AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣನ ಲೀಲಾಳಾದ ಶ್ರದ್ಧಾ ಶ್ರೀನಾಥ್

ಒಂದ್ ಕಾಲ ಇತ್ತು. ಯಾವ್ ಸಿನಿಮಾ ನೋಡೋದು. ಯಾವ ಸಿನಿಮಾ ಬಿಡೋದು ಅನ್ನೊ ಕಾಲವಿತ್ತು. ಆದ್ರೀಗ ಕೊರೊನಾ ಸಿನಿಮಾ ರಸಿಕರ ಈ ಸಂಭ್ರಮಕ್ಕೆ ತಣ್ಣೀರು ಸುರಿಸಿದೆ. ಹೊಚ್ಚ ಹೊಸ ಸಿನಿಮಾಗಳು ಥಿಯೇಟರ್​ನಲ್ಲಿ ಓಟಿಟಿಯಲ್ಲಿ ಬಿಡುಗಡೆಗೆ ತುದಿಗಾಲಲ್ಲಿ ನಿಂತಿವೆ. ಇಂತಹ ಸಿನಿಮಾಗಳಲ್ಲೊಂದು ಕೃಷ್ಣ ಆ್ಯಂಡ್ ಹಿಸ್ ಲೀಲಾ.. ಕೃಷ್ಣ ಆ್ಯಂಡ್ ಹಿಸ್ ಲೀಲಾ ಸಿನಿಮಾ ಕಳೆದ ವರ್ಷದಿಂದ್ಲೇ ಪ್ರಚಾರ ಆರಂಭಿಸಿತ್ತು. ಆದ್ರೆ ಇನ್ನೇನು ರಿಲೀಸ್ ಆಗ್ಬೇಕು ಅನ್ನುವಷ್ಟರಲ್ಲಿ ಕೊರೊನಾ ವಕ್ಕರಿಸಿ, ಎಲ್ಲಾ ಆಸೆಗಳಿಗೂ ತಣ್ಣೀರು ಸುರಿಸಿದೆ. ಅಂದ್ಹಾಗೆ ಈ […]

ಕೃಷ್ಣನ ಲೀಲಾಳಾದ ಶ್ರದ್ಧಾ ಶ್ರೀನಾಥ್
ಸಾಧು ಶ್ರೀನಾಥ್​
|

Updated on:Jun 22, 2020 | 6:57 PM

Share

ಒಂದ್ ಕಾಲ ಇತ್ತು. ಯಾವ್ ಸಿನಿಮಾ ನೋಡೋದು. ಯಾವ ಸಿನಿಮಾ ಬಿಡೋದು ಅನ್ನೊ ಕಾಲವಿತ್ತು. ಆದ್ರೀಗ ಕೊರೊನಾ ಸಿನಿಮಾ ರಸಿಕರ ಈ ಸಂಭ್ರಮಕ್ಕೆ ತಣ್ಣೀರು ಸುರಿಸಿದೆ. ಹೊಚ್ಚ ಹೊಸ ಸಿನಿಮಾಗಳು ಥಿಯೇಟರ್​ನಲ್ಲಿ ಓಟಿಟಿಯಲ್ಲಿ ಬಿಡುಗಡೆಗೆ ತುದಿಗಾಲಲ್ಲಿ ನಿಂತಿವೆ. ಇಂತಹ ಸಿನಿಮಾಗಳಲ್ಲೊಂದು ಕೃಷ್ಣ ಆ್ಯಂಡ್ ಹಿಸ್ ಲೀಲಾ..

ಕೃಷ್ಣ ಆ್ಯಂಡ್ ಹಿಸ್ ಲೀಲಾ ಸಿನಿಮಾ ಕಳೆದ ವರ್ಷದಿಂದ್ಲೇ ಪ್ರಚಾರ ಆರಂಭಿಸಿತ್ತು. ಆದ್ರೆ ಇನ್ನೇನು ರಿಲೀಸ್ ಆಗ್ಬೇಕು ಅನ್ನುವಷ್ಟರಲ್ಲಿ ಕೊರೊನಾ ವಕ್ಕರಿಸಿ, ಎಲ್ಲಾ ಆಸೆಗಳಿಗೂ ತಣ್ಣೀರು ಸುರಿಸಿದೆ. ಅಂದ್ಹಾಗೆ ಈ ಸಿನಿಮಾ ಬಗ್ಗೆ ಯಾಕಿಷ್ಟು ಕುತೂಹಲ ಅಂದ್ರೆ, ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ನಟಿಸಿದ್ದಾರೆ ಅನ್ನೋದು ಒಂದೆಡೆಯಾದ್ರೆ, ಇನ್ನೊಂದೆಡೆ ರಾಣಾ ದಗ್ಗುಬಾಟಿ ನಿರ್ಮಾಣ ಹಾಗೂ ರವಿಕಾಂತ್ ಪೆರುಪು ಅವರ ನಿರ್ದೇಶನವಿದೆ.

ನ್ಯಾಚುರಲ್ ಸ್ಟಾರ್ ನಾನಿ ಜೊತೆ ನಟಿಸಿದ್ದ ಶ್ರದ್ಧಾ ಶ್ರೀನಾಥ್​ಗೆ ತೆಲುಗು ಮಂದಿ ಭೇಷ್ ಅಂದಿದ್ರು. ಈ ವೇಳೆ ನಟಿಸಿದ ಮತ್ತೊಂದು ಸಿನಿಮಾನೇ ಕೃಷ್ಣ ಆ್ಯಂಡ್ ಹಿಸ್ ಲೀಲಾ. ಆದ್ರೆ, ಇನ್ನೇನು ಸಿನಿಮಾ ರಿಲೀಸ್ ಆಗ್ಬೇಕು ಅನ್ನುವಷ್ಟರಲ್ಲೇ ಕೊರೊನಾ ಮಾಹಾಮಾರಿ ಎಂಟ್ರಿ ಕೊಟ್ಟಿತ್ತು. ಹೀಗಾಗಿ ಈ ಸಿನಿಮಾ ಕಾದೂ ಕಾದು ಕೊನೆಗೂ ಓಟಿಟಿಯಲ್ಲಿ ಬಿಡುಗಡೆ ಸಿದ್ಧತೆ ನಡೆಸಿದೆ.

ಶ್ರದ್ಧಾ ಶ್ರೀನಾಥ್ ಜೊತೆ ಸೀರತ್ ಕಪೂರ್, ಶಾಲಿನಿ ವದ್ನಿಕಟ್ಟಿ ನಟಿಸಿದ್ರೆ, ಮೂವರಿಗೂ ಹೀರೋ ಆಗಿ ಸಿದ್ದು ಜಿನ್ನಲಗಡ್ಡ ಕಾಣಿಸಿಕೊಂಡಿದ್ದಾರೆ. ಮೂವರು ಯುವತಿಯರೊಂದಿಗೆ ಪ್ರೀತಿಯಲ್ಲಿ ಬೀಳುವ ನಾಯಕ ಯಾರನ್ನ ಆಯ್ಕೆ ಮಾಡಿಕೊಳ್ಳುತ್ತಾನೆ. ಅವರ ಭಾವನೆಗಳೇನು? ಅನ್ನೋದ ಸಿನಿಮಾದ ಕಥೆ. ಕೃಷ್ಣ ಆ್ಯಂಡ್ ಹಿಸ್ ಲೀಲಾ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿರೋ ಚಿತ್ರತಂಡ, ಎಲ್ಲಿ ಬಿಡುಗಡೆಯಾಗುತ್ತೆ ಅಂತ ಹೇಳಿದ್ದಾರೆ. ಆದ್ರೆ, ಬಿಡುಗಡೆ ದಿನಾಂಕವನ್ನ ಮಾತ್ರ ರಿವೀಲ್ ಮಾಡಿಲ್ಲ -ಮುರಳಿ

Published On - 6:56 pm, Mon, 22 June 20

ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ