AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adipurush: 3ಡಿ ದೃಶ್ಯಗಳಲ್ಲಿ ರಾಮಾಯಣದ ವೈಭವ; ಹೇಗಿದೆ ‘ಆದಿಪುರುಷ್​’ ಚಿತ್ರದ ಫಸ್ಟ್​ ಹಾಫ್​?

Adipurush First Half Review: ಮುಂಜಾನೆಯೇ ‘ಆದಿಪುರುಷ್​’ ಶೋಗಳು ಆರಂಭ ಆಗಿವೆ. ಪ್ರಭಾಸ್​ ಅಭಿಮಾನಿಗಳು ಈ ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.

Adipurush: 3ಡಿ ದೃಶ್ಯಗಳಲ್ಲಿ ರಾಮಾಯಣದ ವೈಭವ; ಹೇಗಿದೆ ‘ಆದಿಪುರುಷ್​’ ಚಿತ್ರದ ಫಸ್ಟ್​ ಹಾಫ್​?
ಆದಿಪುರುಷ್​ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ|

Updated on:Jun 16, 2023 | 7:57 AM

Share

ಸೆಟ್ಟೇರಿದ ದಿನದಿಂದಲೂ ‘ಆದಿಪುರುಷ್​’ ಚಿತ್ರ (Adipurush Movie) ಸಖತ್​ ಸುದ್ದಿ ಆಗುತ್ತಿತ್ತು. ಈಗ ಸಿನಿಮಾ ರಿಲೀಸ್​ ಆಗಿದೆ. ಇಂದು (ಜೂನ್​ 16) ಅದ್ದೂರಿಯಾಗಿ ‘ಆದಿಪುರುಷ್​’ ತೆರೆಕಂಡಿದೆ. ಈ ಸಿನಿಮಾದಲ್ಲಿ ಪ್ರಭಾಸ್​ (Prabhas), ಕೃತಿ ಸನೋನ್​, ದೇವದತ್ತ ನಾಗೆ, ಸೈಫ್​ ಅಲಿ ಖಾನ್​, ಸನ್ನಿ ಸಿಂಗ್​ ಮುಂತಾದವರು ನಟಿಸಿದ್ದಾರೆ. ಓಂ ರಾವತ್​ (Om Raut) ನಿರ್ದೇಶನದಲ್ಲಿ ‘ಆದಿಪುರುಷ್​’ ಚಿತ್ರ ಮೂಡಿಬಂದಿದೆ. ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಪ್ರದರ್ಶನ ಆಗುತ್ತಿದೆ. ಮುಂಜಾನೆ 6 ಗಂಟೆಗೂ ಮುನ್ನವೇ ಶೋಗಳು ಆರಂಭ ಆಗಿವೆ. ರಾಮಾಯಣವನ್ನು ಆಧರಿಸಿದ ‘ಆದಿಪುರುಷ್​’ ಚಿತ್ರ 3ಡಿಯಲ್ಲಿ ಮೂಡಿಬಂದಿದೆ. ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ಟೀಸರ್​ ಬಿಡುಗಡೆ ಆದಾಗ ಈ ಸಿನಿಮಾ ಸಖತ್​ ಟ್ರೋಲ್​ ಆಗಿತ್ತು. ಆದರೆ ಈಗ ಪ್ರೇಕ್ಷಕರಿಂದ ಪಾಸಿಟಿವ್​ ಪ್ರತಿಕ್ರಿಯೆ ಸಿಗುತ್ತಿದೆ. ‘ಆದಿಪುರುಷ್​’ ಸಿನಿಮಾದ ಫಸ್ಟ್​ ಹಾಫ್​ ಹೇಗಿದೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.

  1. ರಾಮ ವನವಾಸ ಸ್ವೀಕರಿಸುವ ಮೂಲಕ ಆರಂಭ ಆಗುವ ಆದಿಪುರುಷ್ ಸಿನಿಮಾ. ‘ರಾಮ್ ಸೀತಾ ರಾಮ್..’ ಹಾಡಿನ ಮೂಲಕ ಶ್ರೀರಾಮನ ದರ್ಶನ.
  2. ಆರಂಭದಲ್ಲೇ ಸೈಫ್ ಅಲಿ ಖಾನ್ ಎಂಟ್ರಿ. ರಾವಣನ ಪಾತ್ರದಲ್ಲಿ ಗಹಗಹಿಸಿ ಅಬ್ಬರಿಸುವ ಸೈಫ್.
  3. ಅಂಡರ್ ವಾಟರ್ ದೃಶ್ಯದ ಮೂಲಕ ಪ್ರಭಾಸ್ ಎಂಟ್ರಿ. ಶುರುವಿನಲ್ಲೇ ಆ್ಯಕ್ಷನ್ ಮೂಲಕ ಅಬ್ಬರಿಸುವ ರಾಘವ.
  4. ಅದ್ದೂರಿ ಸೆಟ್‌ಗಳ ಮೂಲಕ ಲಂಕಾಸುರ ರಾವಣನ ಆಸ್ಥಾನ ಮತ್ತು ಆಶೋಕವನದ ಅನಾವರಣ. ‌
  5. ಸೀತಾಪಹರಣ ದೃಶ್ಯದಲ್ಲಿ ಆರ್ಭಟಿಸುವ ಸೈಫ್ ಅಲಿ ಖಾನ್. ಬಹಳ ರೋಚಕವಾಗಿ ಮೂಡಿಬಂದಿದೆ ಜಠಾಯು ಮತ್ತು ರಾವಣನ ನಡುವಿನ ಕಾಳಗ.
  6. ಶಬರಿ, ಮಂಡೋದರಿ, ವಾಲಿ-ಸುಗ್ರೀವರ ಕಥೆಗೂ ‘ಆದಿಪುರುಷ್’ ಫಸ್ಟ್ ಹಾಫ್‌ನಲ್ಲಿ ಸಿಕ್ಕಿದೆ ಜಾಗ.
  7. ರಾಮ-ಆಂಜನೇಯನ ಮೊದಲ ಭೇಟಿಯ ದೃಶ್ಯಕ್ಕೆ ರೋಮಾಂಚನಗೊಳ್ಳುವ ಪ್ರೇಕ್ಷಕ. ಹನುಮಂತನ ಪಾತ್ರದಲ್ಲಿ ಮಿಂಚಿದ ನಟ ದೇವದತ್ತ ನಾಗೆ.
  8. ಮೈನವಿರೇಳಿಸುವಂತೆ ಮೂಡಿಬಂದಿದೆ‌ ವಾಲಿ-ಸುಗ್ರೀವರ ಮಲ್ಲಯುದ್ಧ. ನೋಡುಗರ ಚಪ್ಪಾಳೆ ಗಿಟ್ಟಿಸುತ್ತದೆ ಈ ದೃಶ್ಯ.
  9. ಲಂಕಾದಹನದ ಸನ್ನಿವೇಶ ಸೇರಿದಂತೆ ಹಲವು ದೃಶ್ಯಗಳಲ್ಲಿ ಬಜರಂಗಿಗೆ ಶಿಳ್ಳೆ, ಚಪ್ಪಾಳೆ.
  10. ರಾವಣ ಸಂಹಾರದ ಪ್ರತೀಜ್ಞೆ ಮಾಡಿದ ರಾಘವ. ರಾಮಸೇತು ನಿರ್ಮಾಣದ ದೃಶ್ಯದೊಂದಿಗೆ ಇಂಟರ್‌ವಲ್.
  11. ಸನ್ನಿ ಸಿಂಗ್ ನಿಭಾಯಿಸಿದ ಲಕ್ಷ್ಮಣನ ಪಾತ್ರಕ್ಕೆ ಮೊದಲಾರ್ಧದಲ್ಲಿ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:51 am, Fri, 16 June 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ