AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಗನಾ ರಣಾವತ್​-ತಾಪ್ಸೀ ಪನ್ನು ಈಗ ಫ್ರೆಂಡ್ಸ್​! ಜಗಳ ಅಂತ್ಯ ಆಗಿದ್ದಕ್ಕೆ ಕಾರಣ ಏನು?

ರಾಜಕೀಯದಲ್ಲಿ ಯಾರಿಗೆ ಯಾರೂ ಮಿತ್ರರಲ್ಲ, ಶತ್ರುವೂ ಅಲ್ಲ ಎಂಬ ಮಾತಿದೆ. ಅದು ಸಿನಿಮಾ ಕ್ಷೇತ್ರದ ರಾಜಕೀಯಕ್ಕೂ ಅನ್ವಯ ಆಗಬಹುದೇನೋ. ಕಂಗನಾ ಮತ್ತು ತಾಪ್ಸೀ ನಡುವೆ ಸ್ನೇಹ ಚಿಗುರಿರುವುದು ಕಂಡು ಸಿನಿಪ್ರಿಯರು ಅಚ್ಚರಿಪಟ್ಟಿದ್ದಾರೆ.

ಕಂಗನಾ ರಣಾವತ್​-ತಾಪ್ಸೀ ಪನ್ನು ಈಗ ಫ್ರೆಂಡ್ಸ್​! ಜಗಳ ಅಂತ್ಯ ಆಗಿದ್ದಕ್ಕೆ ಕಾರಣ ಏನು?
ಕಂಗನಾ ರಣಾವತ್​-ತಾಪ್ಸೀ ಪನ್ನು
ಮದನ್​ ಕುಮಾರ್​
|

Updated on: Apr 11, 2021 | 8:27 AM

Share

ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರು ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ತಮ್ಮ ಅನಿಸಿಕೆಯನ್ನು ನೇರವಾಗಿ ಹೇಳುವ ಭರದಲ್ಲಿ ಹಲವು ಸೆಲೆಬ್ರಿಟಿಗಳ ಜೊತೆ ಅವರು ಜಗಳ ಮಾಡಿಕೊಂಡಿದ್ದಾರೆ. ಸಿದ್ಧಾಂತದ ಕಾರಣದಿಂದಲೂ ಕಂಗನಾ ಆಗಾಗ ಕಿರಿಕ್​ ಮಾಡಿಕೊಳ್ಳುತ್ತ ಇರುತ್ತಾರೆ. ಅದರಲ್ಲೂ ನಟಿ ತಾಪ್ಸೀ ಪನ್ನು ಜೊತೆ ಕಂಗನಾ ಹಲವು ಬಾರಿ ಕಿತ್ತಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಇಬ್ಬರ ನಡುವೆ ಎಷ್ಟೋ ಸಲ ಜಗಳ ಆಗಿದೆ. ಆದರೆ ಈಗ ಏಕಾಏಕಿ ಇಬ್ಬರೂ ಫ್ರೆಂಡ್ಸ್​ ಆಗಿದ್ದಾರೆ!

ರಾಜಕೀಯದಲ್ಲಿ ಯಾರಿಗೆ ಯಾರೂ ಮಿತ್ರರಲ್ಲ, ಶತ್ರುವೂ ಅಲ್ಲ ಎಂಬ ಮಾತಿದೆ. ಅದು ಸಿನಿಮಾ ಕ್ಷೇತ್ರದ ರಾಜಕೀಯಕ್ಕೂ ಅನ್ವಯ ಆಗಬಹುದೇನೋ. ಕಂಗನಾ ರಣಾವತ್​ ಮತ್ತು ತಾಪ್ಸೀ ಪನ್ನು ನಡುವಿನ ಮಾತುತೆ ಗಮನಿಸಿದರೆ ಹಾಗೇ ಅನಿಸುತ್ತದೆ. ಇಷ್ಟು ದಿನಗಳ ಕಾಲ ಬಹಿರಂಗವಾಗಿ ಬೈಯ್ದುಕೊಂಡಿದ್ದ ಈ ನಟಿಯರು ಈಗ ಒಬ್ಬರನ್ನೊಬ್ಬರು ಹೊಗಳಿಕೊಂಡಿದ್ದಾರೆ.

ಇತ್ತೀಚೆಗೆ ತಾಪ್ಸೀ ಪನ್ನು ಅವರಿಗೆ ಫಿಲ್ಮ್​ ಫೇರ್​ ಪ್ರಶಸ್ತಿ ಸಿಕ್ಕಿತು. ತಪ್ಪಡ್​ ಸಿನಿಮಾದಲ್ಲಿನ ನಟನೆಗಾಗಿ ಅವರು ‘ಅತ್ಯುತ್ತಮ ನಟಿ’ ಎಂಬ ಮನ್ನಣೆಗೆ ಪಾತ್ರರಾದರು. ಈ ಪ್ರಶಸ್ತಿಯನ್ನು ಸ್ವೀಕರಿಸಲು ವೇದಿಕೆ ಏರಿದ ಸಂದರ್ಭದಲ್ಲಿ ಕಂಗನಾಗೆ ತಾಪ್ಸೀ ಧನ್ಯವಾದ ಹೇಳಿದ್ದಾರೆ! ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ‘ಗಡಿಗಳನ್ನು ಮೀರಿ ಬೆಳೆಯುವಂತೆ ಮಾಡಿದ್ದಕ್ಕಾಗಿ ಕಂಗನಾ ನಿಮಗೆ ಧನ್ಯವಾದಗಳು. ಪ್ರತಿ ವರ್ಷ ನಿಮ್ಮ ನಟನೆ ಅತ್ಯುತ್ತಮ ಆಗುತ್ತಲೇ ಇದೆ’ ಎಂದು ತಾಪ್ಸೀ ಹೇಳಿದ್ದಾರೆ.

ಈ ವಿಡಿಯೋ ಅನೇಕರಿಗೆ ಇಷ್ಟ ಆಗಿದೆ. ಹಾಗಾಗಿ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅದು ಕಂಗನಾ ರಣಾವತ್​ ಅವರ ಗಮನಕ್ಕೂ ಬಂದಿದೆ. ತಾಪ್ಸೀ ಮಾತಿಗೆ ಕಂಗನಾ ಅಷ್ಟೇ ಸ್ನೇಹಪೂರ್ವಕವಾಗಿ ಉತ್ತರಿಸಿದ್ದಾರೆ. ‘ಧನ್ಯವಾದಗಳು… ಫಿಲ್ಮ್​ ಫೇರ್​ ಪ್ರಶಸ್ತಿಗೆ ಬೇರೆ ಯಾರೂ ನಿಮಗಿಂತ ಹೆಚ್ಚು ಅರ್ಹರಿಲ್ಲ’ ಎಂದು ಕಂಗನಾ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಇಬ್ಬರ ನಡುವೆ ಸ್ನೇಹ ಚಿಗುರಿರುವುದು ಕಂಡು ಸಿನಿಪ್ರಿಯರು ಅಚ್ಚರಿಪಟ್ಟಿದ್ದಾರೆ.

ಬಾಲಿವುಡ್​ನಲ್ಲಿ ಬೇರೂರಿರುವ ನೆಪೋಟಿಸಂ, ಸುಶಾಂತ್​ ಆತ್ಮಹತ್ಯೆ ಪ್ರಕರಣ, ನಿರ್ದೇಶಕ ಅನುರಾಗ್​ ಕಶ್ಯಪ್​ ಮೇಲಿನ ಮೀಟೂ ಆರೋಪ, ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ ಮುಂತಾದ ಎಲ್ಲ ವಿಚಾರಗಳಲ್ಲೂ ತಾಪ್ಸೀ ಪನ್ನು ಮತ್ತು ಕಂಗನಾ ರಣಾವತ್​ ಭಿನ್ನಾಭಿಪ್ರಾಯ ಹೊಂದಿದ್ದರು ಹಾಗೂ ಪರಸ್ಪರ ವಾಗ್ವಾದ ಮಾಡಿಕೊಂಡಿದ್ದರು.

ಇದನ್ನೂ ಓದಿ: ಜ್ಚರ ಇದ್ದರೂ ಲೆಕ್ಕಿಸದೆ ಶೂಟಿಂಗ್ ಮಾಡಿದ ನಟಿ ಕಂಗನಾ

ಜ್ಚರ ಇದ್ದರೂ ಲೆಕ್ಕಿಸದೆ ಶೂಟಿಂಗ್ ಮಾಡಿದ ನಟಿ ಕಂಗನಾ

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ