AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Roberrt Telugu Teaser ತೆಲುಗಿನಲ್ಲಿ ಅಬ್ಬರಿಸೋಕೆ ರಾಬರ್ಟ್​ ರೆಡಿ: ನಾಳೆ ಸಂಜೆ 04:05 ಕ್ಕೆ ರಿಲೀಸ್

Roberrt Telugu Teaser: ಕಳೆದ ವರ್ಷ ಕನ್ನಡದಲ್ಲಿ ರಾಬರ್ಟ್​ ಟೀಸರ್​ ರಿಲೀಸ್​ ಆಗಿತ್ತು. ದರ್ಶನ್​ ಅವರು ಸಾಕಷ್ಟು ಆ್ಯಕ್ಷನ್​ ದ್ರಶ್ಯಗಳೊಂದಿಗೆ ಮಿಂಚಿದ್ದರು. ಈಗ ಟಾಲಿವುಡ್​ನಲ್ಲೂ ರಾಬರ್ಟ್​ ಸಿನಿಮಾದ ಟೀಸರ್​ ಹವಾ ಸೃಷ್ಟಿಸೋಕೆ ರೆಡಿ ಆಗಿದೆ.

Roberrt Telugu Teaser ತೆಲುಗಿನಲ್ಲಿ ಅಬ್ಬರಿಸೋಕೆ ರಾಬರ್ಟ್​ ರೆಡಿ: ನಾಳೆ ಸಂಜೆ 04:05 ಕ್ಕೆ ರಿಲೀಸ್
ದರ್ಶನ್
ರಾಜೇಶ್ ದುಗ್ಗುಮನೆ
|

Updated on:Feb 02, 2021 | 4:10 PM

Share

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗ ತೆಲುಗಿನಲ್ಲೂ ರಾಬರ್ಟ್​ ರಿಲೀಸ್​ಗೆ ರೆಡಿ ಇದ್ದು ನಾಳೆ ಸಂಜೆ ನಾಲ್ಕು ಗಂಟೆಗೆ ಟೀಸರ್​ ರಿಲೀಸ್​ ಆಗಲಿದೆ.

ಕನ್ನಡದ ಜತೆಜತೆಗೆ ತೆಲುಗಿನಲ್ಲೂ ರಾಬರ್ಟ್​ ಬಿಡುಡೆ​ಗೆ ಸಿದ್ಧವಾಗಿತ್ತು. ಆದರೆ, ಟಾಲಿವುಡ್​ನಲ್ಲಿ ಸಿನಿಮಾ ರಿಲೀಸ್​ ಮಾಡೋಕೆ ಕೆಲವರು ಅಡ್ಡಿ ಮಾಡಿದ್ದರು. ಈ ವಿಚಾರವಾಗಿ ದಾಸ ದರ್ಶನ್​ ಸಿಟ್ಟಾಗಿದ್ದರು ಕೂಡ. ನಂತರ ಈ ಸಮಸ್ಯೆ ಬಗೆ ಹರಿದಿತ್ತು. ಈ ಹಿನ್ನೆಲೆಯಲ್ಲಿ, ಮಾರ್ಚ್​ 11ರಂದೇ ತೆಲುಗಿನಲ್ಲೂ ರಾಬರ್ಟ್​ ಸಿನಿಮಾ ರಿಲೀಸ್​ ಆಗುತ್ತಿದೆ. ಇದಕ್ಕೂ ಮೊದಲು ಟಾಲಿವುಡ್​ ಮಂದಿಗೆ ರಾಬರ್ಟ್​ ಸಿನಿಮಾದ ಟೀಸರ್​ ದರ್ಶನ ಮಾಡಿಸುತ್ತಿದೆ ಚಿತ್ರತಂಡ.

ಕಳೆದ ವರ್ಷ ಕನ್ನಡದಲ್ಲಿ ರಾಬರ್ಟ್​ ಟೀಸರ್​ ರಿಲೀಸ್​ ಆಗಿತ್ತು. ದರ್ಶನ್​ ಅವರು ಸಾಕಷ್ಟು ಆ್ಯಕ್ಷನ್​ ದ್ರಶ್ಯಗಳೊಂದಿಗೆ ಮಿಂಚಿದ್ದರು. ಈಗ ಟಾಲಿವುಡ್​ನಲ್ಲೂ ರಾಬರ್ಟ್​ ಸಿನಿಮಾದ ಟೀಸರ್​ ಹವಾ ಸೃಷ್ಟಿಸೋಕೆ ರೆಡಿ ಆಗಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಸಿನಿಮಾ ನಿರ್ದೇಶಕ ತರುಣ್​ ಸುಧೀರ್​, ರಾಬರ್ಟ್​ ತೆಲುಗು ಸಿನಿಮಾ ಟೀಸರ್​ ಫೆಬ್ರವರಿ 3ರಂದು 04:05 ರಿಲೀಸ್ ಆಗುತ್ತಿದೆ. ನಿಮ್ಮ ಬೆಂಬಲ ಹೀಗೆ ಇರಲಿ ಎಂದು ಬರೆದುಕೊಂಡಿದ್ದಾರೆ.

ರಾಬರ್ಟ್​ ಸಿನಿಮಾದಲ್ಲಿ ದರ್ಶನ್​, ಆಶಾ ಭಟ್​ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ತೆಲುಗಿನ ಸ್ಟಾರ್​ ವಿಲನ್​ ಜಗಪತಿ ಬಾಬು ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಟಾಲಿವುಡ್​ನಲ್ಲಿ ಸಿನಿಮಾಗೆ ಮತ್ತಷ್ಟು ಮೈಲೇಜ್​ ಸಿಗುವ ಸಾಧ್ಯತೆ ಇದೆ.

ತೆಲುಗಿನಲ್ಲಿ ಸಾಕಷ್ಟು ಆ್ಯಕ್ಷನ್​ ಸಿನಿಮಾಗಳು ರಿಲೀಸ್​ ಆಗುತ್ತವೆ. ಹೀಗಾಗಿ, ಅಲ್ಲಿನ ಮಂದಿಗೆ ಈ ರೀತಿಯ ಚಿತ್ರಗಳು ಬಹಳಾನೇ ಇಷ್ಟವಾಗುತ್ತದೆ. ಹೀಗಾಗಿ, ರಾಬರ್ಟ್​ ಸಿನಿಮಾ ಕೂಡ ಟಾಲಿವುಡ್​ ಸಿನಿ ಪ್ರೇಕ್ಷಕರಿಗೆ ಇಷ್ಟವಾಗುವ ನಿರೀಕ್ಷೆ ಇದೆ.

ಅಂತೂ ಸಿಕ್ತು ಗ್ರೀನ್​ ಸಿಗ್ನಲ್​: ಸ್ಯಾಂಡಲ್‌ವುಡ್‌, ಟಾಲಿವುಡ್‌ನಲ್ಲಿ ಒಂದೇ ದಿನ ‘ರಾಬರ್ಟ್‌’ ಸಿನಿಮಾ ರಿಲೀಸ್‌!

Published On - 1:37 pm, Tue, 2 February 21

ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು
ಹುಲಿವೇಷದ ಕುರಿತ ‘ಮಾರ್ನಮಿ’ ಸಿನಿಮಾ ಬಗ್ಗೆ ಮನಸಾರೆ ಮಾತಾಡಿದ ಕಿಚ್ಚ ಸುದೀಪ್
ಹುಲಿವೇಷದ ಕುರಿತ ‘ಮಾರ್ನಮಿ’ ಸಿನಿಮಾ ಬಗ್ಗೆ ಮನಸಾರೆ ಮಾತಾಡಿದ ಕಿಚ್ಚ ಸುದೀಪ್