AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dr. Rajkumar Birth Anniversary: ರಾಜ್​ಕುಮಾರ್​ ಜತೆ ಫೋಟೋ ತೆಗೆಸಿಕೊಳ್ಳಲು ಲವರ್​​ ಕಾಯಿಸಿದ್ದೆ

ಅದು 1999ನೇ ಇಸವಿ. ಆಗ ಅಣ್ಣಾವ್ರು ಅವರ ಕೊನೆಯ ಸಿನಿಮಾ ಶಬ್ದವೇದಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ವಿಧಾನ ಸೌಧ ಹತ್ತಿರ ಕೆ.ಆರ್​. ವೃತ್ತದಲ್ಲಿ ಶಬ್ದವೇದಿ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿತ್ತು

Dr. Rajkumar Birth Anniversary: ರಾಜ್​ಕುಮಾರ್​ ಜತೆ ಫೋಟೋ ತೆಗೆಸಿಕೊಳ್ಳಲು ಲವರ್​​ ಕಾಯಿಸಿದ್ದೆ
ರಾಜೇಶ್ ದುಗ್ಗುಮನೆ
| Edited By: |

Updated on: Apr 24, 2021 | 7:32 AM

Share

ಡಾ. ರಾಜ್​ಕುಮಾರ್​ ಅವರನ್ನು ಕಣ್ತುಂಬಿಕೊಳ್ಳುವ ಭಾಗ್ಯ ಅನೇಕರಿಗೆ ಒದಗಿ ಬಂದಿದ್ದುಂಟು. ಆದರೆ, ಕ್ಯಾಮೆರಾಗಳು ಅಷ್ಟಾಗಿ ಬಳಕೆ ಇಲ್ಲದ ಆ ಕಾಲದಲ್ಲೂ ಫೋಟೋ ತೆಗೆಸಿಕೊಳ್ಳುವ ಅದೃಷ್ಟ ಎಲ್ಲರಿಗೂ ಸಿಕ್ಕಿಲ್ಲ. ಈ ರೀತಿ ಫೋಟೋ ತೆಗೆಸಿಕೊಂಡ ಅದೃಷ್ಟವಂತರಲ್ಲಿ ಬೆಂಗಳೂರಿನ ಬನಶಂಕರಿಯ ಚಂದ್ರ ಶೇಖರ್. ಆರ್ ಕೂಡ ಒಬ್ಬರು. ಅವರು ರಾಜ್​ಕುಮಾರ್​ ಅವರನ್ನ ಭೇಟಿ ಆದ ಅಪರೂಪದ ಘಟನೆಯನ್ನು ಟಿವಿ9 ಕನ್ನಡ ಡಿಜಿಟಲ್​ ಜತೆ ಹಂಚಿಕೊಂಡಿದ್ದಾರೆ. 

ಅದು 1999ನೇ ಇಸವಿ. ಆಗ ಅಣ್ಣಾವ್ರು ಅವರ ಕೊನೆಯ ಸಿನಿಮಾ ಶಬ್ದವೇದಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ವಿಧಾನ ಸೌಧ ಹತ್ತಿರ ಕೆ.ಆರ್​. ವೃತ್ತದಲ್ಲಿ ಶಬ್ದವೇದಿ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿತ್ತು. ಅಶ್ವಥ್ ಅವರನ್ನು ಅಣ್ಣಾವ್ರು ಚೇಸ್ ಮಾಡಿ ಹಿಡಿಯುವ ದೃಶ್ಯದ ಚಿತ್ರೀಕರಣವಾಗುತ್ತಿತ್ತು.

ನನಗೆ ಆಗಿನ್ನೂ ಮದುವೆ ಆಗಿರಲಿಲ್ಲ. ಶಾಂತಿ ಎಂಬುವವರನ್ನು ಪ್ರೀತಿಸುತ್ತಿದೆ. ನಂತರ ಅವರನ್ನೇ ಮದುವೆ ಆದೆ. ಪ್ರೀತಿ ಮಾಡುತ್ತಿದ್ದ ದಿನಗಳಲ್ಲಿ  ನಾವಿಬ್ಬರೂ ಸೈಕಲ್​​ನಲ್ಲಿ ವಿಧಾನ ಸೌಧ ನೋಡಲು ಹೋಗುತ್ತಿದ್ದೆವು. ಶೂಟಿಂಗ್​ ನಡೆಯುತ್ತಿದ್ದ ದಿನವದು. ನಾನು ವಿಧಾನಸೌಧ ಬಳಿ ಹೋದಾಗ ಒಂದು ಗುಂಪು ಕಾಣಿಸಿತು. ನಾನು ಶಾಂತಿಯನ್ನು ಅಲ್ಲೇ ನಿಲ್ಲಿಸಿ ಆ ಗುಂಪು ಏನೆಂದು ನೋಡಲು ಹೋದೆ. ನನ್ನ ಏಳೇಳು ಜನ್ಮದ ಪುಣ್ಯವೋ ಏನೋ. ಆ ಗುಂಪಿನ ಒಳಗೆ ನುಗ್ಗಿ ನೋಡಿದಾಗ ರಾಜ್​​ಕುಮಾರ್​ ಅವರು ಕಂಡರು.

ಅಣ್ಣಾವ್ರು ಜತೆ ಒಂದು ಫೋಟೋ ತೆಗಿಸಿಕೊಳ್ಳಲೇ ಬೇಕೆಂದು ಹಠಕ್ಕೆ ಬಿದ್ದೆ. ಅಲ್ಲೇ ಕಾಯುತ್ತಾ ನಿಂತೆ. ಸಂಜೆ ಸುಮಾರು 4 ಗಂಟೆ ಆಗುತ್ತಾ ಬಂತು. ಊಟವೂ ಇಲ್ಲ. ಶಾಂತಿಯನ್ನು ನೋಡಲು ಹೋಗಲಿಲ್ಲ. ಕೊನೆಗೂ ಅಣ್ಣಾವ್ರು ಎಲ್ಲರ ಜೊತೆ ಫೋಟೋ ತೆಗಿಸಿಕೊಳ್ಳಲು ಮುಂದಾದರು. ಅಣ್ಣಾವ್ರ ಜೊತೆ ಜತೆ ಫೋಟೋ ತೆಗಿಸಿ ನನ್ನ ಜನ್ಮ ಪಾವನ ಆಯಿತು.

ಫೋಟೋ ತೆಗೆಸಿಕೊಳ್ಳುವಾಗ ಅಣ್ಣಾವ್ರು ನನ್ನ ಊರು ಯಾವುದು ಎಂದು ಕೇಳಿದರು. ಅದಕ್ಕೆ ನಾನು ಮೈಸೂರು ಎಂದೆ. ಆಗ ಅಣ್ಣಾವ್ರು, ನಮ್ಮ ಊರಿನ ಕಡೆಯವರು ಎಂದು ನಕ್ಕರು. ಬೆಳಗ್ಗೆ 11 ಗಂಟೆ ಇಂದ ಸಂಜೆ 4 ಗಂಟೆವರೆಗೆ ನನನ್ನೇ ಕಾಯುತ್ತಿದ್ದ ನನ್ನ ಪ್ರಿಯತಮೆ ಹತ್ತಿರ ಹೋದೆ. ಅವಳನ್ನು ನೋಡಿ ನನಗೆ ಪಾಪ ಎನ್ನಿಸಿತು. ಅವಳು ಕೊಂಚ ಭಯಗೊಂಡಿದ್ದಳು. ನಂತರ ಫೋಟೋ ತೆಗೆಸಿಕೊಂಡ ವಿಚಾರ ಹೇಳಿದಾಗ ಅವಳು ಖುಷಿಪಟ್ಟಳು.

ಇದನ್ನೂ ಓದಿ: ರಾಜ್​ಕುಮಾರ್​ ಕಿಡ್ನ್ಯಾಪ್​​ ಆದಾಗ ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿಯ ಎಕ್ಸ್​ಕ್ಲ್ಯೂಸಿವ್ ಸಂದರ್ಶನ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ