AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರತಕ್ಷತೆಯಲ್ಲೂ ವಿಶೇಷ ಉಡುಗೆ ಧರಿಸಿ ಕಂಗೊಳಿಸಿದ ರಶ್ಮಿಕಾ-ವಿಜಯ್: ವಿಶೇಷತೆಯೇನು?

Vijay Deverakonda and Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ರಿಸೆಪ್ಷನ್​​ಗೂ ಸಹ ಭಿನ್ನವಾದ ಕಂಗೊಳಿಸುವ ಉಡುಗೆಗಳೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಸಾಮಾನ್ಯವಾಗಿ ಮದುವೆಗೆ ಶಾಸ್ತ್ರೀಯ ಉಡುಪು ಧರಿಸುವ ಜೋಡಿ, ರಿಸೆಪ್ಷನ್​​ಗೆ ಆಧುನಿಕ ರೀತಿಯ ಉಡುಪು ಧರಿಸುತ್ತಾರೆ. ಆದರೆ ವಿಜಯ್ ಮತ್ತು ರಶ್ಮಿಕಾ ತಮ್ಮ ರಿಸೆಪ್ಷನ್​​ಗೆ ಸಹ ಸರಳವಾದ ಆದರೆ ಸಾಂಪ್ರದಾಯಿಕವಾದ ಉಡುಗೆಗಳನ್ನು ಧರಿಸಿ ಮಿಂಚಿದರು.

ಆರತಕ್ಷತೆಯಲ್ಲೂ ವಿಶೇಷ ಉಡುಗೆ ಧರಿಸಿ ಕಂಗೊಳಿಸಿದ ರಶ್ಮಿಕಾ-ವಿಜಯ್: ವಿಶೇಷತೆಯೇನು?
Vijay Rashmika
ಮಂಜುನಾಥ ಸಿ.
|

Updated on: Mar 05, 2026 | 12:30 PM

Share

ಸ್ಟಾರ್ ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಇವರ ಮದುವೆ ಚಿತ್ರಗಳು ನ್ಯಾಷನಲ್ ನ್ಯೂಸ್ ಆಗಿದ್ದವು. ಮದುವೆಯ ದಿನ ಈ ಜೋಡಿ ಶಿವ-ಪಾರ್ವತಿಯ ರೂಪದಲ್ಲಿ ಕಂಗೊಳಿಸಿದ್ದರು. ಇಬ್ಬರೂ ಧರಿಸಿದ್ದ ಚಿನ್ನದ ಆಭರಣಗಳ ಡಿಸೈನ್ ಅಂತೂ ಸಖತ್ ವೈರಲ್ ಆಗಿದ್ದವು. ರಿಸೆಪ್ಷನ್​​ಗೂ ಸಹ ಭಿನ್ನವಾದ ಕಂಗೊಳಿಸುವ ಉಡುಗೆಗಳೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಸಾಮಾನ್ಯವಾಗಿ ಮದುವೆಗೆ ಶಾಸ್ತ್ರೀಯ ಉಡುಪು ಧರಿಸುವ ಜೋಡಿ, ರಿಸೆಪ್ಷನ್​​ಗೆ ಆಧುನಿಕ ರೀತಿಯ ಉಡುಪು ಧರಿಸುತ್ತಾರೆ. ಆದರೆ ವಿಜಯ್ ಮತ್ತು ರಶ್ಮಿಕಾ ತಮ್ಮ ರಿಸೆಪ್ಷನ್​​ಗೆ ಸಹ ಸರಳವಾದ ಆದರೆ ಸಾಂಪ್ರದಾಯಿಕವಾದ ಉಡುಗೆಗಳನ್ನು ಧರಿಸಿ ಮಿಂಚಿದರು.

ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ನಿನ್ನೆ ರಾತ್ರಿ ಈ ಜೋಡಿಯ ಅದ್ಧೂರಿ ರಿಸೆಪ್ಷನ್‌ ನಡೆಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಗಳನ್ನು ಈ ಜೋಡಿ ಧರಿಸಿದ್ದರು. ಮತ್ತೊಂದು ವಿಶೇಷವೆಂದರೆ ಇಬ್ಬರ ಉಡುಗೆಗಳು ಅವರವರ ರಾಜ್ಯವನ್ನು ಪ್ರತಿನಿಧಿಸುತ್ತಿತ್ತು. ನಟಿ ರಶ್ಮಿಕಾ, ಮೈಸೂರು ರೇಷ್ಮೆ ಸೀರೆ ಧರಿಸಿದ್ದರೆ ವಿಜಯ್ ದೇವರಕೊಂಡ ತೆಲಂಗಾಣದ ಸಾಂಪ್ರದಾಯಿಕ ಪಂಚೆ, ಶಲ್ಯ ಧರಿಸಿದ್ದರು.

ಆರತಕ್ಷತೆ ಕಾರ್ಯಕ್ರಮದಲ್ಲಿ ಗಾಢ ಕೆಂಪು ಬಣ್ಣದ (Deep Red) ಭವ್ಯವಾದ ಮೈಸೂರು ಸಿಲ್ಕ್ ಸೀರೆಯನ್ನು ರಶ್ಮಿಕಾ ಧರಿಸಿದ್ದರು. ಈ ಸೀರೆಯ ಬಾರ್ಡರ್‌ನಲ್ಲಿ ಚಿನ್ನದ ಜರಿ ಕೆಲಸವಿದ್ದು, ವಿಶೇಷವಾಗಿ ಮೈಸೂರು ರಾಜಮನೆತನದ ಲಾಂಛನವಾದ ಗಂಡಭೇರುಂಡ ಪಕ್ಷಿಯ ವಿನ್ಯಾಸವನ್ನು ಬೆಳ್ಳಿ ಮತ್ತು ಬಂಗಾರದ ಎಳೆಗಳಿಂದ ನೆಯ್ಯಲಾಗಿತ್ತು. ರಶ್ಮಿಕಾ ತಮ್ಮ ಕರ್ನಾಟಕದ ನಂಟನ್ನು ನೆನಪಿಸುವ ಉಡುಗೆ ಧರಿಸಿ ಕಂಗೊಳಿಸಿದರು.

ಇದನ್ನೂ ಓದಿ:ರಶ್ಮಿಕಾನಾ ವಿಜಯ್ ಎಷ್ಟು ಕೇರ್ ಮಾಡ್ತಾರೆ ನೋಡಿ

ಕೊರಳಿನಲ್ಲಿ ನಕ್ಷಿ ಕೆಲಸದ ನವಿಲು ವಿನ್ಯಾಸದ ಹಾರ, ಕೆಂಪು ಕೆಂಪು ಮಾಣಿಕ್ಯ ಮತ್ತು ಹಸಿರು ಪಚ್ಚೆ ಹರಳುಗಳು ಕೆತ್ತಿದ ಸಾಂಪ್ರದಾಯಿಕ ಆಭರಣಗಳನ್ನು ಧರಿಸಿದ್ದರು. ಹಣೆಯಲ್ಲಿ ಸಣ್ಣ ಬಿಂದಿ, ಮಲ್ಲಿಗೆ ಹೂ ಮುಡಿದ ಜಡೆ ರಶ್ಮಿಕಾ ಅವರ ಸೌಂದರ್ಯಕ್ಕೆ ಮತ್ತಷ್ಟು ಕಳೆ ನೀಡಿತ್ತು.

ಇನ್ನು ವಿಜಯ್ ದೇವರಕೊಂಡ ಅವರು ರಶ್ಮಿಕಾ ಅವರಿಗೆ ಪೂರಕವಾಗಿ ತಿಳಿ ಬಿಳಿ ಬಣ್ಣದ ರೇಷ್ಮೆ ಪಂಚೆ ಹಾಗೂ ವಿ-ನೆಕ್ ಶರ್ಟ್ ಧರಿಸಿದ್ದರು. ಅವರ ಅಂಗವಸ್ತ್ರದ ಮೇಲೆ ಗಜ-ಕೇಸರಿ ವಿನ್ಯಾಸವಿದ್ದು, ಇದು ಅವರ ರಾಯಲ್ ಲುಕ್‌ಗೆ ಸಾಕ್ಷಿಯಾಗಿತ್ತು. ಯಾವುದೇ ಅಬ್ಬರವಿಲ್ಲದ, ಅತ್ಯಂತ ಸರಳ ಹಾಗೂ ಸುಂದರ ಬಿಳಿ ಚಿನ್ನದ ಸರಗಳನ್ನು ಧರಿಸುವ ಮೂಲಕ ವಿಜಯ್ ಎಲ್ಲರ ದೃಷ್ಟಿ ಸೆಳೆದರು.

ಮಾರ್ಚ್ 4ರಂದು ನಡೆದ ಈ ಅದ್ಧೂರಿ ಔತಣಕೂಟದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟ-ನಟಿಯರು, ನಿರ್ದೇಶಕರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು. ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್, ತೆಲುಗು ಚಿತ್ರರಂಗದ ಗಣ್ಯರಾದ ಚಿರಂಜೀವಿ, ರಾಮ್ ಚರಣ್, ಅಲ್ಲು ಅರ್ಜುನ್ ಇನ್ನೂ ಹಲವಾರು ಮಂದಿ ಇವರ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!