AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಚ್ಚನ ಎದುರು ಕಣ್ಣೀರು ಹಾಕಿದ ಅರುಣ್ ಸಾಗರ್​; ಇದಕ್ಕೆ ಕಾರಣ ರೂಪೇಶ್ ಶೆಟ್ಟಿ ತಂದೆ

ವೀಕೆಂಡ್ ಬಂದಿದೆ. ಸುದೀಪ್ ಅವರು ವಾರಾಂತ್ಯದ ಎಪಿಸೋಡ್​ ನಡೆಸಿಕೊಟ್ಟಿದ್ದಾರೆ. ಈ ವೇಳೆ ಅವರು ಒಂದು ಪ್ರಶ್ನೆ ಕೇಳಿದ್ದಾರೆ. ‘ಸ್ಪರ್ಧಿಗಳ ಕುಟುಂಬದವರು ಬಂದು ಹೋದರು. ಈ ಪೈಕಿ ಯಾರು ಆ ಕ್ಷಣವನ್ನು ಬಾಳಿ ಬದುಕಿದರು’ ಎಂದು ಕೇಳಿದ್ದಾರೆ ಸುದೀಪ್.

ಕಿಚ್ಚನ ಎದುರು ಕಣ್ಣೀರು ಹಾಕಿದ ಅರುಣ್ ಸಾಗರ್​; ಇದಕ್ಕೆ ಕಾರಣ ರೂಪೇಶ್ ಶೆಟ್ಟಿ ತಂದೆ
ಅರುಣ್ ಸಾಗರ್-ಸುದೀಪ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Dec 03, 2022 | 6:09 PM

Share

ಅರುಣ್ ಸಾಗರ್ (Arun Sagar) ಅವರು ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಮನರಂಜನೆಯಲ್ಲಿ ಎತ್ತಿದ ಕೈ. ಅಷ್ಟೇ ಅಲ್ಲ, ತಪ್ಪಾದಾಗ ಖಂಡಿಸಿ ಅದನ್ನು ಎಲ್ಲರ ಎದುರು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಈ ಕಾರಣಕ್ಕೆ ಅನೇಕರಿಗೆ ಅವರು ಇಷ್ಟವಾಗುತ್ತಾರೆ. ಅರುಣ್ ಸಾಗರ್​ ಅವರು ಈಗ ಕಿಚ್ಚ ಸುದೀಪ್ (Kichcha Sudeep) ಎದುರು ಕಣ್ಣಿರು ಹಾಕಿದ್ದಾರೆ. ಇದಕ್ಕೆ ಕಾರಣ ರೂಪೇಶ್ ಶೆಟ್ಟಿ. ಅಷ್ಟಕ್ಕೂ ಆಗಿದ್ದೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಈ ವಾರ ಬಿಗ್ ಬಾಸ್ ಮಂದಿಗೆ ವಿಶೇಷ ಆಗಿತ್ತು. ಇದಕ್ಕೆ ಕಾರಣ ಸ್ಪರ್ಧಿಗಳ ಕುಟುಂಬದವರು ದೊಡ್ಮನೆಗೆ ಬಂದಿದ್ದರು. ಕುಟುಂಬದವರು ಒಂದಷ್ಟು ಸಮಯ ಬಿಗ್ ಬಾಸ್ ಮನೆಯಲ್ಲಿ ಕಳೆದು ಹೋಗಿದ್ದಾರೆ. ಮತ್ತೊಂದು ವಿಶೇಷ ಎಂದರೆ, ಪ್ರತಿ ಸ್ಪರ್ಧಿಯ ಕುಟುಂಬದವರು ಬಂದಾಗಲೂ ಇತರ ಸ್ಪರ್ಧಿಗಳೂ ಖುಷಿ ಪಟ್ಟಿದ್ದಾರೆ. ಇತರ ಸ್ಪರ್ಧಿಗಳ ಕುಟುಂಬ ಸದಸ್ಯರಲ್ಲಿ ತಮ್ಮ ಕುಟುಂಬದವರನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಾರಿ ರೂಪೇಶ್ ಶೆಟ್ಟಿ ಅವರ ತಂದೆ ಬಂದಿದ್ದರು. ಅರುಣ್ ಸಾಗರ್ ಅವರು ರೂಪೇಶ್ ತಂದೆಯಲ್ಲಿ ತಮ್ಮ ತಂದೆಯನ್ನು ಕಂಡಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಎದುರು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

ವೀಕೆಂಡ್ ಬಂದಿದೆ. ಸುದೀಪ್ ಅವರು ವಾರಾಂತ್ಯದ ಎಪಿಸೋಡ್​ ನಡೆಸಿಕೊಟ್ಟಿದ್ದಾರೆ. ಈ ವೇಳೆ ಅವರು ಒಂದು ಪ್ರಶ್ನೆ ಕೇಳಿದ್ದಾರೆ. ‘ಸ್ಪರ್ಧಿಗಳ ಕುಟುಂಬದವರು ಬಂದು ಹೋದರು. ಈ ಪೈಕಿ ಯಾರು ಆ ಕ್ಷಣವನ್ನು ಬಾಳಿ ಬದುಕಿದರು’ ಎಂದು ಕೇಳಿದ್ದಾರೆ ಸುದೀಪ್. ಇದಕ್ಕೆ ಉತ್ತರಿಸಿದ ರೂಪೇಶ್ ರಾಜಣ್ಣ ಅವರು, ‘ಅರುಣ್ ಸಾಗರ್ ಅವರ ಪತ್ನಿ ಶೇ.95 ಸಮಯ ಅವರ ಹೆಗಲಮೇಲೆ ಕಳೆದಿದ್ದಾರೆ’ ಎಂದರು.

ಇದನ್ನೂ ಓದಿ: ‘ನೀವು ಮೊದ್ಲು ಕಳ್ಳತನ ಮಾಡ್ತಿದ್ರಾ?’; ಕಾವ್ಯಶ್ರೀ ಗೌಡ ಕೈಚಳಕ ನೋಡಿ ಅಚ್ಚರಿಗೊಂಡ ಅರುಣ್ ಸಾಗರ್  

ಅರುಣ್ ಸಾಗರ್ ಅವರು ತಮ್ಮ ಅನುಭವ ಹೇಳುವಾಗ ಭಾವುಕರಾದರು. ‘ನಾನು ನನ್ನ ತಂದೆಯನ್ನು ಐದೂವರೆ ವರ್ಷದವನಿದ್ದಾಗ ಕಳೆದುಕೊಂಡಿದ್ದೆ. ರೂಪೇಶ್ ತಂದೆ ಬಂದಾಗ ನನ್ನ ತಂದೆ ತುಂಬಾನೇ ನೆನಪಾಯ್ತು. ತಂದೆ ಪ್ರೀತಿ ಅನ್ನೋದು ತುಂಬಾನೇ ಮುಖ್ಯ. ನಾನು ರೂಪೇಶ್ ರಾಜಣ್ಣ ಅವರ ತಂದೆಯಲ್ಲಿ ನನ್ನ ತಂದೆಯನ್ನು ಕಂಡೆ’ ಎಂದಿದ್ದಾರೆ ಅರುಣ್ ಸಾಗರ್. ಇದನ್ನು ಹೇಳುವಾಗ ಅವರು ಭಾವುಕರಾದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:06 pm, Sat, 3 December 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ