AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೂಟಿಂಗ್​ಗೆ ಅನುಮತಿ ಸಿಗದಿದ್ರೆ ಮುತ್ತಿನನಗರಿ ಹೈದ್ರಾಬಾದ್‌ನತ್ತ ಸ್ಯಾಂಡಲ್‌ವುಡ್‌ ಚಿತ್ತ!

ಬೆಂಗಳೂರು: ಲಾಕ್‌ಡೌನ್‌ ನಿಯಮಗಳು ಸಡಿಲವಾಗುತ್ತಿದ್ದಂತೆ ಕನ್ನಡ ಚಿತ್ರರಂಗವೂ ಮೈಕೊಡವಿ ಎದ್ದಿದೆ. ಚಿತ್ರರಂಗದ ಚಟುವಟಿಕೆಗಳ ಆರಂಭಕ್ಕೆ ಅಗತ್ಯ ತಯಾರಿ ಶುರುವಾಗಿವೆ. ಇದಕ್ಕಾಗಿ ಕೊರೊನಾ ವೈರಸ್‌ ಆರ್ಭಟದ ನಂತರ ಕೆಲ ಅನಿವಾರ್ಯ ಬದಲಾವಣೆಗಳನ್ನ ಮಾಡಿಕೊಳ್ಳಲೇಬೇಕಾಗಿದೆ. ಇದಕ್ಕಾಗಿ ಅಗತ್ಯ ಸೂತ್ರಗಳ ತಯಾರಿ ಆರಂಭವಾಗಿದೆ. ಸಪ್ತ ನಿರ್ದೇಶಕರ ಸಪ್ತ ಸೂತ್ರಗಳು ಹೌದು ಕೊರೊನಾದಿಂದ ಇಡೀ ಜಗತ್ತೇ ನಡುಗಿದೆ. ಬದಲಾದ ಪರಿಸ್ಥಿತಿಗೆ ತಕ್ಕಂತೆ ಸ್ಯಾಂಡಲ್‌ವುಡ್‌ ಕೂಡಾ ಬದಲಾಗುತ್ತಿದೆ. ಇದಕ್ಕಾಗಿ ಕೆಲ ಅಗತ್ಯ ಸೂತ್ರಗಳನ್ನ ಹೆಣೆಯುತ್ತಿದೆ. ಸುಮಾರು ಏಳು ಮಂದಿ ಹಿರಿಯ ನಿರ್ದೇಶಕರು ಸೇರಿ ಸುಗಮ […]

ಶೂಟಿಂಗ್​ಗೆ ಅನುಮತಿ ಸಿಗದಿದ್ರೆ ಮುತ್ತಿನನಗರಿ ಹೈದ್ರಾಬಾದ್‌ನತ್ತ ಸ್ಯಾಂಡಲ್‌ವುಡ್‌ ಚಿತ್ತ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jun 13, 2020 | 7:01 PM

Share

ಬೆಂಗಳೂರು: ಲಾಕ್‌ಡೌನ್‌ ನಿಯಮಗಳು ಸಡಿಲವಾಗುತ್ತಿದ್ದಂತೆ ಕನ್ನಡ ಚಿತ್ರರಂಗವೂ ಮೈಕೊಡವಿ ಎದ್ದಿದೆ. ಚಿತ್ರರಂಗದ ಚಟುವಟಿಕೆಗಳ ಆರಂಭಕ್ಕೆ ಅಗತ್ಯ ತಯಾರಿ ಶುರುವಾಗಿವೆ. ಇದಕ್ಕಾಗಿ ಕೊರೊನಾ ವೈರಸ್‌ ಆರ್ಭಟದ ನಂತರ ಕೆಲ ಅನಿವಾರ್ಯ ಬದಲಾವಣೆಗಳನ್ನ ಮಾಡಿಕೊಳ್ಳಲೇಬೇಕಾಗಿದೆ. ಇದಕ್ಕಾಗಿ ಅಗತ್ಯ ಸೂತ್ರಗಳ ತಯಾರಿ ಆರಂಭವಾಗಿದೆ.

ಸಪ್ತ ನಿರ್ದೇಶಕರ ಸಪ್ತ ಸೂತ್ರಗಳು ಹೌದು ಕೊರೊನಾದಿಂದ ಇಡೀ ಜಗತ್ತೇ ನಡುಗಿದೆ. ಬದಲಾದ ಪರಿಸ್ಥಿತಿಗೆ ತಕ್ಕಂತೆ ಸ್ಯಾಂಡಲ್‌ವುಡ್‌ ಕೂಡಾ ಬದಲಾಗುತ್ತಿದೆ. ಇದಕ್ಕಾಗಿ ಕೆಲ ಅಗತ್ಯ ಸೂತ್ರಗಳನ್ನ ಹೆಣೆಯುತ್ತಿದೆ. ಸುಮಾರು ಏಳು ಮಂದಿ ಹಿರಿಯ ನಿರ್ದೇಶಕರು ಸೇರಿ ಸುಗಮ ಶೂಟಿಂಗ್‌ಗೆ ಸಪ್ತ ಸೂತ್ರಗಳನ್ನ ಹೆಣೆಯುತ್ತಿದ್ದಾರೆ.

ಇದು ಅಂತಿಮವಾದ ನಂತರ ಚಿತ್ರರಂಗದ ಪ್ರಮುಖರು ಈ ಸೂತ್ರಗಳನ್ನು ಸರ್ಕಾರದ ಮುಂದೆ ಪ್ರಸ್ತುತ ಪಡಿಸಲಿದ್ದಾರೆ. ಈ ಸೂತ್ರಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ರೆ ಸಿನಿಮಾ ಚಟುವಟಿಕೆಗಳು ಶುರುವಾಗಲಿವೆ. ಒಂದು ವೇಳೆ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌ ತೋರಿಸದೇ, ರೆಡ್‌ ಸಿಗ್ನಲ್‌ ಕೊಟ್ಟರೆ ಬೆಂಗಳೂರಲ್ಲಿ ಯಾವುದೇ ಶೂಟಿಂಗ್‌ಗಳು ನಡೆಯೋದಿಲ್ಲ.

ಹೈದ್ರಾಬಾದ್‌ನತ್ತ ಪಯಣ ಪಕ್ಕಾ ಒಂದು ವೇಳೆ ರಾಜ್ಯ ಸರ್ಕಾರ ಶೂಟಿಂಗ್‌ ಸೇರಿದಂತೆ ಯಾವುದೇ ಸ್ಯಾಂಡಲ್‌ವುಡ್‌ ಕಾರ್ಯಗಳಿಗೆ ಒಪ್ಪಿಗೆ ಸೂಚಿಸದಿದ್ರೆ, ಚಿತ್ರರಂಗ ಹೈದ್ರಾಬಾದ್‌ನತ್ತ ಪಯಣ ಬೆಳೆಸಲಿದೆ. ಯಾಕಂದ್ರೆ, ಹೈದ್ರಾಬಾದ್‌ನಲ್ಲಿ ಜೂನ್‌ 15ರಿಂದ ಚಿತ್ರೀಕರಣಕ್ಕೆ ಅನುಮತಿಯನ್ನ ಅಲ್ಲಿನ ಸರ್ಕಾರ ಕೊಟ್ಟಾಗಿದೆ.

ಈಗಾಗಲೇ ರಾಜ್ಯ ಸರ್ಕಾರದ ಉಸಾಬರಿಯೇ ಬೇಡ ಅಂತಾ ಕೆಲ ನಿರ್ಮಾಪಕರು ತಮ್ಮ ಚಿತ್ರಗಳ ಶೂಟಿಂಗ್‌ಗೆ ಹೈದ್ರಾಬಾದ್‌ನತ್ತ ಮುಖ ಮಾಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಧ್ರುವ ಸರ್ಜಾ ಅಭಿನಯದ ‘ಪೊಗರು’, ‘ಮದಗಜ’ ಚಿತ್ರಗಳು ಪ್ರಮುಖವಾದವು. ಜುಲೈ 1ರ ನಂತರ ಅನುಮತಿ ಸಿಗದಿದ್ರೆ ಇನ್ನುಳಿದವರೂ ಕೂಡಾ ಮುತ್ತಿನನಗರಿ ಹೈದ್ರಾಬಾದ್‌ಗೆ ಪಯಣಿಸಿಲಿದ್ದಾರೆ.

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ