Gilli Nata
ಗಿಲ್ಲಿ ನಟ ಅವರು ಕನ್ನಡ ಚಿತ್ರರಂಗದ ಹಾಸ್ಯ ನಟ. ಹಲವು ರಿಯಾಲಿಟಿ ಶೋಗಳನ್ನು ಅವರು ಮಾಡಿದ್ದಾರೆ. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮೂಲಕ ಅಪಾರ ಜನಪ್ರಿಯತೆಯನ್ನು ಅವರು ಪಡೆದುಕೊಂಡಿದ್ದಾರೆ. ಗಿಲ್ಲಿ ನಟ ಅವರು ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ಅವರು. ಸೆಟ್ ಬಾಯ್ ಆಗಿದ್ದ ಅವರು ನಂತರ ಬಣ್ಣದ ಲೋಕಕ್ಕೆ ಬಂದು ಮಿಂಚಿದರು. ಅವರು ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’, ‘ಕಾಮಿಡಿ ಕಿಲಾಡಿಗಳು’ ರೀತಿಯ ಶೋಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಎಲ್ಲಾ ಶೋಗಳಲ್ಲಿ ಅವರು ರನ್ನರ್ ಅಪ್ ಸ್ಥಾನಕ್ಕೆ ಖುಷಿಪಟ್ಟುಕೊಂಡಿದ್ದಾರೆ. 2025ರ ಡಿಸೆಂಬರ್ 11ರಂದು ರಿಲೀಸ್ ಆದ ‘ಡೆವಿಲ್’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ಇನ್ಸ್ಟಾಗ್ರಾಮ್ನಲ್ಲಿ ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ.
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಶಿವರಾಜ್ಕುಮಾರ್, ಗಿಲ್ಲಿ ನಟ, ರಚಿತಾ ರಾಮ್, ಮಂಗ್ಲಿ ಮುಂತಾದ ಸೆಲೆಬ್ರಿಟಿಗಳು ಕನಕೋತ್ಸವದಲ್ಲಿ ಭಾಗಿಯಾಗಿದ್ದರು. ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದಲ್ಲಿ ಕನಕೋತ್ಸವದ ರಂಗೇರಿತು. ವೇದಿಕೆಯಲ್ಲಿ ಮಸ್ತ್ ಡ್ಯಾನ್ಸ್, ಹಾಡುಗಳು ಕನಕಪುರದ ಜನರಿಗೆ ಮನರಂಜನೆಯ ರಸದೌತಣ ಬಡಿಸಿದೆ. ಝಗಮಗಿಸುವ ಕಾರ್ಯಕ್ರಮದ ವಿಡಿಯೋ ಇಲ್ಲಿದೆ ನೋಡಿ..
- Madan Kumar
- Updated on: Feb 2, 2026
- 6:21 pm
ಫೆ.6ರಂದು ರಿಲೀಸ್ ಆಗಲಿದೆ ಗಿಲ್ಲಿ ನಟ ಅಭಿನಯದ ‘ಸರ್ಕಾರಿ ಶಾಲೆ H8’ ಸಿನಿಮಾ
ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ಗಿಲ್ಲಿ ನಟ ಅವರು ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚಿದೆ. ಗಿಲ್ಲಿ ಅಭಿನಯಿಸಿದ ‘ಸರ್ಕಾರಿ ಶಾಲೆ-H8’ ಬಿಡುಗಡೆ ಆಗಲಿದೆ. ಶೀರ್ಷಿಕೆಯಿಂದಲೇ ಈ ಸಿನಿಮಾ ಕೌತುಕ ಮೂಡಿಸಿದೆ. ಫೆ.6ರಂದು ‘ಸರ್ಕಾರಿ ಶಾಲೆ-H8’ ಚಿತ್ರ ತೆರೆಕಾಣಲಿದೆ. ಗುಣ ಹರಿಯಬ್ಬೆ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
- Madan Kumar
- Updated on: Feb 2, 2026
- 3:44 pm
‘ದುಡ್ಡಿದ್ದವ್ರನ್ನ ಮೀಟ್ ಮಾಡ್ತಾರೆ’; ಗಿಲ್ಲಿಗೆ ಮುಳುವಾಗ್ತಿದೆ ಅತಿಯಾದ ಅಭಿಮಾನ
ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಅಭಿಮಾನಿಗಳು ಅತಿಯಾದ ಪ್ರೀತಿ ತೋರಿದ್ದಾರೆ. ಕೆಲವರು ಟ್ಯಾಟೂ ಸಹ ಹಾಕಿಸಿಕೊಂಡಿದ್ದಾರೆ. ಆದರೆ, ಭೇಟಿಯ ಭರವಸೆ ಈಡೇರಿಸದ ಕಾರಣ, ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಯೊಬ್ಬರು ಗಿಲ್ಲಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಿಲ್ಲಿ ದುಡ್ಡಿದ್ದವರನ್ನಷ್ಟೇ ಭೇಟಿ ಮಾಡುತ್ತಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಅತಿಯಾದ ಅಭಿಮಾನವೇ ಗಿಲ್ಲಿಗೆ ಮುಳುವಾಗುವ ಸಂಕೇತ ಕಂಡುಬರುತ್ತಿದ್ದು.
- Rajesh Duggumane
- Updated on: Feb 2, 2026
- 7:34 am
ಗಿಲ್ಲಿ ವಿರುದ್ಧ ಗಂಭೀರ ಆರೋಪ ಮಾಡಿದ ಹಚ್ಚೆ ಹಾಕಿಸಿಕೊಂಡ ಅಭಿಮಾನಿ
ಬಿಗ್ ಬಾಸ್ ಕನ್ನಡ 12 ವಿನ್ನರ್ ಗಿಲ್ಲಿ ನಟನಿಗೆ ಅಭಿಮಾನಿಯಿಂದ ಗಂಭೀರ ಆರೋಪ ಎದುರಾಗಿದೆ. ಗಿಲ್ಲಿ ಫೋಟೋ ಹಚ್ಚೆ ಹಾಕಿಸಿಕೊಂಡ ಅಭಿಮಾನಿ, ‘ಗಿಲ್ಲಿ ಅಭಿಮಾನಿಗಳನ್ನು ಗೌರವಿಸುವುದಿಲ್ಲ, ಭೇಟಿ ಮಾಡುವ ಭರವಸೆ ಉಳಿಸಿಕೊಳ್ಳಲಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಪ್ರಕರಣ, ಗಿಲ್ಲಿಯ ಅಗಾಧ ಜನಪ್ರಿಯತೆ ಈಗ ಅವರಿಗೆ ಮುಳುವಾಯಿತೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.
- Rajesh Duggumane
- Updated on: Feb 2, 2026
- 7:04 am
ಭರ್ಜರಿ ಟಿಆರ್ಪಿ ಪಡೆದ ‘ಬಿಗ್ ಬಾಸ್ ಫಿನಾಲೆ’ ಎಪಿಸೋಡ್; ಕಲರ್ಸ್ ನಂಬರ್ 1
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಭರ್ಜರಿ 16.8 ಟಿವಿಆರ್ ಗಳಿಸಿ ಹೊಸ ದಾಖಲೆ ಬರೆದಿದೆ. ಈ ಅಭೂತಪೂರ್ವ ಯಶಸ್ಸಿನಿಂದ ಕಲರ್ಸ್ ಕನ್ನಡ ವಾಹಿನಿ ಜೀ ಕನ್ನಡವನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದೆ. ಫಿನಾಲೆಗೆ 'ಗಿಲ್ಲಿ ನಟ'ರ ಗೆಲುವು ಪ್ರಮುಖ ಆಕರ್ಷಣೆಯಾಗಿತ್ತು. 'ಲಕ್ಷ್ಮೀ ನಿವಾಸ' ಧಾರಾವಾಹಿ ಪ್ರಥಮ ಸ್ಥಾನದಲ್ಲಿದೆ.
- Rajesh Duggumane
- Updated on: Jan 30, 2026
- 3:14 pm
ಜಗ್ಗೇಶ್ ಹೇಳಿದ್ದನ್ನು ಸಾಬೀತು ಮಾಡಿ, ಅವರಿಂದಲೇ ಸನ್ಮಾನ ಮಾಡಿಸಿಕೊಂಡ ಗಿಲ್ಲಿ ನಟ
ಗಿಲ್ಲಿ ನಟನಿಗೆ ಎಲ್ಲರೂ ಕರೆದು ಸನ್ಮಾನ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅವರ ಬಿಗ್ ಬಾಸ್ ಗೆಲುವು. ಈಗ ನಟ ಜಗ್ಗೇಶ್ ಅವರು ಗಿಲ್ಲಿ ನಟನ ಕರೆದು ಸನ್ಮಾನಿಸಿದ್ದಾರೆ. ಜಗ್ಗೇಶ್ ಹೇಳಿದ ಮಾತನ್ನು ಸಾಬೀತು ಮಾಡಿದ ಬಳಿಕವೇ ಗಿಲ್ಲಿ, ಅವರ ಎದುರು ಹೋಗಿ ನಿಂತಿದ್ದಾರೆ ಎಂಬುದು ಮತ್ತೊಂದು ವಿಶೇಷ. ಆ ಬಗ್ಗೆ ಇಲ್ಲಿದೆ ವಿವರ.
- Rajesh Duggumane
- Updated on: Jan 28, 2026
- 12:00 pm
ವಿಶೇಷ ಅಧಿವೇಶನದಲ್ಲೂ ಚರ್ಚೆ ಆಯ್ತು ಗಿಲ್ಲಿ ನಟನ ಹೆಸರು; ಪ್ರಸ್ತಾಪಿಸಿದ್ದು ಯಾರು? ಕಾರಣವೇನು?
ಬಿಗ್ ಬಾಸ್ ಕನ್ನಡ 12 ವಿನ್ನರ್ ಗಿಲ್ಲಿ ಹೆಸರು ಇಂದಿಗೂ ಎಲ್ಲೆಡೆ ಚರ್ಚೆಯಲ್ಲಿದೆ. ಅವರ ಜನಪ್ರಿಯತೆ ಹೆಚ್ಚಿದೆ. ಆದರೆ, ಅವರ ಬಹುಮಾನದ 50 ಲಕ್ಷ ರೂಪಾಯಿಗಳ ತೆರಿಗೆ ಲೆಕ್ಕಾಚಾರ ರಾಜ್ಯ ಅಧಿವೇಶನದಲ್ಲೂ ಚರ್ಚೆಯಾಗಿದೆ. ಶಾಸಕ ಪ್ರದೀಪ್ ಈಶ್ವರ್, ಗಿಲ್ಲಿಗೆ ಸಿಕ್ಕ 50 ಲಕ್ಷದಲ್ಲಿ ಅರ್ಧಕ್ಕಿಂತ ಹೆಚ್ಚು ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ ಎಂದು ವಿವರಿಸಿದ್ದಾರೆ. ಇದರಿಂದ ನಿಜವಾದ ವಿನ್ನರ್ ನಿರ್ಮಲಾ ಸೀತಾರಾಮನ್ ಎಂದಿದ್ದಾರೆ.
- Rajesh Duggumane
- Updated on: Jan 28, 2026
- 7:02 am
ಗಿಲ್ಲಿ ಫ್ಯಾನ್ಸ್ ಹೊಡೆದು ಸಾಯಿಸ್ತೀನಿ ಅಂತ ಬೆದರಿಕೆ ಹಾಕ್ತಿದ್ದಾರೆ ಎಂದ ಸತೀಶ್
Gilli Nata: ಗಿಲ್ಲಿ ಅಭಿಮಾನಿಗಳು ಹೊಡೆದು ಸಾಯಿಸ್ತೀನಿ ಅಂತ ಬೆದರಿಕೆ ಹಾಕುತ್ತಿದ್ದಾರೆ ಎಂಬುದಾಗಿ ಸತೀಶ್ ಅವರು ಆರೋಪಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಆ ಸಂದರ್ಭದ ವಿಡಿಯೋ ಮೇಲೆ ಇದೆ ನೋಡಿ.
- Mangala RR
- Updated on: Jan 27, 2026
- 9:37 am
ಬಿಗ್ ಬಾಸ್ ಸತೀಶ್ಗೆ ಕೊಲೆ ಬೆದರಿಕೆ ಹಾಕಿದ ಗಿಲ್ಲಿ ಫ್ಯಾನ್ಸ್ ಅರೆಸ್ಟ್: 80 ಜನರ ಮೇಲೆ ಕೇಸ್
ಬಿಗ್ ಬಾಸ್ ಶೋನಿಂದ ಹೆಚ್ಚು ಫೇಮಸ್ ಆದ ಕ್ಯಾಡಬಾಮ್ಸ್ ಸತೀಶ್ ಅವರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ತಮಗೆ ಕೊಲೆ ಬೆದರಿಕೆ ಹಾಕಿದವರ ವಿರುದ್ಧ ಅವರು ದೂರು ನೀಡಿದ್ದಾರೆ. ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಈವರೆಗೂ 8 ಜನರನ್ನು ಅರೆಸ್ಟ್ ಮಾಡಲಾಗಿದೆ ಎಂದು ಸತೀಶ್ ಹೇಳಿದ್ದಾರೆ. ಟಿವಿ9 ಜೊತೆ ಅವರು ಮಾತಾಡಿದ್ದಾರೆ.
- Mangala RR
- Updated on: Jan 26, 2026
- 8:56 pm
ವೋಟ್ ಹಾಕಿದ ಪೊಲೀಸರಿಗೂ ಧನ್ಯವಾದ ಹೇಳಿದೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಟ್ರೋಫಿ ಗೆದ್ದ ಗಿಲ್ಲಿ ನಟ ಅವರು ಅನೇಕ ಕಾರ್ಯಕ್ರಮಗಳಿಗೆ ಅತಿಥಿಯಾಗಿ ತೆರಳುತ್ತಿದ್ದಾರೆ. ಅವರನ್ನು ಇಷ್ಟಪಡುವ ದೊಡ್ಡ ಅಭಿಮಾನಿ ಬಳಗ ಇದೆ. ಕನಕಪುರದಲ್ಲಿ ನಡೆದ ಕನಕೋತ್ಸವ ಕಾರ್ಯಕ್ರಮದಲ್ಲಿ ಗಿಲ್ಲಿ ನಟ ಭಾಗಿ ಆಗಿದ್ದಾರೆ. ಈ ವೇಳೆ ಅವರು ಭಾವುಕವಾಗಿ ಮಾತನಾಡಿದರು.
- Madan Kumar
- Updated on: Jan 26, 2026
- 6:28 pm
ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ
ಕನಕೋತ್ಸವ ಕಾರ್ಯಕ್ರಮದ ವೇದಿಕೆಗೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಬಂದಾಗ ಕೆಲವು ಅಭಿಮಾನಿಗಳು ನುಗ್ಗಿದ್ದಾರೆ. ಕೂಡಲೇ ಅವರನ್ನು ನಿಯಂತ್ರಿಸಲಾಯಿತು. ಗಿಲ್ಲಿ ಮೇಲೆ ಜನರಿಗೆ ಇರುವ ಕ್ರೇಜ್ ಎಷ್ಟು ಎಂಬುದಕ್ಕೆ ಈ ಘಟನೆ ಸಾಕ್ಷಿ ಆಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..
- Madan Kumar
- Updated on: Jan 26, 2026
- 5:03 pm
ಗಿಲ್ಲಿಗೆ ವೇಟ್ ಮಾಡ್ತಾ ಇದೀರಾ ಎಂದು ಕೇಳಿದಾಗ ‘ಡಿ ಬಾಸ್’ ಎಂದು ಕೂಗಿದ ಫ್ಯಾನ್ಸ್
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಆಗಿ ಗಿಲ್ಲಿ ಹೊರಹೊಮ್ಮಿದರು. ಅವರು ಗಿಲ್ಲಿ ಕ್ರೇಜ್ ನೋಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಡಿಕೆ ಸುರೇಶ್ ಶಾಕ್ ಆದರು. ಆ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಗಿಲ್ಲಿ ಕ್ರೇಜ್ ಜೋರಾಗಿಯೇ ಇದೆ.
- Rajesh Duggumane
- Updated on: Jan 26, 2026
- 10:42 am