AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಯಲ್ಲಿ ಯಾರ ವ್ಯಕ್ತಿತ್ವ ಎಂಥಹದು? ಸ್ಪರ್ಧಿಗಳು ಹೇಳಿದ್ದೇನು?

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಗಳ ವ್ಯಕ್ತಿತ್ವ ಎಂಥಹದ್ದು ಎಂಬುದನ್ನು ಇತರೆ ಸ್ಪರ್ಧಿಗಳು ಹೇಳಿದ್ದಾರೆ. ಅಂದಹಾಗೆ ಬಿಗ್​ಬಾಸ್ ಮನೆಯಲ್ಲಿ ಖಾಲಿ ತಲೆ ಯಾರದ್ದು, ಬೆನ್ನಿಗೆ ಚೂರಿ ಹಾಕುವವರು ಯಾರು? ಹೊಟ್ಟೆ ಉರಿ ಯಾರಿಗೆ ಹೆಚ್ಚು? ಇಲ್ಲಿದೆ ನೋಡಿ ವಿವರ.

ಬಿಗ್​ಬಾಸ್ ಮನೆಯಲ್ಲಿ ಯಾರ ವ್ಯಕ್ತಿತ್ವ ಎಂಥಹದು? ಸ್ಪರ್ಧಿಗಳು ಹೇಳಿದ್ದೇನು?
ಬಿಗ್​ಬಾಸ್ ಕನ್ನಡ
ಮಂಜುನಾಥ ಸಿ.
|

Updated on: Dec 15, 2024 | 9:47 AM

Share

ಬಿಗ್​ಬಾಸ್ ಮನೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ವ್ಯಕ್ತಿತ್ವ. ಮನೆಯಲ್ಲಿ ಮೇಲ್ನೋಟಕ್ಕೆ ಪ್ರತಿಯೊಬ್ಬರು ಗೆಳೆಯರಂತೆ ಕಾಣುತ್ತಾರಾದರೂ ಸಹ ಸ್ಪರ್ಧಿಗಳ ಬಗ್ಗೆ ನಿಜವಾಗಿಯೂ ಇರುವ ಅಭಿಪ್ರಾಯ ಬೇರೆಯದ್ದೇ ಇರುತ್ತದೆ. ಶನಿವಾರದ ಎಪಿಸೋಡ್ ನಡೆಸಿಕೊಡಲು ಬಂದಿದ್ದ ಸುದೀಪ್, ಸ್ಪರ್ಧಿಗಳು ಇತರೆ ಸ್ಪರ್ಧಿಗಳ ಬಗ್ಗೆ ಯಾವ ರೀತಿಯ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಹೊರತೆಗೆಯುವ ಪ್ರಯತ್ನ ಮಾಡಿದರು.

ಎಲ್ಲರಿಗೂ ಕೆಲವು ಎಕ್ಸ್​ರೇ ಪ್ರಿಂಟ್​ಗಳನ್ನು ನೀಡಿದ್ದ ಸುದೀಪ್, ಪ್ರಿಂಟ್​ ಮೇಲಿರುವ ಚಿತ್ರ ಯಾರಿಗೆ ಸರಿ ಹೊಂದುತ್ತದೆ ಅನಿಸುತ್ತದೆಯೋ ಅವರಿಗೆ ನೀಡುವಂತೆ ಹೇಳಿದರು. ಅದರಂತೆ ಬೆನ್ನು ಹುರಿ ಇಲ್ಲದ ಚಿತ್ರವನ್ನು ಗೌತಮಿ ಅವರು ಶಿಶಿರ್​ಗೆ ನೀಡಿದರು. ಯಾವುದೇ ವಿಷಯದ ಬಗ್ಗೆ ಅವರಿಗೆ ಸ್ಪಷ್ಟವಾದ ನಿಲುವು ಇಲ್ಲ ಎಂದರು.

ಹೊಟ್ಟೆ ಉರಿ ಎಂಬ ಚಿತ್ರವನ್ನು ಐಶ್ವರ್ಯಾ ಅವರಿಗೆ ಉಗ್ರಂ ಮಂಜು ನೀಡಿದರು. ದೊಡ್ಡ ಬಾಯಿ ಚಿತ್ರವನ್ನು ರಜತ್ ಅವರಿಗೆ ಚೈತ್ರಾ ಕುಂದಾಪುರ ನೀಡಿದರು. ತಲೆಯಲ್ಲಿ ಮೆದುಳೇ ಇಲ್ಲ ಎಂಬ ಚಿತ್ರವನ್ನು ಮೋಕ್ಷಿತಾ ಅವರು ಗೌತಮಿ ಅವರಿಗೆ ನೀಡಿದರು. ಕಲ್ಲು ಹೃದಯ ಚಿತ್ರವನ್ನು ಭವ್ಯಾ, ತ್ರಿವಿಕ್ರಮ್​ಗೆ ನೀಡಿದರು. ಕಲ್ಲು ಹೃದಯದವನಾಗಿ ಆಟ ಆಡುತ್ತಾರೆ ಎಂದು ಕಾರಣ ನೀಡಿದರು.

ಇದನ್ನೂ ಓದಿ:

ಕಾಲು ಕೆರೆದುಕೊಂಡು ಜಗಳ ಮಾಡುವವರು ಯಾರು ಎಂಬುದನ್ನು ಹನುಮಂತ, ಚೈತ್ರಾ ಹೆಸರೇಳಿ ಚಿತ್ರ ನೀಡಿದರು. ಬೆನ್ನಿಗೆ ಚೂರಿ ಹಾಕುವ ಚಿತ್ರವನ್ನು ರಜತ್, ಧನರಾಜ್​ಗೆ ನೀಡಿದರು. ಧನರಾಜ್ ಮೋಸ ಮಾಡಿದ್ದಾನೆ ಎಂದರು. ಭ್ರಮೆಯಲ್ಲಿ ಬದುಕುತ್ತಿರುವವರು ಚಿತ್ರವನ್ನು ರಜತ್​ಗೆ ಧನರಾಜ್ ನೀಡಿದರು. ಹುಲಿ ಎಂದುಕೊಂಡಿದ್ದಾರೆ ಆದರೆ ಆತ ಇಲಿಯಷ್ಟೆ ಎಂದರು ಧನರಾಜ್.

ತಲೆಯಲ್ಲಿ ಕಸ ತುಂಬಿಕೊಂಡಿರುವವರು ಚಿತ್ರವನ್ನು ತ್ರಿವಿಕ್ರಮ್, ಉಗ್ರಂ ಮಂಜುಗೆ ನೀಡಿದರು. ಅನವಶ್ಯಕ ವಿಚಾರದಲ್ಲಿ ಮೂಗು ತೂರಿಸುವವರು ಚಿತ್ರವನ್ನು ಸುರೇಶ್ ಅವರು ಚೈತ್ರಾ ಕುಂದಾಪುರಗೆ ನೀಡಿದರು. ಎರಡು ನಾಲಗೆ ಇರುವ ವ್ಯಕ್ತಿಯ ಚಿತ್ರವನ್ನು ಉಗ್ರಂ ಮಂಜು ಅವರಿಗೆ ಐಶ್ವರ್ಯಾ ಅವರು ನೀಡಿದರು. ಹನುಮಂತು, ಸುರೇಶ್, ಭವ್ಯಾ ಅವರಿಗೆ ಯಾವುದೇ ಚಿತ್ರಗಳು ಬರಲಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ
ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ
ಕನ್ನಡ ಮಾತನಾಡದಂತೆ ವಾರ್ಡನ್ ಧಮ್ಕಿ: ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ
ಕನ್ನಡ ಮಾತನಾಡದಂತೆ ವಾರ್ಡನ್ ಧಮ್ಕಿ: ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ