ಅಶ್ವಿನಿ ಗೌಡ ವಿಷಯದಲ್ಲಿ ಗಿಲ್ಲಿ ಹೇಳಿದ್ದ ಆ ಮಾತು ನಿಜವೇ ಆಯ್ತು

ಬಿಗ್ ಬಾಸ್ ಕನ್ನಡ 12ರ ನಂತರವೂ ಅಶ್ವಿನಿ ಗೌಡ ಮತ್ತು ಚೈತ್ರಾ ಕುಂದಾಪುರ ಕಿತ್ತಾಟ ಮುಂದುವರಿದಿದೆ. ದೊಡ್ಮನೆಯಲ್ಲಿ ಆದ ಪರಚು ಗಾಯಗಳ ಬಗ್ಗೆ ಅಶ್ವಿನಿ ಈಗ ಚೈತ್ರಾ ಮೇಲೆ ಉದ್ದೇಶಪೂರ್ವಕ ಆರೋಪ ಮಾಡಿದ್ದಾರೆ. ಇದಕ್ಕೆ ಚೈತ್ರಾ ಆಟವನ್ನು ಆಟವಾಗಿಯೇ ನೋಡುತ್ತೇನೆ ಎಂದಿದ್ದಾರೆ. ಹೆಣ್ಣು ಮಕ್ಕಳು ಜಗಳ ಆರಂಭಿಸಿದರೆ ಮುಗಿಯದು ಎಂಬ ಗಿಲ್ಲಿ ಮಾತು ನಿಜವಾಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಅಶ್ವಿನಿ ಗೌಡ ವಿಷಯದಲ್ಲಿ ಗಿಲ್ಲಿ ಹೇಳಿದ್ದ ಆ ಮಾತು ನಿಜವೇ ಆಯ್ತು
ಅಶ್ವಿನಿ-ಗಿಲ್ಲಿ

Updated on: Feb 13, 2026 | 7:37 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಪೂರ್ಣಗೊಂಡು ತಿಂಗಳೇ ಕಳೆದರೂ ಅದರ ಬಗ್ಗೆ ಆಗುತ್ತಿರುವ ಚರ್ಚೆಗಳು ನಿಂತಿಲ್ಲ. ಒಂದಲ್ಲಾ ಒಂದು ಕಾರಣಕ್ಕೆ ಈ ಸೀಸನ್ ಸ್ಪರ್ಧಿಗಳ ಹೆಸರು ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಈ ಬಾರಿ ಅಶ್ವಿನಿ ಗೌಡ ಹಾಗೂ ಚೈತ್ರಾ ಕುಂದಾಪುರ ಕಿತ್ತಾಟ ಹೈಲೈಟ್ ಆಗಿದೆ. ದೊಡ್ಮನೆ ಆಟ ಮುಗಿದು ತಿಂಗಳಾದರೂ ಈ ಜಗಳ ನಿಂತಿಲ್ಲ. ಈಗ ಗಿಲ್ಲಿ ಹೇಳಿದ ಮಾತನ್ನು ನೆಟ್ಟಿಗರು ನೆನಪಿಸಿಕೊಳ್ಳುತ್ತಿದ್ದಾರೆ.

ಅಶ್ವಿನಿ ಹಾಗೂ ಚೈತ್ರಾ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡುವಾಗ ಪರಸ್ಪರ ಪರಚಿಕೊಂಡಿದ್ದರು. ಆಗ ಆದ ಗಾಯಗಳ ಬಗ್ಗೆ ಅಲ್ಲಿಯೇ ಚರ್ಚೆ ಆಗಿತ್ತು. ‘ಆಟದ ಭರದಲ್ಲಿ ಹಾಗಾಗಿದೆ’ ಎಂದು ಮಾತನಾಡಿಕೊಂಡು ಆ ವಿಷಯವನ್ನು ಅಲ್ಲಿಗೆ ಬಿಟ್ಟಿದ್ದರು. ದೊಡ್ಮನೆಯಿಂದ ಹೊರ ಬಂದ ಬಳಿಕ ಈ ಕಿತ್ತಾಟ ಮುಂದುವರಿದಿದೆ.

ಕೈಗೆ ಆದ ಗಾಯಗಳ ಕಲೆಗಳ ಫೋಟೋಗಳನ್ನು ಹಾಕಿದ್ದ ಅಶ್ವಿನಿ ಗೌಡ, ‘ಯಾವ ಪ್ರಾಣಿ ಪರಚಿದ್ದು’ ಎಂದು ಕೇಳಿದ್ದರು. ಇದಕ್ಕೆ ಉತ್ತರ ಕೊಟ್ಟಿದ್ದ ಚೈತ್ರಾ ಕುಂದಾಪುರ ಅವರು, ‘ನನಗೂ ಗಾಯಗಳಾಗಿವೆ, ಆಟವನ್ನು ಆಟವಾಗಿಯೇ ನೋಡುತ್ತೇನೆ’ ಅಷ್ಟೆ ಎಂದು ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: ಬಿಗ್ ಬಾಸ್ ಮುಗಿದು ಇಷ್ಟು ದಿನವಾದ್ರೂ ಕಡಿಮೆ ಆಗಿಲ್ಲ ಗಿಲ್ಲಿ ನಟ ಹವಾ

ಈಗ ಅಶ್ವಿನಿ ಗೌಡ ಅವರು ಮಾಧ್ಯಮದವರ ಜೊತೆ ಮಾತನಾಡಿ, ಚೈತ್ರಾ ಅವರು ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ಕೇಳಿದ ನೆಟ್ಟಿಗರು ಗಿಲ್ಲಿ ಮಾತನ್ನು ನೆನಪಿಸಿಕೊಂಡಿದ್ದಾರೆ. ‘ಹೆಣ್ಣು ಮಕ್ಕಳು ಜಗಳ ಆರಂಭಿಸಿದರೆ ಅದು ಮುಗಿಯೋದೇ ಇಲ್ಲ ಎಂದಿದ್ದರು. ಆ ಮಾತು ಈಗ ನಿಜವಾಗಿದೆ.


ಅಶ್ವಿನಿ ಗೌಡ ಅವರು ಬಿಗ್ ಬಾಸ್​​ನಿಂದ ಹೊರ ಬಂದ ಬಳಿಕ ಹಲವು ವಿಷಯಗಳ ಬಗ್ಗೆ ಕೊಂಕು ತೆಗೆದಿದ್ದರು.  ಗಿಲ್ಲಿಗೆ ಕಪ್ ಸಿಕ್ಕ ವಿಷಯದಲ್ಲಿ ಅವರಿಗೆ ಸಾಕಷ್ಟು ಅಸಮಾಧಾನ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.