AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಶ್​ರೂಂನಲ್ಲಿ ದ್ವಾರಕೀಶ್​ಗೆ ಡೇಟ್ಸ್ ಕೊಟ್ಟಿದ್ದ ರಜನಿಕಾಂತ್; ಇಲ್ಲಿದೆ ಮಜವಾದ ಪ್ರಸಂಗ

‘ಅಡ್ತಾ ವಾರಿಸು’ (1983) ಸಿನಿಮಾದಲ್ಲಿ ರಜನಿಕಾಂತ್ ನಟಿಸಿದರು. ಈ ಸಿನಿಮಾನ ದ್ವಾರಕೀಶ್ ನಿರ್ಮಿಸಿದರು. ಇವರು ಒಟ್ಟಾಗಿ ಕೆಲಸ ಮಾಡಿದ ಮೊದಲ ಸಿನಿಮಾ. ‘ನೀ ಬರೆದ ಕಾದಂಬರಿ’ ಹಾಗೂ ‘ಗಂಗುವಾ’ ಸಿನಿಮಾಗಳಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು.

ವಾಶ್​ರೂಂನಲ್ಲಿ ದ್ವಾರಕೀಶ್​ಗೆ ಡೇಟ್ಸ್ ಕೊಟ್ಟಿದ್ದ ರಜನಿಕಾಂತ್; ಇಲ್ಲಿದೆ ಮಜವಾದ ಪ್ರಸಂಗ
ರಜಿನಿ-ದ್ವಾರಕೀಶ್
ರಾಜೇಶ್ ದುಗ್ಗುಮನೆ
|

Updated on: Apr 16, 2024 | 1:39 PM

Share

ದ್ವಾರಕೀಶ್ (Dwarakish) ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು. ಅವರು ರಜನಿಕಾಂತ್ ಜೊತೆಗೂ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಘಟನೆ ಹಿಂದೆ ಒಂದು ಅಚ್ಚರಿಯ ವಿಚಾರ ಇದೆ. ಮೊದಲು ಕಮಲ್ ಹಾಸನ್ ಅವರ ಡೇಟ್ಸ್ ಕೇಳಿಕೊಂಡು ಹೋಗಿದ್ದರು ದ್ವಾರಕೀಶ್. ಆದರೆ, ಅವರ ಡೇಟ್ಸ್ ಸಿಗುವುದಿಲ್ಲ. ‘ನಿಮ್ಮದೇ ಹುಡುಗ ಮದ್ರಾಸ್​ಗೆ ಬಂದು ಫೇಮಸ್ ಆಗಿದ್ದಾರಲ್ಲ. ಅಲ್ಲಿಗೆ ಹೋಗೋದು ಬಿಟ್ಟು ಇಲ್ಲಿಗೆ ಏಕೆ ಬಂದ್ರಿ’ ಎಂದು ಕುಹಕದು ನಗು ಆಡಿದ್ದರು ಕಮಲ್ ಹಾಸನ್. ಇದರಿಂದ ರಜನಿಕಾಂತ್ ಡೇಟ್ಸ್ ಕೇಳಿದ್ದರು ದ್ವಾರಕೀಶ್. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ನಾನು ತಮಿಳುನಾಡಿಗೆ ಹೋಗಿದ್ದೆ. ಅಲ್ಲಿ ಮಣಿರತ್ನಂ ಸಹೋದರ ಜಿವಿ ಅವರು ಸ್ವಾಗತಿಸಿದರು. ಅವರು ದೊಡ್ಡ ಫೈನಾನ್ಸರ್ ಆಗಿದ್ದರು. ನಾನು ಮೊದಲು ಕಮಲ್ ಹಾಸನ್ ಮನೆಗೆ ಹೋದೆ. ಅವರು ರಜನಿಕಾಂತ್ ಉದಾಹರಣೆ ಕೊಟ್ಟು ಅಣಕಿಸಿದರು. ನಿಮ್ಮದೇ ಹುಡಗ ಇದ್ದಾನಲ್ಲ ಎಂದರು. ನನಗೆ ಅದು ಚುರುಕ್ ಎನಿಸಿತು. ಆ ಬಳಿಕ ರಜನಿಕಾಂತ್ ಬಳಿ ಹೋದೆ. ನೀವು ಹೋಗಿ ಎಂದು ನನ್ನ ಕಳಿಸಿಯೇ ಬಿಟ್ಟ’ ಎಂದು ಬಿ ಗಣಪತಿ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು ದ್ವಾರಕೀಶ್.

‘ನಾನು ಮರಳಿ ಮನೆಗೆ ಬಂದೆ. ಮಧ್ಯಾಹ್ನ ಮನೆಯ ಹತ್ತಿರ ಕಾರು ಬಂತು ನೋಡಿದ್ರೆ ರಜನಿಕಾಂತ್. ನೀವ್ಯಾಕೆ ಬಂದ್ರಿ? ಕರದ್ರೆ ನಾನೇ ಬರ್ತಿದ್ದೆ ಎಂದ. ನಾನು ಖುಷಿಯಾಗಿಬಿಟ್ಟೆ. ಡೇಟ್ ಬೇಕು ಎಂದೆ. ಆಗಲ್ಲ ಎಂದ. ಇಷ್ಟ ಬಂದಾಗೆ ಮಾಡು ಎಂದೆ. ಅಲ್ಲಿಂದ ನಡೆದ. ನಂತರ ನ್ಯಾಯ ಎಲ್ಲಿದೆ ಸಿನಿಮಾ ತೋರಿಸಿದೆ. ವಾಶ್​ರೂಂಗೆ ಹೋದಾಗ 5 ಲಕ್ಷ ಕೋಡ್ತೀಯಾ ಎಂದು ಕೇಳಿದ. ಕನ್ನಡ ಸಿನಿಮಾಕ್ಕೆ ಇಷ್ಟೆಲ್ಲ ಖರ್ಚು ಮಾಡಬೇಕಾ ಅನಿಸ್ತು. ಕೊಡ್ತೀನಿ ಎಂದೆ. ಅರೇಂಜ್ ಮಾಡಿ ಅವನಿಗೆ 5 ಲಕ್ಷ ಕೊಟ್ಟೆ. ಡೇಟ್ಸ್ ಕೊಟ್ಟೇ ಬಿಟ್ಟ’ ಎಂದಿದ್ದರು ದ್ವಾರಕೀಶ್.

ಇದನ್ನೂ ಓದಿ: ಸಿನಿಮಾದಲ್ಲಿ ಲಕ್ಷ ಲಕ್ಷ ಗಳಿಸಿದರೂ ದ್ವಾರಕೀಶ್ ಮನೆ ಮಾರಾಟ ಮಾಡಿದ್ದೇಕೆ? ಇಲ್ಲಿದೆ ಸತ್ಯ ಕಥೆ

‘ಅಡ್ತಾ ವಾರಿಸು’ (1983) ಸಿನಿಮಾದಲ್ಲಿ ರಜನಿಕಾಂತ್ ನಟಿಸಿದರು. ಈ ಸಿನಿಮಾನ ದ್ವಾರಕೀಶ್ ನಿರ್ಮಿಸಿದರು. ಇವರು ಒಟ್ಟಾಗಿ ಕೆಲಸ ಮಾಡಿದ ಮೊದಲ ಸಿನಿಮಾ. ‘ನೀ ಬರೆದ ಕಾದಂಬರಿ’ ಹಾಗೂ ‘ಗಂಗುವಾ’ ಸಿನಿಮಾಗಳಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ನನ್ನ ಮಗ ಕ್ಯಾಪ್ಟನ್: ಶ್ರೇಯಸ್ ಅಯ್ಯರ್ ತಂದೆಯ ಡ್ಯಾನ್ಸ್ ವಿಡಿಯೋ ವೈರಲ್
ನನ್ನ ಮಗ ಕ್ಯಾಪ್ಟನ್: ಶ್ರೇಯಸ್ ಅಯ್ಯರ್ ತಂದೆಯ ಡ್ಯಾನ್ಸ್ ವಿಡಿಯೋ ವೈರಲ್
ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ಭಕ್ತರ ಅಸಮಾಧಾನ
ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ಭಕ್ತರ ಅಸಮಾಧಾನ
ಬೈಲಹೊಂಗಲದಲ್ಲಿ ವರುಣಾರ್ಭಟ: ಅಂಗಡಿಗಳಿಗೆ ಮಳೆನೀರು ನುಗ್ಗಿ ಅಪಾರ ನಷ್ಟ
ಬೈಲಹೊಂಗಲದಲ್ಲಿ ವರುಣಾರ್ಭಟ: ಅಂಗಡಿಗಳಿಗೆ ಮಳೆನೀರು ನುಗ್ಗಿ ಅಪಾರ ನಷ್ಟ
ಡಿಕೆಶಿ ಸಂಪುಟದಲ್ಲಿ ನನಗೇನೂ ಬೇಡ: ರಾಜಣ್ಣ ಖಡಕ್ ಮಾತು
ಡಿಕೆಶಿ ಸಂಪುಟದಲ್ಲಿ ನನಗೇನೂ ಬೇಡ: ರಾಜಣ್ಣ ಖಡಕ್ ಮಾತು
ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್​​ ಗಾಂಧಿ
ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್​​ ಗಾಂಧಿ
ಮುಗಿಯದ ಖಾತೆ ಕ್ಯಾತೆ: ದೆಹಲಿಗೆ ತೆರಳಿದ ಸಚಿವ ಕೃಷ್ಣ ಭೈರೇಗೌಡ
ಮುಗಿಯದ ಖಾತೆ ಕ್ಯಾತೆ: ದೆಹಲಿಗೆ ತೆರಳಿದ ಸಚಿವ ಕೃಷ್ಣ ಭೈರೇಗೌಡ
ಲ್ಯಾಡಲ್ ಸ್ಫೋಟ: 25 ಲಕ್ಷ ರೂ. ಪರಿಹಾರ ಘೋಷಿಸಿದ ಹೆಚ್​ಡಿ ಕುಮಾರಸ್ವಾಮಿ
ಲ್ಯಾಡಲ್ ಸ್ಫೋಟ: 25 ಲಕ್ಷ ರೂ. ಪರಿಹಾರ ಘೋಷಿಸಿದ ಹೆಚ್​ಡಿ ಕುಮಾರಸ್ವಾಮಿ
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು