AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿರಲಿದೆ ಮಲೆನಾಡಿನ ‘ಕೆರೆಬೇಟೆ’? ಮೋಷನ್​ ಪೋಸ್ಟರ್​ ಮೂಲಕ ಸುಳಿವು ನೀಡಿದ ಚಿತ್ರತಂಡ

ನಿರ್ದೇಶಕ ರಾಜ್‌ಗುರು, ನಟ-ನಿರ್ಮಾಪಕ ಗೌರಿ ಶಂಕರ್​ ಮೂಲತಃ ಮಲೆನಾಡಿನವರು. ಬಾಲ್ಯದಿಂದಲೂ ಅವರು ಕೆರೆಬೇಟೆ ನೋಡುತ್ತಾ ಬೆಳೆದಿದ್ದಾರೆ. ಅದನ್ನೇ ಕೇಂದ್ರವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಮೋಷನ್​ ಪೋಸ್ಟರ್​ನಲ್ಲಿ ಸಾಕಷ್ಟು ಅಂಶಗಳನ್ನು ತೋರಿಸಲಾಗಿದೆ. ಈ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸ ನಡೆಯುತ್ತಿದೆ.

ಹೇಗಿರಲಿದೆ ಮಲೆನಾಡಿನ ‘ಕೆರೆಬೇಟೆ’? ಮೋಷನ್​ ಪೋಸ್ಟರ್​ ಮೂಲಕ ಸುಳಿವು ನೀಡಿದ ಚಿತ್ರತಂಡ
ಗೌರಿ ಶಂಕರ್​
ಮದನ್​ ಕುಮಾರ್​
|

Updated on:Oct 27, 2023 | 4:22 PM

Share

ಶೀರ್ಷಿಕೆ ಭಿನ್ನವಾಗಿದ್ದರೆ ಸುಲಭವಾಗಿ ಪ್ರೇಕ್ಷಕರ ಗಮನ ಸೆಳೆಯಬಹುದು. ‘ಕೆರೆಬೇಟೆ’ ಸಿನಿಮಾ (Kerebete Cinema) ಆ ಕೆಲಸ ಮಾಡುತ್ತಿದೆ. ಟೈಟಲ್​ನಿಂದ ಈ ಸಿನಿಮಾ ಕುತೂಹಲ ಮೂಡಿಸಿದೆ. ಕೆಲವೇ ದಿನಗಳ ಹಿಂದೆ ಈ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಈಗ ಮೋಷನ್ ಪೋಸ್ಟರ್ (Kerebete Motion Poster) ರಿಲೀಸ್​ ಮಾಡುವ ಮೂಲಕ ಪ್ರೇಕ್ಷಕರ ಕೌತುಕವನ್ನು ಹೆಚ್ಚಿಸಲಾಗಿದೆ. ಇದು ಮಲೆನಾಡು ಭಾಗದ ಮೀನು ಬೇಟೆ ಪದ್ಧತಿಯ ಕುರಿತು ನಿರ್ಮಾಣ ಆಗಿರುವ ಸಿನಿಮಾ. ನಿರ್ದೇಶಕ ರಾಜ್​ ಗುರು ಅವರು ಇದೇ ಮೊದಲ ಬಾರಿಗೆ ಮೀನು ಬೇಟೆಯ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಗೌರಿಶಂಕರ್ ಎಸ್‌ಆರ್‌ಜಿ (Gowri Shankar) ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಗ್ರಾಮೀಣ ಸೊಗಡಿನ ಕಥೆ ಇರುವ ಚಿತ್ರಕ್ಕೆ ಪ್ರೇಕ್ಷಕರು ಮನ ಸೋಲುತ್ತಾರೆ. ‘ಕೆರೆಬೇಟೆ’ ಚಿತ್ರದಲ್ಲೂ ಅಂಥ ಕಹಾನಿ ಇರಲಿದೆ.

ಹೇಗಿದೆ ಕೆರೆಬೇಟೆ ಮೋಷನ್​ ಪೋಸ್ಟರ್​?

ಅಕ್ಟೋಬರ್​ 27ರಂದು ಬಿಡುಗಡೆಯಾಗಿರುವ ‘ಕೆರೆಬೇಟೆ’ ಮೋಷನ್ ಪೋಸ್ಟರ್‌ನಲ್ಲಿ ಹೀರೋ ಗೌರಿಶಂಕರ್ ಕೂಣಿ ಹಿಡಿದು ಕೆರೆಯಲ್ಲಿ ಮೀನು ಬೇಟೆ ಆಡುತ್ತಿರುವ ದೃಶ್ಯ ಇದೆ. ಉದ್ದ ಕೂದಲು ಮತ್ತು ಗಡ್ಡ ಬಿಟ್ಟುಕೊಂಡು ಅವರು ರಾ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಗೌರಿ ಶಂಕರ್​ ಅವರ ಹಿಂದೆ ಜನರ ದೊಡ್ಡ ಗುಂಪು ಇದೆ. ಮೀನು ಬೇಟೆಯ ಕಥೆ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿಸುವ ರೀತಿಯಲ್ಲಿ ಈ ಪೋಸ್ಟರ್​ ಮೂಡಿಬಂದಿದೆ.

ಇದನ್ನೂ ಓದಿ: Tagaru Palya Review: ‘ಟಗರು ಪಲ್ಯ’ದಲ್ಲಿದೆ ನಗು-ಅಳು ತುಂಬಿದ ಮನರಂಜನೆಯ ಫ್ಯಾಮಿಲಿ ಪ್ಯಾಕೇಜ್​

ನಿರ್ದೇಶಕರ ಬಗ್ಗೆ:

‘ಕೆರೆಬೇಟೆ’ ಚಿತ್ರ ನಿರ್ದೇಶಕ ರಾಜ್‌ಗುರು ಅವರು ಈ ಹಿಂದೆ ಪವನ್ ಒಡೆಯರ್ ಜತೆ ‘ಗೂಗ್ಲಿ’, ‘ರಣವಿಕ್ರಮ’, ‘ನಟಸಾರ್ವಭೌಮ’, ‘ಜೆಸ್ಸಿ’, ‘ರೆಮೋ’ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಆ ಅನುಭವದ ಆಧಾರದಲ್ಲಿ ಅವರೀಗ ಸ್ವತಂತ್ರ್ಯ ನಿರ್ದೇಶಕರಾಗಿದ್ದಾರೆ. ಅವರ ಮೊದಲ ನಿರ್ದೇಶನದ ಸಿನಿಮಾ ‘ಕೆರೆಬೇಟೆ’. ರಾಜ್‌ಗುರು ಕೂಡ ಮಲೆನಾಡಿನವರು. ಬಾಲ್ಯದಿಂದಲೂ ಅವರು ಕೆರೆಬೇಟೆ ನೋಡುತ್ತಾ ಬೆಳೆದಿದ್ದಾರೆ. ಹಾಗಾಗಿ ಅದರ ಬಗ್ಗೆ ಅವರಿಗೆ ಹೆಚ್ಚು ಜ್ಞಾನ ಇದೆ. ಅದನ್ನೇ ಇಟ್ಟುಕೊಂಡು ಅವರೀಗ ಸಿನಿಮಾ ಮಾಡಿದ್ದಾರೆ. ಸದ್ಯಕ್ಕೆ 70ರಷ್ಟು ಶೂಟಿಂಗ್​ ಮುಗಿದಿದೆ. 2024ರ ಆರಂಭದಲ್ಲಿ ಸಿನಿಮಾ ರಿಲೀಸ್​ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ.

ಮಲೆನಾಡಿನ ಜೀವನ ಶೈಲಿ:

ಈ ಸಿನಿಮಾ ಮೂಲಕ ಮಲೆನಾಡಿನ ಜೀವನ ಶೈಲಿಯನ್ನು ತೆರೆ ಮೇಲೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದೇ ಕಾರಣಕ್ಕಾಗಿ ಶಿವಮೊಗ್ಗ ಜಿಲ್ಲೆಯ ಸಿಗಂದೂರು ಮತ್ತು ಸೊರಬ ಸುತ್ತ-ಮುತ್ತಲಿನ ಲೊಕೇಷನ್​ಗಳಲ್ಲಿ ಶೂಟಿಂಗ್​ ಮಾಡಲಾಗಿದೆ. ಗೌರಿಶಂಕರ್ ಮತ್ತು ಬಿಂದೂ ಶಿವರಾಜ್ ಅವರು ಜೋಡಿಯಾಗಿ ಅಭಿನಯಿಸಿದ್ದಾರೆ. ಬಿಂದು ನಟಿಸಿರುವ ಚೊಚ್ಚಲ ಸಿನಿಮಾ ಇದು. ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಅವರಂತಹ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ. ಗಗನ್ ಬದೇರಿಯಾ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ‘ಜನಮನ ಸಿನಿಮಾಸ್’ ಮೂಲಕ ಗೌರಿಶಕಂಕರ್ ಮತ್ತು ಜೈಶಂಕರ್ ಪಟೇಲ್ ಅವರು ನಿರ್ಮಾಣ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:15 pm, Fri, 27 October 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ