ವೆಬ್​ ಸಿರೀಸ್​ ರೂಪದಲ್ಲಿ ಬರಲಿದೆ ಕನ್ನಡದ ಸೂಪರ್​ ಹಿಟ್​ ಧಾರಾವಾಹಿ ಮಾಯಾಮೃಗ; ಪ್ರೇಕ್ಷಕರಿಗೆ ಗುಡ್​ ನ್ಯೂಸ್​

TN Seetharam: 1998ರಲ್ಲಿ ಪ್ರಸಾರ ಆರಂಭಿಸಿದ ‘ಮಾಯಾಮೃಗ’ ಧಾರಾವಾಹಿ ನಂತರ 2014ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮರುಪ್ರಸಾರವನ್ನೂ ಕಂಡಿತ್ತು. ಈಗ ಹೊಸ ತಲೆಮಾರಿನ ಪ್ರೇಕ್ಷಕರಿಗೆ ಮತ್ತೆ ಮಾಯಾಮೃಗವನ್ನು ಪರಿಚಯಿಸಲಾಗುತ್ತಿದೆ. ವೆಬ್​ ಸಿರೀಸ್​ ರೂಪದಲ್ಲಿ ಇದನ್ನು ಜನರ ಮುಂದಿಡಲು ಸಿದ್ಧತೆ ನಡೆದಿದೆ.

ವೆಬ್​ ಸಿರೀಸ್​ ರೂಪದಲ್ಲಿ ಬರಲಿದೆ ಕನ್ನಡದ ಸೂಪರ್​ ಹಿಟ್​ ಧಾರಾವಾಹಿ ಮಾಯಾಮೃಗ; ಪ್ರೇಕ್ಷಕರಿಗೆ ಗುಡ್​ ನ್ಯೂಸ್​
ಮಾಯಾಮೃಗ - ನಿರ್ದೇಶಕ ಟಿಎನ್​ ಸೀತಾರಾಮ್​
Edited By:

Updated on: May 27, 2021 | 3:19 PM

ಕನ್ನಡ ಕಿರುತೆರೆ ಲೋಕದಲ್ಲಿ ‘ಮಾಯಾಮೃಗ’ ಧಾರಾವಾಹಿ ಮಾಡಿದ ಮೋಡಿ ದೊಡ್ಡದು. ಟಿ.ಎನ್​. ಸೀತಾರಾಮ್​ ನಿರ್ದೇಶನದ ಈ ಸೀರಿಯಲ್​ ದೂರದರ್ಶನ ವಾಹಿನಿಯಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗಿತ್ತು. ಇಂದಿಗೂ ಆ ಧಾರಾವಾಹಿಯನ್ನು ಜನರು ನೆನಪು ಮಾಡಿಕೊಳ್ಳುತ್ತಾರೆ. ಅಂಥ ಎಲ್ಲ ಪ್ರೇಕ್ಷಕರಿಗಾಗಿ ನಿರ್ದೇಶಕ ಟಿ.ಎನ್​. ಸೀತಾರಾಮ್​ ಅವರು ಒಂದು ಗುಡ್​ ನ್ಯೂಸ್​ ನೀಡಿದ್ದಾರೆ. ವೀಕ್ಷಕರು ಮತ್ತೆ ಮಾಯಾಮೃಗ ಧಾರಾವಾಹಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿದೆ. ಅದು ಕೂಡ ಹೊಸ ರೂಪದಲ್ಲಿ ಎಂಬುದು ವಿಶೇಷ.

1998ರಲ್ಲಿ ಪ್ರಸಾರ ಆರಂಭಿಸಿದ ‘ಮಾಯಾಮೃಗ’ ಸೀರಿಯಲ್​ನಲ್ಲಿ ಎಚ್​.ಜಿ. ದತ್ತಾತ್ರೇಯಾ (ದತ್ತಣ್ಣ), ಮಾಳವಿಕಾ ಅವಿನಾಶ್​, ಮಂಜು ಭಾಷಿಣಿ, ಎಂ.ಡಿ. ಪಲ್ಲವಿ, ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ, ಅವಿನಾಶ್​, ಜಯಶ್ರೀ, ಲಕ್ಷ್ಮೀ ಚಂದ್ರಶೇಖರ್​ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದರು. 2014ರಲ್ಲಿ ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಮರುಪ್ರಸಾರವನ್ನೂ ಕಂಡಿತ್ತು. ಈಗ ಹೊಸ ತಲೆಮಾರಿನ ಪ್ರೇಕ್ಷಕರಿಗೆ ಮತ್ತೆ ಮಾಯಾಮೃಗವನ್ನು ಪರಿಚಯಿಸಲಾಗುತ್ತಿದೆ. ವೆಬ್​ ಸಿರೀಸ್​ ರೂಪದಲ್ಲಿ ಇದನ್ನು ಜನರ ಮುಂದಿಡಲು ಸಿದ್ಧತೆ ನಡೆದಿದೆ. ಯೂಟ್ಯೂಬ್​ನಲ್ಲಿ ಪ್ರಸಾರ ಮಾಡಲಾಗುವುದು ಎಂದು ಸ್ವತಃ ಟಿ.ಎನ್​. ಸೀತಾರಾಮ್​ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಟಿಎನ್​ ಸೀತಾರಾಮ್​ ಪೋಸ್ಟ್ ಮಾಡಿದ್ದಾರೆ. ‘ಮಾಯಾಮೃಗ ಧಾರಾವಾಹಿ ಕನ್ನಡದ ಶ್ರೇಷ್ಠ ಧಾರಾವಾಹಿಗಳಲ್ಲಿ ಒಂದು. ಅದೊಂದು ದಂತಕಥೆ. ಅಂಥ ಮಾಯಾಮೃಗ ಇನ್ನೊಂದು ವಾರದಲ್ಲಿ ವೆಬ್​ ಸಿರೀಸ್​ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ಆ ಮೂಲಕ ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕಿದ್ದಾರೆ. ಭೂಮಿಕಾ ಟಾಕೀಸ್​ ಯೂಟ್ಯೂಬ್​ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಸೀತಾರಾಮ್​ ಜೊತೆಯಲ್ಲಿ ಪಿ. ಶೇಷಾದ್ರಿ ಅವರು ಕೂಡ ‘ಮಾಯಾಮೃಗ’ಕ್ಕೆ ನಿರ್ದೇಶನ ಮಾಡಿದ್ದರು.

ಮಾಯಾಮೃಗ ಬಳಿಕ ಸೀತಾರಾಮ್​ ಅವರ ಬತ್ತಳಿಕೆಯಿಂದ ಹಲವು ಧಾರಾವಾಹಿಗಳು ಮೂಡಿಬಂದವು. ಆದರೂ ಅವುಗಳ ಪೈಕಿ ಮಾಯಾಮೃಗಕ್ಕೆ ವಿಶೇಷ ಸ್ಥಾನಮಾನವಿದೆ.​ ವೆಬ್​ ಸಿರೀಸ್​ ರೂಪದಲ್ಲಿ ಈ ಸೀರಿಯಲ್ ಬರುತ್ತಿರುವುದಕ್ಕೆ ಪ್ರೇಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ‘ಸಬ್​ ಟೈಟಲ್​ ಅಳವಡಿಸಿ. ಆ ಮೂಲಕ ಬೇರೆ ಭಾಷೆಯವರು ಕೂಡ ಮಾಯಾಮೃಗ​ ನೋಡುವಂತಾಗಲಿ’ ಎಂಬ ಸಲಹೆ ಜನರಿಂದ ಸಿಕ್ಕಿದೆ. ಕೊರೊನಾ ಕಾಲದಲ್ಲಿ ಎಲ್ಲರೂ ಮನೆಯಲ್ಲಿ ಲಾಕ್​ ಆಗಿರುವಾಗ ಇಂಥ ಒಳ್ಳೆಯ ಧಾರಾವಾಹಿಯ ಪ್ರಸಾರ ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಟಿ.ಎನ್.​ ಸೀತಾರಾಮ್ ಹೊಸ ಧಾರಾವಾಹಿಗೆ ಟೈಟಲ್​ ಫಿಕ್ಸ್​; ಮೇಧಾ ವಿದ್ಯಾಭೂಷಣ​ ನಾಯಕಿ!

ಬಾಲಿವುಡ್​ ಕಲಾವಿದ ಕಬೀರ್​ ಬೇಡಿ ಇಟಲಿಯಲ್ಲಿ ‘ಮಾದಕ ನಟ’ ಎನಿಸಿಕೊಳ್ಳಲು ಕಾರಣ ಆಗಿದ್ದು ಆ ಒಂದು ಧಾರಾವಾಹಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us