ಕೌನ್ ಬನೇಗಾ ಕರೋಡ್​ ಪತಿ: ಕೋಟಿ ಗೆದ್ದ IPS ಅಧಿಕಾರಿ ಮೋಹಿತಾ ಶರ್ಮ!

ಖ್ಯಾತ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್​ ಪತಿ ಜನಸಾಮಾನ್ಯರ ಪಾಲಿಗೆ ಅದೃಷ್ಟದ ಬಾಗಿಲು. ತಮ್ಮ ಬುದ್ಧಿವಂತಿಕೆ ಹಾಗೂ ಅದೃಷ್ಟ ಪರೀಕ್ಷೆಯ ಮೂಲಕ ಕೋಟಿ ರೂಪಾಯಿ ಗೆಲ್ಲಲು ದೇಶಾದ್ಯಂತ ಸಾವಿರಾರು ಜನ ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಅದರಲ್ಲೂ ಈ ಬಾರಿ ಪ್ರಸಾರವಾಗುತ್ತಿರುವ ಕೆಬಿಸಿ ಕಾರ್ಯಕ್ರಮದ 12ನೇ ಆವೃತ್ತಿ ದಿನೇ ದಿನೇ ಸಂಚಲನ ಮೂಡಿಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ನಾಜಿಯಾ ನಸೀಮ್ ಎಂಬ ಮಹಿಳೆ ಒಂದು ಕೋಟಿ ಗೆದ್ದು ಎಲ್ಲರ ಗಮನ ಸೆಳೆದಿದ್ದರು. ಇದೀಗ […]

ಕೌನ್ ಬನೇಗಾ ಕರೋಡ್​ ಪತಿ: ಕೋಟಿ ಗೆದ್ದ IPS ಅಧಿಕಾರಿ ಮೋಹಿತಾ ಶರ್ಮ!
ಸಾಧು ಶ್ರೀನಾಥ್​

Updated on: Nov 17, 2020 | 2:53 PM

ಖ್ಯಾತ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್​ ಪತಿ ಜನಸಾಮಾನ್ಯರ ಪಾಲಿಗೆ ಅದೃಷ್ಟದ ಬಾಗಿಲು. ತಮ್ಮ ಬುದ್ಧಿವಂತಿಕೆ ಹಾಗೂ ಅದೃಷ್ಟ ಪರೀಕ್ಷೆಯ ಮೂಲಕ ಕೋಟಿ ರೂಪಾಯಿ ಗೆಲ್ಲಲು ದೇಶಾದ್ಯಂತ ಸಾವಿರಾರು ಜನ ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಅದರಲ್ಲೂ ಈ ಬಾರಿ ಪ್ರಸಾರವಾಗುತ್ತಿರುವ ಕೆಬಿಸಿ ಕಾರ್ಯಕ್ರಮದ 12ನೇ ಆವೃತ್ತಿ ದಿನೇ ದಿನೇ ಸಂಚಲನ ಮೂಡಿಸುತ್ತಿದೆ.

ಕೆಲ ದಿನಗಳ ಹಿಂದಷ್ಟೇ ನಾಜಿಯಾ ನಸೀಮ್ ಎಂಬ ಮಹಿಳೆ ಒಂದು ಕೋಟಿ ಗೆದ್ದು ಎಲ್ಲರ ಗಮನ ಸೆಳೆದಿದ್ದರು. ಇದೀಗ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಕೋಟಿ ಗೆದ್ದಿರುವ ಪ್ರೊಮೊವನ್ನು ವಾಹಿನಿ ಬಿಡುಗಡೆಗೊಳಿಸಿದ್ದು ವೀಕ್ಷಕರು ಮತ್ತಷ್ಟು ಕುತೂಹಲ ಭರಿತರಾಗಿದ್ದಾರೆ.

ಈಗ ಹೊರಬಿದ್ದಿರುವ ಪ್ರೊಮೊದಲ್ಲಿ ಬಿಗ್ ಬಿ ಒಂದು ಕೋಟಿ ಎಂದು ಅಚ್ಚರಿಯಿಂದ ಉದ್ಘರಿಸುತ್ತಿರುವ ದೃಶ್ಯವಿದ್ದು ನಂತರದಲ್ಲಿ ಏಳು ಕೋಟಿಯ ಪ್ರಶ್ನೆಗೂ ಮೋಹಿತಾ ಶರ್ಮಾ ಕಾಲಿಟ್ಟಿರುವುದು ಬಹಿರಂಗವಾಗಿದೆ. ಕೆಬಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬುದು ನನ್ನ ಪತಿಯ ಕನಸಾಗಿತ್ತು.

ಅದಕ್ಕಾಗಿ ಅವರು ಬಾಲ್ಯದಿಂದಲೂ ಪ್ರಯತ್ನ ಪಡುತ್ತಿದ್ದರು. ಆದರೆ, ಈಗ ನಾನು ಭಾಗವಹಿಸುವ ಅವಕಾಶ ಲಭಿಸಿತು ಎಂದಿದ್ದಾರೆ. ಕೊನೆಯಲ್ಲಿ ಎಷ್ಟು ಹಣ ಗೆಲ್ಲುತ್ತೇನೆ ಎನ್ನುವುದಕ್ಕಿಂತ ಇಲ್ಲಿಂದ ಏನು ಪಡೆದುಕೊಂಡೆ ಎನ್ನುವುದು ತೃಪ್ತಿ ನೀಡಬೇಕು ಎಂದಿರುವ ಮೋಹಿತಾ ಏಳು ಕೋಟಿ ಪ್ರಶ್ನೆಗೆ ಸರಿ ಉತ್ತರ ನೀಡಿದ್ದಾರಾ ಇಲ್ಲವಾ ಎನ್ನುವುದು ಸದ್ಯ ಕುತೂಹಲ ಮೂಡಿಸಿದೆ.

ನಾಜೀಯಾ ನಸೀಮ್ ಬಳಿಕ 12ನೇ ಆವೃತ್ತಿಯಲ್ಲಿ ಕೋಟಿ ಗೆಲ್ಲುತ್ತಿರುವ ಸ್ಪರ್ಧಿ ಮೋಹಿತಾ ಶರ್ಮ ಆಗಿದ್ದು ಇಬ್ಬರೂ ಮಹಿಳಾ ಸ್ಪರ್ಧಿಗಳಾಗಿರುವುದು ವಿಶೇಷ.

Published On - 2:52 pm, Tue, 17 November 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us