಸಿನಿಮಾದ ನಿರ್ಮಾಪಕರು ನಡೆದುಕೊಂಡಿಲ್ಲವಾದ್ದರಿಂದ ಅಭಿರ್ಚಂದ್ರ ನಹರ್ ದಾವೆ ಹೂಡಿದ್ದರು. 2021ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆದೇಶ ನೀಡಿ ಅಭಿರ್ಚಂದ್ರ ನಹರ್ ಅವರಿಗೆ 7.20 ಕೋಟಿ ಹಣ ನೀಡುವಂತೆ ಆದೇಶಿಸಿತ್ತು. ಆದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಮದ್ರಾಸ್ ಹೈಕೋರ್ಟ್​​ನಲ್ಲಿ ಪ್ರಶ್ನೆ ಮಾಡಲಾಗಿತ್ತು.

ಇದೀಗ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದ್ದು ನಿರ್ಮಾಣ ಸಂಸ್ಥೆಯು ಈಗಾಗಲೇ 8.74 ಕೋಟಿ ಬಾಕಿ ತೀರಿಸಿದ್ದು, ಉಳಿದ 1.26 ಕೋಟಿಯ ದುಪ್ಪಟ್ಟು ಅಂದರೆ 2.52 ಕೋಟಿ ರೂಪಾಯಿಯನ್ನು ನಾಲ್ಕು ವಾರದ ಒಳಗೆ ನೀಡಬೇಕು ಅಥವಾ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಹೇಳಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ