AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Modala Male: ಅಬ್ಬಬ್ಬಾ.. ಈ ಹೀರೋಗೆ 9 ಹೀರೋಯಿನ್​; ಜೂನ್​ 23ಕ್ಕೆ ಬರುತ್ತೆ ‘ಮೊದಲ ಮಳೆ’

Sandalwood News: 10 ಹೀರೋಯಿನ್​ ಇಟ್ಕೊಂಡು ಇವರಿಗಾಗಿ ಸಿನಿಮಾ ಮಾಡೋಕೆ ಆಗುತ್ತಾ ಎಂಬ ಮಾತು ಕೆಲವರಿಂದ ಕೇಳಿಬಂದಿತ್ತು. ಅದನ್ನೇ ಸವಾಲಾಗಿ ಸ್ವೀಕರಿಸಿ ‘ಮೊದಲ ಮಳೆ’ ಸಿನಿಮಾ ಮಾಡಲಾಗಿದೆ!

Modala Male: ಅಬ್ಬಬ್ಬಾ.. ಈ ಹೀರೋಗೆ 9 ಹೀರೋಯಿನ್​; ಜೂನ್​ 23ಕ್ಕೆ ಬರುತ್ತೆ ‘ಮೊದಲ ಮಳೆ’
‘ಮೊದಲ ಮಳೆ’ ಕನ್ನಡ ಸಿನಿಮಾದ ಫೋಟೋ
ಮದನ್​ ಕುಮಾರ್​
|

Updated on: Jun 19, 2023 | 8:41 PM

Share

ಕನ್ನಡ ಚಿತ್ರರಂಗದಲ್ಲಿ (Kannada Film Industry) ಡಿಫರೆಂಟ್​ ಕಹಾನಿ ಇರುವ ಸಿನಿಮಾಗಳು ಕೂಡ ಬರುತ್ತವೆ. ಅದಕ್ಕೆ ಲೇಟೆಸ್ಟ್​ ಸೇರ್ಪಡೆ ‘ಮೊದಲ ಮಳೆ’ ಸಿನಿಮಾ. ಹೀರೋ ಎಂದರೆ ಹೀಗೆಯೇ ಇರಬೇಕು ಎಂಬ ಸಿದ್ಧಸೂತ್ರವನ್ನು ಮುರಿದು ಹಾಕುವ ಚಿತ್ರಗಳ ಸಾಲಿಗೆ ಈ ಸಿನಿಮಾ (New Kannada Movie) ಸೇರುತ್ತದೆ. ಯಾವುದೇ ಹುಡುಗಿಯೂ ಇಷ್ಟಪಡದಂತಹ (ವಿ)ರೂಪವಂತ ಯುವಕನೊಬ್ಬ ಮದುವೆಯಾಗಬೇಕು ಎಂದುಕೊಂಡಾಗ ಏನೆಲ್ಲ ನಡೆಯಬಹುದು ಎಂಬ ಕಾನ್ಸೆಪ್ಟ್​ ಇಟ್ಟುಕೊಂಡು ಈ ಸಿನಿಮಾ ಸಿದ್ಧವಾಗಿದೆ. ಬಹಳ ಹಾಸ್ಯಮಯವಾದ ಕಥಾಹಂದರ ‘ಮೊದಲ ಮಳೆ’ (Modala Male Movie) ಸಿನಿಮಾದಲ್ಲಿ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾದಲ್ಲಿ ರಾಜಾ ನರಸಿಂಹ ಹೀರೋ ಆಗಿ ನಟಿಸಿದ್ದಾರೆ. ಅವರ ಜೊತೆ ಒಂಬತ್ತು ನಾಯಕಿಯರು ನಟಿಸಿದ್ದಾರೆ.

‘ಮೊದಲ ಮಳೆ’ ಸಿನಿಮಾ ಜೂನ್​ 23ರಂದು ಬಿಡುಗಡೆ ಆಗಲಿದೆ. ಟೈಟಲ್​ ನೋಡಿದರೆ ಇದೊಂದು ಲವ್​ ಸ್ಟೋರಿ ಎನಿಸಬಹುದು. ಆದರೆ ಈ ಸಿನಿಮಾದಲ್ಲಿ ಮರ್ಡರ್ ಮಿಸ್ಟ್ರಿ, ಕಾಮಿಡಿ, ಹಾರರ್ ಕಥಾಹಂದರ ಕೂಡ ಇದೆ. ರಾಜಾ ನರಸಿಂಹ ಅವರು ನಾಯಕನಾಗಿ ನಟಿಸುವುದರ ಜೊತೆಗೆ ಬಂಡವಾಳವನ್ನೂ ಹೂಡಿದ್ದಾರೆ. ರಾಜಾ ನರಸಿಂಹ ಜೊತೆ ಮಮತಾ ಗೌಡ, ಸಾಹಿತ್ಯ, ಉಷಾ, ಪ್ರಿಯಾ ಶೆಟ್ಟಿ ಸೇರಿದಂತೆ 9 ನಾಯಕಿಯರಾಗಿ ನಟಿಸಿದ್ದಾರೆ ಎಂಬುದು ವಿಶೇಷ.

ರಾಜ್​ ಶರಣ್ ಅವರು ‘ಮೊದಲ ಮಳೆ’ ಸಿನಿಮಾಗೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಸಿನಿಮಾದ ಕುರಿತು ನಾಯಕ ರಾಜಾ ನರಸಿಂಹ ಅವರು ಮಾತನಾಡಿದ್ದಾರೆ. ‘ನಾನು ರೈತನ ಮಗ. ನಟ ಆಗಬೇಕು ಎಂಬುದು ನನ್ನ ಬಹುದಿನಗಳ ಕನಸು. ಈ ಸಿನಿಮಾವನ್ನು ನಾನೇ ನಿರ್ಮಾಣ ಮಾಡಿದ್ದೇನೆ. ಅದರ ಜೊತೆಗೆ ಹಿರೋ ಆಗಿಯೂ ಅಭಿನಯಿಸಿದ್ದೇನೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಹಳ್ಳಿಯಿಂದ ನಗರಕ್ಕೆ ಬರುವ ನಾಯಕ ಜವರಾಯ ಕೊನೆಗೆ ಏನಾಗುತ್ತಾನೆ ಎಂಬುದೇ ಈ ಸಿನಿಮಾದ ಕಥೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  ‘ಕೊರಗಜ್ಜ’ ಚಿತ್ರಕ್ಕೆ ಹಾಲಿವುಡ್​ ತಂತ್ರಜ್ಞರಿಂದ ಗ್ರಾಫಿಕ್ಸ್​ ಕೆಲಸ; 3 ಬಾರಿ ನಡೆಯಿತು ಕ್ಲೈಮ್ಯಾಕ್ಸ್​ ಚಿತ್ರೀಕರಣ

ಈ ಹಿಂದೆ ‘ಎಮ್ಮೆ ತಮ್ಮ’ ಎಂಬ ಚಿತ್ರ ನಿರ್ದೇಶಿಸಿದ್ದ ರಾಜ್​ ಶರಣ್ ಅವರು ಈಗ ‘ಮೊದಲ ಮಳೆ’ ಸಾರಥ್ಯ ವಹಿಸಿದ್ದಾರೆ. ‘ರಾಜಾ ನರಸಿಂಹ ಅವರು ನಮ್ಮ ಸ್ನೇಹಿತರು. ಅವರಿಗಾಗಿಯೇ ಒಂದು ಕಥೆ ಮಾಡಿದೆ. ಆ ಸಿನಿಮಾ ಆಗಲಿಲ್ಲ. ಇವರಿಗೇನು 10 ಹೀರೋಯಿನ್ ಇಟ್ಕೊಂಡು ಸಿನಿಮಾ ಮಾಡೋಕೆ ಆಗುತ್ತಾ ಎನ್ನುವ ಮಾತು ಕೆಲವರಿಂದ ಕೇಳಿಬಂತು. ಯಾಕೆ ಆಗಲ್ಲ ಅಂತ ಅದನ್ನೇ ಚಾಲೆಂಜ್ ಆಗಿ ತಗೊಂಡು ಈ ಸಿನಿಮಾ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Neha Shetty: ಮತ್ತೇ ಕನ್ನಡ ಸಿನಿಮಾದಲ್ಲಿ ʼಮುಂಗಾರು ಮಳೆ 2ʼ ಬೆಡಗಿ?

‘ಯಾವುದೇ ವ್ಯಕ್ತಿಯ ಬದುಕಿನಲ್ಲಿ ಮದುವೆ ಎನ್ನುವುದು ಮೊದಲ ಮಳೆ ಇದ್ದಂತೆ. ಈ ಸಿನಿಮಾದ ಕಥಾನಾಯಕನ ಜೀವನದಲ್ಲೂ ಮೊದಲ ಮಳೆ ಆಗುತ್ತಾ ಅಥವಾ ಇಲ್ಲವಾ ಅನ್ನೋದೇ ಈ ಚಿತ್ರದ ಕಥೆ. ಮಡಿಕೇರಿ, ಸಕಲೇಶಪುರ, ಮೈಸೂರು, ಬೆಂಗಳೂರು ಸುತ್ತಮುತ್ತ 40 ದಿನ ಶೂಟಿಂಗ್​ ಮಾಡಿದ್ದೇವೆ. ಹಾರರ್ ಸನ್ನಿವೇಶಗಳು ಇರುವ ಕಾರಣದಿಂದ ನಮ್ಮ ಸಿನಿಮಾಗೆ ಯು/ಎ ಪ್ರಮಾಣಪತ್ರ ಸಿಕ್ಕಿದೆ’ ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ. ಗಣೇಶ್​ ರಾವ್, ಜ್ಯೋತಿ ಮರೂರು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಸನ್ನ ಭೋಜ ಶೆಟ್ಟರ್ ಅವರು ಸಂಗೀತ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್