AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ದೇಶಕರಿಗೆ ಮೆಸೇಜ್​ ಮಾಡಿ ರಕ್ಷಿತ್​ ಶೆಟ್ಟಿ ನಟನೆಯ ಸಿನಿಮಾದಲ್ಲಿ ಚಾನ್ಸ್​ ಕೇಳಿದ ರುಕ್ಮಿಣಿ ವಸಂತ್​

ಇತ್ತೀಚೆಗೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲಾಯಿತು. ಆಗ ವೇದಿಕೆ ಮೇಲೆ ಅನೇಕ ವಿಚಾರಗಳನ್ನು ರುಕ್ಮಿಣಿ ವಸಂತ್​ ಅವರು ಹಂಚಿಕೊಂಡರು. ನಿರ್ದೇಶಕ ಹೇಮಂತ್​ ಎಂ. ರಾವ್​ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಮೆಸೇಜ್​ ಮಾಡಿ ಅವಕಾಶ ಪಡೆದಿದ್ದರ ಬಗ್ಗೆ ಅವರು ವಿವರಿಸಿದರು.

ನಿರ್ದೇಶಕರಿಗೆ ಮೆಸೇಜ್​ ಮಾಡಿ ರಕ್ಷಿತ್​ ಶೆಟ್ಟಿ ನಟನೆಯ ಸಿನಿಮಾದಲ್ಲಿ ಚಾನ್ಸ್​ ಕೇಳಿದ ರುಕ್ಮಿಣಿ ವಸಂತ್​
ರುಕ್ಮಿಣಿ ವಸಂತ್​, ಹೇಮಂತ್​ ರಾವ್​, ರಕ್ಷಿತ್​ ಶೆಟ್ಟಿ
ಮದನ್​ ಕುಮಾರ್​
|

Updated on: Aug 22, 2023 | 6:43 PM

Share

ಯುವ ನಟಿ ರುಕ್ಮಿಣಿ ವಸಂತ್​ (Rukmini Vasanth) ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. 2019ರಲ್ಲಿ ಬಿಡುಗಡೆ ಆದ ‘ಬೀರ್​ಬಲ್​’ ಸಿನಿಮಾದಲ್ಲಿ ನಟಿಸುವ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಈಗ ಅವರು ‘ಸಪ್ತ ಸಾಗರದಾಚೆ ಎಲ್ಲೋ’ (Sapta Sagaradaache Ello) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರುತ್ತಿದೆ. ಸೆಪ್ಟೆಂಬರ್ 1ರಂದು ಮೊದಲ ಭಾಗ ರಿಲೀಸ್​ ಆಗಲಿದೆ. ನಿರ್ದೇಶಕ ಹೇಮಂತ್​ ಎಂ. ರಾವ್​ (Hemanth M Rao) ಅವರು ಇದಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ರಕ್ಷಿತ್​ ಶೆಟ್ಟಿ ಜೊತೆ ಈ ಸಿನಿಮಾದಲ್ಲಿ ನಾಯಕಿಯರಾಗಿ ರುಕ್ಮಿಣಿ ವಸಂತ್​ ಮತ್ತು ಚೈತ್ರಾ ಆಚಾರ್​ ಅಭಿನಯಿಸಿದ್ದಾರೆ. ಇಂಥ ಬಹುನಿರೀಕ್ಷಿತ ಸಿನಿಮಾದಲ್ಲಿ ರುಕ್ಮಿಣಿ ವಸಂತ್​ ಅವರು ಅವಕಾಶ ಪಡೆದಿದ್ದೇ ಒಂದು ಇಂಟರೆಸ್ಟಿಂಗ್​ ಸಂಗತಿ.

ಮೊದಲು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಟೈಟಲ್​ ಪೋಸ್ಟರ್​ ಬಿಡುಗಡೆ ಆಯಿತು. ಇದು ರಕ್ಷಿತ್​ ಶೆಟ್ಟಿ ಮತ್ತು ಹೇಮಂತ್​ ರಾವ್​ ಕಾಂಬಿನೇಷನ್​ನ ಸಿನಿಮಾ ಎಂಬ ಕಾರಣಕ್ಕೆ ಬಹಳ ನಿರೀಕ್ಷೆ ಮೂಡಿತು. ಯಾಕೆಂದರೆ ಇದೇ ಕಾಂಬಿನೇಷನ್​ನಲ್ಲಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಮೂಡಿಬಂದಿತ್ತು. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಅನೌನ್ಸ್​ ಆದಾಗ ಅದು ರುಕ್ಮಿಣಿ ವಸಂತ್​ ಅವರ ಗಮನ ಸೆಳೆಯಿತು. ಕೂಡಲೇ ಅವರು ನಿರ್ದೇಶಕರಿಗೆ ಮೆಸೇಜ್​ ಮಾಡಿ ಅವಕಾಶ ಕೇಳಿದರು.

ರಕ್ಷಿತ್​ ಶೆಟ್ಟಿ-ರಾಜ್​ ಬಿ. ಶೆಟ್ಟಿ ನಡುವೆ ಸ್ಪರ್ಧೆ ಇದೆಯಾ? ಬಹಿರಂಗ ವೇದಿಕೆಯಲ್ಲಿ ‘ಟೋಬಿ’ ಹೀರೋ ಹೇಳಿದ್ದಿಷ್ಟು..

ಇತ್ತೀಚೆಗೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲಾಯಿತು. ಆಗ ವೇದಿಕೆ ಮೇಲೆ ಅನೇಕ ವಿಚಾರಗಳನ್ನು ರುಕ್ಮಿಣಿ ವಸಂತ್​ ಅವರು ಹಂಚಿಕೊಂಡರು. ನಿರ್ದೇಶಕ ಹೇಮಂತ್​ ರಾವ್​ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಮೆಸೇಜ್​ ಮಾಡಿ ಅವಕಾಶ ಪಡೆದಿದ್ದರ ಬಗ್ಗೆ ಅವರು ವಿವರಿಸಿದರು. ಆ ಆಸಕ್ತಿಕರ ಸಂಗತಿ ಬಗ್ಗೆ ಇಲ್ಲಿದೆ ಮಾಹಿತಿ.

‘ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಹಿಟ್ ಆಗುತ್ತೆ’; ಕಾರಣಗಳೊಂದಿಗೆ ವಿವರಿಸಿದ ರಕ್ಷಿತ್ ಶೆಟ್ಟಿ

‘ಸಮುದ್ರದ ಪೋಸ್ಟರ್​ ನೋಡಿದ ತಕ್ಷಣ ಈ ಸಿನಿಮಾದಲ್ಲಿ ನಾನು ನಟಿಸಲೇಬೇಕು ಎಂದುಕೊಂಡೆ. ನಾನು ಇನ್​ಸ್ಟಾಗ್ರಾಮ್​ನಲ್ಲಿ ನಿರ್ದೇಶಕ ಹೇಮಂತ್​ ರಾವ್​ ಅವರಿಗೆ ಮೆಸೇಜ್​ ಮಾಡಿದೆ. ನಾನು ಒಂದು ಸಿನಿಮಾ ಮಾಡಿದ್ದೇನೆ. ಇದು ನನ್ನ ರೆಸ್ಯೂಮೆ. ದಯವಿಟ್ಟು ನನಗೆ ಆಡಿಷನ್​ ಮಾಡಿ ಅಂತ ಮೆಸೇಜ್​ ಕಳಿಸಿದೆ. ನಂತರ ಆಡಿಷನ್​ ನೀಡಿ ಸೆಲೆಕ್ಟ್​ ಆದೆ. ನಾನು ಆಯ್ಕೆ ಆಗಿದ್ದೇನೆ ಎಂಬುದು ಖಚಿತ ಆದಾಗ ಅದನ್ನು ವಿವರಿಸಲು ನನಗೆ ಪದಗಳೇ ಇರಲಿಲ್ಲ’ ಎಂದು ರುಕ್ಮಿಣಿ ವಂಸತ್​ ಅವರು ಹೇಳಿದ್ದಾರೆ.

ರುಕ್ಮಿಣಿ ವಸಂತ್​ ಇನ್​ಸ್ಟಾಗ್ರಾಮ್​ ಪೋಸ್ಟ್​:

ಈಗಾಗಲೇ ರುಕ್ಮಿಣಿ ವಸಂತ್​ ಅವರಿಗೆ ಒಳ್ಳೊಳ್ಳೆಯ ಅವಕಾಶಗಳು ಸಿಗುತ್ತಿವೆ. ಗಣೇಶ್​ ನಟನೆ ‘ಬಾನ ದಾರಿಯಲ್ಲಿ’ ಸಿನಿಮಾಗೆ ಅವರು ಆಯ್ಕೆ ಆಗಿದ್ದಾರೆ. ಶಿವರಾಜ್​ಕುಮಾರ್​ ನಟನೆಯ ‘ಭೈರತಿ ರಣಗಲ್​’ ಸಿನಿಮಾದಲ್ಲೂ ರುಕ್ಮಿಣಿ ನಟಿಸುತ್ತಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ರಿಲೀಸ್​ ಆದ ಬಳಿಕ ಅವರಿಗೆ ಇನ್ನಷ್ಟು ಅವಕಾಶಗಳು ಹರಿದು ಬರಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?