Ramya: ‘ಗಂಧದ ಗುಡಿಯಲ್ಲಿ ನನಗೆ ಇಷ್ಟವಾದ 2 ವಿಷಯವಿದೆ, ಖಂಡಿತಾ ನಾನು ಅಳುತ್ತೇನೆ’: ನಟಿ ರಮ್ಯಾ

| Updated By: ಮದನ್​ ಕುಮಾರ್​

Updated on: Oct 27, 2022 | 8:32 PM

Gandhada Gudi | Puneeth Rajkumar: ‘ಇದೇ ಕೊನೇ ಬಾರಿ ನಾವೆಲ್ಲರೂ ಪುನೀತ್​ ರಾಜ್​ಕುಮಾರ್​ ಅವರನ್ನು ದೊಡ್ಡ ಪರದೆ ಮೇಲೆ ನೋಡುವುದು. ಹಾಗಾಗಿ ಇದು ತುಂಬ ಭಾವುಕ​ ಕ್ಷಣ’ ಎಂದು ರಮ್ಯಾ ಹೇಳಿದ್ದಾರೆ.

Ramya: ‘ಗಂಧದ ಗುಡಿಯಲ್ಲಿ ನನಗೆ ಇಷ್ಟವಾದ 2 ವಿಷಯವಿದೆ, ಖಂಡಿತಾ ನಾನು ಅಳುತ್ತೇನೆ’: ನಟಿ ರಮ್ಯಾ
ರಮ್ಯಾ
Follow us on

ಬಹಳ ಅದ್ದೂರಿಯಾಗಿ ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರ ರಿಲೀಸ್​ ಆಗಿದೆ. ಇದು ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ಕೊನೆಯ ಚಿತ್ರ. ಅಲ್ಲದೇ ಇದು ಅವರ ಕನಸಿನ ಪ್ರಾಜೆಕ್ಟ್​. ಆ ಕಾರಣದಿಂದ ಅಪ್ಪು ಅಭಿಮಾನಿಗಳು ‘ಗಂಧದ ಗುಡಿ’ ಜೊತೆ ಭಾವುಕವಾಗಿ ಕನೆಕ್ಟ್​ ಆಗುತ್ತಿದ್ದಾರೆ. ಅಕ್ಟೋಬರ್​ 28ರಂದು ಈ ಚಿತ್ರ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಅಕ್ಟೋಬರ್​ 27ರಂದು ಅನೇಕ ಕಡೆಗಳಲ್ಲಿ ಪ್ರೀಮಿಯರ್​ ಪ್ರದರ್ಶನ ಏರ್ಪಡಿಸಲಾಯಿತು. ಇದರಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ದೊಡ್ಡ ಪರದೆ ಮೇಲೆ ‘ಗಂಧದ ಗುಡಿ’ ನೋಡಿ ಎಲ್ಲರೂ ಎಮೋಷನಲ್​ ಆಗಿದ್ದಾರೆ. ನಟಿ ರಮ್ಯಾ (Ramya) ಕೂಡ ಪ್ರೀಮಿಯರ್​ ಶೋಗೆ ಆಗಮಿಸಿದ್ದಾರೆ. ಈ ವೇಳೆ ಅವರು ಅಪ್ಪು ಬಗ್ಗೆ ಮಾತನಾಡಿದ್ದಾರೆ.

ರಮ್ಯಾ ಜೊತೆ ಪುನೀತ್​ ರಾಜ್​ಕುಮಾರ್​ ಅವರಿಗೆ ವಿಶೇಷವಾದ ಬಾಂಧವ್ಯ ಇತ್ತು. ಈಗ ಅವರನ್ನು ತುಂಬ ಮಿಸ್​ ಮಾಡಿಕೊಳ್ಳಲಾಗುತ್ತಿದೆ. ಅಪ್ಪು ನೆನಪಿನಲ್ಲೇ ‘ಗಂಧದ ಗುಡಿ’ ನೋಡಲು ಬಂದ ರಮ್ಯಾ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಪುನೀತ್​ ಜೊತೆಗಿನ ಒಡನಾಟವನ್ನು ನೆನೆದು ಎಮೋಷನಲ್​ ಆಗಿದ್ದಾರೆ. ಅಲ್ಲದೇ, ‘ಗಂಧದ ಗುಡಿ’ ಬಗ್ಗೆ ತಮಗೆ ಎಷ್ಟು ಕಾತುರ ಇದೆ ಎಂಬುದನ್ನು ಕೂಡ ಅವರ ಹೇಳಿದ್ದಾರೆ.

‘ಅಪ್ಪು ಯಾವಾಗಲೂ ನನ್ನ ಫೇವರಿಟ್​ ಕೋ ಸ್ಟಾರ್​ ಆಗಿದ್ದರು. ಇದೇ ಕೊನೇ ಬಾರಿ ನಾವೆಲ್ಲರೂ ಅವರನ್ನು ದೊಡ್ಡ ಪರದೆ ಮೇಲೆ ನೋಡುವುದು. ಹಾಗಾಗಿ ಇದು ತುಂಬ ಎಮೋಷನಲ್​ ಆದಂತಹ ಕ್ಷಣ. ನಾನು ಕೂಡ ಕುತೂಹಲದಿಂದ ನೋಡಬೇಕು. 100 ಪರ್ಸೆಂಟ್ ನಾನು ಅಳುತ್ತೇನೆ. ಅದಂತೂ ಗ್ಯಾರಂಟಿ’ ಎಂದು ರಮ್ಯಾ ಹೇಳಿದ್ದಾರೆ.

ಇದನ್ನೂ ಓದಿ
Gandhada Gudi: ‘ಗಂಧದ ಗುಡಿ’ ಗೆಲುವಿಗೆ ಪ್ರಾರ್ಥನೆ; ದೊಡ್ಡ ಗಣಪತಿ ದೇವಸ್ಥಾನದಲ್ಲಿ ಟಿಕೆಟ್​ ಇಟ್ಟು ಅಮೋಘವರ್ಷ ಪೂಜೆ
Gandhada Gudi: ರಿಲೀಸ್​ಗೂ ಮುನ್ನವೇ ದಾಖಲೆ ಬರೆದ ‘ಗಂಧದ ಗುಡಿ’: ಅಪ್ಪು ಕನಸನ್ನು ನನಸು ಮಾಡುತ್ತಿರುವ ಫ್ಯಾನ್ಸ್​
Gandhada Gudi: ಅಂತೂ ಮೌನ ಮುರಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​; ‘ಗಂಧದ ಗುಡಿ’ ಬಗ್ಗೆ ಇಲ್ಲಿದೆ ಮೊದಲ ಸಂದರ್ಶನ
‘ಗಂಧದ ಗುಡಿ’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

‘ಈ ಸಾಕ್ಷ್ಯಚಿತ್ರ ನೋಡಲು ನಾನು ಕಾದಿದ್ದೆ. ಟ್ರೇಲರ್​ ನೋಡಿದಾಗ ನನಗೆ ತುಂಬ ಇಷ್ಟ ಆಗಿತ್ತು. ಛಾಯಾಗ್ರಹಣ ಅದ್ಭುತವಾಗಿದೆ. ಅಪ್ಪು ಮತ್ತು ಪ್ರಕೃತಿಯನ್ನು ನಾನು ಪ್ರೀತಿಸುತ್ತೇನೆ. ಆ ಎರಡು ಅಂಶಗಳು ಇದರಲ್ಲಿ ಇವೆ. ಅನುಭವ ಹೇಗಿರುತ್ತದೆ ಅಂತ ನೋಡೋಣ. ಪುನೀತ ಪರ್ವದಲ್ಲಿ ನಾನು ಡ್ಯಾನ್ಸ್ ಮಾಡಿದ್ದೇ ಅಪ್ಪುಗೋಸ್ಕರ. ಆ ಕ್ಷಣದಲ್ಲಿ ನಾನು ಅಪ್ಪು ಅವರನ್ನೇ ನೆನಪಿಸಿಕೊಳ್ಳುತ್ತಿದ್ದೆ. ಅವರನ್ನು ನಾನು ತುಂಬ ಮಿಸ್​ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ ರಮ್ಯಾ.

‘ಪುನೀತ್​ ರಾಜ್​ಕುಮಾರ್​ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ತಾವು ನಿರ್ದೇಶನ ಮಾಡಿದ್ರೆ ನಾನೇ ಹೀರೋಯಿನ್​ ಅಂತ ಹೇಳಿದ್ದರು. ಅಂತಹ ಅನೇಕ ಸಂಗತಿಗಳನ್ನು ನಾವು ಚರ್ಚೆ ಮಾಡಿದ್ವಿ. ಗಂಧದ ಗುಡಿ ನಮ್ಮೆಲ್ಲರ ಹೆಮ್ಮೆ. ಹಾಗಾಗಿ ನಾವು ಇದನ್ನು ಚಿತ್ರಮಂದಿರದಲ್ಲಿ ನೋಡಬೇಕು’ ಎಂದು ರಮ್ಯಾ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:32 pm, Thu, 27 October 22