AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dr. Rajkumar Birth Anniversary: ರಾಜ್​ಕುಮಾರ್​ ಜತೆ ಫೋಟೋ ತೆಗೆಸಿಕೊಳ್ಳಲು ಲವರ್​​ ಕಾಯಿಸಿದ್ದೆ

ಅದು 1999ನೇ ಇಸವಿ. ಆಗ ಅಣ್ಣಾವ್ರು ಅವರ ಕೊನೆಯ ಸಿನಿಮಾ ಶಬ್ದವೇದಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ವಿಧಾನ ಸೌಧ ಹತ್ತಿರ ಕೆ.ಆರ್​. ವೃತ್ತದಲ್ಲಿ ಶಬ್ದವೇದಿ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿತ್ತು

Dr. Rajkumar Birth Anniversary: ರಾಜ್​ಕುಮಾರ್​ ಜತೆ ಫೋಟೋ ತೆಗೆಸಿಕೊಳ್ಳಲು ಲವರ್​​ ಕಾಯಿಸಿದ್ದೆ
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​|

Updated on: Apr 24, 2021 | 7:32 AM

Share

ಡಾ. ರಾಜ್​ಕುಮಾರ್​ ಅವರನ್ನು ಕಣ್ತುಂಬಿಕೊಳ್ಳುವ ಭಾಗ್ಯ ಅನೇಕರಿಗೆ ಒದಗಿ ಬಂದಿದ್ದುಂಟು. ಆದರೆ, ಕ್ಯಾಮೆರಾಗಳು ಅಷ್ಟಾಗಿ ಬಳಕೆ ಇಲ್ಲದ ಆ ಕಾಲದಲ್ಲೂ ಫೋಟೋ ತೆಗೆಸಿಕೊಳ್ಳುವ ಅದೃಷ್ಟ ಎಲ್ಲರಿಗೂ ಸಿಕ್ಕಿಲ್ಲ. ಈ ರೀತಿ ಫೋಟೋ ತೆಗೆಸಿಕೊಂಡ ಅದೃಷ್ಟವಂತರಲ್ಲಿ ಬೆಂಗಳೂರಿನ ಬನಶಂಕರಿಯ ಚಂದ್ರ ಶೇಖರ್. ಆರ್ ಕೂಡ ಒಬ್ಬರು. ಅವರು ರಾಜ್​ಕುಮಾರ್​ ಅವರನ್ನ ಭೇಟಿ ಆದ ಅಪರೂಪದ ಘಟನೆಯನ್ನು ಟಿವಿ9 ಕನ್ನಡ ಡಿಜಿಟಲ್​ ಜತೆ ಹಂಚಿಕೊಂಡಿದ್ದಾರೆ. 

ಅದು 1999ನೇ ಇಸವಿ. ಆಗ ಅಣ್ಣಾವ್ರು ಅವರ ಕೊನೆಯ ಸಿನಿಮಾ ಶಬ್ದವೇದಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ವಿಧಾನ ಸೌಧ ಹತ್ತಿರ ಕೆ.ಆರ್​. ವೃತ್ತದಲ್ಲಿ ಶಬ್ದವೇದಿ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿತ್ತು. ಅಶ್ವಥ್ ಅವರನ್ನು ಅಣ್ಣಾವ್ರು ಚೇಸ್ ಮಾಡಿ ಹಿಡಿಯುವ ದೃಶ್ಯದ ಚಿತ್ರೀಕರಣವಾಗುತ್ತಿತ್ತು.

ನನಗೆ ಆಗಿನ್ನೂ ಮದುವೆ ಆಗಿರಲಿಲ್ಲ. ಶಾಂತಿ ಎಂಬುವವರನ್ನು ಪ್ರೀತಿಸುತ್ತಿದೆ. ನಂತರ ಅವರನ್ನೇ ಮದುವೆ ಆದೆ. ಪ್ರೀತಿ ಮಾಡುತ್ತಿದ್ದ ದಿನಗಳಲ್ಲಿ  ನಾವಿಬ್ಬರೂ ಸೈಕಲ್​​ನಲ್ಲಿ ವಿಧಾನ ಸೌಧ ನೋಡಲು ಹೋಗುತ್ತಿದ್ದೆವು. ಶೂಟಿಂಗ್​ ನಡೆಯುತ್ತಿದ್ದ ದಿನವದು. ನಾನು ವಿಧಾನಸೌಧ ಬಳಿ ಹೋದಾಗ ಒಂದು ಗುಂಪು ಕಾಣಿಸಿತು. ನಾನು ಶಾಂತಿಯನ್ನು ಅಲ್ಲೇ ನಿಲ್ಲಿಸಿ ಆ ಗುಂಪು ಏನೆಂದು ನೋಡಲು ಹೋದೆ. ನನ್ನ ಏಳೇಳು ಜನ್ಮದ ಪುಣ್ಯವೋ ಏನೋ. ಆ ಗುಂಪಿನ ಒಳಗೆ ನುಗ್ಗಿ ನೋಡಿದಾಗ ರಾಜ್​​ಕುಮಾರ್​ ಅವರು ಕಂಡರು.

ಅಣ್ಣಾವ್ರು ಜತೆ ಒಂದು ಫೋಟೋ ತೆಗಿಸಿಕೊಳ್ಳಲೇ ಬೇಕೆಂದು ಹಠಕ್ಕೆ ಬಿದ್ದೆ. ಅಲ್ಲೇ ಕಾಯುತ್ತಾ ನಿಂತೆ. ಸಂಜೆ ಸುಮಾರು 4 ಗಂಟೆ ಆಗುತ್ತಾ ಬಂತು. ಊಟವೂ ಇಲ್ಲ. ಶಾಂತಿಯನ್ನು ನೋಡಲು ಹೋಗಲಿಲ್ಲ. ಕೊನೆಗೂ ಅಣ್ಣಾವ್ರು ಎಲ್ಲರ ಜೊತೆ ಫೋಟೋ ತೆಗಿಸಿಕೊಳ್ಳಲು ಮುಂದಾದರು. ಅಣ್ಣಾವ್ರ ಜೊತೆ ಜತೆ ಫೋಟೋ ತೆಗಿಸಿ ನನ್ನ ಜನ್ಮ ಪಾವನ ಆಯಿತು.

ಫೋಟೋ ತೆಗೆಸಿಕೊಳ್ಳುವಾಗ ಅಣ್ಣಾವ್ರು ನನ್ನ ಊರು ಯಾವುದು ಎಂದು ಕೇಳಿದರು. ಅದಕ್ಕೆ ನಾನು ಮೈಸೂರು ಎಂದೆ. ಆಗ ಅಣ್ಣಾವ್ರು, ನಮ್ಮ ಊರಿನ ಕಡೆಯವರು ಎಂದು ನಕ್ಕರು. ಬೆಳಗ್ಗೆ 11 ಗಂಟೆ ಇಂದ ಸಂಜೆ 4 ಗಂಟೆವರೆಗೆ ನನನ್ನೇ ಕಾಯುತ್ತಿದ್ದ ನನ್ನ ಪ್ರಿಯತಮೆ ಹತ್ತಿರ ಹೋದೆ. ಅವಳನ್ನು ನೋಡಿ ನನಗೆ ಪಾಪ ಎನ್ನಿಸಿತು. ಅವಳು ಕೊಂಚ ಭಯಗೊಂಡಿದ್ದಳು. ನಂತರ ಫೋಟೋ ತೆಗೆಸಿಕೊಂಡ ವಿಚಾರ ಹೇಳಿದಾಗ ಅವಳು ಖುಷಿಪಟ್ಟಳು.

ಇದನ್ನೂ ಓದಿ: ರಾಜ್​ಕುಮಾರ್​ ಕಿಡ್ನ್ಯಾಪ್​​ ಆದಾಗ ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿಯ ಎಕ್ಸ್​ಕ್ಲ್ಯೂಸಿವ್ ಸಂದರ್ಶನ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ