ಸೌಂದರ್ಯ ಕುಟುಂಬದಿಂದ ನಟಿಯೊಬ್ಬರಿಗೆ ಬಂದಿತ್ತು ವಿಚಿತ್ರ ಕೋರಿಕೆ  

ಸೌಂದರ್ಯಾ ಕಡಿಮೆ ಅವಧಿಯಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಅವರು ಚುನಾವಣಾ ಪ್ರಚಾರಕ್ಕೆಂದು ಬೆಂಗಳೂರಿನಿಂದ ತೆರಳುವವರು ಇದ್ದರು. ಈ ವೇಳೆ ಅವರಿದ್ದ ವಿಮಾನ ಅಪಘಾತಕ್ಕೆ ಒಳಗಾಯಿತು. ಈ ವೇಳೆ ಅವರು ಮೃಪಟ್ಟರು. ಅವರ ಗೆಳತಿ ಬಗ್ಗೆ ಅಪರೂಪದ ವಿಚಾರ ರಿವೀಲ್ ಆಗಿದೆ.

ಸೌಂದರ್ಯ ಕುಟುಂಬದಿಂದ ನಟಿಯೊಬ್ಬರಿಗೆ ಬಂದಿತ್ತು ವಿಚಿತ್ರ ಕೋರಿಕೆ  
ಸೌಂದರ್ಯ
Edited By:

Updated on: Jul 20, 2024 | 11:02 AM

ಸೌಂದರ್ಯ ಆ ಕಾಲದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾಗಿದ್ದರು. ಸೌಂದರ್ಯ ಒಂದು ಕಾಲದಲ್ಲಿ ಚಿತ್ರರಂಗವನ್ನು ಆಳಿದ್ದರು. ಅನೇಕ ಸ್ಟಾರ್ ಹೀರೋಗಳ ಚಿತ್ರಕ್ಕೆ ಅವರು ನಾಯಕಿ ಆಗಿದ್ದರು. ಸ್ಟಾರ್ ಹೀರೋಯಿನ್​ಗಳಿಗೆ ಪೈಪೋಟಿ ನೀಡಿ ಸಿನಿಮಾ ಮಾಡಿರುವ ಸೌಂದರ್ಯಾ ಹಲವರ ನೆಚ್ಚಿನ ನಾಯಕಿ ಎನಿಸಿಕೊಂಡಿದ್ದರು. ಸಂಭಾವನೆ ವಿಚಾರದಲ್ಲೂ ಅವರು ಕಡಿಮೆ ಇರಲಿಲ್ಲ. ನಾಯಕರಷ್ಟೇ ಸಂಭಾವನೆಯನ್ನು ಇವರಿಗೂ ನೀಡಲಾಗುತ್ತಿತ್ತು. ಸೌಂದರ್ಯಾ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಅನಿರೀಕ್ಷಿತವಾಗಿ ಸಾವನ್ನಪ್ಪಿದರು ಮತ್ತು ಇಹಲೋಕ ತ್ಯಜಿಸಿದರು. ಅವರ ಎದುರು ವಿಚಿತ್ರ ಕೋರಿಕೆ ಒಂದು ಬಂದಿತ್ತು.

ಸೌಂದರ್ಯಾ ಅವರು ಅಗಲಿ ಬಹಳ ವರ್ಷಗಳಾದರೂ ಪ್ರೇಕ್ಷಕರು ಅವರನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ. ಈ ಮಧ್ಯೆ ಸೌಂದರ್ಯಾಗೆ ಆ ಸಮಯದಲ್ಲಿ ಅನೇಕ ಸ್ನೇಹಿತರಿದ್ದರು. ಅವರಲ್ಲಿ ಅಮಾನಿ ಕೂಡ ಒಬ್ಬರು. ಆ ಸಮಯದಲ್ಲಿ ಅಮಾನಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು. ಅಮಾನಿ ಅನೇಕ ಸ್ಟಾರ್ ಹೀರೋಗಳ ಜೊತೆ ಬಣ್ಣ ಹಚ್ಚಿದ್ದಾರೆ. ಈಗಲೂ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಸೂರೆಗೊಳ್ಳುತ್ತಿದ್ದಾರೆ. ಅಮಾನಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಅಲ್ಲದೇ ಈ ಸಂದರ್ಶನದಲ್ಲಿ ಸೌಂದರ್ಯಾ ಬಗ್ಗೆ ಕುತೂಹಲಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

‘ನಾನು ಸೌಂದರ್ಯಾಗೆ ತುಂಬಾ ಆತ್ಮೀಯನಾಗಿದ್ದೆ. ಜೊತೆಗೆ ಅವರ ಕುಟುಂಬಕ್ಕೂ ತುಂಬಾ ಬೇಕಾದವನಾಗಿದ್ದೆ. ಒಮ್ಮೆ  ಸೌಂದರ್ಯ ಮನೆಗೆ ಹೋಗಿದ್ದೆ. ಅಲ್ಲಿ ಸೌಂದರ್ಯ ಅವರ ಅಕ್ಕ ಬಂದು ಅಮರ್​ನ (ಸೌಂದರ್ಯಾ ಸಹೋದರ) ಮದುವೆಯಾಗುತ್ತೀರಾ ಎಂದು ಕೇಳಿದರು. ಅದರಿಂದ ನನಗೆ ಆಘಾತವಾಯಿತು. ನನಗೆ ಅವರು ಏನಂದರು ಎಂದು ಅರ್ಥವಾಗಲಿಲ್ಲ. ಸೌಂದರ್ಯ ಮತ್ತು ನಾನು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು’ ಎಂದಿದ್ದಾರೆ ಅಮಾನಿ.

‘ನಾನು ಮನೆಯಿಂದ ಹೊರಟ ತಕ್ಷಣ ಸೌಂದರ್ಯಗೆ ಮೆಸೇಜ್ ಮಾಡಿದೆ. ಅಮರ್​ಗೆ ಕಾಲೇಜಿನಲ್ಲಿ ಲವ್ ಸ್ಟೋರಿ ಇತ್ತು. ಅದು ಅವರ ತಂದೆಗೆ ಗೊತ್ತಿರಲಿಲ್ಲ. ಸೌಂದರ್ಯಾ ತಂದೆ ತೀರಿಕೊಂಡ ನಂತರ ಅಮರ್ ತಾವು ಪ್ರೀತಿಸಿದ ಹುಡುಗಿಯನ್ನು ಮದುವೆಯಾದರು’ ಎಂದಿದ್ದಾರೆ ಅವರು.

ಇದನ್ನೂ ಓದಿ: ಅವರು ಕೊಟ್ಟ ಟಾರ್ಚರ್​ನಿಂದಲೇ ಸೌಂದರ್ಯ ಜಗದೀಶ್ ಆತ್ಮಹತ್ಯೆ: ಪತ್ನಿ ಆರೋಪ

ಸೌಂದರ್ಯಾ ಕಡಿಮೆ ಅವಧಿಯಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಅವರು ಚುನಾವಣಾ ಪ್ರಚಾರಕ್ಕೆಂದು ಬೆಂಗಳೂರಿನಿಂದ ತೆರಳುವವರು ಇದ್ದರು. ಈ ವೇಳೆ ಅವರಿದ್ದ ವಿಮಾನ ಅಪಘಾತಕ್ಕೆ ಒಳಗಾಯಿತು. ಈ ವೇಳೆ ಅವರು ಮೃಪಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us