ಪುನೀತ್​ ನಿಧನಕ್ಕೂ 15-20 ನಿಮಿಷ ಮುನ್ನ ನಿಜಕ್ಕೂ ಏನು ನಡೆಯಿತು? ಇಲ್ಲಿದೆ ಕಾರು ಚಾಲಕ ತೆರೆದಿಟ್ಟ ವಿವರ

| Updated By: ಮದನ್​ ಕುಮಾರ್​

Updated on: Nov 02, 2021 | 3:20 PM

Puneeth Rajkumar: ಅ.29ರ ಬೆಳಗ್ಗೆ ಪುನೀತ್​ ರಾಜ್​ಕುಮಾರ್​ ಅವರ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಆ ಸಮಯದಲ್ಲಿ ಅವರ ಜೊತೆಯಲ್ಲಿ ಇದ್ದವರು ಕೆಲವೇ ಕೆಲವು ಮಂದಿ ಮಾತ್ರ. ಆ ಪೈಕಿ ಕಾರು ಚಾಲಕ ಬಾಬು ಕೂಡ ಒಬ್ಬರು.

ಪುನೀತ್​ ನಿಧನಕ್ಕೂ 15-20 ನಿಮಿಷ ಮುನ್ನ ನಿಜಕ್ಕೂ ಏನು ನಡೆಯಿತು? ಇಲ್ಲಿದೆ ಕಾರು ಚಾಲಕ ತೆರೆದಿಟ್ಟ ವಿವರ
ಪುನೀತ್​ ರಾಜ್​ಕುಮಾರ್​
Follow us on

ಫಿಟ್ನೆಸ್ ಬಗ್ಗೆ​ ಅತಿ ಹೆಚ್ಚು ಕಾಳಜಿ ವಹಿಸುತ್ತಿದ್ದ ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಹೃದಯಾಘಾತ ಆಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಅನೇಕರ ಮನದಲ್ಲಿ ಕಾಡುತ್ತಿದೆ. ಅ.29ರಂದು ಇಡೀ ಕರುನಾಡಿನ ಪಾಲಿಗೆ ಕರಾಳ ದಿನ. ಅಂದು ಬೆಳಗ್ಗೆ ಜಿಮ್​ನಲ್ಲಿ ವರ್ಕೌಟ್​ ಮಾಡುವಾಗ ಪುನೀತ್​ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು ಎಂಬ ಮಾಹಿತಿ ಕೇಳಿಬಂತು. ಅದಾದ ಬಳಿಕ ಅವರ ಜೊತೆಯಲ್ಲಿ ಇದ್ದವರು ಕೆಲವೇ ಕೆಲವು ಮಂದಿ ಮಾತ್ರ. ಆ ಪೈಕಿ ಕಾರು ಚಾಲಕ ಬಾಬು ಕೂಡ ಒಬ್ಬರು. ಅಂದು ನಿಜಕ್ಕೂ ಏನಾಯ್ತು ಎಂಬುದನ್ನು ಅವರು ವಿವರಿಸಿದ್ದಾರೆ.

ಮನೆಯಲ್ಲಿದ್ದಾಗ ಪುನೀತ್​ ಆರೋಗ್ಯದಲ್ಲಿ ವ್ಯತ್ಯಯ ಉಂಟಾದಾಗ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆ ಘಟನೆಯ ಸಿಸಿಟಿವಿ ದೃಶ್ಯ ಕೂಡ ಲಭ್ಯವಾಗಿದೆ. ಆ ಸಂದರ್ಭದ ಬಗ್ಗೆ ಕಾರು ಚಾಲಕ ಬಾಬು ಪ್ರತಿಕ್ರಿಯೆ ನೀಡಿದ್ದಾರೆ. ‘ಐದೇ ನಿಮಿಷದಲ್ಲೇ ಮನೆಯಿಂದ ಆಸ್ಪತ್ರೆಗೆ ಹೋಗಿದ್ದೆವು. ಡಾ. ರಮಣ ರಾವ್​ ಅವರ ಕ್ಲಿನಿಕ್​ಗೆ ಹೋಗಿದ್ದೆವು. ಕಾರಿನಲ್ಲಿ ಹೋಗುವಾಗಲೂ ಪುನೀತ್​ ಅವರು ಮೊಬೈಲ್​ನಲ್ಲಿ ಮಾತಾಡುತ್ತಿದ್ದರು. ‘ಭಜರಂಗಿ 2’ ಸಿನಿಮಾದ ರೆಸ್ಪಾನ್ಸ್ ಬಗ್ಗೆ ಫಿಲ್ಮ್ ಡಿಸ್ಟ್ರಿಬ್ಯೂಟರ್ ಮಂಜುನಾಥ್ ಜತೆ ಮಾತಾಡ್ತಿದ್ರು’ ಎಂದು ಬಾಬು ಹೇಳಿದ್ದಾರೆ.

‘ಡಾ. ರಮಣ ರಾವ್ ಕ್ಲಿನಿಕ್​ನಿಂದ ಕೇವಲ 10 ನಿಮಿಷಕ್ಕೆ ವಿಕ್ರಂ ಆಸ್ಪತ್ರೆ ಹೋದೆವು. ಅಲ್ಲಿಗೆ ತಲುಪುವಷ್ಟರಲ್ಲಿ ಪುನೀತ್ ಸುಸ್ತಾಗಿಬಿಟ್ಟಿದ್ದರು’ ಎಂದು ಬಾಬು ವಿವರಿಸಿದ್ದಾರೆ. ಅಂದರೆ ನಿಧನರಾಗುವುದಕ್ಕೂ 15-20 ನಿಮಿಷಗಳ ಮುನ್ನ ಪುನೀತ್​ ಚೆನ್ನಾಗಿ ಇದ್ದರು. ಅಣ್ಣ ಶಿವರಾಜ್​ಕುಮಾರ್​ ನಟನೆಯ ಸಿನಿಮಾಗೆ ಯಾವ ರೀತಿಯ ರೆಸ್ಪಾನ್ಸ್​ ಸಿಗುತ್ತಿದೆ ಎಂಬುದನ್ನು ಫೋನ್​ ಮಾಡಿ ತಿಳಿದುಕೊಳ್ಳುವಷ್ಟರಮಟ್ಟಿಗೆ ಅವರು ಆ್ಯಕ್ಟೀವ್​ ಆಗಿದ್ದರು. ಆದರೆ ಏಕಾಏಕಿ ಸಾವು ಸಂಭವಿಸಿದ್ದು ಮಾತ್ರ ವಿಪರ್ಯಾಸ.

ಪುನೀತ್​ ನಿಧನರಾಗಿ 5 ದಿನ ಕಳೆದಿದೆ. ಆ ಪ್ರಯುಕ್ತ ಡಾ. ರಾಜ್​ಕುಮಾರ್​ ಕುಟುಂಬದವರು ಕಂಠೀರವ ಸ್ಡುಡಿಯೋದಲ್ಲಿ ಇರುವ ಅಪ್ಪು ಸಮಾಧಿಗೆ ಹಾಲು-ತುಪ್ಪ ಬಿಡುವ ಕಾರ್ಯ ನೆರವೇರಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ದೂರದ ಊರುಗಳಿಂದ ಬಂದು ಸಮಾಧಿ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸದ್ಯಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಶೀಘ್ರದಲ್ಲೇ ಅವಕಾಶ ಕೊಡುತ್ತೇವೆ ಎಂದು ರಾಜ್​ ಕುಟುಂಬದವರು ಹೇಳಿದ್ದಾರೆ. ಕಂಠೀರವ ಸ್ಟುಡಿಯೋ ಎದುರು ಬಂದು ಕಾಯುತ್ತಿರುವ ಪುನೀತ್​ ಅಭಿಮಾನಿಗಳ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ:

Puneeth Rajkumar: ‘ಪುನೀತ್​ ಅತಿಯಾಗಿ ಜಿಮ್​ ಮಾಡಿದ್ರು’: ಕರಾಳ ಶುಕ್ರವಾರದ ಘಟನೆ ವಿವರಿಸಿದ ಸೆಕ್ಯೂರಿಟಿ ಸಿಬ್ಬಂದಿ

Puneeth Rajkumar: ಪುನೀತ್​ ಬಗ್ಗೆ ಅವಹೇಳನಕಾರಿ ಪೋಸ್ಟ್​ ಮಾಡಿದ್ದ ವ್ಯಕ್ತಿ ಅರೆಸ್ಟ್​; ಸೈಬರ್​ ಪೊಲೀಸರ ಬಲೆಗೆ ಬಿದ್ದ ಕಿಡಿಗೇಡಿ