Badava Rascal Movie Review: ‘ಬಡವ ರಾಸ್ಕಲ್’ನ ಫ್ರೆಂಡ್​ಶಿಪ್​ ಗಟ್ಟಿ ಮಾಡಿದ ಪಂಚಿಂಗ್​ ಡೈಲಾಗ್

‘ಬಡವ ರಾಸ್ಕಲ್’​ ಎಮೋಷನಲ್​ ಆಗಿ ಹೆಚ್ಚು ಕನೆಕ್ಟ್​ ಆಗುತ್ತಾನೆ. ತಂದೆ, ತಾಯಿ ಹಾಗೂ ಮಗನ ನಡುವಿನ ಎಮೋಷನಲ್​ ದೃಶ್ಯಗಳನ್ನು ತುಂಬಾನೇ ಬಿಗಿಯಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

Badava Rascal Movie Review: ‘ಬಡವ ರಾಸ್ಕಲ್’ನ ಫ್ರೆಂಡ್​ಶಿಪ್​ ಗಟ್ಟಿ ಮಾಡಿದ ಪಂಚಿಂಗ್​ ಡೈಲಾಗ್
ಬಡವ ರಾಸ್ಕಲ್​ ತಂಡ
Follow us
|

Updated on:Dec 24, 2021 | 3:51 PM

ಸಿನಿಮಾ: ಬಡವ ರಾಸ್ಕಲ್​

ಪಾತ್ರವರ್ಗ: ಧನಂಜಯ, ಅಮೃತಾ ಅಯ್ಯಂಗಾರ್​, ರಂಗಾಯಣ ರಘು, ತಾರಾ, ನಾಗಭೂಷಣ ಇತರರು

ನಿರ್ದೇಶನ: ಶಂಕರ್​ ಗುರು

ನಿರ್ಮಾಣ: ಡಾಲಿ ಪಿಕ್ಚರ್

ಸ್ಟಾರ್​: 3/5

ಶಂಕರ್​ (ಧನಂಜಯ) ಪಕ್ಕಾ ಮಧ್ಯಮ ವರ್ಗದ ಹುಡುಗ. ಆತನಿಗೆ ಮನೆಯ ಕಷ್ಟ ಏನು ಎಂಬುದು ಗೊತ್ತು. ಓದಿದ್ದು ಎಂಬಿಎ ಆದರೂ ಯಾರಿಗೋ ಸಲಾಂ ಹೊಡೆದುಕೊಂಡು ಕೆಲಸ ಮಾಡೋದು ಆತನಿಗೆ ಕಿಂಚಿತ್ತೂ ಇಷ್ಟವಿಲ್ಲ. ಈ ಕಾರಣಕ್ಕೆ ಅಪ್ಪನ ಆಟೋವನ್ನು ಓಡಿಸಿ ಜೀವನ ನಡೆಸುತ್ತಿರುತ್ತಾನೆ. ಗೆಳೆಯರಿಗೋಸ್ಕರ ಆತ ಪ್ರಾಣ ಕೊಡೋಕೂ ರೆಡಿ. ಇದು ಶಂಕರ್​ ಅಲಿಯಾಸ್​ ಬಡವ ರಾಸ್ಕಲ್​​ನ ಪ್ಲಸ್​ ಆ್ಯಂಡ್​ ವೀಕ್​ನೆಸ್​ ಎರಡೂ ಹೌದು. ಈ ಶಂಕರ್​ ಪ್ರಭಾವಿ ರಾಜಕಾರಣಿ ಮಗಳು ಸಂಗೀತಾಳನ್ನು (ಅಮೃತಾ ಅಯ್ಯಂಗರ್​) ಪ್ರೀತಿಸುತ್ತಿರುತ್ತಾನೆ. ಇಬ್ಬರ ಮಧ್ಯೆ ವಿಲನ್​ ಆಗಿ ಬರೋದು ಯಾರು? ಶಂಕರ್​ ಆ ಪ್ರೀತಿಯನ್ನು ಹೇಗೆ ಪಡೆದುಕೊಳ್ಳುತ್ತಾನೆ? ಪ್ರೀತಿ ಹಾಗೂ ಕುಟುಂಬವನ್ನು ಹೇಗೆ ಸರಿದೂಗಿಸಿಕೊಂಡು ಹೋಗುತ್ತಾನೆ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು.

‘ಬಡವ ರಾಸ್ಕಲ್’​ ಸಿನಿಮಾದಲ್ಲಿ ಮಧ್ಯಮ ವರ್ಗದವರ ಜೀವನವನ್ನು ಅದ್ಭುತವಾಗಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕ ಶಂಕರ್ ಗುರು ಮಾಡಿದ್ದಾರೆ. ಈ ಸಿನಿಮಾದಲ್ಲಿ ಹೀರೋಯಿಸಂಗೆ ಬೇಕಾಗುವ ಅಂಶ​ ಇದೆ. ಪಂಚಿಂಗ್​ ಡೈಲಾಗ್, ಎಮೋಷನ್​, ಫ್ರೆಂಡ್​ಶಿಪ್​, ಪ್ರೀತಿ-ಪ್ರೇಮ ಹೀಗೆ ಹಲವು ವಿಚಾರಗಳಿವೆ. ಈ ಸಿನಿಮಾ ಮಧ್ಯಮ ವರ್ಗದವರಿಗೆ ಹೆಚ್ಚು ಕನೆಕ್ಟ್​ ಆಗುತ್ತದೆ. ಮಿಡಲ್​ ಕ್ಲಾಸ್​ ಮಂದಿಯ ಕಷ್ಟಗಳನ್ನು ಮನಸ್ಸಿಗೆ ಮುಟ್ಟುವಂತೆ ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ.

ಚಿತ್ರಕ್ಕೆ ಗಟ್ಟಿ ಕಥೆ ಇಲ್ಲ. ಆದರೆ, ಸಿನಿಮಾ ಉದ್ದಕ್ಕೂ ಬರುವ ಪಂಚಿಂಗ್​ ಡೈಲಾಗ್​ಗಳು ಸಿನಿಮಾಗೆ ಬೆನ್ನೆಲುಬಾಗಿ ನಿಂತಿವೆ. ಕಥೆಯಲ್ಲಿ ಗಟ್ಟಿತನ ಇಲ್ಲ ಎಂಬ ಕೊರಗನ್ನು ಕೊಂಚ ಮಟ್ಟಿಗೆ ನೀಗಿಸುವ ಪ್ರಯತ್ನ ಮಾಡುತ್ತೆ. ಸಿನಿಮಾದ ಉದ್ದಕ್ಕೂ ಫ್ರೆಂಡ್​ಶಿಪ್​ ವಿಚಾರವನ್ನು ಹೈಲೈಟ್​ ಮಾಡುತ್ತಾ ಹೋಗಲಾಗಿದೆ. ಫ್ರೆಂಡ್​ಶಿಪ್​​ನಲ್ಲಿದ್ದ​ ಗಟ್ಟಿತನವನ್ನು, ಕಥೆಯಲ್ಲೂ ತೋರಿಸಿದ್ದರೆ ಸಿನಿಮಾ ಮತ್ತಷ್ಟು ಇಷ್ಟವಾಗುತ್ತಿತ್ತು.

‘ಬಡವ ರಾಸ್ಕಲ್’​ ಎಮೋಷನಲ್​ ಆಗಿ ಹೆಚ್ಚು ಕನೆಕ್ಟ್​ ಆಗುತ್ತಾನೆ. ತಂದೆ, ತಾಯಿ ಹಾಗೂ ಮಗನ ನಡುವಿನ ಎಮೋಷನಲ್​ ದೃಶ್ಯಗಳನ್ನು ತುಂಬಾನೇ ಬಿಗಿಯಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಸಿನಿಮಾದ ಉದ್ದಕ್ಕೂ ಬರುವ ಪಂಚಿಂಗ್​ ಡೈಲಾಗ್​ಗಳು ಪ್ರೇಕ್ಷಕರಿಗೆ ನಗು ತರಿಸುತ್ತವೆ. ಧನಂಜಯ ಅವರು ಈ ಸಿನಿಮಾದಲ್ಲಿ ಆಟೋ ಡ್ರೈವರ್​ ಆಗಿ, ಮಧ್ಯಮ ವರ್ಗದ ಹುಡುಗನಾಗಿ, ಇವೆಲ್ಲವೂ ತಾವು ಅನುಭವಿಸದ ಕಷ್ಟಗಳೇ ಎಂಬಷ್ಟು ನೈಜವಾಗಿ ನಟಿಸಿ ತೋರಿಸಿದ್ದಾರೆ. ಅವರ ನಟನೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಧನಂಜಯ ಗೆಳೆಯನ ಪಾತ್ರದಲ್ಲಿ ನಾಗಭೂಷಣ ಅವರು ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಈ ಸಿನಿಮಾದಲ್ಲಿ ಅವರ ಪಾತ್ರವೂ ಹೈಲೈಟ್​ ಆಗಿದೆ.

ಧನಂಜಯ ಅವರ ತಂದೆ-ತಾಯಿ ಪಾತ್ರದಲ್ಲಿ ರಂಗಾಯಣ ರಘು ಹಾಗೂ ತಾರಾ ಅವರದ್ದು ಪ್ರಬುದ್ಧ ನಟನೆ. ಕೆಲ ದೃಶ್ಯಗಳಲ್ಲಿ ಮನಸ್ಸಿಗೆ ನಾಟುವಂತೆ ಅವರು ನಟಿಸಿ ತೋರಿಸಿದ್ದಾರೆ. ಅಮೃತಾ ಅಯ್ಯಂಗಾರ್​ ಅವರು ಹೆಚ್ಚು ಹೊತ್ತು ತೆರೆಮೇಲೆ ಕಾಣಿಸಿಕೊಳ್ಳದಿದ್ದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪೂರ್ಣಚಂದ್ರ ಮೈಸೂರು ಅವರೂ ನಟನೆಯಲ್ಲಿ ಗಮನ ಸೆಳೆಯುತ್ತಾರೆ.

ಶಂಕರ್ ಗುರು ​ಅವರ ನಿರ್ದೇಶನ ಮೆಚ್ಚಿಕೊಳ್ಳುವಂತದ್ದು. ಕಥೆ ಗಟ್ಟಿ ಇಲ್ಲದಿದ್ದರೂ ನಿರೂಪಣೆಯಲ್ಲಿ, ಸಂಭಾಷಣೆಯಲ್ಲಿ ಗಟ್ಟಿತನ ಮೆರೆದಿದ್ದಾರೆ. ಕೆ.ಆರ್​. ಮಾರುಕಟ್ಟೆ ಸೇರಿ ಅನೇಕ ಸ್ಥಳಗಳನ್ನು ತುಂಬಾನೇ ನೈಜವಾಗಿ ಶೂಟ್​ ಮಾಡಿ ಭೇಷ್​ ಎನಿಸಿಕೊಂಡಿದ್ದಾರೆ ಛಾಯಾಗ್ರಾಹಕಿ ಪ್ರೀತಾ ಜಯರಾಮನ್​​. ವಾಸುಕಿ ವೈಭವ್​ ಸಂಗೀತ ಸಂಯೋಜನೆಯ ಹಾಡುಗಳು ಇಷ್ಟವಾಗುತ್ತವೆ.

ಇದನ್ನೂ ಓದಿ: ‘ರೈಡರ್​’, ‘ಬಡವ ರಾಸ್ಕಲ್​’ ಚಿತ್ರಗಳ ಬಗ್ಗೆ ರಮ್ಯಾ ನಿರೀಕ್ಷೆ; ಡಾಲಿ ಧನಂಜಯಗೆ ಮತ್ತೆ ಮತ್ತೆ ಪ್ರೀತಿ-ಪ್ರೋತ್ಸಾಹ

Badava Rascal: ಧನಂಜಯ​ ನಟನೆಯ ‘ಬಡವ ರಾಸ್ಕಲ್​’ ಮೊದಲಾರ್ಧ ಹೇಗಿದೆ? ಇಲ್ಲಿದೆ ರಿಪೋರ್ಟ್​

Published On - 3:10 pm, Fri, 24 December 21

ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ