AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Roberrt Telugu Teaser ತೆಲುಗಿನಲ್ಲಿ ಅಬ್ಬರಿಸೋಕೆ ರಾಬರ್ಟ್​ ರೆಡಿ: ನಾಳೆ ಸಂಜೆ 04:05 ಕ್ಕೆ ರಿಲೀಸ್

Roberrt Telugu Teaser: ಕಳೆದ ವರ್ಷ ಕನ್ನಡದಲ್ಲಿ ರಾಬರ್ಟ್​ ಟೀಸರ್​ ರಿಲೀಸ್​ ಆಗಿತ್ತು. ದರ್ಶನ್​ ಅವರು ಸಾಕಷ್ಟು ಆ್ಯಕ್ಷನ್​ ದ್ರಶ್ಯಗಳೊಂದಿಗೆ ಮಿಂಚಿದ್ದರು. ಈಗ ಟಾಲಿವುಡ್​ನಲ್ಲೂ ರಾಬರ್ಟ್​ ಸಿನಿಮಾದ ಟೀಸರ್​ ಹವಾ ಸೃಷ್ಟಿಸೋಕೆ ರೆಡಿ ಆಗಿದೆ.

Roberrt Telugu Teaser ತೆಲುಗಿನಲ್ಲಿ ಅಬ್ಬರಿಸೋಕೆ ರಾಬರ್ಟ್​ ರೆಡಿ: ನಾಳೆ ಸಂಜೆ 04:05 ಕ್ಕೆ ರಿಲೀಸ್
ದರ್ಶನ್
ರಾಜೇಶ್ ದುಗ್ಗುಮನೆ
|

Updated on:Feb 02, 2021 | 4:10 PM

Share

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗ ತೆಲುಗಿನಲ್ಲೂ ರಾಬರ್ಟ್​ ರಿಲೀಸ್​ಗೆ ರೆಡಿ ಇದ್ದು ನಾಳೆ ಸಂಜೆ ನಾಲ್ಕು ಗಂಟೆಗೆ ಟೀಸರ್​ ರಿಲೀಸ್​ ಆಗಲಿದೆ.

ಕನ್ನಡದ ಜತೆಜತೆಗೆ ತೆಲುಗಿನಲ್ಲೂ ರಾಬರ್ಟ್​ ಬಿಡುಡೆ​ಗೆ ಸಿದ್ಧವಾಗಿತ್ತು. ಆದರೆ, ಟಾಲಿವುಡ್​ನಲ್ಲಿ ಸಿನಿಮಾ ರಿಲೀಸ್​ ಮಾಡೋಕೆ ಕೆಲವರು ಅಡ್ಡಿ ಮಾಡಿದ್ದರು. ಈ ವಿಚಾರವಾಗಿ ದಾಸ ದರ್ಶನ್​ ಸಿಟ್ಟಾಗಿದ್ದರು ಕೂಡ. ನಂತರ ಈ ಸಮಸ್ಯೆ ಬಗೆ ಹರಿದಿತ್ತು. ಈ ಹಿನ್ನೆಲೆಯಲ್ಲಿ, ಮಾರ್ಚ್​ 11ರಂದೇ ತೆಲುಗಿನಲ್ಲೂ ರಾಬರ್ಟ್​ ಸಿನಿಮಾ ರಿಲೀಸ್​ ಆಗುತ್ತಿದೆ. ಇದಕ್ಕೂ ಮೊದಲು ಟಾಲಿವುಡ್​ ಮಂದಿಗೆ ರಾಬರ್ಟ್​ ಸಿನಿಮಾದ ಟೀಸರ್​ ದರ್ಶನ ಮಾಡಿಸುತ್ತಿದೆ ಚಿತ್ರತಂಡ.

ಕಳೆದ ವರ್ಷ ಕನ್ನಡದಲ್ಲಿ ರಾಬರ್ಟ್​ ಟೀಸರ್​ ರಿಲೀಸ್​ ಆಗಿತ್ತು. ದರ್ಶನ್​ ಅವರು ಸಾಕಷ್ಟು ಆ್ಯಕ್ಷನ್​ ದ್ರಶ್ಯಗಳೊಂದಿಗೆ ಮಿಂಚಿದ್ದರು. ಈಗ ಟಾಲಿವುಡ್​ನಲ್ಲೂ ರಾಬರ್ಟ್​ ಸಿನಿಮಾದ ಟೀಸರ್​ ಹವಾ ಸೃಷ್ಟಿಸೋಕೆ ರೆಡಿ ಆಗಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಸಿನಿಮಾ ನಿರ್ದೇಶಕ ತರುಣ್​ ಸುಧೀರ್​, ರಾಬರ್ಟ್​ ತೆಲುಗು ಸಿನಿಮಾ ಟೀಸರ್​ ಫೆಬ್ರವರಿ 3ರಂದು 04:05 ರಿಲೀಸ್ ಆಗುತ್ತಿದೆ. ನಿಮ್ಮ ಬೆಂಬಲ ಹೀಗೆ ಇರಲಿ ಎಂದು ಬರೆದುಕೊಂಡಿದ್ದಾರೆ.

ರಾಬರ್ಟ್​ ಸಿನಿಮಾದಲ್ಲಿ ದರ್ಶನ್​, ಆಶಾ ಭಟ್​ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ತೆಲುಗಿನ ಸ್ಟಾರ್​ ವಿಲನ್​ ಜಗಪತಿ ಬಾಬು ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಟಾಲಿವುಡ್​ನಲ್ಲಿ ಸಿನಿಮಾಗೆ ಮತ್ತಷ್ಟು ಮೈಲೇಜ್​ ಸಿಗುವ ಸಾಧ್ಯತೆ ಇದೆ.

ತೆಲುಗಿನಲ್ಲಿ ಸಾಕಷ್ಟು ಆ್ಯಕ್ಷನ್​ ಸಿನಿಮಾಗಳು ರಿಲೀಸ್​ ಆಗುತ್ತವೆ. ಹೀಗಾಗಿ, ಅಲ್ಲಿನ ಮಂದಿಗೆ ಈ ರೀತಿಯ ಚಿತ್ರಗಳು ಬಹಳಾನೇ ಇಷ್ಟವಾಗುತ್ತದೆ. ಹೀಗಾಗಿ, ರಾಬರ್ಟ್​ ಸಿನಿಮಾ ಕೂಡ ಟಾಲಿವುಡ್​ ಸಿನಿ ಪ್ರೇಕ್ಷಕರಿಗೆ ಇಷ್ಟವಾಗುವ ನಿರೀಕ್ಷೆ ಇದೆ.

ಅಂತೂ ಸಿಕ್ತು ಗ್ರೀನ್​ ಸಿಗ್ನಲ್​: ಸ್ಯಾಂಡಲ್‌ವುಡ್‌, ಟಾಲಿವುಡ್‌ನಲ್ಲಿ ಒಂದೇ ದಿನ ‘ರಾಬರ್ಟ್‌’ ಸಿನಿಮಾ ರಿಲೀಸ್‌!

Published On - 1:37 pm, Tue, 2 February 21

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ