AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಬರ್ಟ್​’ನಲ್ಲಿ ದರ್ಶನ್​ ಖಡಕ್​ ಆಗಿ ಹೇಳಿದ ‘ಏ ತುಕಾಲಿ…’ ಡೈಲಾಗ್​ನ ಹಿಂದಿದೆ ಇಂಟರೆಸ್ಟಿಂಗ್​ ವಿಷ್ಯ!

ದರ್ಶನ್​ ನಟನೆಯ ‘ರಾಬರ್ಟ್​’ ಸಿನಿಮಾ ರಿಲೀಸ್​ಗೂ ಮುನ್ನ ಹಲವು ವಿಚಾರಗಳಲ್ಲಿ ಹೈಪ್​ ಸೃಷ್ಟಿಸಿದೆ. ಡೈಲಾಗ್​ಗಳು ಕೂಡ ಚಿತ್ರದ ಮೇಲಿನ ನಿರೀಕ್ಷೆಯಲ್ಲಿ ಹೆಚ್ಚಿಸಿವೆ.

‘ರಾಬರ್ಟ್​’ನಲ್ಲಿ ದರ್ಶನ್​ ಖಡಕ್​ ಆಗಿ ಹೇಳಿದ ‘ಏ ತುಕಾಲಿ...’ ಡೈಲಾಗ್​ನ ಹಿಂದಿದೆ ಇಂಟರೆಸ್ಟಿಂಗ್​ ವಿಷ್ಯ!
ರಾಬರ್ಟ್​ ಸಿನಿಮಾದಲ್ಲಿ ದರ್ಶನ್​
Follow us
ಮದನ್​ ಕುಮಾರ್​
| Updated By: ಆಯೇಷಾ ಬಾನು

Updated on: Mar 09, 2021 | 8:23 AM

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರ ‘ರಾಬರ್ಟ್​’ ಚಿತ್ರದ ಟ್ರೇಲರ್​ ಬಿಡುಗಡೆಯಾದಾಗ ಸಂಭಾಷಣೆಗಳು ಹೆಚ್ಚು ಗಮನ ಸೆಳೆದವು. ರಾಜಶೇಖರ್​ ಮತ್ತು ಚಂದ್ರಮೌಳಿ ಜೊತೆಯಾಗಿ ಈ ಚಿತ್ರಕ್ಕೆ ಡೈಲಾಗ್​ ಬರೆದಿದ್ದಾರೆ. ‘ಏ ತುಕಾಲಿ… ನೀನು ಮಾಸ್​ ಆದ್ರೆ ನಾನು ಆ ಮಾಸ್​ಗೆ ಬಾಸ್​…’ ಎಂಬ ಡೈಲಾಗ್​ ಕೇಳಿ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ. ಅದರ ಹಿಂದೆ ಒಂದು ಇಂಟರೆಸ್ಟಿಂಗ್​ ವಿಷಯ ಇದೆ.

ಆರಂಭದಲ್ಲಿ ‘ತುಕಾಲಿ’ ಎಂಬ ಪದವೇ ಆ ಡೈಲಾಗ್​ನಲ್ಲಿ ಇರಲಿಲ್ಲ. ಅದನ್ನು ಶೂಟಿಂಗ್​ ಸ್ಪಾಟ್​ನಲ್ಲಿ ಸೇರಿಸಲಾಯಿತು ಎಂಬ ವಿಚಾರವನ್ನು ಸಂಭಾಷಣೆಕಾರ ರಾಜಶೇಖರ್​ ಹೇಳಿದ್ದಾರೆ. ‘ಏ ತುಕಾಲಿ ಎಂಬುದು ಈಗ ದೊಡ್ಡ ಹಿಟ್​ ಆಗಿದೆ. ಅದು ಸ್ಪಾಟ್​ನಲ್ಲಿ ಹುಟ್ಟಿಕೊಂಡ ಡೈಲಾಗ್​. ಆ ದೃಶ್ಯದ ಶೂಟಿಂಗ್​ ನಡೆಯುತ್ತಿರುವಾಗ ನಿರ್ದೇಶಕ ತರುಣ್​ ಸುಧೀರ್​ ನನಗೆ ಫೋನ್​ ಮಾಡಿ ಅರ್ಧ ಗಂಟೆಯಲ್ಲಿ ಚಿತ್ರೀಕರಣದ ಸ್ಥಳಕ್ಕೆ ಬರುವಂತೆ ಸೂಚಿಸಿದರು. ಈ ಜಾಗದಲ್ಲಿ ಖಡಕ್​ ಫೀಲ್​ ಇರುವ ಡೈಲಾಗ್​ ಬೇಕು ಎಂದರು’ ಎಂದು ಆ ದಿನದ ಘಟನೆಯನ್ನು ವಿವರಿಸುತ್ತಾರೆ ರಾಜಶೇಖರ್​.

ರಾಜಶೇಖರ್​ ಅವರು ಚಿತ್ರೀಕರಣದ ಸ್ಥಳದಲ್ಲೇ ‘ಏ ತಗಡು… ನೀನು ಮಾಸ್​ ಆದ್ರೆ ನಾನು ಆ ಮಾಸ್​ಗೆ ಬಾಸ್​’ ಎಂದು ಬರೆದರು. ಅದನ್ನು ನಿರ್ದೇಶಕ ತರುಣ್ ಸುಧೀರ್​ ಸ್ವಲ್ಪ ಬದಲಾಯಿಸಿದರು. ‘ತಗಡು’ ಎಂಬುದಕ್ಕಿಂತಲೂ ‘ತುಕಾಲಿ’ ಪದದ ಸೌಂಡಿಂಗ್​ ಚೆನ್ನಾಗಿದೆ ಅಂತ ಚೇಂಜ್​ ಮಾಡಿದರು ಎಂಬ ಮಾಹಿತಿಯನ್ನು ರಾಜಶೇಖರ್​ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಇರುವ ಇನ್ನಷ್ಟು ಪಂಚಿಂಗ್​ ಡೈಲಾಗ್​ಗಳನ್ನು ಕೇಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

‘ಮಜಾ ಟಾಕೀಸ್​’ನಲ್ಲಿ ಡೈಲಾಗ್​ ಬರೆದು ಅನುಭವ ಹೊಂದಿದ್ದ ರಾಜಶೇಖರ್​ ಅವರಿಗೆ ರಾಬರ್ಟ್​ ಸಿನಿಮಾಗೆ ಸಂಭಾಷಣೆ ಬರೆಯುವ ಅವಕಾಶ ಸಿಕ್ಕಿತು. ‘ಇದು ನನ್ನ ವೃತ್ತಿಜೀವನದಲ್ಲಿ ಸಿಕ್ಕಿರುವ ಸುವರ್ಣಾವಕಾಶ. ಎಲ್ಲರಿಗೂ ಈ ಚಾನ್ಸ್​ ಸಿಗುವುದಿಲ್ಲ. ಅದಕ್ಕೆ ನಾನು ತರುಣ್​ ಸುಧೀರ್​ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಅವರಿಗೆ ಧನ್ಯವಾದ ಹೇಳಲೇಬೇಕು. ದರ್ಶನ್​ ಅವರಿಗೆ ಡೈಲಾಗ್​ ಬರೆಯುವುದು ತುಂಬ ಚಾಲೆಂಜಿಂಗ್​ ವಿಷಯ. ತುಂಬ ಕೇರ್​ಫುಲ್​ ಆಗಿ ಬರೆಯಬೇಕು’ ಎಂದಿದ್ದಾರೆ ರಾಜಶೇಖರ್​

ಇದನ್ನೂ ಓದಿ: Roberrt Movie: ದರ್ಶನ್​ ಕಟೌಟ್​ಗೆ ಹಾಲಿನ ಅಭಿಷೇಕ; ಶುರುವಾಯ್ತು ರಾಬರ್ಟ್​ ಸಿನಿಮಾ ಜ್ವರ

Roberrt vs Kotigobba 3: ಸಿನಿಮಾಗಳ ರಿಲೀಸ್​ಗೂ ಮುನ್ನ ಇನ್ನೊಂದು ರೀತಿಯಲ್ಲಿ ದರ್ಶನ್​-ಸುದೀಪ್​ ಪೈಪೋಟಿ!

‘ಸಂಜು ವೆಡ್ಸ್ ಗೀತಾ 2’ ನೋಡಿದ ಕಾರುಣ್ಯ ರಮ್ಯಾ ಹೇಳಿದ್ದು ಹೀಗೆ..
‘ಸಂಜು ವೆಡ್ಸ್ ಗೀತಾ 2’ ನೋಡಿದ ಕಾರುಣ್ಯ ರಮ್ಯಾ ಹೇಳಿದ್ದು ಹೀಗೆ..
ಮಂಗಳೂರು: NH 169ರಲ್ಲಿ ಗುಡ್ಡ ಕುಸಿತ, ಒಂದು ಬದಿ ರಸ್ತೆ ಸಂಚಾರ ಬಂದ್​
ಮಂಗಳೂರು: NH 169ರಲ್ಲಿ ಗುಡ್ಡ ಕುಸಿತ, ಒಂದು ಬದಿ ರಸ್ತೆ ಸಂಚಾರ ಬಂದ್​
ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ; 3,820 ನಿವಾಸಿಗಳ ಸ್ಥಳಾಂತರ
ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ; 3,820 ನಿವಾಸಿಗಳ ಸ್ಥಳಾಂತರ
ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು
ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು
ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್‌ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ
ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್‌ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ
ಖಾದಿಗಳಿಗಿಂತ ಖಾಕಿಗಳು ಬ್ಯಾಟ್ ಚೆನ್ನಾಗಿ ಬೀಸಬಲ್ಲರು!
ಖಾದಿಗಳಿಗಿಂತ ಖಾಕಿಗಳು ಬ್ಯಾಟ್ ಚೆನ್ನಾಗಿ ಬೀಸಬಲ್ಲರು!
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ