ಸೈಫ್​ ಪುತ್ರಿಯ ಗಾಂಜಾ ಪುರಾಣ ಬಯಲು ಮಾಡಿದ ರಿಯಾ ಚಕ್ರವರ್ತಿ; ಎನ್​ಸಿಬಿ ಮುಂದೆ ಶಾಕಿಂಗ್​ ಹೇಳಿಕೆ

2017ರ ಜೂನ್​ನಲ್ಲಿ ಸಾರಾ ಅಲಿ ಖಾನ್​ ಮತ್ತು ರಿಯಾ ಚಕ್ರವರ್ತಿ ನಡುವೆ ಮೊಬೈಲ್​ ಚಾಟ್​ ನಡೆದಿತ್ತು. ಅದರಲ್ಲಿ ರಿಯಾಗೆ ಗಾಂಜಾ ತೆಗೆದುಕೊಳ್ಳಲು ಸಾರಾ ಸಲಹೆ ನೀಡಿದ್ದರು ಎಂಬುದು ಬಯಲಾಗಿದೆ.

ಸೈಫ್​ ಪುತ್ರಿಯ ಗಾಂಜಾ ಪುರಾಣ ಬಯಲು ಮಾಡಿದ ರಿಯಾ ಚಕ್ರವರ್ತಿ; ಎನ್​ಸಿಬಿ ಮುಂದೆ ಶಾಕಿಂಗ್​ ಹೇಳಿಕೆ
ರಿಯಾ ಚಕ್ರವರ್ತಿ, ಸಾರಾ ಅಲಿ ಖಾನ್​
Edited By:

Updated on: Jun 07, 2021 | 3:34 PM

ಕಳೆದ ವರ್ಷ ನಿಧನರಾದ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದ ರಿಯಾ ಚಕ್ರವರ್ತಿ ಸದ್ಯ ಜಾಮೀನು ಪಡೆದು ಹೊರಗೆ ಬಂದು ಆರಾಮಾಗಿ ಇದ್ದಾರೆ. ಸುಶಾಂತ್​ ಸಾವಿನ ತನಿಖೆಯ ಜೊತೆಗೆ ಬಾಲಿವುಡ್​ನ ಡ್ರಗ್ಸ್​ ಮಾಫಿಯಾ​ ಕೂಡ ಬಯಲಾದ ಬಳಿಕ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಯಿತು. ಈ ಸಂಬಂಧ ಎನ್​ಸಿಬಿ ಅಧಿಕಾರಿಗಳಿಗೆ ತಮ್ಮ ಹೇಳಿಕೆ ನೀಡಿರುವ ನಟಿ ರಿಯಾ ಚಕ್ರವರ್ತಿ ಅವರು ಸಾರಾ ಅಲಿ ಖಾನ್​ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.

ಬಾಲಿವುಡ್​ನ ಹಲವರು ಮಾದಕ ವಸ್ತು ಸೇವನೆ ಮಾಡುತ್ತಾರೆ ಎಂಬ ಗುಮಾನಿ ಬಹಳ ದಿನಗಳ ಹಿಂದೆಯೇ ಶುರುವಾಗಿತ್ತು. ಆ ಕುರಿತು ಅನೇಕರನ್ನು ಎನ್​ಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಅದರಲ್ಲಿ ಸೈಫ್​ ಅಲಿ ಖಾನ್​ ಪುತ್ರಿ ಸಾರಾ ಅಲಿ ಖಾನ್​ ಹೆಸರು ಕೂಡ ಇತ್ತು. ಕಳೆದ ವರ್ಷ ವಿಚಾರಣೆ ಎದುರಿಸಿ ಸೈಲೆಂಟ್​ ಆಗಿದ್ದ ಅವರಿಗೆ ಈಗ ಮತ್ತೆ ಟೆನ್ಷನ್​ ಶುರು ಆಗಿದೆ. ಅದಕ್ಕೆ ಕಾರಣವೇ ರಿಯಾ ಚಕ್ರವರ್ತಿ ಹೇಳಿಕೆ.

2017ರ ಜೂನ್​ನಲ್ಲಿ ಸಾರಾ ಅಲಿ ಖಾನ್​ ಮತ್ತು ರಿಯಾ ಚಕ್ರವರ್ತಿ ನಡುವೆ ಚಾಟ್​ ನಡೆದಿತ್ತು. ಅದರಲ್ಲಿ ರಿಯಾಗೆ ಗಾಂಜಾ ತೆಗೆದುಕೊಳ್ಳಲು ಸಾರಾ ಸಲಹೆ ನೀಡಿದ್ದರು ಎಂಬುದು ಬಯಲಾಗಿದೆ. ‘ಸಾರಾ ಅಲಿ ಖಾನ್​ ಬಳಿ ಯಾವಾಗಲೂ ಗಾಂಜಾ ಸುರುಳಿ ಇರುತ್ತಿತ್ತು. ಅದನ್ನೇ ಅವರು ನನಗೂ ಕೊಡಲು ಮುಂದಾಗಿದ್ದರು’ ಎಂದು ಎನ್​ಸಿಬಿ ಅಧಿಕಾರಿಗಳ ಮುಂದೆ ರಿಯಾ ಚಕ್ರವರ್ತಿ ಹೇಳಿದ್ದಾರೆ. ಅವರ ಹೇಳಿಕೆಯ ಪ್ರತಿಯು ಮಾಧ್ಯಮವೊಂದಕ್ಕೆ ಲಭ್ಯವಾಗಿದ್ದು, ಆ ಮೂಲಕ ಈ ವಿಚಾರ ಬಯಲಾಗಿದೆ.

ಸುಶಾಂತ್​ ಸಿಂಗ್​ ರಜಪೂತ್​ ಜೊತೆ ರಿಯಾ ಚಕ್ರವರ್ತಿ ಲಿವ್​ ಇನ್​ ರಿಲೇಷನ್​ಶಿಪ್​ನಲ್ಲಿ ಇದ್ದರು. ಅನೇಕ ಬಾರಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಸುಶಾಂತ್​ ನಿಧನದ ಬಳಿಕ ಅವರ ತಂದೆ ಕೆಕೆ ಸಿಂಗ್​ ಅವರು ರಿಯಾ ವಿರದ್ಧವೇ ದೂರು ನೀಡಿದರು. ಆ ಪ್ರಕರಣವನ್ನು ಹುಡುಕಿ ಹೊರಟ ಪೊಲೀಸರಿಗೆ ಬಾಲಿವುಡ್​ನ ಡ್ರಗ್ಸ್​ ಮತ್ತು ಅಕ್ರಮ ಹಣ ಸಾಗಾಣಿಕೆ ವಿಷಯಗಳು ತಿಳಿದುಬಂದವು. ಸುಶಾಂತ್​ ಸಾವಿನ ತನಿಖೆಯ ಅಂತಿಮ ವರದಿ ಇನ್ನೂ ಸಲ್ಲಿಕೆ ಆಗಿಲ್ಲ.

ಇದನ್ನೂ ಓದಿ:

ಬಿಗ್​ ಬಾಸ್​ ಮನೆ ಒಳಗೆ ಹೋಗಲಿದ್ದಾರೆ ಸುಶಾಂತ್​ ಸಿಂಗ್​ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ?

ಸುಶಾಂತ್ ಸಿಂಗ್ ಸಾವಿನ ಬಳಿಕವೂ ಪ್ರೀತಿ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ; ಅಚ್ಚರಿಯ ಹೇಳಿಕೆ ನೀಡಿದ ರಿಯಾ ಚಕ್ರವರ್ತಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us