ಪಾತ್ರ ಕೊಟ್ಟಿಲ್ಲವೆಂದು ನಿರ್ಮಾಪಕರ ಮೇಲೆ ಮುನಿಸಿಕೊಂಡಿದ್ದ ತ್ರಿಷಾ

Trisha Krishnan: ತಮ್ಮ 43ನೇ ವಯಸ್ಸಿನಲ್ಲೂ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ ನಟಿ ತ್ರಿಷಾ. ಈಗಲೂ ಬಿಡುವಿಲ್ಲದೆ ಚಿತ್ರೀಕರಣಗಳಲ್ಲಿ ಭಾಗಿ ಆಗುತ್ತಿದ್ದಾರೆ. ತ್ರಿಷಾ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು 24 ವರ್ಷಗಳಾಗಿವೆ. ಹಲವಾರು ಭಾಷೆಗಳಲ್ಲಿ ಹಲವಾರು ಸಿನಿಮಾಗಳಲ್ಲಿ ತ್ರಿಷಾ ನಟಿಸಿದ್ದಾರೆ. ಒಟ್ಟೊಟ್ಟಿಗೆ ನಾಲ್ಕೈದು ಸಿನಿಮಾಗಳಲ್ಲಿಯೂ ನಟಿಸಿದ್ದರು ತ್ರಿಷಾ. ಆದರೆ ಒಮ್ಮೆ ಒಂದು ಫ್ಲಾಪ್ ಸಿನಿಮಾನಲ್ಲಿ ಪಾತ್ರ ಕೊಡದೇ ಇದ್ದಿದ್ದಕ್ಕೆ ನಿರ್ಮಾಪಕರ ಮೇಲೆ ಬೇಸರ ಮಾಡಿಕೊಂಡಿದ್ದರಂತೆ.

ಪಾತ್ರ ಕೊಟ್ಟಿಲ್ಲವೆಂದು ನಿರ್ಮಾಪಕರ ಮೇಲೆ ಮುನಿಸಿಕೊಂಡಿದ್ದ ತ್ರಿಷಾ
Trisha Krishnan

Updated on: May 22, 2026 | 12:30 PM

ತಮಿಳಿನ ಸ್ಟಾರ್ ನಟ ವಿಜಯ್ (Vijay) ಸಿಎಂ ಆಗುತ್ತಲೇ ಇತ್ತ ತ್ರಿಷಾ ಕೃಷ್ಣನ್ ಮಾರುಕಟ್ಟೆ ಹೆಚ್ಚಾಗಿದೆ. ವಿಜಯ್​​​ಗೆ ಬಲು ಆಪ್ತವಾಗಿರುವ ತ್ರಿಷಾ, ತಮ್ಮ 43ನೇ ವಯಸ್ಸಿನಲ್ಲೂ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಈಗಲೂ ಹಲವು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿದ್ದು, ಬಿಡುವಿಲ್ಲದೆ ಚಿತ್ರೀಕರಣಗಳಲ್ಲಿ ಭಾಗಿ ಆಗುತ್ತಿದ್ದಾರೆ. ತ್ರಿಷಾ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು 24 ವರ್ಷಗಳಾಗಿವೆ. ಹಲವಾರು ಭಾಷೆಗಳಲ್ಲಿ ಹಲವಾರು ಸಿನಿಮಾಗಳಲ್ಲಿ ತ್ರಿಷಾ ನಟಿಸಿದ್ದಾರೆ. ಒಟ್ಟೊಟ್ಟಿಗೆ ನಾಲ್ಕೈದು ಸಿನಿಮಾಗಳಲ್ಲಿಯೂ ನಟಿಸಿದ್ದರು ತ್ರಿಷಾ. ಆದರೆ ಒಮ್ಮೆ ಒಂದು ಫ್ಲಾಪ್ ಸಿನಿಮಾನಲ್ಲಿ ಪಾತ್ರ ಕೊಡದೇ ಇದ್ದಿದ್ದಕ್ಕೆ ನಿರ್ಮಾಪಕರ ಮೇಲೆ ಬೇಸರ ಮಾಡಿಕೊಂಡಿದ್ದರಂತೆ.

ತಮಿಳು ಸಿನಿಮಾ ಮೂಲಕ ನಾಯಕಿಯಾದ ತ್ರಿಷಾಗೆ ಆರಂಭದಲ್ಲಿಯೇ ಕೆಲವು ಹಿಟ್ ಸಿನಿಮಾಗಳು ಸಿಕ್ಕವು. ಆದರೆ ತೆಲುಗಿನಲ್ಲಿ ಅವರನ್ನು ಸ್ಟಾರ್ ನಟಿಯನ್ನಾಗಿ ಮಾಡಿದ್ದು ‘ವರ್ಷಂ’ ಸಿನಿಮಾ. ಪ್ರಭಾಸ್ ನಟನೆಯ ಆ ಸಿನಿಮಾವನ್ನು ಎಂಎಸ್ ರಾಜು ನಿರ್ಮಾಣ ಮಾಡಿದ್ದರು. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಆ ನಂತರ ತ್ರಿಷಾ ಅವರಿಗೆ ತಮ್ಮ ನಿರ್ಮಾಣದ ಹಲವು ಸಿನಿಮಾಗಳಲ್ಲಿ ಅವರು ಪಾತ್ರ ನೀಡಿದರು. ಎಲ್ಲ ಸಿನಿಮಾಗಳು ಸಹ ಬ್ಲಾಕ್ ಬಸ್ಟರ್ ಆದವು.

‘ವರ್ಷಂ’ ಬಳಿಕ 2005 ರಲ್ಲಿ ಎಂಎಸ್ ರಾಜು ನಿರ್ಮಿಸಿದ ‘ನುವ್ವೊಸ್ತಾನಂಟೆ ನೇನೊದ್ದಂಟಾನ’ ಸಿನಿಮಾನಲ್ಲಿ ತ್ರಿಷಾ ನಾಯಕಿ. ಆ ಸಿನಿಮಾ ಸಹ ಬ್ಲಾಕ್ ಬಸ್ಟರ್ ಆಯ್ತು. ಬಳಿಕ ಮುಂದಿನ ವರ್ಷ ಮತ್ತೆ ಪ್ರಭಾಸ್ ಜೊತೆಗೆ ‘ಪೌರ್ಣಮಿ’ ಸಿನಿಮಾ ನಿರ್ಮಿಸಿದರು, ಅದರಲ್ಲೂ ತ್ರಿಷಾ ನಾಯಕಿ. ಆ ಸಿನಿಮಾ ಸಹ ಸೂಪರ್ ಹಿಟ್ ಆಯ್ತು. ಒಟ್ಟಾರೆ ತ್ರಿಷಾಗೆ ಎಂಎಸ್ ರಾಜು ನಿರ್ಮಾಣ ಸಂಸ್ಥೆ ಮತ್ತು ನಿರ್ಮಾಣ ಸಂಸ್ಥೆಗೆ ತ್ರಿಷಾ ಪರಸ್ಪರ ಲಕ್ಕಿ ಎನಿಸಿಕೊಂಡಿದ್ದರು.

ಇದನ್ನೂ ಓದಿ:ಸಿಎಂ ವಿಜಯ್ ಅನ್ನು ಭೇಟಿಯಾದ ಸಿನಿಮಾ ನಿರ್ದೇಶಕರ ತಂಡ: ಕಾರಣ?

ಆದರೆ 2007 ರಲ್ಲಿ ಎಂಎಸ್ ರಾಜು ನಿರ್ಮಿಸಿದ ‘ಆಟ’ ಸಿನಿಮಾಕ್ಕೆ ಸಿದ್ಧಾರ್ಥ್ ಎದುರು ನಾಯಕಿಯಾಗಿ ಇಲಿಯಾನ ಡಿ ಕ್ರೂಸ್ ಅನ್ನು ಆಯ್ಕೆ ಮಾಡಲಾಗಿತ್ತು. ಈ ವಿಷಯ ತ್ರಿಷಾಗೆ ತಿಳಿದು ನಿರ್ಮಾಪಕ ರಾಜು ಅವರಿಗೆ ಕರೆ ಮಾಡಿ, ‘ನಾನೇ ಪಾತ್ರ ಮಾಡುತ್ತೇನೆ’ ಎಂದರಂತೆ. ಆದರೆ ಅದಾಗಲೇ ಚಿತ್ರೀಕರಣ ಶುರುವಾಗಿ ಕೆಲ ದೃಶ್ಯಗಳ ಚಿತ್ರೀಕರಣವೂ ಆಗಿಬಿಟ್ಟಿತ್ತಂತೆ. ಹಾಗಾಗಿ ತ್ರಿಷಾಗೆ ನೋ ಹೇಳಿದರಂತೆ ರಾಜು. ಇದರಿಂದಾಗಿ ತ್ರಿಷಾ ಅವರು ತಮ್ಮ ಮೇಲೆ ಕೋಪಗೊಂಡಿದ್ದರು ಎಂದು ರಾಜು ತಿಳಿಸಿದ್ದಾರೆ. ಬಳಿಕ ಫೋನ್ ಕರೆ ಮಾಡಿ ತ್ರಿಷಾ ಅವರಿಗೆ ಸಮಾಧಾನ ಮಾಡಿದ್ದರಂತೆ ರಾಜು. ಅಂದಹಾಗೆ ‘ಆಟ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್ ಆಯ್ತು.

ತ್ರಿಷಾ, ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಾಯಕಿಯಾಗಿ ನಟಿಸಿರುವ ‘ಕರುಪ್ಪು’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ‘ವಿಶ್ವಂಭರ’ ಸಿನಿಮಾನಲ್ಲಿ ತ್ರಿಷಾ ನಟಿಸಿದ್ದಾರೆ. ಮೋಹನ್​​ಲಾಲ್ ಜೊತೆಗೆ ‘ರಾಮ್’ ಸಿನಿಮಾನಲ್ಲಿ ನಟಿಸಿದ್ದು ಆ ಸಿನಿಮಾ ಸಹ ಬಿಡುಗಡೆ ಆಗಬೇಕಿದೆ. ಇದೀಗ ಚಿರಂಜೀವಿ ಜೊತೆಗೆ ಹೊಸದೊಂದು ಸಿನಿಮಾನಲ್ಲಿ ತ್ರಿಷಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us