ರಿಷಬ್ ಶೆಟ್ಟಿಗೆ ಐಎನ್​​ಸಿಎ ಅವಾರ್ಡ್: ಧನ್ಯವಾದ ಹೇಳಿದ್ದು ಯಾರಿಗೆ?

Rishab Shetty: ‘ಕಾಂತಾರ’ ಮತ್ತು ‘ಕಾಂತಾರ 1’ ಸಿನಿಮಾಗಳಿಗೆ ಈಗಾಗಲೇ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದ್ದು, ಇದೀಗ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಐಎನ್​​ಸಿಎ ಪ್ರಶಸ್ತಿ ಸಹ ಲಭಿಸಿದೆ. ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶಕ ಮತ್ತು ‘ಕಾಂತಾರ 1’ ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭಿಸಿದೆ.

ರಿಷಬ್ ಶೆಟ್ಟಿಗೆ ಐಎನ್​​ಸಿಎ ಅವಾರ್ಡ್: ಧನ್ಯವಾದ ಹೇಳಿದ್ದು ಯಾರಿಗೆ?
Kantara 1

Updated on: Apr 17, 2026 | 2:15 PM

‘ಕಾಂತಾರ’ ಮತ್ತು ‘ಕಾಂತಾರ ಚಾಪ್ಟರ್ 1’ (Kantara Chapter 1) ಸಿನಿಮಾಗಳು ರಿಷಬ್ ಶೆಟ್ಟಿಯನ್ನು (Rishab Shetty) ಪ್ಯಾನ್ ಇಂಡಿಯಾ ಸ್ಟಾರ್ ನಟ ಮತ್ತು ನಿರ್ದೇಶಕರನ್ನಾಗಿ ಮಾಡಿವೆ. ಈ ಎರಡು ಸಿನಿಮಾಗಳು ರಿಷಬ್ ಅವರಿಗೆ ಹಲವು ವೇದಿಕೆಗಳಲ್ಲಿ ಗೌರವ ಪ್ರಾಪ್ತವಾಗುವಂತೆ ಮಾಡಿದೆ. ‘ಕಾಂತಾರ’ ಮತ್ತು ‘ಕಾಂತಾರ 1’ ಸಿನಿಮಾಗಳಿಗೆ ಈಗಾಗಲೇ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದ್ದು, ಇದೀಗ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಐಎನ್​​ಸಿಎ ಪ್ರಶಸ್ತಿ ಸಹ ಲಭಿಸಿದೆ. ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶಕ ಮತ್ತು ‘ಕಾಂತಾರ 1’ ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭಿಸಿದೆ.

ರಾಣಾ ದಗ್ಗುಬಾಟಿ ಮತ್ತು ಕರಣ್ ಜೋಹರ್ ನಿರೂಪಣೆ ಮಾಡಿದ ಈ ಶೋ ಇತ್ತೀಚೆಗಷ್ಟೆ ನಡೆದಿದ್ದು, ರಿಷಬ್ ಶೆಟ್ಟಿ ಅವರು ಒಟ್ಟಿಗೆ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡರು. ಈ ವೇಳೆ ಮಾತನಾಡಿದ ರಿಷಬ್ ಶೆಟ್ಟಿ, ‘ಕಾಂತಾರ’ ಎರಡೂ ಸಿನಿಮಾಗಳು ಸೇರಿ ನಾಲ್ಕು ವರ್ಷದ ಶ್ರಮ. ಇದು ನನ್ನೊಬ್ಬನ ಶ್ರಮ ಮಾತ್ರವೇ ಅಲ್ಲ. ನನ್ನ ಇಡೀ ತಂಡದ ಶ್ರಮ. ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಪ್ರಗತಿ ಶೆಟ್ಟಿ, ನನ್ನ ಶಕ್ತಿಯಾಗಿ ನಿಂತು ಈ ಸಿನಿಮಾ ಮಾಡಲು ನನಗೆ ಸ್ಪೂರ್ತಿ ನೀಡಿದ್ದಾರೆ ಅವರಿಗೆ ವಿಶೇಷ ಧನ್ಯವಾದ. ಈ ಸಿನಿಮಾವನ್ನು ಕನ್ನಡ ಸಿನಿಮಾ ಪ್ರೇಕ್ಷಕರು ಮತ್ತು ನಾನು ನಂಬುವ ದೈವಕ್ಕೆ ಡೆಡಿಕೇಟ್ ಮಾಡುವೆ’ ಎಂದಿದ್ದಾರೆ ರಿಷಬ್ ಶೆಟ್ಟಿ.

‘ಕಾಂತಾರ’ ಮತ್ತು ‘ಕಾಂತಾರ ಚಾಪ್ಟರ್ 1’ ಸಿನಿಮಾಕ್ಕೆ ಬಂಡವಾಳ ಹೂಡಿದ್ದು ಹೊಂಬಾಳೆ ಫಿಲಮ್ಸ್. ಆದರೆ ಇತ್ತೀಚೆಗೆ ರಿಷಬ್ ಮತ್ತು ಹೊಂಬಾಳೆ ನಡುವೆ ಎಲ್ಲವೂ ಸರಿ ಇಲ್ಲ ಎನ್ನಲಾಗುತ್ತಿದೆ. ಅದರ ಬೆನ್ನಲ್ಲೆ ಇದೀಗ ಐಎನ್​​ಸಿಎ ಪ್ರಶಸ್ತಿ ಸ್ವೀಕಾರ ಮಾಡಿದ ರಿಷಬ್ ಶೆಟ್ಟಿ ಅವರು ಹೊಂಬಾಳೆಗಾಗಲಿ ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗಾಗಲಿ ಧನ್ಯವಾದ ಹೇಳಿಲ್ಲ. ಸಿನಿಮಾದ ಎಲ್ಲ ತಂತ್ರಜ್ಞರಿಗೆ ಧನ್ಯವಾದ ಹೇಳಿದ್ದಾರಾದರೂ ಸಿನಿಮಾದ ಬೆನ್ನೆಲುಬು ನಿರ್ಮಾಪಕರನ್ನೇ ಮರೆತಿದ್ದಾರೆ. ಆದರೆ ಕೇವಲ ಮರೆವೆ ಅಥವಾ ಉದ್ದೇಶಪೂರ್ವಕವೇ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ:ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ ದಂಪತಿಯ ಮಗಳು ರಾಧ್ಯಾ ಬರ್ತ್​ಡೇ ವಿಡಿಯೋ ನೋಡಿ..

ಇತ್ತೀಚೆಗೆ ಹೊಂಬಾಳೆ ಫಿಲಮ್ಸ್ ಮತ್ತು ರಿಷಬ್ ಶೆಟ್ಟಿ ನಡುವೆ ತುಸು ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗುತ್ತಿದೆ. ರಿಷಬ್ ಶೆಟ್ಟಿ ಅವರು ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಹೊಂಬಾಳೆ ಫಿಲಮ್ಸ್ ಅನ್ನು ಅನ್​​ಫಾಲೋ ಮಾಡಿದ್ದಾರೆ. ಈಗ ಅವಾರ್ಡ್ ಫಂಕ್ಷನ್​​ನಲ್ಲಿ ಹೊಂಬಾಳೆಯ ಹೆಸರು ಹೇಳದೇ ಇರುವುದು ಅನುಮಾನಗಳಿಗೆ ಇನ್ನಷ್ಟು ಪುಷ್ಠಿ ನೀಡಿದೆ.

ರಿಷಬ್ ಶೆಟ್ಟಿ ಇದೀಗ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಪ್ರಶಾಂತ್ ವರ್ಮಾ ನಿರ್ದೇಶಿಸುತ್ತಿದ್ದು, ರಾಣಾ ದಗ್ಗುಬಾಟಿ ಸಹ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ರಿಷಬ್ ಶೆಟ್ಟಿ ಅವರು ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊಸದೊಂದು ಸಿನಿಮಾದ ಘೋಷಣೆ ಸಹ ಮಾಡಿದ್ದಾರೆ. ಆ ಸಿನಿಮಾದ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us