AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ರಾಧಿಕಾ ಕುಮಾರಸ್ವಾಮಿ ಅಡ್ವಾನ್ಸ್ ತೆಗೆದುಕೊಂಡಿದ್ದ ಸಿನಿಮಾಕ್ಕೆ ಟೈಟಲ್ ರಿಜಿಸ್ಟ್ರೇಷನ್ ಆಗಿತ್ತಾ?

ನಟಿ ರಾಧಿಕಾ ಕುಮಾರಸ್ವಾಮಿ ಸಿನಿಮಾ ಮಾಡಲು ಲಕ್ಷ ಲಕ್ಷ ಹಣವನ್ನು ಪಡೆದಿದ್ದು ಸಿನಿಮಾ ಹೆಸರು ನಾಟ್ಯ ರಾಣಿ ಶಾಂತಲಾ ಎನ್ನೊದು ಬಿಟ್ಟು ಬೇರೆನು ಅವರಿಗೆ ಗೊತ್ತಿಲ್ಲವಂತೆ. ನಾಟ್ಯರಾಣಿ ಶಾಂತಲಾ ಸಿನಿಮಾ ಟೈಟಲ್ ರಿಜಿಸ್ಟ್ರೇಷನ್ ಮಾಡಿಸದೇ ಲಕ್ಷ ಲಕ್ಷ ಅಡ್ವಾನ್ಸ್ ಪಡೆದಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ನಟಿ ರಾಧಿಕಾ ಕುಮಾರಸ್ವಾಮಿ ಅಡ್ವಾನ್ಸ್ ತೆಗೆದುಕೊಂಡಿದ್ದ ಸಿನಿಮಾಕ್ಕೆ ಟೈಟಲ್ ರಿಜಿಸ್ಟ್ರೇಷನ್ ಆಗಿತ್ತಾ?
ನಟಿ ರಾಧಿಕಾ ಕುಮಾರಸ್ವಾಮಿ
ಆಯೇಷಾ ಬಾನು
| Edited By: |

Updated on:Jan 08, 2021 | 1:30 PM

Share

ಬೆಂಗಳೂರು: ಅಣ್ಣ-ತಂಗಿ ಸಿನಿಮಾ ಖ್ಯಾತಿಯ ನಟಿ ರಾಧಿಕಾ ಕುಮಾರಸ್ವಾಮಿ ಅಕ್ರಮ ಹಣ ಪಡೆದ ಆರೋಪವೊಂದನ್ನು ಎದುರಿಸುತ್ತಿದ್ದಾರೆ. ಈ ಪ್ರಕರಣವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದರ ಜೊತೆಗೆ ಮತ್ತೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಅದುವೇ ಪ್ರಸ್ತಾವಿತ ನಾಟ್ಯ ರಾಣಿ ಶಾಂತಲಾ ಸಿನಿಮಾಕ್ಕೆ ಟೈಟಲ್ ರಿಜಿಸ್ಟ್ರೇಷನ್ ಆಗಿತ್ತಾ? ಎಂಬುದು ಸದ್ಯದ ಪ್ರಶ್ನೆ. ರಿಜಿಸ್ಟ್ರೇಷನ್ ಮಾಡಿಸದೆಯೇ ಅವರು ಲಕ್ಷ ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದಾರೆ ಎಂಬ ಮಾತು ಇದೀಗ ಚರ್ಚೆಯನ್ನು ಹುಟ್ಟುಹಾಕಿದೆ.

ಒಬ್ಬ ನಟಿ ಅಥವಾ ನಟ ಯಾವುದೇ ಸಿನಿಮಾ ಮಾಡಿದ್ರು ಮೊದಲು ಅದರ ಆಯ್ಕೆಯಲ್ಲಿ ಹೆಚ್ಚಿನ ಗಮನವಹಿಸುತ್ತಾರೆ. ಯಾಕಂದ್ರೆ ಒಂದು ಒಳ್ಳೆಯ ಸಿನಿಮಾ ಅವರ ಬದುಕನ್ನೇ ಬದಲಾಯಿಸಬಹುದು. ಹಾಗಾಗಿ ಕಥೆ, ನಿರ್ದೇಶನ, ಚಿತ್ರ ತಂಡ ಎಲ್ಲವನ್ನು ನೋಡಿ ಸಿನಿಮಾ ಮಾಡಬೇಕಾ, ಬೇಡವಾ ಎಂಬ ನಿರ್ಧಾರವನ್ನು ಮಾಡ್ತಾರೆ.

ಆದ್ರೆ ನಟಿ ರಾಧಿಕಾ ಕುಮಾರಸ್ವಾಮಿ ಸಿನಿಮಾ ಮಾಡಲು ಲಕ್ಷ ಲಕ್ಷ ಹಣವನ್ನು ಪಡೆದಿದ್ದು ಸಿನಿಮಾ ಹೆಸರು ನಾಟ್ಯ ರಾಣಿ ಶಾಂತಲಾ ಅನ್ನೋದು ಬಿಟ್ಟು ಬೇರೇನೂ ಅವರಿಗೆ ಗೊತ್ತಿಲ್ಲವಂತೆ. ಈ ಸಿನಿಮಾಗೆ ನಿರ್ದೇಶಕರು ಯಾರು, ಚಿತ್ರ ತಂಡ ಯಾವುದು, ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬ ಯಾವ ಮಾಹಿತಿ ಇಲ್ಲದಿದ್ದರೂ ಸಿನಿಮಾಗಾಗಿ ಹಣ ಪಡೆದಿದ್ದಾರೆ. ಹೀಗಾಗಿ ಈ ಕೇಸ್ ಹಲವು ಅನುಮಾನಗಳಿಗೆ ಎಡ ಮಾಡಿಕೊಟ್ಟಿದೆ.

ರಿಜಿಸ್ಟ್ರೇಷನ್ ಮಾಡಿಸದೇ ಲಕ್ಷ ಲಕ್ಷ ಅಡ್ವಾನ್ಸ್: ಇನ್ನು ನಾಟ್ಯ ರಾಣಿ ಶಾಂತಲಾ ಸಿನಿಮಾವನ್ನು ರಿಜಿಸ್ಟ್ರೇಷನ್ ಸಹ ಮಾಡಿಸಿಲ್ಲವಂತೆ. ರಿಜಿಸ್ಟ್ರೇಷನ್ ಮಾಡಿಸದೆಯೂ,  ಜೊತೆಗೆ ಅಗ್ರಿಮೆಂಟ್ ಇಲ್ಲದೆ ಬಾಯಿ ಮಾತಿನಲ್ಲೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. 75 ಲಕ್ಷ ಹಣವನ್ನು ಪಡೆದಿದ್ದಾರೆ.

ನಿರ್ಮಾಪಕನ ಭೇಟಿ ಮಾಡದೆಯೂ ಹಣ ಪಡೆದ್ರಾ ರಾಧಿಕಾ.. ಸಿನಿಮಾ ಮಾಡುವ ನೆಪದಲ್ಲಿ ರಾಧಿಕಾ ಕುಮಾರಸ್ವಾಮಿ ಒಟ್ಟು 75 ಲಕ್ಷ ಹಣ ಪಡೆದಿದ್ದಾರೆ. ಅದರೆ ಈ ಹಣದ ಪೈಕಿ ಅವರ ಅಕೌಂಟ್​ನಲ್ಲಿ 60 ಲಕ್ಷ ಹಣ ವರ್ಗಾವಣೆಯಾಗಿತ್ತು. ಆದ್ರೆ ಆ ಹಣ ಕೊಟ್ಟ ವ್ಯಕ್ತಿ ಯಾರು ಅನ್ನೋದೂ ಗೊತ್ತಿಲ್ಲವಂತೆ. ಹಾಗಾದ್ರೆ ಗೊತ್ತಿಲ್ಲದ ವ್ಯಕ್ತಿಯಿಂದ ಹಣ ಪಡೆದು ಒಂಬತ್ತು ತಿಂಗಳು ಸುಮ್ಮನೆ ಇದ್ರಾ ಸದರಿ ನಟಿ ಮಣಿ ಎಂಬ ಪ್ರಶ್ನೆಯೂ ಚಿತ್ರಪ್ರೇಮಿಗಳಲ್ಲಿ ಗಾಢವಾಗಿ ಕಾಡುತ್ತಿದೆ.

ಜೊತೆಗೆ ರಾಧಿಕಾ ಕುಮಾರಸ್ವಾಮಿ ಒಂದು ಸಿನಿಮಾಗೆ ಈಗಾಗಲೆ 75 ಲಕ್ಷ ಅಡ್ವಾನ್ಸ್ ಪಡೆದಿದ್ದಾರೆ ಅಂತಾದರೆ.. ಫುಲ್​ ಸಂಭಾವನೆ ಎಷ್ಟು ಇರಬಹುದು? ಈ ಪ್ರಶ್ನೆಗೆ ಕನ್ನಡ ಸಿನಿ ರಂಗ ಹೇಳೋದು ಕನ್ನಡದಲ್ಲಿ ಒರ್ವ ನಟಿಗೆ ಅತಿಹೆಚ್ಚು ಅಂದ್ರೆ 40 ಲಕ್ಷ ಪೇಮೆಂಟ್ ಕೊಡಬಹುದಂತೆ. ಅದ್ರೆ ಇಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅಡ್ವಾನ್ಸ್ ಅಗಿ 75 ಲಕ್ಷ ಹಣ ಪಡೆದಿರೊದು ಅನುಮಾನವನ್ನು ಹೆಚ್ಚಾಗಿಸಿದೆ.

ರಾಧಿಕಾ ಕುಮಾರಸ್ವಾಮಿಗೆ ಬಂತು CCB ಬುಲಾವ್, ನಾಳೆಯೇ ವಿಚಾರಣೆ

Published On - 1:29 pm, Fri, 8 January 21

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ