Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಜಾಖರ್’ ಟ್ರೈಲರ್ ಬಿಡುಗಡೆ: ಮತ್ತೊಂದು ವಿವಾದಾತ್ಮಕ ಸಿನಿಮಾ ಆಗುವ ಮುನ್ಸೂಚನೆ

Razakar: ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ ಸಿನಿಮಾಗಳ ಮಾದರಿಯಲ್ಲೇ ಮತ್ತೊಂದು ಸಿನಿಮಾ ನಿರ್ಮಾಣವಾಗಿದ್ದು ಸಿನಿಮಾದ ಹೆಸರು ‘ರಜಾಖರ್’. ಶೀಘ್ರವೇ ಸಿನಿಮಾ ಬಿಡುಗಡೆ ಆಗಲಿದೆ.

‘ರಜಾಖರ್’ ಟ್ರೈಲರ್ ಬಿಡುಗಡೆ: ಮತ್ತೊಂದು ವಿವಾದಾತ್ಮಕ ಸಿನಿಮಾ ಆಗುವ ಮುನ್ಸೂಚನೆ
Follow us
ಮಂಜುನಾಥ ಸಿ.
|

Updated on: Feb 14, 2024 | 7:13 PM

ದಿ ಕಾಶ್ಮೀರ್ ಫೈಲ್ಸ್’ (The Kashmir Files), ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಗಳಿಸಿದವು, ಒಂದು ವರ್ಗದ ಮೆಚ್ಚುಗೆ ಗಳಿಸಿದವು. ಈ ಸಿನಿಮಾಗಳ ಧಾತು ಒಂದೇ ಆಗಿತ್ತು, ಇಸ್ಲಾಂ ಧರ್ಮ ನಂಬುವವರು ಮಾಡಿದ್ದಾರೆ ಎನ್ನಲಾದ ಅಪರಾಧಗಳನ್ನು ಪ್ರೇಕ್ಷಕರ ಮುಂದಿಡುವುದು. ಈ ಸಿನಿಮಾಗಳಿಗೆ ಸಾಕಷ್ಟು ವಿರೋಧವೂ ವ್ಯಕ್ತವಾಯ್ತು, ಕೆಲವು ರಾಜ್ಯಗಳಲ್ಲಿ, ಕೆಲವು ದೇಶಗಳಲ್ಲಿ ಈ ಸಿನಿಮಾಗಳಿಗೆ ನಿಷೇಧ ಹೇರಲಾಯ್ತು. ಇದೀಗ ಇದೇ ಮಾದರಿಯ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ‘ರಜಾಖರ್’ ಹೆಸರಿನ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಸಿನಿಮಾ ಮಾರ್ಚ್ 1ಕ್ಕೆ ಬಿಡುಗಡೆ ಆಗಲಿದೆ.

‘ರಜಾಖರ್’ ಸಿನಿಮಾ ಭಾರತ ಸ್ವಾತಂತ್ರ್ಯವಾದಾಗ ಹೈದರಾಬಾದ್ ಅನ್ನು ಸ್ವತಂತ್ರ್ಯ ಭಾರತದಲ್ಲಿ ವಿಲೀನವಾಗಲು ಒಪ್ಪಿಕೊಳ್ಳದೆ ಹೈದರಾಬಾದ್​ ಅನ್ನು ಸ್ವತಂತ್ರ್ಯ ರಾಜ್ಯವನ್ನಾಗಿಸುವ ಉದ್ದೇಶ ಹೊಂದಿದ್ದರು. ಆದರೆ ಈ ಉದ್ದೇಶದ ವಿರುದ್ಧ ಧಂಗೆ ಏಳುವ, ಕ್ರಾಂತಿಗೆ ಯತ್ನಿಸುವವರನ್ನು ಹತ್ತಿಕ್ಕಲು ರಜಾಕರ್ ಸೇನೆಯನ್ನು ಬಳಸಲಾಗಿತ್ತು. 1947ರಿಂದ 1948ರ ವರೆಗೆ ಈ ರಜಾಕರ್ ಸೈನ್ಯವು ಹಿಂದೂಗಳ ಮೇಲೆ, ಸ್ವಾತಂತ್ರ್ಯ ಭಾರತದಲ್ಲಿ ವಿಲೀನಗೊಳ್ಳಲು ಕ್ರಾಂತಿ ಆರಂಭಿಸಿದವರ ಮೇಲೆ ಹಿಂಸಾಚಾರ, ದೌರ್ಜನ್ಯ ಎಸಗಿತ್ತು. ಇದೇ ಘಟನೆಗಳನ್ನು ಮೂಲವಾಗಿರಿಸಿಕೊಂಡು ‘ರಜಾಖರ್’ ಹೆಸರಿನ ಸಿನಿಮಾ ಮಾಡಲಾಗಿದೆ.

ಇದನ್ನೂ ಓದಿ:‘ದಿ ಕೇರಳ ಸ್ಟೋರಿ’ ಚಿತ್ರವನ್ನು ಒಟಿಟಿಯಲ್ಲಿ ನೋಡುವವರಿಗೆ ಇದೆ ಸರ್​​ಪ್ರೈಸ್​?

ಸಿನಿಮಾದ ಟ್ರೈಲರ್​ನಲ್ಲಿ ‘ರಜಾಖರ್’ ನಿಂದ ಆಗಿದೆ ಎನ್ನಲಾದ ಹಿಂಸಾಚಾರವನ್ನು ಹಸಿ-ಹಸಿಯಾಗಿ ತೋರಿಸಲಾಗಿದೆ. ಟ್ರೈಲರ್​ನಲ್ಲಿ ‘ರಜಾಖರ್​’ರ ಹಿಂಸಾಚಾರ ಬಹುತೇಕ ಬ್ರಾಹ್ಮಣರ ಮೇಲೆಯೇ ಆಗಿತ್ತು ಎಂದು ತೋರಿಸಲಾಗಿದೆ. ಹೈದರಾಬಾದ್​ ಅನ್ನು ತುರ್ಕಿಸ್ಥಾನ ಮಾಡುವ ಪ್ರಯತ್ನದಿಂದ ಹೀಗೆ ಹಿಂದುಗಳ ಮಾರಣಹೋಮ, ಅತ್ಯಾಚಾರ ಎಸಗಲಾಗಿತ್ತು ಎಂಬುದನ್ನು ಸಿನಿಮಾ ಸಾರುತ್ತಿರುವುದನ್ನು ಟ್ರೈಲರ್ ಸೂಚ್ಯವಾಗಿ ಹೇಳುತ್ತಿದೆ. ಸಿನಿಮಾದ ಟ್ರೈಲರ್ ಅನ್ನು ಕೆಲವು ದಿನಗಳ ಹಿಂದೆಯಷ್ಟೆ ನಟಿ ಕಂಗನಾ ರನೌತ್ ಬಿಡುಗಡೆ ಮಾಡಿದ್ದಾರೆ.

‘ರಜಾಖರ್’ ಸಿನಿಮಾವನ್ನು ತೆಲಂಗಾಣದ ಬಿಜೆಪಿ ಮುಖಂಡ ಗುಡೂರು ನಾರಾಯಣ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ಇವರು ಬಿಜೆಪಿ ಟಿಕೆಟ್​ನಿಂದ ಚುನಾವಣೆ ಸ್ಪರ್ಧೆ ಮಾಡಲಿದ್ದಾರೆ. ಆದರೆ ಈ ಸಿನಿಮಾದ ಬಗ್ಗೆ ತೆಲಂಗಾಣದ ಬಿಆರ್​ಎಸ್ ಪಕ್ಷ ಅಸಮಾಧಾನ ವ್ಯಕ್ತಪಡಿಸಿದ್ದು, ಸಿನಿಮಾದ ಬಿಡುಗಡೆ ವಿರುದ್ಧ ಹೋರಾಟ ಮಾಡುವುದಾಗಿ ಬಿಆರ್​ಎಸ್​ನ ಅಧ್ಯಕ್ಷ ಕೆಟಿ ರಾಮಾರಾವ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್