ಕೆಲಸ ಇಲ್ಲದೆ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಖ್ಯಾತ ಸೀರಿಯಲ್​ ನಟಿಯರು

Savdhaan India: ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ನಟಿಯರಿಬ್ಬರು ದುಡ್ಡು ತೆಗೆದುಕೊಂಡು ಹೋಗುತ್ತಿರುವುದು ಪತ್ತೆ ಆಗಿದೆ. ಹಿಡಿದು ವಿಚಾರಣೆ ನಡೆಸಿದಾಗ ದುಡ್ಡು ಕದ್ದಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ.

ಕೆಲಸ ಇಲ್ಲದೆ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಖ್ಯಾತ ಸೀರಿಯಲ್​ ನಟಿಯರು
ಕಳ್ಳತನ ಮಾಡಿ ಸಿಕ್ಕಿ ಬಿದ್ದ ಖ್ಯಾತ ಸೀರಿಯಲ್​ ನಟಿಯರು
Edited By:

Updated on: Aug 10, 2021 | 11:14 AM

ಕೊರೊನಾ ವೈರಸ್​ ಎರಡನೇ ಅಲೆ ಜೋರಾದ ಪರಿಣಾಮ ಹಲವು ಕಡೆಗಳಲ್ಲಿ ಲಾಕ್​ಡೌನ್​ ಜಾರಿ ಮಾಡಲಾಗಿತ್ತು. ಇದರಿಂದ ಅನೇಕರು ಕೆಲಸ ಇಲ್ಲದೆ ಮನೆಯಲ್ಲಿ ಕೂರುವುದು ಅನಿವಾರ್ಯ ಆಗಿತ್ತು. ಸಿನಿಮಾ ಮತ್ತು ಧಾರಾವಾಹಿ ಶೂಟಿಂಗ್​ ಕೂಡ ಸ್ಥಗಿತ ಆಗಿದ್ದರಿಂದ ಕಲಾವಿದರು ಮತ್ತು ತಂತ್ರಜ್ಞರ ಪರಿಸ್ಥಿತಿ ಸಹ ಹೀನಾಯ ಆಯಿತು. ಪರಿಣಾಮವಾಗಿ ಇಬ್ಬರು ನಟಿಯರು ಕಳ್ಳತನದ ಹಾದಿ ಹಿಡಿದಿದ್ದಾರೆ. ಲಕ್ಷಾಂತರ ರೂಪಾಯಿ ಕದ್ದು ಈಗ ಪೊಲೀಸರ ವಶವಾಗಿದ್ದಾರೆ.

ಹಿಂದಿ ಸೀರಿಯಲ್​ಗಳಲ್ಲಿ ನಟಿಸಿದ್ದ ನಟಿಯರಾದ ಸುರಭಿ ಸುರೇಂದ್ರ ಲಾಲ್​ ಶ್ರೀವತ್ಸ ಹಾಗೂ ಮೊಸಿನಾ ಮುಕ್ತರ್​ ಶೇಕ್​ ಅವರೇ ಕಳ್ಳತನದಲ್ಲಿ ಸಿಕ್ಕಿಬಿದ್ದಿರುವ ನಟಿಯರು. ಶೂಟಿಂಗ್​ ಇಲ್ಲದೇ ಇರುವಾಗ ಅವರು ಮುಂಬೈನ ಒಂದು ಐಷಾರಾಮಿ ಪಿಜಿಗೆ ಸೇರಿಕೊಂಡಿದ್ದರು. ಮೇ 18ರಂದು ಪಿಜಿಗೆ ಸೇರ್ಪಡೆಯಾದ ಈ ನಟಿಯರು ಅದೇ ಪಿಜಿಯಲ್ಲಿದ್ದ ಮಹಿಳೆಯ ಲಾಕರ್​ನಿಂದ 3.28 ಲಕ್ಷ ರೂ.ಗಳನ್ನು ಕದ್ದಿದ್ದಾರೆ. ಹಣ ಕಳೆದುಕೊಂಡ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಸುರಭಿ ಸುರೇಂದ್ರ ಲಾಲ್​ ಶ್ರೀವತ್ಸ ಹಾಗೂ ಮೊಸಿನಾ ಮುಕ್ತರ್​ ಶೇಕ್​ ದುಡ್ಡು ತೆಗೆದುಕೊಂಡು ಹೋಗುತ್ತಿರುವುದು ಪತ್ತೆ ಆಗಿದೆ. ಹಿಡಿದು ವಿಚಾರಣೆ ನಡೆಸಿದಾಗ ದುಡ್ಡು ಕದ್ದಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಸಾವಧಾನ್​ ಇಂಡಿಯಾ, ಕ್ರೈಂ ಪಟ್ರೋಲ್​ ಮುಂತಾದ ಜನಪ್ರಿಯ ಸೀರಿಯಲ್​ಗಳಲ್ಲಿ ಈ ನಟಿಯರು ಬಣ್ಣ ಹಚ್ಚಿದ್ದರು. ಕೆಲವು ವೆಬ್​ ಸಿರೀಸ್​ಗಳಲ್ಲೂ ಕಾಣಿಸಿಕೊಂಡಿದ್ದರು ಎಂಬುದು ತಿಳಿದುಬಂದಿದೆ.

ಪೊಲೀಸರ ಅತಿಥಿಗಳಾಗಿರುವ ಈ ನಟಿಯರಿಂದ ಸದ್ಯ 50 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಲಯದ ಮುಂದೆ ಇಬ್ಬರನ್ನೂ ಹಾಜರು ಪಡಿಸಲಾಗಿದ್ದು, ಜೂ.23ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಲಾಕ್​ ಡೌನ್​ ಕಾರಣದಿಂದ ಅನೇಕರ ಪರಿಸ್ಥಿತಿ ಕಷ್ಟ ಆಗಿದೆ. ಕಳೆದ ವರ್ಷ ಲಾಕ್​ ಡೌನ್​ ಸಂದರ್ಭದಲ್ಲಿ ಕೆಲವರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದರು. ಈಗ ನಿಧಾನವಾಗಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ ಆಗುತ್ತಿದೆ. ಕೆಲವು ನಗರಗಳಲ್ಲಿ ಧಾರಾವಾಹಿ, ಸಿನಿಮಾ ಶೂಟಿಂಗ್​ಗೂ ಅವಕಾಶ ಸಿಕ್ಕಿದೆ.

ಇದನ್ನೂ ಓದಿ:

ಕಳ್ಳತನ ಮಾಡಿ ಖಾರದಪುಡಿ ಮನೆ ತುಂಬಾ ಚೆಲ್ಲುತ್ತಿದ್ದ ಅಸಲಿ ಕಾರಣ ಬಯಲು; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಅತ್ತಿಗೆ-ಮೈದುನನ ನಡುವೆ ಇದೆಂಥಾ ಸಂಬಂಧ? ಆ ಒಂದು ದೃಶ್ಯದಿಂದ ಸಿಡಿದೆದ್ದ ಜನರು

Published On - 1:48 pm, Fri, 18 June 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us