AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಹಾಡು: ‘ಕಾಂಚಾಣಾನೇ, ಕಾಂಚಾಣ’ ಎನ್ನುತ್ತಿದ್ದಾನೆ ‘ಕೋಟಿ’

ಡಾಲಿ ಧನಂಜಯ್ ನಟಿಸಿ, ಪರಮೇಶ್ವರ್ ಗುಂಡ್ಕಲ್ ನಿರ್ದೇಶನ ಮಾಡಿರುವ ‘ಕೋಟಿ’ ಸಿನಿಮಾದ ಎರಡನೇ ಹಾಡು ಬಿಡುಗಡೆ ಆಗಿದೆ. ಮಧ್ಯಮ ವರ್ಗದ ಪಾಡುಗಳನ್ನು ಕಟ್ಟಿಕೊಡುತ್ತಿದೆ ಈ ಹಾಡು.

ಹೊಸ ಹಾಡು: ‘ಕಾಂಚಾಣಾನೇ, ಕಾಂಚಾಣ’ ಎನ್ನುತ್ತಿದ್ದಾನೆ ‘ಕೋಟಿ’
Follow us
ಮಂಜುನಾಥ ಸಿ.
|

Updated on: May 22, 2024 | 7:38 PM

‘ಟಗರು’ ಸಿನಿಮಾದ ರೌಡಿ ‘ಡಾಲಿ’ಯಾಗಿ ಜನಮೆಚ್ಚುಗೆ ಪಡೆದಿದ್ದ ಧನಂಜಯ್ (Daali Dhananjay) ಆ ನಂತರ ರೌಡಿಗಳಿಂದ ದೂರಾಗಿ ಕುಟುಂಬಕ್ಕೆ ಹತ್ತಿರುವಾಗುವ, ಮಧ್ಯಮ ವರ್ಗದ ಯುವಕರನ್ನು ಪ್ರತಿನಿಧಿಸುವ ಪಾತ್ರಗಳತ್ತ ಮುಖ ಮಾಡಿದರು. ಉತ್ತಮ ಸಂದೇಶಗಳನ್ನು, ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುವ ಸಿನಿಮಾಗಳನ್ನು ಧನಂಜಯ್ ಇತ್ತೀಚೆಗೆ ಹೆಚ್ಚು ಆರಿಸಿಕೊಳ್ಳುತ್ತಿದ್ದು, ಇದೀಗ ‘ಕೋಟಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಧ್ಯಮ ವರ್ಗದ ಯುವಕನೊಬ್ಬ ಅಡ್ಡದಾರಿ ಹಿಡಿಯದೆ ಜೀವನದಲ್ಲಿ ಯಶಸ್ಸುಗಳಿಸಲು ಮಾಡುವ ಪ್ರಯತ್ನದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾದ ಹಾಡೊಂದು ಇದೀಗ ಬಿಡುಗಡೆ ಆಗಿದೆ.

ಮಧ್ಯಮ ವರ್ಗದ ಪ್ರತಿ ದಿನದ ಕನಸಾದ ‘ಕಾಂಚಾಣ’ದ ಬಗ್ಗೆ ಈ ಹಾಡಿದೆ. ಆದರೆ ಈ ಕಾಂಚಾಣದ ಕನಸಿಗೆ ಅಡ್ಡಿ ಆಗುವ ಹಲವು ವಿಷಯ, ವ್ಯಕ್ತಿಗಳ ಬಗ್ಗೆಯೂ ಹಾಡಿನಲ್ಲಿ ಪ್ರಸ್ತಾಪವಿದೆ. ಜೊತೆಗೆ ನಗರ ಜೀವನದ ಕಠಿಣತೆಯ ಪರಿಚಯವನ್ನೂ ಸಹ ಈ ಹಾಡು ಮಾಡಿಸುತ್ತಿದೆ. ಮಧ್ಯಮ ವರ್ಗದ ಬವಣೆ ಬಣ್ಣಿಸುವ ‘ಲೆಕ್ಕಾಚಾರ ಮಾಡಿ ಹೇಗೋ ತಿಂಗಳೆಲ್ಲ ಬದುಕೋದು, ನಿದ್ದೆಗೆಟ್ಟು ಕಂಡಾ ಕನಸ ಹಗಲು ಪೂರಾ ಹುಡುಕೋದು’ ಸಾಲು ಸೇರಿದಂತೆ, ಬಡ್ಡಿ ಹೆಸರಲ್ಲಿ ಬಡವರ ರಕ್ತ ಹೀರುವವರ ಕುರಿತು ಸಿಟ್ಟು ಸಹ ಈ ಹಾಡಿನಲ್ಲಿದೆ.

ಇದನ್ನೂ ಓದಿ:ಐತಿಹಾಸಿಕ ಸಿನಿಮಾನಲ್ಲಿ ನಟಿಸಲಿದ್ದಾರೆ ನಟ ಡಾಲಿ ಧನಂಜಯ್

ವಿಡಿಯೋ ಹಾಡು ಇದಾಗಿದ್ದು, ಸಿನಿಮಾದ ಕೆಲವು ತುಣುಕುಗಳನ್ನು ಸಹ ವಿಡಿಯೋನಲ್ಲಿ ಬಳಸಿಕೊಳ್ಳಲಾಗಿದೆ. ಮಧ್ಯಮ ವರ್ಗದ ಸಾಮಾನ್ಯ ಯುವಕನಾಗಿ ಡಾಲಿ ಆಪ್ತವಾಗುತ್ತಾರೆ. ಪುಟ್ಟ ಮನೆ, ಕುಟುಂಬವನ್ನು ಸಾಕುವ ಜವಾಬ್ದಾರಿ, ಅಣ್ಣನ ಕನಸಿಗೆ ಜೊತೆಯಾಗುವ ಸಹೋದರಿ, ಮಗ ಸಾಧಿಸುತ್ತಾನೆಂಬ ಆಸೆಯಲ್ಲಿರುವ ತಾಯಿ ಹೀಗೆ ಒಂದು ಚೊಕ್ಕಟವಾದ ಮಧ್ಯಮ ವರ್ಗದ ಕುಟುಂಬ ಈ ಸಿನಿಮಾದಲ್ಲಿದ್ದು, ಈಗ ಬಿಡುಗಡೆ ಆಗಿರುವ ಹಾಡಿನಲ್ಲಿ ಎಲ್ಲದರ ಝಲಕ್ ತೋರಿಸಲಾಗಿದೆ.

ಪ್ರಸ್ತುತ ಬಿಡುಗಡೆ ಆಗಿರುವ ಹಾಡನ್ನು ಸಂಚಿತ್ ಹೆಗ್ಡೆ ಹಾಡಿದ್ದಾರೆ. ಹಾಡಿಗೆ ಸಂಗೀತ ಸಂಯೋಜಿಸಿರುವುದು ವಾಸುಕಿ ವೈಭವ್, ಸಾಹಿತ್ಯವೂ ವಾಸುಕಿ ಅವರದ್ದೇ. ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆಗೆ ಮೋಕ್ಷಾ ಕುಶಾಲ್, ರಮೇಶ್ ಇಂದಿರಾ, ತಾರಾ, ರಂಗಾಯಣ ರಘು, ತನುಜಾ ವೆಂಕಟೇಶ್ ಇನ್ನೂ ಹಲವರಿದ್ದಾರೆ. ‘ಕೋಟಿ’ ಸಿನಿಮಾವನ್ನು ಪರಮೇಶ್ವರ್ ಗುಂಡ್ಕಲ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ಕನ್ನಡ ವಾಹಿನಿಯೊಂದರ ಕ್ರಿಯೇಟಿವ್ ಹೆಡ್ ಆಗಿದ್ದವರು. ಬಿಗ್​ಬಾಸ್ ರಿಯಾಲಿಟಿ ಶೋ ಅನ್ನು ಯಶಸ್ವಿಯಾಗಿಸಿದವರಲ್ಲಿ ಇವರ ಪರಿಶ್ರಮವೂ ಹೆಚ್ಚಿದೆ. ಇದೀಗ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಮನಗರ ಜಿಲ್ಲೆಯ ಹಲವೆಡೆ ಭಾರಿ ಮಳೆ: ಮಾಗಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ರಾಮನಗರ ಜಿಲ್ಲೆಯ ಹಲವೆಡೆ ಭಾರಿ ಮಳೆ: ಮಾಗಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ