AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್ ಆಯುಕ್ತರ ಭೇಟಿಯಾಗಿ ಧನ್ಯವಾದ ಹೇಳಿದ ಚಿರಂಜೀವಿ-ನಾಗಾರ್ಜುನ: ಕಾರಣವೇನು?

Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ಮತ್ತು ನಟ ನಾಗಾರ್ಜುನ ಹಾಗೂ ಇನ್ನೂ ಕೆಲವರು ಸೈಬರಾದಾಬ್ ಪೊಲೀಸ್ ಆಯುಕ್ತ, ಕನ್ನಡಿಗ ಸಜ್ಜನರ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಪೊಲೀಸ್ ಆಯುಕ್ತರಿಗೆ ಚಿರಂಜೀವಿ ಹಾಗೂ ನಾಗಾರ್ಜುನ ಹಾಗೂ ಚಿತ್ರರಂಗದ ಗಣ್ಯರು ಅಭಿನಂದನೆ ಸಲ್ಲಿಸಲು ಕಾರಣವೇನು? ಇಲ್ಲಿದೆ ನೋಡಿ ಮಾಹಿತಿ...

ಪೊಲೀಸ್ ಆಯುಕ್ತರ ಭೇಟಿಯಾಗಿ ಧನ್ಯವಾದ ಹೇಳಿದ ಚಿರಂಜೀವಿ-ನಾಗಾರ್ಜುನ: ಕಾರಣವೇನು?
Chiranjeevi
ಮಂಜುನಾಥ ಸಿ.
|

Updated on: Nov 18, 2025 | 12:50 PM

Share

ಮೆಗಾಸ್ಟಾರ್ ಚಿರಂಜೀವಿ (Chiranjeevi) ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಸಂಘ ಸಂಸ್ಥೆಗಳಲ್ಲಿ ಸ್ಥಾನಗಳನ್ನು ಹೊಂದಿಲ್ಲ. ಹಾಗಿದ್ದರೂ ಸಹ ಚಿತ್ರರಂಗದ ಪರವಾಗಿ ಒಂದಲ್ಲ ಒಂದು ಕೆಲಸಗಳಲ್ಲಿ ತೊಡಗಿಕೊಳ್ಳುತ್ತಲೇ ಇರುತ್ತಾರೆ. ಜಗನ್ ಸರ್ಕಾರದ ಅವಧಿಯಲ್ಲಿ ಜಗನ್ ತಂದ ಕೆಲವು ನಿಯಮಗಳಿಂದ ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ನಟರು, ನಿರ್ಮಾಪಕರು ಬಹಿರಂಗವಾಗಿ ಸರ್ಕಾರದ ವಿರುದ್ಧ ನಿಂದನೆ, ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದರು. ಆದರೆ ಚಿರಂಜೀವಿ, ತಮ್ಮ ಸ್ಟಾರ್​​ಗಿರಿಯನ್ನು ಪಕ್ಕಕ್ಕಿಟ್ಟು ಜಗನ್ ಮನೆಗೆ ಹೋಗಿ ಅವರಲ್ಲಿ ಮನವಿ ಮಾಡಿಕೊಂಡು ಚಿತ್ರರಂಗಕ್ಕೆ ಅನುಕೂಲಕರವಾಗುವಂತೆ ನಿಯಮಗಳನ್ನು ತಿದ್ದಿಸುವಲ್ಲಿ ಯಶಸ್ವಿ ಆಗಿದ್ದರು. ಈಗಲೂ ಸಹ ಅವರು ಅಂಥಹುದೇ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಭಾಗವಾಗಿಯೇ ಇತ್ತೀಚೆಗೆ ಸೈದರಾಬಾದ್ ಪೊಲೀಸರನ್ನು ಭೇಟಿ ಆಗಿದ್ದರು.

ಅಸಲಿಗೆ ಕೆಲ ತಿಂಗಳ ಹಿಂದೆಯೇ ನಟ ಚಿರಂಜೀವಿ ಅವರು ಗೆಳೆಯ ನಾಗಾರ್ಜುನ ಸೇರಿದಂತೆ ಇನ್ನೂ ಕೆಲವು ನಿರ್ಮಾಪಕರುಗಳೊಟ್ಟಿಗೆ ಸೈಬರಾಬಾದ್ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ಪೈರಸಿ ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅದಾದ ಬಳಿಕ ಚಿರಂಜೀವಿ ಮನವಿಗೆ ಪ್ರತಿಕ್ರಿಯಿಸಿದ್ದ ಪೊಲೀಸರು ಕೆಲ ಪೈರಸಿಕೋರರನ್ನು ಬಂಧಿಸಿದ್ದರು. ಆದರೂ ಸಹ ಕೆಲ ಪ್ರಮುಖ ಪೈರಸಿಕೋರರನ್ನು ಬಂಧಿಸುವುದು ಬಾಕಿ ಇತ್ತು. ಇತ್ತೀಚೆಗಷ್ಟೆ ತೆಲುಗಿನ ಕುಖ್ಯಾತ ಪೈರಸಿ ವೆಬ್​​ಸೈಟ್ ಸ್ಥಾಪಕ ರವಿ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ತೆಲುಗು ಸಿನಿಮಾ ನಿರ್ಮಾಪಕರುಗಳನ್ನು ವರ್ಷಗಳಿಂದಲೂ ಕಾಡಿದ್ದ, ನೂರಾರು ಕೋಟಿ ಹಣ ನಷ್ಟಕ್ಕೆ ಕಾರಣವಾಗಿದ್ದ ಐಬೊಮ್ಮ ಪೈರಸಿ ವೆಬ್​​ಸೈಟ್​​ನ ಸ್ಥಾಪಕ ರವಿ ಅನ್ನು ಇತ್ತೀಚೆಗಷ್ಟೆ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಇದೇ ಕಾರಣಕ್ಕೆ ಇದೀಗ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ ಹಾಗೂ ಇತರರು ಸೈಬರಾಬಾದ್ ಪೊಲೀಸ್ ಆಯುಕ್ತ, ಕನ್ನಡಿಗರೂ ಆಗಿರುವ ಸಜ್ಜನರ್ ಅವರನ್ನು ಭೇಟಿಯಾಗಿ ಖುದ್ದಾಗಿ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ:ಸಂಕಷ್ಟದಲ್ಲಿ ರಿಷಬ್ ಶೆಟ್ಟಿಯ ತೆಲುಗು ಸಿನಿಮಾ, ನಿರ್ದೇಶಕನ ವಿರುದ್ಧ ದೂರು

ತನ್ನ ಲಾಭಕ್ಕಾಗಿ ಸಿನಿಮಾ ಉದ್ಯಮವನ್ನು ಕೊಲ್ಲುತ್ತಿರುವ ಅಪಾಯಕಾರಿ ವ್ಯಕ್ತಿಗಳ ಜಾಲವನ್ನು ಅಂತ್ಯಗೊಳಿಸಿದ್ದಾರೆ. ಈ ಕಾರ್ಯದಲ್ಲಿ ಪೊಲೀಸರ ಚಾಣಾಕ್ಷತನ ನೋಡಿ ಹೆಮ್ಮೆಯಾಗಿದೆ. ಎಂದು ಚಿರಂಜೀವಿ ಹೇಳಿದರು. ಇಂಥ ಕೆಲವು ದುರುಳರ ಕಾರಣದಿಂದಾಗಿ ಅನೇಕ ಜನರು ಪೈರಸಿಯಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ ಮತ್ತು ಇಂದಿನಿಂದ ಅದು ಕೊನೆಗೊಳ್ಳಬೇಕು ಎಂದು ಅವರು ಹೇಳಿದರು.

ನಟ ನಾಗಾರ್ಜುನ ಸಹ ಮಾತನಾಡಿ, ‘ಈ ವಿಷಯದಲ್ಲಿ ಪೊಲೀಸರು ಬಲು ಶೀಘ್ರವಾಗಿ ಸ್ಪಂದಿಸಿ ದುಷ್ಟರನ್ನು ಹೆಡೆಮುರಿ ಕಟ್ಟಿರುವುದು ಅಭಿನಂದನಾರ್ಹ. ಈ ಆಪರೇಷನ್​​ನಲ್ಲಿ ತೊಡಗಿಕೊಂಡಿದ್ದ ಎಲ್ಲ ಪೊಲೀಸರಿಗೆ ತೆಲುಗು ಸಿನಿಮಾ ರಂಗದ ಕಡೆಯಿಂದ ಧನ್ಯವಾದ ಹೇಳುತ್ತೇನೆ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಮರಗಳ ಮಾರಣಹೋಮ
ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಮರಗಳ ಮಾರಣಹೋಮ
ಫುಲ್​​ ಟೈಟ್​​ ಆಗಿ ಆಸ್ಪತ್ರೆಗೆ ಬಂದ ವೈದ್ಯನಿಗೆ ಸಾರ್ವಜನಿಕರಿಂದ ಧರ್ಮದೇಟು
ಫುಲ್​​ ಟೈಟ್​​ ಆಗಿ ಆಸ್ಪತ್ರೆಗೆ ಬಂದ ವೈದ್ಯನಿಗೆ ಸಾರ್ವಜನಿಕರಿಂದ ಧರ್ಮದೇಟು
ಟಿಟಿಡಿಗೆ ಬಮುಲ್ ಪ್ರತಿನಿತ್ಯ ಎಷ್ಟು ತುಪ್ಪ ಕೊಡುತ್ತೆ ಗೊತ್ತಾ?
ಟಿಟಿಡಿಗೆ ಬಮುಲ್ ಪ್ರತಿನಿತ್ಯ ಎಷ್ಟು ತುಪ್ಪ ಕೊಡುತ್ತೆ ಗೊತ್ತಾ?
ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ
ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ
ಬಂಗಾಳ ಅಂತಿಮ ಸಮರದಲ್ಲಿ ಆರಂಭಿಕ ವಿಘ್ನ
ಬಂಗಾಳ ಅಂತಿಮ ಸಮರದಲ್ಲಿ ಆರಂಭಿಕ ವಿಘ್ನ
ಸಂಸದ ಸುನಿಲ್ ಬೋಸ್ ಮನೆಯಲ್ಲಿ ಸಚಿವ ಮಹದೇವಪ್ಪ ಡಿನ್ನರ್ ಮೀಟಿಂಗ್
ಸಂಸದ ಸುನಿಲ್ ಬೋಸ್ ಮನೆಯಲ್ಲಿ ಸಚಿವ ಮಹದೇವಪ್ಪ ಡಿನ್ನರ್ ಮೀಟಿಂಗ್
ವಾರಾಣಸಿಯ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ವಾರಾಣಸಿಯ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ಡಿಕೆಶಿ ಬಣಕ್ಕೆ ಮೇ ಕ್ರಾಂತಿ ಕನಸು: ಸಿದ್ದರಾಮಯ್ಯ ಬಣ ಅಹಿಂದ ಕಾರ್ಡ್​ ಪ್ಲೇ!
ಡಿಕೆಶಿ ಬಣಕ್ಕೆ ಮೇ ಕ್ರಾಂತಿ ಕನಸು: ಸಿದ್ದರಾಮಯ್ಯ ಬಣ ಅಹಿಂದ ಕಾರ್ಡ್​ ಪ್ಲೇ!
ಹಾಸನ ಹಲವು ಅವಾಂತರ ಸೃಷ್ಟಿಸಿದ ಮಳೆ: ಧರೆಗುರುಳಿದ ವಿದ್ಯುತ್​ ಕಂಬ, ಮರಗಳು
ಹಾಸನ ಹಲವು ಅವಾಂತರ ಸೃಷ್ಟಿಸಿದ ಮಳೆ: ಧರೆಗುರುಳಿದ ವಿದ್ಯುತ್​ ಕಂಬ, ಮರಗಳು
ಐವಿ ಡ್ರಿಪ್​ ಹಾಕಿಸಿಕೊಂಡು ಕೆಲಸಕ್ಕೆ ಹಾಜರಾದ ಅಂಗನವಾಡಿ ಕಾರ್ಯಕರ್ತೆ
ಐವಿ ಡ್ರಿಪ್​ ಹಾಕಿಸಿಕೊಂಡು ಕೆಲಸಕ್ಕೆ ಹಾಜರಾದ ಅಂಗನವಾಡಿ ಕಾರ್ಯಕರ್ತೆ