AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಜ್​-ವಿಷ್ಣು ಅಭಿಮಾನಿಗಳು ಒಂದಾಗಿದ್ದಾರೆ ಎಂದರೆ ನಡುಕ ಶುರುವಾಗಿದೆ ಎಂದರ್ಥ’; ಬಿಬಿಎಂಪಿಗೆ ಎಚ್ಚರಿಸಿದ ಫ್ಯಾನ್ಸ್​

ಡಾ. ರಾಜ್​ಕುಮಾರ್​ ಮತ್ತು ಡಾ. ವಿಷ್ಣುವರ್ಧನ್​ ಅಭಿಮಾನಿಗಳ ನಡುವೆ ಕೆಲವೊಮ್ಮೆ ಘರ್ಷಣೆ ನಡೆದ ಉದಾಹರಣೆ ಕೂಡ ಇದೆ. ಆದರೆ ಅದನ್ನೆಲ್ಲ ಬದಿಗಿಟ್ಟು ಈಗ ಈ ಸ್ಟಾರ್​ ನಟರ ಅಭಿಮಾನಿಗಳು ಒಂದಾಗಿದ್ದಾರೆ.

‘ರಾಜ್​-ವಿಷ್ಣು ಅಭಿಮಾನಿಗಳು ಒಂದಾಗಿದ್ದಾರೆ ಎಂದರೆ ನಡುಕ ಶುರುವಾಗಿದೆ ಎಂದರ್ಥ’; ಬಿಬಿಎಂಪಿಗೆ ಎಚ್ಚರಿಸಿದ ಫ್ಯಾನ್ಸ್​
‘ರಾಜ್​-ವಿಷ್ಣು ಅಭಿಮಾನಿಗಳು ಒಂದಾಗಿದ್ದಾರೆ ಎಂದರೆ ನಡುಕ ಶುರುವಾಗಿದೆ ಎಂದರ್ಥ’; ಬಿಬಿಎಂಪಿಗೆ ಎಚ್ಚರಿಸಿದ ಫ್ಯಾನ್ಸ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Sep 05, 2021 | 4:22 PM

Share

ಅನುಮತಿ ಪಡೆಯದೇ ಬೆಂಗಳೂರಿನಲ್ಲಿ ಅಭಿಮಾನಿಗಳು ನಿರ್ಮಿಸಿದ ರಾಜ್​ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್ ಸೇರಿದಂತೆ ಮಹಾನ್ ನಾಯಕರ ಪುತ್ಥಳಿಗಳನ್ನು ಶೀಘ್ರದಲ್ಲೇ ತೆರವು ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ನಿರ್ಧಾರಕ್ಕೆ ಬಂದಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಬಿಎಂಪಿಗೆ ರಾಜ್​ಕುಮಾರ್​ ಹಾಗೂ ವಿಷ್ಣು ಅಭಿಮಾನಿಗಳು ಒಟ್ಟಾಗಿ ಎಚ್ಚರಿಕೆ ನೀಡಿದ್ದಾರೆ.

ಡಾ. ರಾಜ್​ಕುಮಾರ್​ ಮತ್ತು ಡಾ. ವಿಷ್ಣುವರ್ಧನ್​ ಅಭಿಮಾನಿಗಳ ನಡುವೆ ಕೆಲವೊಮ್ಮೆ ಘರ್ಷಣೆ ನಡೆದ ಉದಾಹರಣೆ ಕೂಡ ಇದೆ. ಆದರೆ ಅದನ್ನೆಲ್ಲ ಬದಿಗಿಟ್ಟು ಈಗ ಈ ಸ್ಟಾರ್​ ನಟರ ಅಭಿಮಾನಿಗಳು ಒಂದಾಗಿದ್ದಾರೆ. ತಮ್ಮ ನೆಚ್ಚಿನ ಹೀರೋಗಳ ಪುತ್ಥಳಿಗಳನ್ನು ಉಳಿಸಿಕೊಳ್ಳಲು ಜೊತೆಯಾಗಿ ಕೈ ಜೋಡಿಸಿದ್ದಾರೆ. ಈ ಬಗ್ಗೆ ಭಾನುವಾರ (ಸೆಪ್ಟೆಂಬರ್ 5) ಸುದ್ದಿಗೋಷ್ಠಿ ನಡೆಸಿದ್ದಾರೆ.

‘40 ವರ್ಷಗಳಲ್ಲಿ ರಾಜ್​​ಕುಮಾರ್​ ಮತ್ತು ವಿಷ್ಣುವರ್ಧನ್ ಅವರನ್ನು ಸೇರಿಸೋಕೆ ಯಾರಿಂದಲೂ ಸಾಧ್ಯವಾಗಿರಲಿಲ್ಲ. ಅದನ್ನು ನಾನು ಹಾಗೂ ಕ್ರಾಂತಿರಾಜ್ ಮಾಡಿದ್ದೇವೆ. ಒಂದೇ ಒಂದು ಪ್ರತಿಮೆಗೆ ಕೈ ಇಟ್ರೆ ಬಿಬಿಎಂಪಿಗೆ ಮುತ್ತಿಗೆ ಹಾಕಿ, ಬೀಗ ಹಾಕುತ್ತೇವೆ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಸೇರಿ ಎಲ್ಲರ ಪ್ರತಿಮೆ ತೆಗೆಯಿರಿ. ಆಗ ನಾವು ಈ ಪ್ರತಿಮೆ ತೆಗೆಯಲು ಅವಕಾಶ ನೀಡುತ್ತೇವೆ. ಪ್ರತಿಮೆ ನಮ್ಮಹಕ್ಕು’ ಎಂದು ರಾಜ್ ಸಂಘಟನೆ‌ ಮುಖಂಡ ತ್ಯಾಗರಾಜ್ ಹೇಳಿದ್ದಾರೆ.

‘ಬಿಬಿಎಂಪಿ ಕಮಿಷನರ್​ ಗೌರವ್ ಗುಪ್ತಾಗೆ ನಮ್ಮ ಬಗ್ಗೆ ಗೊತ್ತಿಲ್ಲ ಅನಿಸುತ್ತದೆ. ಡಾ.ರಾಜ್, ಡಾ.ವಿಷ್ಣುವರ್ಧನ್ ವಿಚಾರಕ್ಕೆ ಬಂದ್ರೆ ನಿಮಗೆ ಕಂಟಕ ಎಂದು ಘಂಟಾಘೋಷವಾಗಿ ಹೇಳುತ್ತೇನೆ. ಡಾ. ರಾಜ್​ಕುಮಾರ್ ಮತ್ತು ವಿಷ್ಣು ಅಭಿಮಾನಿಗಳು ಜೊತೆಗೂಡಿದ್ದಾರೆ ಎಂದರೆ ಅಲ್ಲಿ ನಡುಕ ಶುರುವಾಗಿದೆ ಅಂತ ಅರ್ಥ’ ಎಂದು ಎಚ್ಚರಿಸಿದ್ದಾರೆ ವಿಷ್ಣುವರ್ಧನ್ ಸಂಘಟನೆ ಮುಖಂಡ ಕ್ರಾಂತಿರಾಜು.

‘ಮಹಾನಗರ ಪಾಲಿಕೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ಪ್ರತಿಮೆ ತೆರವುಗೊಳಿಸಬಾರದು. ಪ್ರತಿಮೆ ತೆರವು ಗೊಳಿಸಿದ್ರೆ ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ’ ಎಂದರು ಅಭಿಮಾನಿಗಳ ಸಂಘದ ಮುಖಂಡ ಪಾಲನೇತ್ರ.

ಇದನ್ನೂ ಓದಿ: ಪುತ್ಥಳಿ ತೆರವು ವಿಚಾರ: ಸರ್ಕಾರದ ನಿರ್ಲಕ್ಷ್ಯತನ ಕೂಡ ಇದರಲ್ಲಿದೆ ಎಂದ ವಿಷ್ಣುವರ್ಧನ್​ ಅಳಿಯ ಅನಿರುದ್ಧ್​​

ಸಂಘರ್ಷ ಮರೆತು ಒಂದಾದ ರಾಜ್​-ವಿಷ್ಣು ಫ್ಯಾನ್ಸ್​; ಪುತ್ಥಳಿ ತೆರವು ಕಾರ್ಯಕ್ಕೆ ಮುಂದಾದ ಬಿಬಿಎಂಪಿ ವಿರುದ್ಧ ಆಕ್ರೋಶ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ