AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ ಕಲಾವಿದ ಕಬೀರ್​ ಬೇಡಿ ಇಟಲಿಯಲ್ಲಿ ‘ಮಾದಕ ನಟ’ ಎನಿಸಿಕೊಳ್ಳಲು ಕಾರಣ ಆಗಿದ್ದು ಆ ಒಂದು ಧಾರಾವಾಹಿ

ಇಷ್ಟು ವರ್ಷಗಳ ತಮ್ಮ ಸಿನಿಮಾ ಪಯಣ ಮತ್ತು ವೈಯಕ್ತಿಕ ಜೀವನದ ಬಗ್ಗೆ ಕಬೀರ್​ ಬೇಡಿ ಆತ್ಮಚರಿತ್ರೆ ಬರೆದಿದ್ದಾರೆ. ‘ಸ್ಟೋರೀಸ್​ ಐ ಮಸ್ಟ್​ ಟೆಲ್​’ ಹೆಸರಿನ ಈ ಪುಸ್ತಕದಲ್ಲಿ ಹಲವು ಘಟನೆಗಳನ್ನು ಮೆಲುಕು ಹಾಕಲಾಗಿದೆ.

ಬಾಲಿವುಡ್​ ಕಲಾವಿದ ಕಬೀರ್​ ಬೇಡಿ ಇಟಲಿಯಲ್ಲಿ ‘ಮಾದಕ ನಟ’ ಎನಿಸಿಕೊಳ್ಳಲು ಕಾರಣ ಆಗಿದ್ದು ಆ ಒಂದು ಧಾರಾವಾಹಿ
ಕಬೀರ್ ಬೇಡಿ
ಮದನ್​ ಕುಮಾರ್​
|

Updated on: May 02, 2021 | 9:24 AM

Share

ನಟ ಕಬೀರ್​ ಬೇಡಿ ಅವರು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಛಾಫು ಮೂಡಿಸಿದವರು. ಬಾಲಿವುಡ್​ಗೆ ಮಾತ್ರ ಅವರ ಪ್ರತಿಭೆ ಸೀಮಿತ ಆಗಿರಲಿಲ್ಲ. 1970ರ ದಶಕದಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಅವರು ಬೇರೆ ದೇಶಗಳಲ್ಲೂ ಫೇಮಸ್​ ಆಗಿದ್ದಾರೆ. ಅಮೆರಿಕ ಮತ್ತು ಇಟಲಿಯಲ್ಲೂ ಈ ನಟನಿಗೆ ಅಭಿಮಾನಿಗಳಿದ್ದಾರೆ. ಟಿವಿ, ಸಿನಿಮಾ ಮತ್ತು ರಂಗಭೂಮಿಯಲ್ಲಿ ಗುರುತಿಸಿಕೊಂಡ ಕಬೀರ್​ ಬೇಡಿ ಅವರು ಇಟಲಿಯಲ್ಲಿ ಮಾದಕ ನಟ ಎಂಬ ಖ್ಯಾತಿಗೆ ಒಳಗಾಗಿದ್ದರು.

ಇಷ್ಟು ವರ್ಷಗಳ ತಮ್ಮ ಸಿನಿಮಾ ಪಯಣ ಮತ್ತು ವೈಯಕ್ತಿಕ ಜೀವನದ ಬಗ್ಗೆ ಕಬೀರ್​ ಬೇಡಿ ಆತ್ಮಚರಿತ್ರೆ ಬರೆದಿದ್ದಾರೆ. ‘ಸ್ಟೋರೀಸ್​ ಐ ಮಸ್ಟ್​ ಟೆಲ್​’ ಹೆಸರಿನ ಈ ಪುಸ್ತಕದಲ್ಲಿ ಹಲವು ಘಟನೆಗಳನ್ನು ಮೆಲುಕು ಹಾಕಲಾಗಿದೆ. ವಿಶೇಷವಾಗಿ ‘ಸಾಂಡುಕಾನ್​’ ಧಾರಾವಾಹಿ ಬಗ್ಗೆ ಕಬೀರ್ ಬೇಡಿ ನೆನಪಿಸಿಕೊಂಡಿದ್ದಾರೆ. 1976ರಲ್ಲಿ ಸಾಂಡುಕಾನ್​ ಸೀರಿಯಲ್​ ಇಟಲಿಯಲ್ಲಿ ಮೂಡಿಬಂದಿತ್ತು. ಆ ಧಾರಾವಾಹಿಯಲ್ಲಿ ಕಥಾನಾಯಕನ (ಸಾಂಡುಕಾನ್​) ಪಾತ್ರ ಮಾಡಿದವರು ಕಬೀರ್​ ಬೇಡಿ.

ಈ ಧಾರಾವಾಹಿಯಲ್ಲಿ ನಟಿಸಿದ ಬಳಿಕ ಕಬೀರ್​ ಬೇಡಿಗೆ ಇಡೀ ಯೂರೋಪ್​ನಲ್ಲಿ ಜನಪ್ರಿಯತೆ ಸಿಕ್ಕಿತು. ಬಳಿಕ ಅವರು ಹಾಲಿವುಡ್​ಗೂ ಕಾಲಿಡುವಂತಾಯಿತು. ಅಚ್ಚರಿ ಎಂದರೆ ಸಾಂಡುಕಾನ್​ ಧಾರಾವಾಹಿಯಲ್ಲಿ ನಟಿಸಿದ ಬಳಿಕ ಕಬೀರ್​ ಬೇಡಿ ಅವರು ಇಟಲಿಯ ಪ್ರೇಕ್ಷಕರಿಂದ ‘ಮಾದಕ ನಟ’ ಎಂದು ಕರೆಸಿಕೊಳ್ಳಬೇಕಾಯಿತು. ಅದಕ್ಕೆ ಕಾರಣ ಅವರು ಮಾಡಿದ ಆ ಪಾತ್ರ. ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳುವ ಪೈರೇಟ್​ ಆಗಿ ಕಬೀರ್ ಬೇಡಿ ಕಾಣಿಸಿಕೊಂಡಿದ್ದರು.

ಆ ಸಮಯಕ್ಕೆ ಸಾಂಡುಕಾನ್​ ಸೀರಿಯಲ್​ನಿಂದ ಕಬೀರ್​ಗೆ ಎಷ್ಟು ಜನಪ್ರಿಯತೆ ಸಿಕ್ಕಿತ್ತು ಎಂದರೆ ಇಟಲಿಯ ಅನೇಕ ಪೋಷಕರು ತಮ್ಮ ಮಕ್ಕಳಿಗೆ ಕಬೀರ್​ ಎಂದು ಹೆಸರಿಡಲು ನೋಂದಣಿ ಕಚೇರಿ ಎದುರು ಸಾಲುಗಟ್ಟಿ ನಿಂತಿದ್ದರು ಎಂಬುದನ್ನು ಈ ಪುಸ್ತಕದಲ್ಲಿ ಅವರು ನೆನಪಿಸಿಕೊಂಡಿದ್ದಾರೆ. ಬ್ರಿಟಿಷ್​ ಹುಡುಗಿಯ ಜೊತೆಗೆ ಸಾಂಡುಕಾನ್​ಗೆ ಲವ್​ ಆಗುತ್ತದೆ. ಪ್ರೀತಿ-ಪ್ರೇಮದ ದೃಶ್ಯಗಳಲ್ಲಿ ಕಬೀರ್​ ಎಲ್ಲರನ್ನೂ ಸೆಳೆದುಕೊಂಡಿದ್ದರು. ಆ ಕಾರಣಕ್ಕಾಗಿ ಅವರಿಗೆ ಮಾದಕ ನಟ ಎಂಬ ಇಮೇಜ್​ ಸಿಕ್ಕಿತು.

ಕೇವಲ 6 ಎಪಿಸೋಡ್​ಗಳನ್ನು ಹೊಂದಿದ್ದ ಆ ಧಾರಾವಾಹಿಗೆ ಇಟಲಿ ಜನರು ಫಿದಾ ಆಗಿದ್ದರು. ಫ್ರೆಂಚ್, ಡಚ್​, ಸ್ಪ್ಯಾನಿಶ್​, ಜರ್ಮನ್​ ಭಾಷೆಗಳಲ್ಲೂ ಈ ಧಾರಾವಾಹಿ ಮೂಡಿಬಂದಿತ್ತು. 2012ರಲ್ಲಿ ಇದು ಹಿಂದಿಗೂ ಡಬ್​ ಆಗಿ, ಡಿವಿಡಿಗಳ ಮೂಲಕ ಭಾರತದಲ್ಲೂ ವೀಕ್ಷಣೆಗೆ ಲಭ್ಯವಾಯಿತು. ಸಾಂಡುಕಾನ್​ ಸೀರಿಯಲ್​ ಮಾತ್ರವಲ್ಲದೆ ಅನೇಕ ವಿಚಾರಗಳ ಬಗ್ಗೆ ತಮ್ಮ ಆತ್ಮಚರಿತ್ರೆಯಲ್ಲಿ ಕಬೀರ್​ ಬೇಡಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:

ಚಿತ್ರರಂಗಕ್ಕೆ ಶಾಪವಾದ ಕೊರೊನಾ; ಬಾಲಿವುಡ್​ನ ಖ್ಯಾತ ನಟ ಕೊವಿಡ್​​ಗೆ ಬಲಿ

ದೊಡ್ಡ ಹೀರೋಗಳು ತಲೆಮರೆಸಿಕೊಂಡಿದ್ದಾರೆ, ಬಾಲಿವುಡ್​ ಉಳಿಯೋದು ನನ್ನಿಂದಲೇ: ಕಂಗನಾ

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ