AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭೀಮ’ ನೋಡಿ ಮಗನಿಗೆ ಡ್ರಗ್ಸ್ ಮಾರಿದವನ ಹಿಡಿದುಕೊಟ್ಟ ತಂದೆ

Duniya Vijay: ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ಕೆಲ ವಾರದ ಹಿಂದೆ ಬಿಡುಗಡೆ ಆಗಿತ್ತು. ಆ ಸಿನಿಮಾ ನೋಡಿದ ವ್ಯಕ್ತಿಯೊಬ್ಬ ಮಗನಿಗೆ ಡ್ರಗ್ಸ್ ಮಾರುತ್ತಿದ್ದ ಪೆಡ್ಲರ್ ಒಬ್ಬಾತನನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ.

‘ಭೀಮ’ ನೋಡಿ ಮಗನಿಗೆ ಡ್ರಗ್ಸ್ ಮಾರಿದವನ ಹಿಡಿದುಕೊಟ್ಟ ತಂದೆ
ಮಂಜುನಾಥ ಸಿ.
|

Updated on: Sep 12, 2024 | 7:03 PM

Share

ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಂಡಿದೆ. ಸಿನಿಮಾದಲ್ಲಿ ಮಾದಕ ವಸ್ತುವಿಗೆ ಯುವಕರು ಬಲಿಯಾಗುತ್ತಿರುವ ರೀತಿಯನ್ನು ದುನಿಯಾ ವಿಜಯ್ ತೋರಿಸಿದ್ದರು. ಯುವಕರು ಹೇಗೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿತ್ತು. ಇದರ ಜೊತೆಗೆ ಬೆಂಗಳೂರಿನ ಯುವಕರಿಗೆ ಮಾದಕ ವಸ್ತು ಅದೆಷ್ಟು ಸುಲಭವಾಗಿ ಲಭ್ಯವಾಗುತ್ತಿದೆ. ಯಾವ ಯಾವ ರೂಪದಲ್ಲಿ ಲಭ್ಯವಾಗುತ್ತಿದೆ ಎಂಬುದನ್ನು ಸಹ ದುನಿಯಾ ವಿಜಿ ತೋರಿಸಿದ್ದರು.

ಸಿನಿಮಾ ಬಿಡುಗಡೆ ಆದ ಬಳಿಕವೂ ಸಹ ದುನಿಯಾ ವಿಜಯ್ ಪ್ರತ್ಯೇಕ ವಿಡಿಯೋಗಳನ್ನು ಮಾಡಿ, ಹೇಗೆ ಮೆಡಿಕಲ್ ಶಾಪ್​ಗಳಲ್ಲಿ ಕೆಲವು ಮಾತ್ರೆಗಳನ್ನು ಯಾವುದೇ ವೈದ್ಯರ ಪ್ರಿಸ್ಕ್ರಿಪ್ಷನ್​ಗಳಿಲ್ಲದೆ ಮೆಡಿಕಲ್ ಶಾಪ್​ಗಳವರು ನೀಡುತ್ತಿದ್ದಾರೆ ಎಂಬುದನ್ನು ತೋರಿಸಿದ್ದರು. ಇದೀಗ ದುನಿಯಾ ವಿಜಿ, ‘ಭೀಮ’ ಸಿನಿಮಾ ಮಾಡಿದ ಉದ್ದೇಶ ತುಸುವಾದರೂ ಈಡೇರಿದಂತಿದೆ. ವ್ಯಕ್ತಿಯೊಬ್ಬ, ತನ್ನ ಮಗನಿಗೆ ಡ್ರಗ್ಸ್ ಮಾರುತ್ತಿದ್ದ ಯುವಕನೊಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾತ್ರವಲ್ಲದೆ ತನ್ನ ಮಗನನ್ನೂ ಸಹ ಡ್ರಗ್ಸ್​ನಿಂದ ವಿಮುಕ್ತಿಗೊಳಿಸುವ ಪ್ರಯತ್ನ ನಡೆಸಿದ್ದಾರೆ.

ಬೆಂಗಳೂರಿನ ವಾಲ್ಮೀಕಿ ನಗರದ ಇಕ್ಬಾಲ್ ಪಾಷಾ ಎಂಬುವರು ದುನಿಯಾ ವಿಜಯ್ ನಟಿಸಿರುವ ‘ಭೀಮ’ ಸಿನಿಮಾ ವೀಕ್ಷಿಸಿದ್ದರು. ಸಿನಿಮಾ ನೋಡಿದ ಬಳಿಕ ತಮ್ಮ 20 ವರ್ಷದ ಮಗನ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವರಿಗೆ ಕೆಲ ಅನುಮಾನಗಳು ಬಂದಿವೆ. ಮಗ ಯಾವಾಗಲೂ ಒಬ್ಬನೇ ಇರುತ್ತಾನೆ, ಸದಾ ಮತ್ತಿನಲ್ಲಿರುವಂತೆ ಇರುತ್ತಾನೆ, ಕಣ್ಣುಗಳ ಬಣ್ಣ ಬದಲಾಗಿರುತ್ತದೆ ಇತ್ಯಾದಿಗಳನ್ನು ಗಮನಿಸಿದ್ದ ಇಕ್ಬಾಲ್ ಪಾಷಾ ಮಗನ ಚಲನ ವಲನಗಳ ಮೇಲೆ ಕಣ್ಣಿರಿಸಿದ್ದರು.

ಇದನ್ನೂ ಓದಿ:ವಿನಯ್ ನಟನೆಯ ‘ಪೆಪೆ’ ಸಿನಿಮಾಕ್ಕಾಗಿ ಹರಕೆ ಹೊತ್ತ ನಟ ದುನಿಯಾ ವಿಜಯ್

ಮಗನಿಗೆ ಮಾತ್ರೆ ಹೇಗೆ ಸಿಗುತ್ತಿದೆ ಎಂದು ತಿಳಿಯಲು ಕಾರ್ಯಾಚರಣೆ ಆರಂಭಿಸಿದರು. ವಾಲ್ಮಿಕಿ ದೇವಾಲಯದ ಬಳಿ ಒಬ್ಬರೇ ನಿಂತು ಕೆಲವು ಅನುಮಾನಾಸ್ಪದ ವ್ಯಕ್ತಿಗಳ ಬಳಿ ಮಾತ್ರೆಗಳಿಗಾಗಿ ವಿಚಾರಿಸಿದ್ದಾರೆ. ಆಗ ಒಬ್ಬ ಅಪ್ರಾಪ್ತ ಯುವಕ ‘ನನ್ನ ಬಳಿ ಮಾತ್ರೆ ಇದೆ ಅದನ್ನು ತೆಗೆದುಕೊಂಡರೆ ದೇಹದಾರ್ಢ್ಯ ಹೆಚ್ಚಾಗುತ್ತದೆ ಒಂದು ಮಾತ್ರೆಗೆ 100 ರೂಪಾಯಿ’ ಎಂದಿದ್ದಾರೆ. ಆಗ ಇಕ್ಬಾಲ್, 200 ಕೊಟ್ಟು ಎರಡು ಮಾತ್ರೆ ಖರೀದಿ ಮಾಡಿದ್ದಾರೆ. ಬಳಿಕ ಅದನ್ನು ತೆಗೆದುಕೊಂಡು ಮೆಡಿಕಲ್ ಶಾಪ್​ಗೆ ಹೋಗಿ ವಿಚಾರಿಸಿದಾಗ ಅದು ನೋವಿನ ಮಾತ್ರೆಯಾಗಿದ್ದು ಅದರಲ್ಲಿ ಮತ್ತು ಬರುವ ಅಂಶವಿರುವುದು ಗೊತ್ತಾಗಿದೆ. ಆ ಮಾತ್ರೆಯನ್ನು ನಶೆಗಾಗಿ ಬಳಸುವ ವಿಚಾರವೂ ತಿಳಿದುಕೊಂಡಿದ್ದಾರೆ.

ಕೂಡಲೇ ಚಾಮರಾಜನಗರ ಪೊಲೀಸ್ ಠಾಣೆಗೆ ತೆರಳಿದ ಇಕ್ಬಾಲ್, ತನಗೆ ಮಾತ್ರೆ ಮಾರಾಟ ಮಾಡಿದ ಅಪ್ರಾಪ್ತ ವ್ಯಕ್ತಿ ಹಾಗೂ ಆತನ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಆ ಅಪ್ರಾಪ್ತನನ್ನು ಬಂಧಿಸಿ, ಆತನಿಂದ 180 ಟೈಡಾಲ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?