ಜಗದೀಶ್ ಶರ್ಟ್ ಮೇಲೆ ಹಂಸಾ ಲಿಪ್​ಸ್ಟಿಕ್ ಗುರುತು; ಯಾವಾಗ ಆಯ್ತು ಈ ಕಲೆ?

‘ಬಿಗ್​ ಬಾಸ್ ಕನ್ನಡ ಸೀಸನ್​ 11’ ಆಟದಲ್ಲಿ ಜಗದೀಶ್ ಮತ್ತು ಹಂಸಾ ಹೈಲೈಟ್ ಆಗುತ್ತಿದ್ದಾರೆ. ಇಬ್ಬರ ನಡುವಿನ ಬಾಂಧವ್ಯ ನೋಡಿ ಇನ್ನುಳಿದವರಿಗೆ ಗೊಂದಲ ಆಗುತ್ತಿದೆ. ಒಂದು ಕ್ಷಣ ಜೋರಾಗಿ ಜಗಳ ಮಾಡುವ ಅವರಿಬ್ಬರು ನಂತರದ ಕ್ಷಣದಲ್ಲಿ ಫ್ರೆಂಡ್ಸ್​ ಆಗುತ್ತಾರೆ. ಭಾನುವಾರದ ಎಪಿಸೋಡ್​ನಲ್ಲಿ ಅವರಿಬ್ಬರು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದರು.

ಜಗದೀಶ್ ಶರ್ಟ್ ಮೇಲೆ ಹಂಸಾ ಲಿಪ್​ಸ್ಟಿಕ್ ಗುರುತು; ಯಾವಾಗ ಆಯ್ತು ಈ ಕಲೆ?
ಹಂಸಾ, ಜಗದೀಶ್

Updated on: Oct 14, 2024 | 10:45 PM

ಲಾಯರ್​ ಜಗದೀಶ್ ಅವರಿಗೆ ಬಿಗ್ ಬಾಸ್​ ಆಟ ಹೇಳಿ ಮಾಡಿಸಿದಂತಿದೆ. ಆರಂಭದಿಂದಲೂ ಅವರು ಸಖತ್​ ಸದ್ದು ಮಾಡುತ್ತಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಅವರು ಎಲ್ಲರ ಜೊತೆಗೂ ಕಿರಿಕ್ ಮಾಡಿಕೊಂಡಿದ್ದಾರೆ. ಆದರೆ ಹೆಚ್ಚು ಜಗಳ ಮಾಡಿದ್ದು ನಟಿ ಹಂಸಾ ಜೊತೆ. ಹಾಗಂತ ಆ ಜಗಳ ಹಾಗೆಯೇ ಮುಂದುವರಿದಿಲ್ಲ. ಹಂಸಾ ಜೊತೆ ಜಗದೀಶ್ ಎಷ್ಟು ಜಗಳ ಮಾಡಿದ್ದಾರೋ ಅಷ್ಟೇ ಸ್ನೇಹ ಕೂಡ ಬೆಳೆಸಿದ್ದಾರೆ. ಸೋಮವಾರದ (ಅಕ್ಟೋಬರ್​ 14) ಸಂಚಿಕೆಯಲ್ಲಿ ಜಗದೀಶ್ ಅವರು ಲಿಪ್​ಸ್ಟಿಕ್​ ಕಲೆ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ್ದಾರೆ.

ಲಿವಿಂಗ್ ಏರಿಯಾದಲ್ಲಿ ಎಲ್ಲರೂ ಮಾತನಾಡುತ್ತಾ ಕುಳಿತಿದ್ದಾಗ ಜಗದೀಶ್ ಅವರು ಎಂಟ್ರಿ ನೀಡಿದರು. ಅವರು ಬಿಳಿ ಬಣ್ಣದ ಶರ್ಟ್​ ಹಾಕಿಕೊಂಡು ಬಂದರು. ತಮ್ಮ ಶರ್ಟ್​ ಮೇಲೆ ಲಿಪ್​ಸ್ಟಿಕ್ ಗುರುತು ಇದೆ ಎಂದು ಅವರು ಹೇಳಿದರು. ‘ನನ್ನ ಶರ್ಟ್​ ಮೇಲೆ ನಿಮ್ಮ ಲಿಪ್​ ಸ್ಟಿಕ್​ ಕಲೆ ಇದೆ’ ಎಂದು ನೇರವಾಗಿ ಹಂಸಾ ಬಳಿಯೇ ಜಗದೀಶ್ ಹೇಳಿದರು. ಅದನ್ನು ಹಂಸಾ ಕೂಡ ಅಲ್ಲ ಎನ್ನಲಿಲ್ಲ.

‘ನಿನ್ನೆ ಹಗ್ ಮಾಡಿದಾಗ ಈ ಕಲೆ ಆಗಿದ್ದು’ ಎಂದು ಹಂಸಾ ಅವರು ಹೇಳಿದರು. ಅಲ್ಲದೇ, ‘ಬೇಕಿದ್ದರೆ ವಾಶ್ ಮಾಡಿ ಕೊಡುವೆ’ ಎಂದು ಕೂಡ ಅವರು ಹೇಳಿದರು. ಜಗದೀಶ್​ ಹಾಗೂ ಹಂಸಾ ಅವರ ನಡುವಿನ ಸ್ನೇಹ-ಜಗಳ ಎಲ್ಲರಿಗೂ ಗೊಂದಲ ಮೂಡಿಸುವ ರೀತಿಯಲ್ಲಿ ಇದೆ. ಹಂಸಾ ಅವರು ಕ್ಯಾಪ್ಟನ್ ಆದಾಗ ಜಗದೀಶ್​ ಸಿಕ್ಕಾಪಟ್ಟೆ ಕಾಟ ಕೊಟ್ಟಿದ್ದರು. ಏಕವಚನದಲ್ಲಿ ಬೈಯ್ದುಕೊಳ್ಳುವ ಮಟ್ಟಕ್ಕೆ ಕಿತ್ತಾಡಿದ್ದರು. ಆದರೆ ಆ ಘಟನೆಗಳ ಬಳಿಕ ಅವರಿಬ್ಬರ ನಡುವಿನ ಸ್ನೇಹ ಇನ್ನಷ್ಟು ಹೆಚ್ಚಾಯಿತು.

ಇದನ್ನೂ ಓದಿ: ಬಿಗ್ ಬಾಸ್ ತೊರೆಯಲು ಸುದೀಪ್ ನಿರ್ಧಾರ: ಇದೇ ಕೊನೆಯ ಸೀಸನ್; ಅಧಿಕೃತ ಘೋಷಣೆ

ಹಾಗಾದ್ರೆ ಈ ಲಿಪ್​ಸ್ಟಿಕ್ ಹತ್ತಿದ್ದು ಯಾವಾಗ? ಭಾನುವಾರದ ಸಂಚಿಕೆಯಲ್ಲಿ ‘ಅನಿಸುತಿದೆ ಯಾಕೋ ಇಂದು..’ ಹಾಡಿಗೆ ಹಂಸಾ ಮತ್ತು ಜಗದೀಶ್ ಅವರು ಡ್ಯಾನ್ಸ್​ ಮಾಡಿ ಎಲ್ಲರನ್ನೂ ರಂಜಿಸಿದ್ದರು. ಅವರಿಬ್ಬರ ಉತ್ಸಾಹಕ್ಕೆ ಸುದೀಪ್ ಕೂಡ ಭೇಷ್ ಎಂದಿದ್ದರು. ವೀಕೆಂಡ್ ಸಂಚಿಕೆ ಆದ್ದರಿಂದ ಹಂಸಾ ಅವರು ಚೆನ್ನಾಗಿ ಮೇಕಪ್ ಮಾಡಿಕೊಂಡಿದ್ದರು. ಖುಷಿಯಿಂದ ಡ್ಯಾನ್ಸ್ ಮಾಡುವಾಗ ಅವರ ಲಿಪ್​ಸ್ಟಿಕ್​ ಬಣ್ಣ ಜಗದೀಶ್ ಶರ್ಟ್​ಗೆ ಅಂಟಿತ್ತು ಅಷ್ಟೇ.

ಇಂಥ ಹಲವು ಘಟನೆಗಳಿಂದಾಗಿ ಜಗದೀಶ್ ಅವರಿಗೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಗುತ್ತಿದೆ. ಅನೇಕ ಬಾರಿ ಅವರು ಬಿಗ್ ಬಾಸ್ ಮನೆಯ ನಿಯಮ ಮುರಿದಿದ್ದರು. ಬಿಗ್ ಬಾಸ್​ ಕಾರ್ಯಕ್ರಮದ ಬಗ್ಗೆಯೂ ಅವರು ಹಗುರಾಗಿ ಮಾತನಾಡಿದ್ದರು. ಹಾಗಿದ್ದರೂ ಕೂಡ ಅವರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಇದರಿಂದಾಗಿ ಅವರಿಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us