‘ಪುನೀತ್​ ಇಲ್ಲದೇ ‘ಜೇಮ್ಸ್​’ ಶೂಟಿಂಗ್​ ಮಾಡೋದು ಕಷ್ಟ ಆಗ್ತಿದೆ’: ನಟ ಅವಿನಾಶ್​ ಭಾವುಕ ನುಡಿ

| Updated By: ಮದನ್​ ಕುಮಾರ್​

Updated on: Jan 06, 2022 | 9:36 AM

Puneeth Rajkumar: ‘ಪುನೀತ್​ ನೆನಪುಗಳು ಕಾಡುತ್ತವೆ. ಶೂಟಿಂಗ್​ ಮಾಡುವಾಗ ತುಂಬ ಬೇಜಾರಾಗುತ್ತದೆ. ಆದರೂ ಕೆಲಸ ಮುಗಿಸಲೇಬೇಕು’ ಎಂದು ಹಿರಿಯ ನಟ ಅವಿನಾಶ್​​ ಹೇಳಿದ್ದಾರೆ.

‘ಪುನೀತ್​ ಇಲ್ಲದೇ ‘ಜೇಮ್ಸ್​’ ಶೂಟಿಂಗ್​ ಮಾಡೋದು ಕಷ್ಟ ಆಗ್ತಿದೆ’: ನಟ ಅವಿನಾಶ್​ ಭಾವುಕ ನುಡಿ
ಪುನೀತ್​ ರಾಜ್​ಕುಮಾರ್​, ಅವಿನಾಶ್
Follow us on

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ನಿಧನದಿಂದಾಗಿ ಕನ್ನಡ ಚಿತ್ರರಂಗಕ್ಕೆ ನಷ್ಟ ಆಗಿದೆ. ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದ ಅವರು ಎಲ್ಲ ಕೆಲಸಗಳನ್ನು ಅರ್ಧಕ್ಕೆ ಬಿಟ್ಟು ಇಹಲೋಕ ತ್ಯಜಿಸಿದರು. ಪುನೀತ್​ ನಟಿಸುತ್ತಿದ್ದ ‘ಜೇಮ್ಸ್​​’ (James Kannada Movie) ಸಿನಿಮಾದ ಮೇಲೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಆ ಚಿತ್ರದ ಶೂಟಿಂಗ್​ ಮುಗಿಯುವುದಕ್ಕೂ ಮುನ್ನವೇ ಅವರು ಕೊನೆಯುಸಿರು ಎಳೆದಿದ್ದು ಬೇಸರದ ಸಂಗತಿ. ಚೇತನ್​ ಕುಮಾರ್​ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟ ಅವಿನಾಶ್​ (Actor Avinash) ಕೂಡ ಅಭಿನಯಿಸುತ್ತಿದ್ದಾರೆ. ಪುನೀತ್​ ಇಲ್ಲ ಎಂಬ ನೋವಿನ ನಡುವೆಯೂ ಈ ಚಿತ್ರದ ಶೂಟಿಂಗ್​ ಪುನಾರಂಭ ಆಗಿದೆ. ಆ ಬಗ್ಗೆ ಅವಿನಾಶ್​ ಮಾತನಾಡಿದ್ದಾರೆ.

‘ತುಂಬ ಕಷ್ಟ ಆಗುತ್ತಿದೆ. ಅಪ್ಪು ಇಲ್ಲದೇ ಶೂಟಿಂಗ್​ ಮಾಡುವಾಗ ಬಹಳ ನೆನಪುಗಳು ಕಾಡುತ್ತವೆ. ಕೊನೆ ಬಾರಿ ಶೂಟಿಂಗ್​ ಮಾಡಿದಾಗ ರಾತ್ರಿಯೆಲ್ಲ ಜೊತೆಯಾಗಿ ಕಳೆದಿದ್ದೆವು. ಅವರು ದಿಢೀರ್​ ಅಂತ ಹೀಗೆ ಹೋಗಿಬಿಡುತ್ತಾರೆ ಎಂದು ಕನಸಿನಲ್ಲಿಯೂ ಯಾರೂ ಊಹಿಸಿರಲಿಲ್ಲ. ತುಂಬ ಬೇಜಾರಾಗುತ್ತದೆ. ಆದರೂ ಕೆಲಸ ಮುಗಿಸಲೇಬೇಕು. ಅದಕ್ಕಾಗಿ ಶೂಟಿಂಗ್​ ಮಾಡುತ್ತಿದ್ದೇವೆ’ ಎಂದಿದ್ದಾರೆ ಅವಿನಾಶ್​​.

‘ಜೇಮ್ಸ್​’ ಸಿನಿಮಾದಲ್ಲಿ ತಮ್ಮ ಪಾಲಿನ ಬಹುತೇಕ ದೃಶ್ಯಗಳ ಚಿತ್ರೀಕರಣವನ್ನು ಪುನೀತ್​ ಮುಗಿಸಿದ್ದರು. ಈಗ ಅವರ ಪಾತ್ರಕ್ಕೆ ಡಬ್ಬಿಂಗ್​ ಮಾಡುವುದು ಯಾರು ಎಂಬ ಕೌತುಕ ಕೂಡ ಇದೆ. ಸಹೋದರನ ಪಾತ್ರಕ್ಕೆ ಧ್ವನಿ ನೀಡಲು ತಾವು ರೆಡಿ ಎಂದು ಶಿವರಾಜ್​ಕುಮಾರ್​ ಈ ಹಿಂದೆಯೇ ಹೇಳಿದ್ದರು. ಆ ಕಾರಣದಿಂದಲೂ ‘ಜೇಮ್ಸ್​’ ಚಿತ್ರದ ಮೇಲೆ ನಿರೀಕ್ಷೆ ಇದೆ.

ಅವಿನಾಶ್​ ಬಗ್ಗೆ ಹರಡಿತ್ತು ವದಂತಿ:

ಯಾರೋ ಕಿಡಿಗೇಡಿಗಳು ಅವಿನಾಶ್ ಇನ್ನಿಲ್ಲ ಎಂಬ ಸುದ್ದಿ ಹರಡಿಸಿದ್ದರು. ಇದು ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈ ಕುರಿತು ನಟ ಅವಿನಾಶ್ ಟಿವಿ9ಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಈ ಕುರಿತು ಸೈಬರ್ ಕ್ರೈಂಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ. ಅವಿನಾಶ್‌‌ ಸುಳ್ಳು ಸುದ್ದಿಯ ಕುರಿತು ಪ್ರತಿಕ್ರಿಯಿಸಿದ್ದು, ‘ಆರಾಮವಾಗಿದ್ದೇನೆ. ಬೆಳಗ್ಗೆ ವರ್ಕೌಟ್ ಮಾಡಿದ್ದೇನೆ’ ಎಂದಿದ್ದಾರೆ. ಅಲ್ಲದೇ ಇಂತಹ ಸುದ್ದಿ ಹರಿದಾಡಿದ್ದರ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಿರುವುದಾಗಿಯೂ ನಟ ತಿಳಿಸಿದ್ದಾರೆ. ಈ ಮೂಲಕ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡಲು ಮುಂದಾಗಿದ್ದಾರೆ.

ಇದನ್ನೂ  ಓದಿ:

ಪುನೀತ್​ ರಾಜ್​ಕುಮಾರ್​ಗೆ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ; ವೇದಿಕೆಯಲ್ಲಿ ಭಾವುಕರಾದ ಶಿವಣ್ಣ

ಪುನೀತ್​ಗೆ ದೇವರ ಸ್ಥಾನ ನೀಡಿದ ಫ್ಯಾನ್ಸ್​; ಅಪ್ಪು ಮೇಲಿನ ಅಪಾರ ಅಭಿಮಾನಕ್ಕೆ ಇನ್ನೊಂದು ಸಾಕ್ಷಿ