ವಾಶ್​ರೂಂನಲ್ಲಿ ದ್ವಾರಕೀಶ್​ಗೆ ಡೇಟ್ಸ್ ಕೊಟ್ಟಿದ್ದ ರಜನಿಕಾಂತ್; ಇಲ್ಲಿದೆ ಮಜವಾದ ಪ್ರಸಂಗ

‘ಅಡ್ತಾ ವಾರಿಸು’ (1983) ಸಿನಿಮಾದಲ್ಲಿ ರಜನಿಕಾಂತ್ ನಟಿಸಿದರು. ಈ ಸಿನಿಮಾನ ದ್ವಾರಕೀಶ್ ನಿರ್ಮಿಸಿದರು. ಇವರು ಒಟ್ಟಾಗಿ ಕೆಲಸ ಮಾಡಿದ ಮೊದಲ ಸಿನಿಮಾ. ‘ನೀ ಬರೆದ ಕಾದಂಬರಿ’ ಹಾಗೂ ‘ಗಂಗುವಾ’ ಸಿನಿಮಾಗಳಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು.

ವಾಶ್​ರೂಂನಲ್ಲಿ ದ್ವಾರಕೀಶ್​ಗೆ ಡೇಟ್ಸ್ ಕೊಟ್ಟಿದ್ದ ರಜನಿಕಾಂತ್; ಇಲ್ಲಿದೆ ಮಜವಾದ ಪ್ರಸಂಗ
ರಜಿನಿ-ದ್ವಾರಕೀಶ್
Follow us
|

Updated on: Apr 16, 2024 | 1:39 PM

ದ್ವಾರಕೀಶ್ (Dwarakish) ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು. ಅವರು ರಜನಿಕಾಂತ್ ಜೊತೆಗೂ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಘಟನೆ ಹಿಂದೆ ಒಂದು ಅಚ್ಚರಿಯ ವಿಚಾರ ಇದೆ. ಮೊದಲು ಕಮಲ್ ಹಾಸನ್ ಅವರ ಡೇಟ್ಸ್ ಕೇಳಿಕೊಂಡು ಹೋಗಿದ್ದರು ದ್ವಾರಕೀಶ್. ಆದರೆ, ಅವರ ಡೇಟ್ಸ್ ಸಿಗುವುದಿಲ್ಲ. ‘ನಿಮ್ಮದೇ ಹುಡುಗ ಮದ್ರಾಸ್​ಗೆ ಬಂದು ಫೇಮಸ್ ಆಗಿದ್ದಾರಲ್ಲ. ಅಲ್ಲಿಗೆ ಹೋಗೋದು ಬಿಟ್ಟು ಇಲ್ಲಿಗೆ ಏಕೆ ಬಂದ್ರಿ’ ಎಂದು ಕುಹಕದು ನಗು ಆಡಿದ್ದರು ಕಮಲ್ ಹಾಸನ್. ಇದರಿಂದ ರಜನಿಕಾಂತ್ ಡೇಟ್ಸ್ ಕೇಳಿದ್ದರು ದ್ವಾರಕೀಶ್. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ನಾನು ತಮಿಳುನಾಡಿಗೆ ಹೋಗಿದ್ದೆ. ಅಲ್ಲಿ ಮಣಿರತ್ನಂ ಸಹೋದರ ಜಿವಿ ಅವರು ಸ್ವಾಗತಿಸಿದರು. ಅವರು ದೊಡ್ಡ ಫೈನಾನ್ಸರ್ ಆಗಿದ್ದರು. ನಾನು ಮೊದಲು ಕಮಲ್ ಹಾಸನ್ ಮನೆಗೆ ಹೋದೆ. ಅವರು ರಜನಿಕಾಂತ್ ಉದಾಹರಣೆ ಕೊಟ್ಟು ಅಣಕಿಸಿದರು. ನಿಮ್ಮದೇ ಹುಡಗ ಇದ್ದಾನಲ್ಲ ಎಂದರು. ನನಗೆ ಅದು ಚುರುಕ್ ಎನಿಸಿತು. ಆ ಬಳಿಕ ರಜನಿಕಾಂತ್ ಬಳಿ ಹೋದೆ. ನೀವು ಹೋಗಿ ಎಂದು ನನ್ನ ಕಳಿಸಿಯೇ ಬಿಟ್ಟ’ ಎಂದು ಬಿ ಗಣಪತಿ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು ದ್ವಾರಕೀಶ್.

‘ನಾನು ಮರಳಿ ಮನೆಗೆ ಬಂದೆ. ಮಧ್ಯಾಹ್ನ ಮನೆಯ ಹತ್ತಿರ ಕಾರು ಬಂತು ನೋಡಿದ್ರೆ ರಜನಿಕಾಂತ್. ನೀವ್ಯಾಕೆ ಬಂದ್ರಿ? ಕರದ್ರೆ ನಾನೇ ಬರ್ತಿದ್ದೆ ಎಂದ. ನಾನು ಖುಷಿಯಾಗಿಬಿಟ್ಟೆ. ಡೇಟ್ ಬೇಕು ಎಂದೆ. ಆಗಲ್ಲ ಎಂದ. ಇಷ್ಟ ಬಂದಾಗೆ ಮಾಡು ಎಂದೆ. ಅಲ್ಲಿಂದ ನಡೆದ. ನಂತರ ನ್ಯಾಯ ಎಲ್ಲಿದೆ ಸಿನಿಮಾ ತೋರಿಸಿದೆ. ವಾಶ್​ರೂಂಗೆ ಹೋದಾಗ 5 ಲಕ್ಷ ಕೋಡ್ತೀಯಾ ಎಂದು ಕೇಳಿದ. ಕನ್ನಡ ಸಿನಿಮಾಕ್ಕೆ ಇಷ್ಟೆಲ್ಲ ಖರ್ಚು ಮಾಡಬೇಕಾ ಅನಿಸ್ತು. ಕೊಡ್ತೀನಿ ಎಂದೆ. ಅರೇಂಜ್ ಮಾಡಿ ಅವನಿಗೆ 5 ಲಕ್ಷ ಕೊಟ್ಟೆ. ಡೇಟ್ಸ್ ಕೊಟ್ಟೇ ಬಿಟ್ಟ’ ಎಂದಿದ್ದರು ದ್ವಾರಕೀಶ್.

ಇದನ್ನೂ ಓದಿ: ಸಿನಿಮಾದಲ್ಲಿ ಲಕ್ಷ ಲಕ್ಷ ಗಳಿಸಿದರೂ ದ್ವಾರಕೀಶ್ ಮನೆ ಮಾರಾಟ ಮಾಡಿದ್ದೇಕೆ? ಇಲ್ಲಿದೆ ಸತ್ಯ ಕಥೆ

‘ಅಡ್ತಾ ವಾರಿಸು’ (1983) ಸಿನಿಮಾದಲ್ಲಿ ರಜನಿಕಾಂತ್ ನಟಿಸಿದರು. ಈ ಸಿನಿಮಾನ ದ್ವಾರಕೀಶ್ ನಿರ್ಮಿಸಿದರು. ಇವರು ಒಟ್ಟಾಗಿ ಕೆಲಸ ಮಾಡಿದ ಮೊದಲ ಸಿನಿಮಾ. ‘ನೀ ಬರೆದ ಕಾದಂಬರಿ’ ಹಾಗೂ ‘ಗಂಗುವಾ’ ಸಿನಿಮಾಗಳಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ