Adipurush: 3ಡಿ ದೃಶ್ಯಗಳಲ್ಲಿ ರಾಮಾಯಣದ ವೈಭವ; ಹೇಗಿದೆ ‘ಆದಿಪುರುಷ್​’ ಚಿತ್ರದ ಫಸ್ಟ್​ ಹಾಫ್​?

Adipurush First Half Review: ಮುಂಜಾನೆಯೇ ‘ಆದಿಪುರುಷ್​’ ಶೋಗಳು ಆರಂಭ ಆಗಿವೆ. ಪ್ರಭಾಸ್​ ಅಭಿಮಾನಿಗಳು ಈ ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.

Adipurush: 3ಡಿ ದೃಶ್ಯಗಳಲ್ಲಿ ರಾಮಾಯಣದ ವೈಭವ; ಹೇಗಿದೆ ‘ಆದಿಪುರುಷ್​’ ಚಿತ್ರದ ಫಸ್ಟ್​ ಹಾಫ್​?
ಆದಿಪುರುಷ್​ ಸಿನಿಮಾ ಪೋಸ್ಟರ್​
Follow us
| Updated By: ರಾಜೇಶ್ ದುಗ್ಗುಮನೆ

Updated on:Jun 16, 2023 | 7:57 AM

ಸೆಟ್ಟೇರಿದ ದಿನದಿಂದಲೂ ‘ಆದಿಪುರುಷ್​’ ಚಿತ್ರ (Adipurush Movie) ಸಖತ್​ ಸುದ್ದಿ ಆಗುತ್ತಿತ್ತು. ಈಗ ಸಿನಿಮಾ ರಿಲೀಸ್​ ಆಗಿದೆ. ಇಂದು (ಜೂನ್​ 16) ಅದ್ದೂರಿಯಾಗಿ ‘ಆದಿಪುರುಷ್​’ ತೆರೆಕಂಡಿದೆ. ಈ ಸಿನಿಮಾದಲ್ಲಿ ಪ್ರಭಾಸ್​ (Prabhas), ಕೃತಿ ಸನೋನ್​, ದೇವದತ್ತ ನಾಗೆ, ಸೈಫ್​ ಅಲಿ ಖಾನ್​, ಸನ್ನಿ ಸಿಂಗ್​ ಮುಂತಾದವರು ನಟಿಸಿದ್ದಾರೆ. ಓಂ ರಾವತ್​ (Om Raut) ನಿರ್ದೇಶನದಲ್ಲಿ ‘ಆದಿಪುರುಷ್​’ ಚಿತ್ರ ಮೂಡಿಬಂದಿದೆ. ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಪ್ರದರ್ಶನ ಆಗುತ್ತಿದೆ. ಮುಂಜಾನೆ 6 ಗಂಟೆಗೂ ಮುನ್ನವೇ ಶೋಗಳು ಆರಂಭ ಆಗಿವೆ. ರಾಮಾಯಣವನ್ನು ಆಧರಿಸಿದ ‘ಆದಿಪುರುಷ್​’ ಚಿತ್ರ 3ಡಿಯಲ್ಲಿ ಮೂಡಿಬಂದಿದೆ. ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ಟೀಸರ್​ ಬಿಡುಗಡೆ ಆದಾಗ ಈ ಸಿನಿಮಾ ಸಖತ್​ ಟ್ರೋಲ್​ ಆಗಿತ್ತು. ಆದರೆ ಈಗ ಪ್ರೇಕ್ಷಕರಿಂದ ಪಾಸಿಟಿವ್​ ಪ್ರತಿಕ್ರಿಯೆ ಸಿಗುತ್ತಿದೆ. ‘ಆದಿಪುರುಷ್​’ ಸಿನಿಮಾದ ಫಸ್ಟ್​ ಹಾಫ್​ ಹೇಗಿದೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.

  1. ರಾಮ ವನವಾಸ ಸ್ವೀಕರಿಸುವ ಮೂಲಕ ಆರಂಭ ಆಗುವ ಆದಿಪುರುಷ್ ಸಿನಿಮಾ. ‘ರಾಮ್ ಸೀತಾ ರಾಮ್..’ ಹಾಡಿನ ಮೂಲಕ ಶ್ರೀರಾಮನ ದರ್ಶನ.
  2. ಆರಂಭದಲ್ಲೇ ಸೈಫ್ ಅಲಿ ಖಾನ್ ಎಂಟ್ರಿ. ರಾವಣನ ಪಾತ್ರದಲ್ಲಿ ಗಹಗಹಿಸಿ ಅಬ್ಬರಿಸುವ ಸೈಫ್.
  3. ಅಂಡರ್ ವಾಟರ್ ದೃಶ್ಯದ ಮೂಲಕ ಪ್ರಭಾಸ್ ಎಂಟ್ರಿ. ಶುರುವಿನಲ್ಲೇ ಆ್ಯಕ್ಷನ್ ಮೂಲಕ ಅಬ್ಬರಿಸುವ ರಾಘವ.
  4. ಅದ್ದೂರಿ ಸೆಟ್‌ಗಳ ಮೂಲಕ ಲಂಕಾಸುರ ರಾವಣನ ಆಸ್ಥಾನ ಮತ್ತು ಆಶೋಕವನದ ಅನಾವರಣ. ‌
  5. ಸೀತಾಪಹರಣ ದೃಶ್ಯದಲ್ಲಿ ಆರ್ಭಟಿಸುವ ಸೈಫ್ ಅಲಿ ಖಾನ್. ಬಹಳ ರೋಚಕವಾಗಿ ಮೂಡಿಬಂದಿದೆ ಜಠಾಯು ಮತ್ತು ರಾವಣನ ನಡುವಿನ ಕಾಳಗ.
  6. ಶಬರಿ, ಮಂಡೋದರಿ, ವಾಲಿ-ಸುಗ್ರೀವರ ಕಥೆಗೂ ‘ಆದಿಪುರುಷ್’ ಫಸ್ಟ್ ಹಾಫ್‌ನಲ್ಲಿ ಸಿಕ್ಕಿದೆ ಜಾಗ.
  7. ರಾಮ-ಆಂಜನೇಯನ ಮೊದಲ ಭೇಟಿಯ ದೃಶ್ಯಕ್ಕೆ ರೋಮಾಂಚನಗೊಳ್ಳುವ ಪ್ರೇಕ್ಷಕ. ಹನುಮಂತನ ಪಾತ್ರದಲ್ಲಿ ಮಿಂಚಿದ ನಟ ದೇವದತ್ತ ನಾಗೆ.
  8. ಮೈನವಿರೇಳಿಸುವಂತೆ ಮೂಡಿಬಂದಿದೆ‌ ವಾಲಿ-ಸುಗ್ರೀವರ ಮಲ್ಲಯುದ್ಧ. ನೋಡುಗರ ಚಪ್ಪಾಳೆ ಗಿಟ್ಟಿಸುತ್ತದೆ ಈ ದೃಶ್ಯ.
  9. ಲಂಕಾದಹನದ ಸನ್ನಿವೇಶ ಸೇರಿದಂತೆ ಹಲವು ದೃಶ್ಯಗಳಲ್ಲಿ ಬಜರಂಗಿಗೆ ಶಿಳ್ಳೆ, ಚಪ್ಪಾಳೆ.
  10. ರಾವಣ ಸಂಹಾರದ ಪ್ರತೀಜ್ಞೆ ಮಾಡಿದ ರಾಘವ. ರಾಮಸೇತು ನಿರ್ಮಾಣದ ದೃಶ್ಯದೊಂದಿಗೆ ಇಂಟರ್‌ವಲ್.
  11. ಸನ್ನಿ ಸಿಂಗ್ ನಿಭಾಯಿಸಿದ ಲಕ್ಷ್ಮಣನ ಪಾತ್ರಕ್ಕೆ ಮೊದಲಾರ್ಧದಲ್ಲಿ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:51 am, Fri, 16 June 23

ತಾಜಾ ಸುದ್ದಿ
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ