Nikhil Kumaraswamy: ಕನ್ನಡ ಸರಿಯಾಗಿ ಬರಲ್ವಾ; ತಪ್ಪು ಪದ ಬಳಸಿ ಟ್ರೋಲ್​ ಆದ ನಿಖಿಲ್​ ಕುಮಾರಸ್ವಾಮಿ

ಅನೇಕ ಸ್ಟಾರ್​ಗಳು ಕನ್ನಡವನ್ನು ತಪ್ಪಾಗಿ ಬರೆದು ಅಭಿಮಾನಿಗಳಿಂದ ಪಾಠ ಹೇಳಿಸಿಕೊಂಡಿದ್ದಾರೆ. ನಿಖಿಲ್​ ಕುಮಾರಸ್ವಾಮಿ ವಿಚಾರದಲ್ಲೂ ಈಗ ಅದೇ ಆಗಿದೆ. ಅವರ ಶಬ್ದ ಬಳಕೆ ಪ್ರಯೋಗ ತಪ್ಪಾಗಿದ್ದು, ಸಾಕಷ್ಟು ಟ್ರೋಲ್​ ಆಗುತ್ತಿದ್ದಾರೆ.

Nikhil Kumaraswamy: ಕನ್ನಡ ಸರಿಯಾಗಿ ಬರಲ್ವಾ; ತಪ್ಪು ಪದ ಬಳಸಿ ಟ್ರೋಲ್​ ಆದ ನಿಖಿಲ್​ ಕುಮಾರಸ್ವಾಮಿ
ನಿಖಿಲ್​ ಕುಮಾರಸ್ವಾಮಿ
Follow us
|

Updated on:Apr 11, 2021 | 7:20 PM

ಸೆಲೆಬ್ರಿಟಿಗಳು ಮಾಡುವ ಸಣ್ಣಪುಟ್ಟ ತಪ್ಪುಗಳನ್ನು ಅಭಿಮಾನಿಗಳು ಗಮನಿಸುತ್ತಿರುತ್ತಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಪೋಸ್ಟ್​ಗಳಲ್ಲಿ ಕಾಣಿಸುವ ಚಿಕ್ಕಪುಟ್ಟ ತಪ್ಪುಗಳೂ ಟ್ರೋಲ್​ಗಳಿಗೆ ಆಹಾರವಾಗುತ್ತವೆ. ಈಗ ಈ ಸಾಲಿಗೆ ಕನ್ನಡದ ಖ್ಯಾತ ನಟ ನಿಖಿಲ್​ ಕುಮಾರಸ್ವಾಮಿ ಹೊಸ ಸೇರ್ಪಡೆ. ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಎಡವಟ್ಟಿನಿಂದ ಈಗ ಟ್ರೋಲ್​ ಆಗುತ್ತಿದ್ದಾರೆ.

ಅನೇಕ ಸ್ಟಾರ್​ಗಳು ಕನ್ನಡವನ್ನು ತಪ್ಪಾಗಿ ಬರೆದು ಅಭಿಮಾನಿಗಳಿಂದ ಪಾಠ ಹೇಳಿಸಿಕೊಂಡಿದ್ದಾರೆ. ನಿಖಿಲ್​ ಕುಮಾರಸ್ವಾಮಿ ವಿಚಾರದಲ್ಲೂ ಈಗ ಅದೇ ಆಗಿದೆ. ಅವರ ಶಬ್ದ ಬಳಕೆ ಪ್ರಯೋಗ ತಪ್ಪಾಗಿದ್ದು, ಸಾಕಷ್ಟು ಟ್ರೋಲ್​ ಆಗುತ್ತಿದ್ದಾರೆ.

ರೈಡರ್​ ಚಿತ್ರದ ಶೂಟಿಂಗ್​ಗಾಗಿ ನಿಖಿಲ್​ ಕುಮಾರಸ್ವಾಮಿ ಲಡಾಖ್​​ಗೆ ತೆರಳಿದ್ದಾರೆ. ಬೇಸಿಗೆ ಆದರೂ, ಲಡಾಖ್​​ ಹಿಮಾಚ್ಛಾದಿತವಾಗಿದೆ. ಈ ದೃಶ್ಯಗಳನ್ನು ಕಣ್ತುಂಬಿಕೊಂಡಿರುವ ನಿಖಿಲ್​ ಇದೇ ಖುಷಿಗೆ ಫೋಟೋ ಪೋಸ್ಟ್​ ಮಾಡಿದ್ದಾರೆ. ‘ರೈಡರ್​​ ಚಿತ್ರ ಚಿತ್ರಿಕರಣ ವೇಳೆ ಲೇಹ್ ಲಡಾಖ್​ನಲ್ಲಿ ಕಂಡು ಬಂದ ಅದ್ಭುತ ಮನಮೋಹಕ ದೃಶ್ಯ’ ಎಂದು ಅವರು ಬರೆಯಬೇಕಿತ್ತು. ಆದರೆ, ಅವರು ಬರೆದಿದ್ದೇ ಬೇರೆ. ಮನಮೋಹಕ ಪದದ ಬದಲು ಅವರು ಮನಕಲಕುವ ದೃಶ್ಯ ಎಂದು ಬರೆದಿದ್ದಾರೆ. ಕೆಲವು ಕಡೆ ಕಾಗುಣಿತದ ತಪ್ಪು ಕೂಡ ಆಗಿದೆ.

ಯಾವುದಾದರೂ ದುರಂತ ನಡೆದರೆ ಮನಕಲಕುವ ಎನ್ನುವ ಶಬ್ದ ಪ್ರಯೋಗ ಮಾಡಲಾಗುತ್ತದೆ. ಆದರೆ,ಪ್ರಕೃತಿ ಸೌಂದರ್ಯ ಸವಿಯುತ್ತಾ ನಿಂತಿರುವ ಫೋಟೋಗೆ ಮನಕಲಕುವ ಎನ್ನುವ ಶಬ್ದ ಬಳಕೆ ಮಾಡಿದ್ದು, ಅಭಿಮಾನಿಗಳ ಗಮನಕ್ಕೆ ಬಂದಿದೆ.

ಇದರಲ್ಲಿ ಮನಕಲುಕುವ ದೃಶ್ಯ ಏನಿದೆ ಸಾರ್… ಮನತಣಿಸುವ ದೃಶ್ಯ ಅಲ್ವಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಕೆಲವರು ಸಾರ್ ಅದು ಮನಕಲುಕುವ ದೃಶ್ಯ ಅಲ್ಲ ಮನಮೋಹಕ ದೃಶ್ಯ ಎಂದು ಕಿವಿಮಾತು ಹೇಳಿದ್ದಾರೆ. ಕೆಲವರು ಕನ್ನಡ ಸರಿಯಾಗಿ ಬರಲ್ವ ಸರ್ ಎಂದು ಪ್ರಶ್ನೆ ಮಾಡಿದ್ದಾರೆ.

ಪೋಸ್ಟ್​ ಮಾಡಿದ ಅರ್ಧ ಗಂಟೆ ನಂತರದಲ್ಲಿ ನಿಖಿಲ್​ಗೆ ತಪ್ಪಿನ ಅರಿವಾಗಿದೆ. ‘ರೈಡರ ಚಿತ್ರ ಚಿತ್ರಿಕರಣ ವೇಳೆ ಲೇ ಲಡಾಕನಲ ಕಂಡು ಬಂದಂತ ಅದ್ಭುತ ದೃಶ್ಯ’ ಎಂದು ಆದ ತಪ್ಪನ್ನು ಸರಿಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಸರಿಪಡಿಸುವ ಪ್ರಯತ್ನದಲ್ಲಿಯೂ ಕಾಗುಣಿತದ ದೋಷಗಳು ಅವರ ಗಮನಕ್ಕೆ ಬಂದಿಲ್ಲವಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಏರ್​ಪೋರ್ಟ್ ಚಾಲಕ ಆತ್ಮಹತ್ಯೆ; ಪ್ರತಾಪ್ ಕುಟುಂಬಕ್ಕೆ ಧೈರ್ಯ ತುಂಬಿದ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ

Published On - 6:50 pm, Sun, 11 April 21

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ