AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಡಿಸಿಕೊಂಡು ಮೋಸ ಮಾಡಿದ್ರು, ಕನ್ನಡ ಪ್ಯಾನ್ ಇಂಡಿಯಾ ನಿರ್ದೇಶಕನ ಮೇಲೆ ನಟ ಗರಂ

Raghuram: ನಟ, ನಿರ್ದೇಶಕ ರಘುರಾಮ್, ಇತ್ತೀಚೆಗೆ ಬಿಡುಗಡೆ ಆದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ತಮ್ಮನ್ನು 45 ದಿನಗಳ ಕಾಲ ದುಡಿಸಿಕೊಂಡು ಹೊರಗೆ ಹಾಕಿ ಅವಮಾನ ಮಾಡಿರುವ ಬಗ್ಗೆ ಮಾತನಾಡಿದ್ದಾರೆ.

ದುಡಿಸಿಕೊಂಡು ಮೋಸ ಮಾಡಿದ್ರು, ಕನ್ನಡ ಪ್ಯಾನ್ ಇಂಡಿಯಾ ನಿರ್ದೇಶಕನ ಮೇಲೆ ನಟ ಗರಂ
ರಘುರಾಮ್
ಮಂಜುನಾಥ ಸಿ.
|

Updated on:Apr 18, 2023 | 8:36 PM

Share

ಜೋಗಿ (Jogi) ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ಸಹ ನಟನಾಗಿ, ಹಾಸ್ಯ ಪಾತ್ರಗಳಲ್ಲಿ ನಟಿಸಿರುವ ಹಾಗೂ ಸಿನಿಮಾ ನಿರ್ದೇಶನ ಸಹ ಮಾಡಿರುವ ರಘುರಾಮ್ (Raghu Ram), ಇದೀಗ ಫುಲ್​ಟೈಮ್ ನಟನೆ ಜೊತೆಗೆ ಯೂಟ್ಯೂಬ್ ಚಾನೆಲ್ (YouTube Chanel)​ ಒಂದರ ಮೂಲಕ ಸಿನಿಮಾ ರಂಗದ ಹಿರಿಯರ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ಯೂಟ್ಯೂಬ್ ಚಾನೆಲ್​ನಲ್ಲಿ ತಮ್ಮದೇ ಸಂದರ್ಶನ ಪ್ರಕಟಿಸಿರುವ ರಘುರಾಮ್, ಇತ್ತೀಚೆಗೆ ಬಿಡುಗಡೆ ಆದ ಪ್ಯಾನ್ ಇಂಡಿಯಾ (Pan India) ಸಿನಿಮಾ ಒಂದು ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿತು ಎಂದು ಆರೋಪ ಮಾಡಿದ್ದಾರೆ.

”ಇತ್ತೀಚೆಗೆ ಬಿಡುಗಡೆ ಆದ ಸೋ ಕಾಲ್ಡ್ ಪ್ಯಾನ್ ಇಂಡಿಯಾ ಸಿನಿಮಾದಿಂದ ಆದ ಕೆಟ್ಟ ಅನುಭವದ ಬಗ್ಗೆ ಹೇಳಲೇ ಬೇಕು, ಆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನನ್ನನ್ನು 45 ದಿನಗಳ ಕಾಲ ದುಡಿಸಿಕೊಂಡಿದ್ದಾರೆ. ಒಂದಿಷ್ಟು ಸಂಭಾವನೆಯನ್ನೂ ನನಗೆ ಕೊಟ್ಟರು, ಆದರೆ ನನ್ನನ್ನು ಕೇಳದೆ, ನನಗೆ ಹೇಳದೆ ಆ ಸಿನಿಮಾದಿಂದ ನನ್ನನ್ನು ಕಿತ್ತೊಗೆದರು. ಆ ಸಿನಿಮಾದಲ್ಲಿ ಎಲ್ಲೊ ಒಂದು ದೃಶ್ಯದಲ್ಲಿ ಹೀಗೆ ಬಂದು ಹಾಗೆ ಹೋಗ್ತೀನಂತೆ, ನಾನಿನ್ನೂ ಆ ಸಿನಿಮಾ ನೋಡಿಲ್ಲ. ನೋಡುವ ಇಷ್ಟವೂ ಇಲ್ಲ” ಎಂದಿದ್ದಾರೆ ರಘುರಾಮ್.

”ಅವರೆಲ್ಲ ದೊಡ್ಡ ನಿರ್ದೇಶಕರು, ಪ್ಯಾನ್ ಇಂಡಿಯಾ ಡೈರೆಕ್ಟರ್​ಗಳು, ಅವರು ನನಗೆ ಕಳಿಸಿರುವ ವಾಟ್ಸ್​ಆಪ್​ ಮೆಸೇಜ್​ಗಳು ನನ್ನ ಬಳಿ ಇವೆ. ಇದು ಏಕೆ ಹೇಳಬೇಕಾಯಿತು ಎಂದರೆ, ಅವರು ನನಗೆ ಮಾಡಿರುವುದು ಅವಮಾನ, ನಾನೇನು ದೊಡ್ಡ ನಟನಲ್ಲ, ದೊಡ್ಡ ನಿರ್ದೇಶಕ ಅಲ್ಲ, ನನ್ನನ್ನು ಕರೆದು ಪಾತ್ರ ಕೊಟ್ರಿ, ಪಾತ್ರ ಮಾಡಿದೆ. ರಾತ್ರಿ-ಹಗಲು ಎನ್ನದೆ ಆ ಸಿನಿಮಾಕ್ಕಾಗಿ ಕೆಲಸ ಮಾಡಿದ್ದೇನೆ. ಗೆಟಪ್​ಗಳನ್ನು ಹಾಕಿದಿರಿ, ವಿಗ್ ಹಾಕಿದಿರಿ ಹಾಕಿಸಿಕೊಂಡೆ, ಮುಖಕ್ಕೆ ಕಪ್ಪು ಬಳಿದುಕೊಂಡು ನಟಿಸಿದೆ. ಕೆಸರಲ್ಲಿ ಇಳಿಸಿದರು, ಇಳಿದೆ, ಟೈರ್ ಸುಟ್ಟೆ ಯಾವುದೇ ಚಕಾರ ಎತ್ತದೆ ನಟಿಸಿದೆ. ಬೆಳಿಗ್ಗೆ 9ಕ್ಕೆ ಹೋಗಿ ರಾತ್ರಿ 2 ಕ್ಕೆ ಬರುತ್ತಿದ್ದೆ. ಇಷ್ಟೆಲ್ಲ ಆದರೂ ನನ್ನ ಪಾತ್ರವನ್ನು ತೆಗೆಯುವ ಮುಂಚೆ ನನಗೆ ಒಂದು ಮಾತು ಹೇಳಬೇಕು ಎನಿಸಲಿಲ್ಲವಾ” ಎಂದು ರಘುರಾಮ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:25 ದಿನ ಪೂರೈಸಿದ ಕಬ್ಜ, ಸಿನಿಮಾದ ಯಶ್ಸನ್ನು ಆರ್.ಚಂದ್ರು ಅರ್ಪಿಸಿದ್ದು ಯಾರಿಗೆ?

”ನೀವು ಬಹಳ ದೊಡ್ಡ ತಪ್ಪು ಮಾಡಿದ್ದೀರಿ. ನನಗೆ ಮಾತ್ರ ಅಲ್ಲ, ಯಾರಿಗೆ ಆದರೂ ಕರೆದು ಪಾತ್ರ ಮಾಡಿಸಿ ಆ ನಂತರ ಹೀಗೆ ಅವಮಾನ ಮಾಡಬೇಡಿ. ನಾನು ನಿಮ್ಮ ಸಿನಿಮಾದಲ್ಲಿ ನಟಿಸುವಾಗ ನನಗೆ ಬಿಗ್​ಬಾಸ್ ಆಫರ್ ಬಂತು. ಒಳ್ಳೆಯ ಸಂಭಾವನೆ ಕೊಡುವುದಾಗಿ ಸಹ ಹೇಳಿದ್ದರು. ಆದರೆ ನಾನು ಮೂರು ತಿಂಗಳು ಅಲ್ಲಿಗೆ ಹೋದರೆ ಸಿನಿಮಾಕ್ಕೆ ಸಮಸ್ಯೆ ಆಗುತ್ತದೆ ಎಂದು ನಾನು ಹೋಗಲಿಲ್ಲ. ಇದು ನಿಮಗೂ ಗೊತ್ತು. ಇಷ್ಟೆಲ್ಲ ನಾನು ಸಿನಿಮಾಕ್ಕೆ ಮಾಡಿರುವಾಗ ನನ್ನನ್ನು ಒಂದು ಮಾತು ಕೇಳದೆ ನನ್ನನ್ನು ಕಡೆಗಣಸಿದ್ದು, ನೀವು ನನಗೆ ಮಾಡಿರುವ ಅವಮಾನ”ಎಂದಿದ್ದಾರೆ ರಘುರಾಮ್.

ಒಬ್ಬ ನಿರ್ದೇಶಕ, ನಿರ್ಮಾಪಕ ಯಾರಿಗೇ ಆದರೂ ಈ ರೀತಿಯ ಕಾರ್ಯ ಶೋಭೆ ತರುವುದಿಲ್ಲ. ನೀವು ನಾಳೆ ಪ್ಯಾನ್ ವರ್ಲ್ಡ್ ಸಿನಿಮಾ ಮಾಡಿದರೂ ಸರಿ ನನಗೆ ಈಗ ಮಾಡಿರುವಂತೆ ಇನ್ಯಾರಿಗೂ ಅವಮಾನ ಮಾಡಬೇಡಿ. ಇದು ಸರಿಯಾದ ಕ್ರಮವಲ್ಲ ಎಂದು ರಘುರಾಮ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:35 pm, Tue, 18 April 23

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ