AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಪಾರ್ಟಿಯಲ್ಲಿ ಭಾಗಿಯಾಗಿದ್ದರಂತೆ! ಹಾಗಾದ್ರೆ ಸುಳ್ಳು ಹೇಳ್ತಿದ್ದಾರಾ ಅನುಶ್ರೀ..

ಮಂಗಳೂರು: ಡ್ರಗ್ಸ್​ ಕೇಸ್​ ಸಂಬಂಧ ಅರೆಸ್ಟ್​ ಆಗಿರುವ ಆರೋಪಿ ತರುಣ್‌ ರಾಜ್ ವಿಚಾರಣೆ ವೇಳೆ ಅನುಶ್ರೀ ಬಗ್ಗೆ ಕೆಲ ಮಾಹಿತಿಗಳನ್ನು ಬಹಿರಂಗಪಡಿಸಿದ್ದ. ಪಾರ್ಟಿಯಲ್ಲಿ ಅನುಶ್ರೀ ಕೂಡ ಡ್ರಗ್ ತಗೋಳ್ತಾ ಇದ್ಲು ಎಂದಿದ್ದ. ಈ ಹೇಳಿಕೆ ಸಂಬಂಧ ನಟಿ ಕಮ್ ಖ್ಯಾತ ಆ್ಯಂಕರ್ ಅನುಶ್ರೀ ಪ್ರತಿಕ್ರಿಯೆಸಿದ್ದಾರೆ. ತರುಣ್ ಬಗ್ಗೆ ಟಿವಿ9ಗೆ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ. ತರುಣ್ ಕೇವಲ ನನ್ನ ಕೊರಿಯೋಗ್ರಾಫರ್ ಎಂದಿದ್ದಾರೆ. ಸ್ನೇಹವಿತ್ತಾ? ಜೊತೆಯಲ್ಲೇ ಪಾರ್ಟಿ ಮಾಡ್ತಿದ್ರಾ? ಅನ್ನೋ ಪ್ರಶ್ನೆಗೆ ಅನುಶ್ರೀ ಉತ್ತರಿಸಿಲ್ಲ. ಸಿಸಿಬಿ ನೋಟಿಸ್ ಹಿನ್ನೆಲೆಯಲ್ಲಿ ಸದ್ಯ […]

ಬೆಂಗಳೂರಿನ ಪಾರ್ಟಿಯಲ್ಲಿ ಭಾಗಿಯಾಗಿದ್ದರಂತೆ! ಹಾಗಾದ್ರೆ ಸುಳ್ಳು ಹೇಳ್ತಿದ್ದಾರಾ ಅನುಶ್ರೀ..
ಆಯೇಷಾ ಬಾನು
| Edited By: |

Updated on:Sep 25, 2020 | 9:35 AM

Share

ಮಂಗಳೂರು: ಡ್ರಗ್ಸ್​ ಕೇಸ್​ ಸಂಬಂಧ ಅರೆಸ್ಟ್​ ಆಗಿರುವ ಆರೋಪಿ ತರುಣ್‌ ರಾಜ್ ವಿಚಾರಣೆ ವೇಳೆ ಅನುಶ್ರೀ ಬಗ್ಗೆ ಕೆಲ ಮಾಹಿತಿಗಳನ್ನು ಬಹಿರಂಗಪಡಿಸಿದ್ದ. ಪಾರ್ಟಿಯಲ್ಲಿ ಅನುಶ್ರೀ ಕೂಡ ಡ್ರಗ್ ತಗೋಳ್ತಾ ಇದ್ಲು ಎಂದಿದ್ದ. ಈ ಹೇಳಿಕೆ ಸಂಬಂಧ ನಟಿ ಕಮ್ ಖ್ಯಾತ ಆ್ಯಂಕರ್ ಅನುಶ್ರೀ ಪ್ರತಿಕ್ರಿಯೆಸಿದ್ದಾರೆ. ತರುಣ್ ಬಗ್ಗೆ ಟಿವಿ9ಗೆ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ.

ತರುಣ್ ಕೇವಲ ನನ್ನ ಕೊರಿಯೋಗ್ರಾಫರ್ ಎಂದಿದ್ದಾರೆ. ಸ್ನೇಹವಿತ್ತಾ? ಜೊತೆಯಲ್ಲೇ ಪಾರ್ಟಿ ಮಾಡ್ತಿದ್ರಾ? ಅನ್ನೋ ಪ್ರಶ್ನೆಗೆ ಅನುಶ್ರೀ ಉತ್ತರಿಸಿಲ್ಲ. ಸಿಸಿಬಿ ನೋಟಿಸ್ ಹಿನ್ನೆಲೆಯಲ್ಲಿ ಸದ್ಯ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಇಂದೇ ವಿಚಾರಣೆಗೆ ಹಾಜರಾಗಲಿದ್ದಾರೆ.

ಸುಳ್ಳು ಹೇಳ್ತಾ ಇದ್ದಾರಾ ಅನುಶ್ರೀ?  ಕಿಶೋರ್ ಶೆಟ್ಟಿ ಮತ್ತು ತರುಣ್ ರಾಜ್ ಸಿಕ್ಕಿ ಮೂರು ವರ್ಷ ಆಯ್ತು ಎಂದು ಟಿವಿ9 ಜೊತೆ ಮಾತನಾಡುವಾಗ ಅನುಶ್ರೀ ಹೇಳಿದ್ದರು. ಆದರೆ ವಿಚಾರಣೆ ಮೇಳೆ ಆರೋಪಿ ತರುಣ್ ರಾಜ್ ಅನುಶ್ರೀ ಕೂಡ ನಮ್ಮ ಜೊತೆ ಪಾರ್ಟಿ ಮಾಡಿದ್ದರು ಎಂದು ಹೇಳಿದ್ದಾನೆ. ಆದ್ರೆ ಆ ಪಾರ್ಟಿ ನಡೆದಿದ್ದು ಲಾಕ್​ಡೌನ್​ಗೂ ಮೊದಲು. ಹೀಗಾಗಿ ಅನುಶ್ರೀ ಸುಳ್ಳು ಹೇಳ್ತಾ ಇದ್ದಾರಾ? ಬೆಂಗಳೂರಿನಲ್ಲಿ ಡ್ರಗ್ ಪಾರ್ಟಿಯಲ್ಲಿ ಅನುಶ್ರೀ ಭಾಗವಹಿಸಿದ್ರಾ ಎಂಬ ಅನುಮಾನ ಶುರುವಾಗಿದೆ.

ಮೂರು ಹಂತಗಳಲ್ಲಿ ಅನುಶ್ರೀಗೆ ಪ್ರಶ್ನೆ ಕೇಳಲಿರುವ ಸಿಸಿಬಿ: ತನಿಖಾಧಿಕಾರಿಗಳು ಅನುಶ್ರೀಗೆ ಹಲವು ಪ್ರಶ್ನಾವಳಿ ತಯಾರು ಮಾಡಿಕೊಂಡಿದ್ದಾರೆ. ಸಿಸಿಬಿ ಮತ್ತು ನಾರ್ಕೋಟಿಕ್ ಟೀಮ್ ಮೂರು ಹಂತಗಳಲ್ಲಿ ಪ್ರಶ್ನೆ ಕೇಳಲಿದ್ದಾರೆ. ಸಮಂಜಸ ಉತ್ತರ ನೀಡದಿದ್ರೆ ಮಾತ್ರ ಎರಡನೇ ಹಂತದ ಪ್ರಶ್ನಾವಳಿಗಳನ್ನು ಕೇಳಲಾಗುತ್ತೆ.

ಬೆಂಗಳೂರು ಸಿಸಿಬಿ ನಡೆಸುತ್ತಿರುವ ತನಿಖೆಗೆ ಅನುಶ್ರಿ ಲಿಂಕ್​ ಇಲ್ಲ: ಇನ್ನು ಅನುಶ್ರಿಯನ್ನ ಮಂಗಳೂರು ಸಿಸಿಬಿ ತನಿಖೆಗೆ ಕರೆದಿದ್ದಾರೆ. ಮಂಗಳೂರಿಗೆ ಡ್ರಗ್​ ಸಪ್ಲೈ ಲಿಂಕ್​ ಬೇರೆಯೇ ಇದ್ದು, ಬೆಂಗಳೂರಿನ ಡ್ರಗ್​ ಸಪ್ಲೈ ಲಿಂಕ್​ ಬೇರೆಯೇ ಇದೆ. ಹೀಗಾಗಿ ಬೆಂಗಳೂರು ಸಿಸಿಬಿ ವಿಚಾರಣೆ ವೇಳೆ ಅನುಶ್ರಿ ಹೆಸರು ಪ್ರಸ್ತಾಪವಿಲ್ಲ.

ಯಾರೂ ಕೂಡಾ ಸದ್ಯಕ್ಕೆ ಅನುಶ್ರಿ ಹೆಸರು ಪ್ರಸ್ತಾಪ ಮಾಡಿಲ್ಲ. ಮಂಗಳೂರು ಸಿಸಿಬಿಯಲ್ಲಿ ಕಿಶೋರ್​ ಶೆಟ್ಟಿ ಪ್ರಸ್ತಾಪ ಮಾಡಿದ್ದಾನೆ. ಹಾಗೊಂದು ವೇಳೆ ಅನುಶ್ರಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬೆಂಗಳೂರು ಸಿಸಿಬಿ ಕೂಡಾ ಅನುಶ್ರಿಯನ್ನ ತನಿಖೆಗೆ ಕರೆಯಬಹುದು.

ಮಂಗಳೂರಿನಲ್ಲಿ ಸಿಸಿಬಿ ತನಿಖೆಯ ವೇಳೆ ಅನುಶ್ರಿ ಹೇಳಿಕೆ ಮುಖ್ಯವಾಗುತ್ತೆ. ಆ ಹೇಳಿಕೆ ಹಾಗೂ ಮಂಗಳೂರು ಸಿಸಿಬಿ ತನಿಖೆಯ ಬಳಿಕ ವಿಚಾರಣೆಗೆ ಕರೆಯುವ ಬಗ್ಗೆ ಬೆಂಗಳೂರು ಸಿಸಿಬಿ ತೀರ್ಮಾನ ತೆಗೆದುಕೊಳ್ಳುತ್ತೆ.

Published On - 9:27 am, Fri, 25 September 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!