AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೂಟಿಂಗ್​ಗೆ ಅನುಮತಿ ಸಿಗದಿದ್ರೆ ಮುತ್ತಿನನಗರಿ ಹೈದ್ರಾಬಾದ್‌ನತ್ತ ಸ್ಯಾಂಡಲ್‌ವುಡ್‌ ಚಿತ್ತ!

ಬೆಂಗಳೂರು: ಲಾಕ್‌ಡೌನ್‌ ನಿಯಮಗಳು ಸಡಿಲವಾಗುತ್ತಿದ್ದಂತೆ ಕನ್ನಡ ಚಿತ್ರರಂಗವೂ ಮೈಕೊಡವಿ ಎದ್ದಿದೆ. ಚಿತ್ರರಂಗದ ಚಟುವಟಿಕೆಗಳ ಆರಂಭಕ್ಕೆ ಅಗತ್ಯ ತಯಾರಿ ಶುರುವಾಗಿವೆ. ಇದಕ್ಕಾಗಿ ಕೊರೊನಾ ವೈರಸ್‌ ಆರ್ಭಟದ ನಂತರ ಕೆಲ ಅನಿವಾರ್ಯ ಬದಲಾವಣೆಗಳನ್ನ ಮಾಡಿಕೊಳ್ಳಲೇಬೇಕಾಗಿದೆ. ಇದಕ್ಕಾಗಿ ಅಗತ್ಯ ಸೂತ್ರಗಳ ತಯಾರಿ ಆರಂಭವಾಗಿದೆ. ಸಪ್ತ ನಿರ್ದೇಶಕರ ಸಪ್ತ ಸೂತ್ರಗಳು ಹೌದು ಕೊರೊನಾದಿಂದ ಇಡೀ ಜಗತ್ತೇ ನಡುಗಿದೆ. ಬದಲಾದ ಪರಿಸ್ಥಿತಿಗೆ ತಕ್ಕಂತೆ ಸ್ಯಾಂಡಲ್‌ವುಡ್‌ ಕೂಡಾ ಬದಲಾಗುತ್ತಿದೆ. ಇದಕ್ಕಾಗಿ ಕೆಲ ಅಗತ್ಯ ಸೂತ್ರಗಳನ್ನ ಹೆಣೆಯುತ್ತಿದೆ. ಸುಮಾರು ಏಳು ಮಂದಿ ಹಿರಿಯ ನಿರ್ದೇಶಕರು ಸೇರಿ ಸುಗಮ […]

ಶೂಟಿಂಗ್​ಗೆ ಅನುಮತಿ ಸಿಗದಿದ್ರೆ ಮುತ್ತಿನನಗರಿ ಹೈದ್ರಾಬಾದ್‌ನತ್ತ ಸ್ಯಾಂಡಲ್‌ವುಡ್‌ ಚಿತ್ತ!
ಸಾಧು ಶ್ರೀನಾಥ್​
|

Updated on: Jun 13, 2020 | 7:01 PM

Share

ಬೆಂಗಳೂರು: ಲಾಕ್‌ಡೌನ್‌ ನಿಯಮಗಳು ಸಡಿಲವಾಗುತ್ತಿದ್ದಂತೆ ಕನ್ನಡ ಚಿತ್ರರಂಗವೂ ಮೈಕೊಡವಿ ಎದ್ದಿದೆ. ಚಿತ್ರರಂಗದ ಚಟುವಟಿಕೆಗಳ ಆರಂಭಕ್ಕೆ ಅಗತ್ಯ ತಯಾರಿ ಶುರುವಾಗಿವೆ. ಇದಕ್ಕಾಗಿ ಕೊರೊನಾ ವೈರಸ್‌ ಆರ್ಭಟದ ನಂತರ ಕೆಲ ಅನಿವಾರ್ಯ ಬದಲಾವಣೆಗಳನ್ನ ಮಾಡಿಕೊಳ್ಳಲೇಬೇಕಾಗಿದೆ. ಇದಕ್ಕಾಗಿ ಅಗತ್ಯ ಸೂತ್ರಗಳ ತಯಾರಿ ಆರಂಭವಾಗಿದೆ.

ಸಪ್ತ ನಿರ್ದೇಶಕರ ಸಪ್ತ ಸೂತ್ರಗಳು ಹೌದು ಕೊರೊನಾದಿಂದ ಇಡೀ ಜಗತ್ತೇ ನಡುಗಿದೆ. ಬದಲಾದ ಪರಿಸ್ಥಿತಿಗೆ ತಕ್ಕಂತೆ ಸ್ಯಾಂಡಲ್‌ವುಡ್‌ ಕೂಡಾ ಬದಲಾಗುತ್ತಿದೆ. ಇದಕ್ಕಾಗಿ ಕೆಲ ಅಗತ್ಯ ಸೂತ್ರಗಳನ್ನ ಹೆಣೆಯುತ್ತಿದೆ. ಸುಮಾರು ಏಳು ಮಂದಿ ಹಿರಿಯ ನಿರ್ದೇಶಕರು ಸೇರಿ ಸುಗಮ ಶೂಟಿಂಗ್‌ಗೆ ಸಪ್ತ ಸೂತ್ರಗಳನ್ನ ಹೆಣೆಯುತ್ತಿದ್ದಾರೆ.

ಇದು ಅಂತಿಮವಾದ ನಂತರ ಚಿತ್ರರಂಗದ ಪ್ರಮುಖರು ಈ ಸೂತ್ರಗಳನ್ನು ಸರ್ಕಾರದ ಮುಂದೆ ಪ್ರಸ್ತುತ ಪಡಿಸಲಿದ್ದಾರೆ. ಈ ಸೂತ್ರಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ರೆ ಸಿನಿಮಾ ಚಟುವಟಿಕೆಗಳು ಶುರುವಾಗಲಿವೆ. ಒಂದು ವೇಳೆ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌ ತೋರಿಸದೇ, ರೆಡ್‌ ಸಿಗ್ನಲ್‌ ಕೊಟ್ಟರೆ ಬೆಂಗಳೂರಲ್ಲಿ ಯಾವುದೇ ಶೂಟಿಂಗ್‌ಗಳು ನಡೆಯೋದಿಲ್ಲ.

ಹೈದ್ರಾಬಾದ್‌ನತ್ತ ಪಯಣ ಪಕ್ಕಾ ಒಂದು ವೇಳೆ ರಾಜ್ಯ ಸರ್ಕಾರ ಶೂಟಿಂಗ್‌ ಸೇರಿದಂತೆ ಯಾವುದೇ ಸ್ಯಾಂಡಲ್‌ವುಡ್‌ ಕಾರ್ಯಗಳಿಗೆ ಒಪ್ಪಿಗೆ ಸೂಚಿಸದಿದ್ರೆ, ಚಿತ್ರರಂಗ ಹೈದ್ರಾಬಾದ್‌ನತ್ತ ಪಯಣ ಬೆಳೆಸಲಿದೆ. ಯಾಕಂದ್ರೆ, ಹೈದ್ರಾಬಾದ್‌ನಲ್ಲಿ ಜೂನ್‌ 15ರಿಂದ ಚಿತ್ರೀಕರಣಕ್ಕೆ ಅನುಮತಿಯನ್ನ ಅಲ್ಲಿನ ಸರ್ಕಾರ ಕೊಟ್ಟಾಗಿದೆ.

ಈಗಾಗಲೇ ರಾಜ್ಯ ಸರ್ಕಾರದ ಉಸಾಬರಿಯೇ ಬೇಡ ಅಂತಾ ಕೆಲ ನಿರ್ಮಾಪಕರು ತಮ್ಮ ಚಿತ್ರಗಳ ಶೂಟಿಂಗ್‌ಗೆ ಹೈದ್ರಾಬಾದ್‌ನತ್ತ ಮುಖ ಮಾಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಧ್ರುವ ಸರ್ಜಾ ಅಭಿನಯದ ‘ಪೊಗರು’, ‘ಮದಗಜ’ ಚಿತ್ರಗಳು ಪ್ರಮುಖವಾದವು. ಜುಲೈ 1ರ ನಂತರ ಅನುಮತಿ ಸಿಗದಿದ್ರೆ ಇನ್ನುಳಿದವರೂ ಕೂಡಾ ಮುತ್ತಿನನಗರಿ ಹೈದ್ರಾಬಾದ್‌ಗೆ ಪಯಣಿಸಿಲಿದ್ದಾರೆ.

ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಇಂದು ಈ ರಾಶಿಯವರಿಗೆ ಧನ ಯೋಗ!
ಇಂದು ಈ ರಾಶಿಯವರಿಗೆ ಧನ ಯೋಗ!
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ