AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್​’ ನಿರ್ಮಾಪಕ ವಿಜಯ್​ ಕಿರಗಂದೂರು ಹೇಳಿದ ಮಾತಿನಿಂದ ಮುಗಿಯಿತು ‘ಕಿರಿಕ್​ ಪಾರ್ಟಿ’ ವಿವಾದ

TV9 Web
| Updated By: ಮದನ್​ ಕುಮಾರ್​

Updated on: Jul 03, 2021 | 7:02 PM

‘ಕಿರಿಕ್​ ಪಾರ್ಟಿ’ ಹಾಡಿನ ವಿಚಾರದಲ್ಲಿ ರಕ್ಷಿತ್​ ಶೆಟ್ಟಿ ಮತ್ತು ಲಹರಿ ವೇಲು ನಡುವೆ ಉಂಟಾಗಿದ್ದ ವಿವಾದ ಇತ್ತೀಚೆಗೆ ಬಗೆಹರಿದಿದೆ. ಅವರಿಬ್ಬರು ರಾಜಿ ಮಾಡಿಕೊಳ್ಳಲು ಕಾರಣ ಆದವರು ‘ಕೆಜಿಎಫ್​’ ನಿರ್ಮಾಪಕ ವಿಜಯ್​ ಕಿರಗಂದೂರು.

ವಿವಾದ ಹೇಗೆ ಬಗೆಹರಿಯಿತು ಎಂಬ ಬಗ್ಗೆ ಲಹರಿ ವೇಲು ಪ್ರತಿಕ್ರಿಯೆ ನೀಡಿದ್ದಾರೆ. ‘ನಾಲ್ಕು ತಿಂಗಳ ಮುಂಚೆ ವಿಜಯ್​ ಕಿರಗಂದೂರು ಅವರು ನಮಗೆ ಒಂದು ಮಾತು ಹೇಳಿದರು. ಏನ್​ ಸರ್​ ಇದೆಲ್ಲ ಅಂತ ಕೇಳಿದರು. ನಾನು 45 ವರ್ಷದಿಂದ ಯಾರ ಮೇಲೂ ವಿವಾದ ಇಟ್ಟುಕೊಂಡವನಲ್ಲ. ನಾವು ಕೂಡ ನೋವು-ಅವಮಾನ ಅನುಭವಿಸಿದ್ದೇವೆ. ಹಾಗಂತ ನಾನು ಇನ್ನೊಬ್ಬನಿಗೆ ನೋವು ಕೊಡುವವನಲ್ಲ. ಇದು ದೊಡ್ಡ ವಿಷಯ ಅಲ್ಲ. 2 ನಿಮಿಷದಲ್ಲಿ ಬಗೆಹರಿಸಿಕೊಳ್ಳಬಹುದು ಅಂತ ಅವರಿಗೆ ಹೇಳಿದೆ. ರಕ್ಷಿತ್​, ನಾನು, ಅಜನೀಶ್​ ಮತ್ತು ನಿರ್ದೇಶಕ ಶೂನ್ಯ ಅವರು ಒಂದು ಹೋಟೆಲ್​ನಲ್ಲಿ ಮಾತನಾಡಿ ಬಗೆಹರಿಸಿಕೊಂಡೆವು’ ಎಂದು ವೇಲು ಹೇಳಿದ್ದಾರೆ.

‘ಎಲ್ಲ ವ್ಯವಹಾರದಲ್ಲೂ ಒಂದು ಮೌಲ್ಯ ಇರುತ್ತದೆ. ಯಾವುದೇ ಹಾಡನ್ನು ನಾವು ಹಣ ಕೊಟ್ಟು ಖರೀದಿಸಿರುತ್ತೇವೆ. ಬೇರೆಯವರ ಹಾಡನ್ನು ನಾವು ಬಳಸಿಕೊಂಡರೆ ಅವರೂ ಬಿಡುವುದಿಲ್ಲ. ಮೌಲ್ಯಗಳನ್ನು ಇಟ್ಟುಕೊಂಡು ಜೀವನ ಮಾಡಿದರೆ ನಮ್ಮ ಸಿನಿಮಾ ಇಂಡಸ್ಟ್ರೀಯಲ್ಲಿ ಯಾವುದೇ ವಿವಾದಗಳು ಇರುವುದಿಲ್ಲ’ ಎಂದಿದ್ದಾರೆ ವೇಲು.

ಇದನ್ನೂ ಓದಿ:

ರಕ್ಷಿತ್​ ಶೆಟ್ಟಿ Vs​ ಸುದ್ದಿ ವಾಹಿನಿ: ‘ಬೇರೆಯವರಿಗೆ ಮರ್ಯಾದೆ ಕೊಟ್ಟರೆ ಮಾತ್ರ ನಮಗೆ ಮರ್ಯಾದೆ ಸಿಗೋದು’ ಎಂದ ಪುಷ್ಕರ್​

‘ಇದಕ್ಕೆ ಉತ್ತರ ಕೊಡುತ್ತೇನೆ’; ತೇಜೋವಧೆ ಮಾಡಿದ ಮಾಧ್ಯಮಕ್ಕೆ ರಕ್ಷಿತ್​ ಶೆಟ್ಟಿ ಖಡಕ್​ ಎಚ್ಚರಿಕೆ