ಮತ್ತೆ ಬಂದ ‘ಶಕ್ತಿಮಾನ್’: ಆದರೆ ನೀವು ಇದನ್ನು ನೋಡೋಕೆ ಆಗಲ್ಲ

Shaktimaan Returns: ಮುಕೇಶ್ ಖನ್ನಾ ಅವರು ಪ್ರಸಿದ್ಧ ಶಕ್ತಿಮಾನ್ ಪಾತ್ರವನ್ನು ಪಾಕೆಟ್ ಎಫ್ಎಂನಲ್ಲಿ ಆಡಿಯೋ ಸರಣಿಯಾಗಿ ಮತ್ತೆ ತರುತ್ತಿದ್ದಾರೆ. ಇದು ಕೇವಲ ಒಂದು ಕಾರ್ಯಕ್ರಮವಲ್ಲ, ಲಕ್ಷಾಂತರ ಜನರ ಹೃದಯದಲ್ಲಿರುವ ಭಾವನೆ ಎಂದು ಅವರು ಹೇಳಿದ್ದಾರೆ. ಹೊಸ ಕಥೆಗಳೊಂದಿಗೆ ಈ ಆಡಿಯೋ ಸರಣಿಯು ಹೊಸ ಪೀಳಿಗೆಯನ್ನು ತಲುಪುವ ನಿರೀಕ್ಷೆಯಿದೆ.

ಮತ್ತೆ ಬಂದ ‘ಶಕ್ತಿಮಾನ್’: ಆದರೆ ನೀವು ಇದನ್ನು ನೋಡೋಕೆ ಆಗಲ್ಲ
Shakthimaan
Edited By:

Updated on: May 21, 2025 | 3:03 PM

ಮುಕೇಶ್ ಖನ್ನಾ (Mukesh Khanna) ಅವರು ಶಕ್ತಿಮಾನ್ (Shaktimaan) ಮೂಲಕ ಫೇಮಸ್ ಆಗಿದ್ದರು ಅನ್ನೋದು ಎಲ್ಲರಿಗೂ ಗೊತ್ತು. 90ರ ದಶಕದಲ್ಲಿ ಈ ಶೋ ಸಾಕಷ್ಟು ಮನ್ನಣೆ ಪಡೆದಿತ್ತು. ಈ ಶೋ ಮೂಲಕ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಂತೂ ಸತ್ಯ. ಈ ಶೋ ಮೇಲೆ ಅವರು ವಿಶೇಷ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಕಳೆದ ವರ್ಷ ಈ ಶೋನ ಮತ್ತೆ ತರೋದಾಗಿ ಮುಕೇಶ್ ಹೇಳಿದ್ದರು. ಈಗ ಈ ಶೋ ಮತ್ತೆ ಬರೋಕೆ ರೆಡಿ ಆಗಿದೆ. ಆದರೆ, ಇದನ್ನು ನೋಡೋಕೆ ಆಗೋದಿಲ್ಲ. ಏಕೆಂದರೆ, ಆಡಿಯೋ ರೀತಿಯಲ್ಲಿ ಈ ಶೋ ಬರಲಿದೆಯಂತೆ.

ಪಾಕೆಟ್ ಎಫ್​ಎಂನಲ್ಲಿ ಒರಿಜಿನಲ್ ಆಡಿಯೋ ಸೀರಿಸ್ ಆಗಿ ‘ಶಕ್ತಿಮಾನ್’ ಬರಲಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಶಕ್ತಿಮಾನ್ ಕೇವಲ ಒಂದು ಕಾರ್ಯಕ್ರಮವಲ್ಲ, ಇದು ಲಕ್ಷಾಂತರ ಜನರ ಹೃದಯಗಳಲ್ಲಿರುವ ಒಂದು ಭಾವನೆ. ಶಕ್ತಿಮಾನ್ ಧ್ವನಿ ಮೂಲಕ ಹೊಸ ಪೀಳಿಗೆಯ ಕೇಳುಗರೊಂದಿಗೆ ಸಂಪರ್ಕ ಸಾಧಿಸಲು ನಾನು ರೋಮಾಂಚನಗೊಂಡಿದ್ದೇನೆ. ಈ ವೇದಿಕೆಯು ಶಕ್ತಿಮಾನ್ ಹಾಗೂ ಆತನ ಮೌಲ್ಯಗಳು, ಶಕ್ತಿ ಮತ್ತು ಪುನಃ ಪರಿಚಯಿಸಲು ಉತ್ತಮ ಮಾರ್ಗ ಇದು. ಇಂದಿನ ಯುವಕರಿಗೆ ಅವರು ಇಷ್ಟಪಡುವ ಸ್ವರೂಪದಲ್ಲಿ ಹೊಸ ಕಥೆಗಳೊಂದಿಗೆ ಬರುತ್ತೇನೆ’ ಎಂದು ಅವರು ಹೇಳಿದ್ದಾರೆ.

ಶಕ್ತಿಮಾನ್ ಅನ್ನೋದು ವೀಕ್ಷಣೆಗೆ ಸಿಕ್ಕರೆ ಚೆನ್ನಾಗಿ ಇರುತ್ತದೆ. ಆದರೆ, ಈ ಕಥೆಗಳನ್ನು ಕೇವಲ ಕೇಳಬೇಕು ಎಂದರೆ ಫ್ಯಾನ್ಸ್ ಥ್ರಿಲ್ ಆಗಿ ಬಿಡುತ್ತಾರೆ ಎಂದು ಹೇಳೋಕೆ ಆಗುವುದಿಲ್ಲ. ಹೀಗಾಗಿ, ಈ ಸೂಪರ್ ಹೀರೋ ಕಥೆ ಹಿಟ್ ಆಗಿಯೇ ಬಿಡುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ ಎನ್ನುವ ಮಾತು ವ್ಯಕ್ತವಾಗಿದೆ.

ಶೋ ತರ್ತೀನಿ ಎಂದಿದ್ದ ಮುಕೇಶ್ ಖನ್ನಾ

ಕಳೆದ ವರ್ಷ ಈ ಶೋನ ಮತ್ತೆ ತರೋದಾಗಿ ಅವರು ಹೇಳಿದ್ದರು. ‘ಈ ಬಟ್ಟೆ ನನ್ನಲ್ಲೇ ಇದೆ. ನನ್ನಲ್ಲೇ ಬೆರೆತು ಹೋಗಿದೆ. ಶಕ್ತಿಮಾನ್​ನಲ್ಲಿ ನಾನು ಉತ್ತಮವಾಗಿ ನಟಿಸಿದ್ದೆ. ಶೂಟಿಂಗ್ ಮಾಡುವಾಗ ಕ್ಯಾಮೆರಾ ಇದೆ ಎಂಬುದನ್ನೇ ಮರೆತಿದ್ದೆ. 1997ರಿಂದ 20005ರವರೆಗೆ ಶೋ ನಡೆದಿತ್ತು. ಈ ಪಾತ್ರ ಈಗಿನ ಜನರೇಷನ್ ತಲುಪಬೇಕು’ ಎಂದಿದ್ದರು. 2027ರ ವೇಳೆಗೆ ಈ ಶೋ ಪ್ರಸಾರ ಕಾಣುವ ಭರವಸೆಯನ್ನು ಅವರು ಹೊರಹಾಕಿದ್ದರು.

‘ಶಕ್ತಿಮಾನ್’ ಹೆಸರಲ್ಲಿ ಸಿನಿಮಾ ಒಂದು ಮೂಡಿ ಬರುತ್ತಿದೆ ಎನ್ನುವ ಸುದ್ದಿ ಇದೆ. ಇದನ್ನು ರಣವೀರ್ ಸಿಂಗ್ ಮಾಡುತ್ತಾರೆ ಎಂದು ಈ ಮೊದಲು ವರದಿ ಆಗಿದೆ. ಈ ಬಗ್ಗೆ ಮುಕೇಶ್​ಗೆ ಅಸಮಾಧಾನ ಇದೆ. ರಣವೀರ್ ಬೆತ್ತಲೆ ಆಗಿ ಕಾಣಿಸಿಕೊಂಡಿದ್ದರು. ಇಂಥವರಿಂದ ಸಿನಿಮಾ ಮಾಡಿಸಬಾರದು ಎಂದು ಅವರು ಆಗ್ರಹಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:02 pm, Wed, 21 May 25

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us