AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಡಿಸಿಕೊಂಡು ಮೋಸ ಮಾಡಿದ್ರು, ಕನ್ನಡ ಪ್ಯಾನ್ ಇಂಡಿಯಾ ನಿರ್ದೇಶಕನ ಮೇಲೆ ನಟ ಗರಂ

Raghuram: ನಟ, ನಿರ್ದೇಶಕ ರಘುರಾಮ್, ಇತ್ತೀಚೆಗೆ ಬಿಡುಗಡೆ ಆದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ತಮ್ಮನ್ನು 45 ದಿನಗಳ ಕಾಲ ದುಡಿಸಿಕೊಂಡು ಹೊರಗೆ ಹಾಕಿ ಅವಮಾನ ಮಾಡಿರುವ ಬಗ್ಗೆ ಮಾತನಾಡಿದ್ದಾರೆ.

ದುಡಿಸಿಕೊಂಡು ಮೋಸ ಮಾಡಿದ್ರು, ಕನ್ನಡ ಪ್ಯಾನ್ ಇಂಡಿಯಾ ನಿರ್ದೇಶಕನ ಮೇಲೆ ನಟ ಗರಂ
ರಘುರಾಮ್
Follow us
ಮಂಜುನಾಥ ಸಿ.
|

Updated on:Apr 18, 2023 | 8:36 PM

ಜೋಗಿ (Jogi) ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ಸಹ ನಟನಾಗಿ, ಹಾಸ್ಯ ಪಾತ್ರಗಳಲ್ಲಿ ನಟಿಸಿರುವ ಹಾಗೂ ಸಿನಿಮಾ ನಿರ್ದೇಶನ ಸಹ ಮಾಡಿರುವ ರಘುರಾಮ್ (Raghu Ram), ಇದೀಗ ಫುಲ್​ಟೈಮ್ ನಟನೆ ಜೊತೆಗೆ ಯೂಟ್ಯೂಬ್ ಚಾನೆಲ್ (YouTube Chanel)​ ಒಂದರ ಮೂಲಕ ಸಿನಿಮಾ ರಂಗದ ಹಿರಿಯರ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ಯೂಟ್ಯೂಬ್ ಚಾನೆಲ್​ನಲ್ಲಿ ತಮ್ಮದೇ ಸಂದರ್ಶನ ಪ್ರಕಟಿಸಿರುವ ರಘುರಾಮ್, ಇತ್ತೀಚೆಗೆ ಬಿಡುಗಡೆ ಆದ ಪ್ಯಾನ್ ಇಂಡಿಯಾ (Pan India) ಸಿನಿಮಾ ಒಂದು ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿತು ಎಂದು ಆರೋಪ ಮಾಡಿದ್ದಾರೆ.

”ಇತ್ತೀಚೆಗೆ ಬಿಡುಗಡೆ ಆದ ಸೋ ಕಾಲ್ಡ್ ಪ್ಯಾನ್ ಇಂಡಿಯಾ ಸಿನಿಮಾದಿಂದ ಆದ ಕೆಟ್ಟ ಅನುಭವದ ಬಗ್ಗೆ ಹೇಳಲೇ ಬೇಕು, ಆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನನ್ನನ್ನು 45 ದಿನಗಳ ಕಾಲ ದುಡಿಸಿಕೊಂಡಿದ್ದಾರೆ. ಒಂದಿಷ್ಟು ಸಂಭಾವನೆಯನ್ನೂ ನನಗೆ ಕೊಟ್ಟರು, ಆದರೆ ನನ್ನನ್ನು ಕೇಳದೆ, ನನಗೆ ಹೇಳದೆ ಆ ಸಿನಿಮಾದಿಂದ ನನ್ನನ್ನು ಕಿತ್ತೊಗೆದರು. ಆ ಸಿನಿಮಾದಲ್ಲಿ ಎಲ್ಲೊ ಒಂದು ದೃಶ್ಯದಲ್ಲಿ ಹೀಗೆ ಬಂದು ಹಾಗೆ ಹೋಗ್ತೀನಂತೆ, ನಾನಿನ್ನೂ ಆ ಸಿನಿಮಾ ನೋಡಿಲ್ಲ. ನೋಡುವ ಇಷ್ಟವೂ ಇಲ್ಲ” ಎಂದಿದ್ದಾರೆ ರಘುರಾಮ್.

”ಅವರೆಲ್ಲ ದೊಡ್ಡ ನಿರ್ದೇಶಕರು, ಪ್ಯಾನ್ ಇಂಡಿಯಾ ಡೈರೆಕ್ಟರ್​ಗಳು, ಅವರು ನನಗೆ ಕಳಿಸಿರುವ ವಾಟ್ಸ್​ಆಪ್​ ಮೆಸೇಜ್​ಗಳು ನನ್ನ ಬಳಿ ಇವೆ. ಇದು ಏಕೆ ಹೇಳಬೇಕಾಯಿತು ಎಂದರೆ, ಅವರು ನನಗೆ ಮಾಡಿರುವುದು ಅವಮಾನ, ನಾನೇನು ದೊಡ್ಡ ನಟನಲ್ಲ, ದೊಡ್ಡ ನಿರ್ದೇಶಕ ಅಲ್ಲ, ನನ್ನನ್ನು ಕರೆದು ಪಾತ್ರ ಕೊಟ್ರಿ, ಪಾತ್ರ ಮಾಡಿದೆ. ರಾತ್ರಿ-ಹಗಲು ಎನ್ನದೆ ಆ ಸಿನಿಮಾಕ್ಕಾಗಿ ಕೆಲಸ ಮಾಡಿದ್ದೇನೆ. ಗೆಟಪ್​ಗಳನ್ನು ಹಾಕಿದಿರಿ, ವಿಗ್ ಹಾಕಿದಿರಿ ಹಾಕಿಸಿಕೊಂಡೆ, ಮುಖಕ್ಕೆ ಕಪ್ಪು ಬಳಿದುಕೊಂಡು ನಟಿಸಿದೆ. ಕೆಸರಲ್ಲಿ ಇಳಿಸಿದರು, ಇಳಿದೆ, ಟೈರ್ ಸುಟ್ಟೆ ಯಾವುದೇ ಚಕಾರ ಎತ್ತದೆ ನಟಿಸಿದೆ. ಬೆಳಿಗ್ಗೆ 9ಕ್ಕೆ ಹೋಗಿ ರಾತ್ರಿ 2 ಕ್ಕೆ ಬರುತ್ತಿದ್ದೆ. ಇಷ್ಟೆಲ್ಲ ಆದರೂ ನನ್ನ ಪಾತ್ರವನ್ನು ತೆಗೆಯುವ ಮುಂಚೆ ನನಗೆ ಒಂದು ಮಾತು ಹೇಳಬೇಕು ಎನಿಸಲಿಲ್ಲವಾ” ಎಂದು ರಘುರಾಮ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:25 ದಿನ ಪೂರೈಸಿದ ಕಬ್ಜ, ಸಿನಿಮಾದ ಯಶ್ಸನ್ನು ಆರ್.ಚಂದ್ರು ಅರ್ಪಿಸಿದ್ದು ಯಾರಿಗೆ?

”ನೀವು ಬಹಳ ದೊಡ್ಡ ತಪ್ಪು ಮಾಡಿದ್ದೀರಿ. ನನಗೆ ಮಾತ್ರ ಅಲ್ಲ, ಯಾರಿಗೆ ಆದರೂ ಕರೆದು ಪಾತ್ರ ಮಾಡಿಸಿ ಆ ನಂತರ ಹೀಗೆ ಅವಮಾನ ಮಾಡಬೇಡಿ. ನಾನು ನಿಮ್ಮ ಸಿನಿಮಾದಲ್ಲಿ ನಟಿಸುವಾಗ ನನಗೆ ಬಿಗ್​ಬಾಸ್ ಆಫರ್ ಬಂತು. ಒಳ್ಳೆಯ ಸಂಭಾವನೆ ಕೊಡುವುದಾಗಿ ಸಹ ಹೇಳಿದ್ದರು. ಆದರೆ ನಾನು ಮೂರು ತಿಂಗಳು ಅಲ್ಲಿಗೆ ಹೋದರೆ ಸಿನಿಮಾಕ್ಕೆ ಸಮಸ್ಯೆ ಆಗುತ್ತದೆ ಎಂದು ನಾನು ಹೋಗಲಿಲ್ಲ. ಇದು ನಿಮಗೂ ಗೊತ್ತು. ಇಷ್ಟೆಲ್ಲ ನಾನು ಸಿನಿಮಾಕ್ಕೆ ಮಾಡಿರುವಾಗ ನನ್ನನ್ನು ಒಂದು ಮಾತು ಕೇಳದೆ ನನ್ನನ್ನು ಕಡೆಗಣಸಿದ್ದು, ನೀವು ನನಗೆ ಮಾಡಿರುವ ಅವಮಾನ”ಎಂದಿದ್ದಾರೆ ರಘುರಾಮ್.

ಒಬ್ಬ ನಿರ್ದೇಶಕ, ನಿರ್ಮಾಪಕ ಯಾರಿಗೇ ಆದರೂ ಈ ರೀತಿಯ ಕಾರ್ಯ ಶೋಭೆ ತರುವುದಿಲ್ಲ. ನೀವು ನಾಳೆ ಪ್ಯಾನ್ ವರ್ಲ್ಡ್ ಸಿನಿಮಾ ಮಾಡಿದರೂ ಸರಿ ನನಗೆ ಈಗ ಮಾಡಿರುವಂತೆ ಇನ್ಯಾರಿಗೂ ಅವಮಾನ ಮಾಡಬೇಡಿ. ಇದು ಸರಿಯಾದ ಕ್ರಮವಲ್ಲ ಎಂದು ರಘುರಾಮ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:35 pm, Tue, 18 April 23

5 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದ ದಿಗ್ವೇಶ್ ರಾಥಿ
5 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದ ದಿಗ್ವೇಶ್ ರಾಥಿ
ಸೈಪ್ರಸ್​​ನ ಐತಿಹಾಸಿಕ ಭೇಟಿ ಮುಗಿಸಿ ಕೆನಡಾಕ್ಕೆ ಹೊರಟ ಭಾರತದ ಪ್ರಧಾನಿ ಮೋದಿ
ಸೈಪ್ರಸ್​​ನ ಐತಿಹಾಸಿಕ ಭೇಟಿ ಮುಗಿಸಿ ಕೆನಡಾಕ್ಕೆ ಹೊರಟ ಭಾರತದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಇಂದು ಒಂದೇ ದಿನದಲ್ಲಿ 103 ಬೈಕ್​ ಟ್ಯಾಕ್ಸಿ ಸೀಜ್!
ಬೆಂಗಳೂರಿನಲ್ಲಿ ಇಂದು ಒಂದೇ ದಿನದಲ್ಲಿ 103 ಬೈಕ್​ ಟ್ಯಾಕ್ಸಿ ಸೀಜ್!
ಹ್ಯಾನ್ಲೆಯಲ್ಲಿ ಮಿನಿ ತಾರಾಲಯಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ಹ್ಯಾನ್ಲೆಯಲ್ಲಿ ಮಿನಿ ತಾರಾಲಯಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ
ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ
ಧುಮ್ಮುಕ್ಕುತ್ತಿರುವ ವಿಶ್ವ ವಿಖ್ಯಾತ ಜಲಪಾತ, ಜೋಗದ ಸಿರಿಯ ನಯನ ಮನೋಹರ ದೃಶ್ಯ
ಧುಮ್ಮುಕ್ಕುತ್ತಿರುವ ವಿಶ್ವ ವಿಖ್ಯಾತ ಜಲಪಾತ, ಜೋಗದ ಸಿರಿಯ ನಯನ ಮನೋಹರ ದೃಶ್ಯ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ