ಮಗನ ವೈರಿ ಸಂಗೀತಾಗೆ ಮೈಖಲ್​ ತಾಯಿ ಕೊಟ್ಟರು ವಿಶೇಷ ಉಡುಗೊರೆ

Bigg Boss Kannada: ಬಿಗ್​ಬಾಸ್ ಮನೆಗೆ ಬಂದಿದ್ದ ಮೈಖಲ್​ರ ತಾಯಿ ವಿಜಿ, ಸಂಗೀತಾ ಹಾಗೂ ಮಗನ ನಡುವೆ ಸಂಧಾನ ಮಾಡಿದ್ದಾರೆ. ಸಂಗೀತಾಗೆ ವಿಶೇಷ ಉಡುಗೊರೆಯೊಂದನ್ನು ಸಹ ನೀಡಿದ್ದಾರೆ.

ಮಗನ ವೈರಿ ಸಂಗೀತಾಗೆ ಮೈಖಲ್​ ತಾಯಿ ಕೊಟ್ಟರು ವಿಶೇಷ ಉಡುಗೊರೆ

Updated on: Dec 26, 2023 | 11:40 PM

ಮಂಗಳವಾರದ ಎಪಿಸೋಡ್​ನಲ್ಲಿ ಬಿಗ್​ಬಾಸ್ (Bigg Boss) ಮನೆಗೆ ಸ್ಪರ್ಧಿಗಳ ಕುಟುಂಬ ಸದಸ್ಯರು ಆಗಮಿಸಿದರು. ಮೊದಲಿಗೆ ಹಾಲಿ ಕ್ಯಾಪ್ಟನ್ ನಮ್ರತಾರ ತಾಯಿ ಆಗಮಿಸಿದರು. ತಾಯಿಯ ಆಗಮನದಿಂದ ಬಹಳ ಭಾವುಕಗೊಂಡರು ನಮ್ರತಾ, ಅಮ್ಮನನ್ನು ನೋಡಿದಂತೆ ಕಣ್ಣೀರು ಹಾಕಿದರು. ಹಲವು ಹೊತ್ತು ಪರಸ್ಪರ ಮಾತನಾಡಿದರು. ನಮ್ರತಾರ ತಾಯಿ ಮನೆಯ ಸದಸ್ಯರಿಗಾಗಿ ಇಡ್ಲಿ, ಹಿದಿಕಿದ ಬೇಳೆ ಸಾರು ಇನ್ನಿತರೆ ತಿಂಡಿಗಳನ್ನು ಮಾಡಿಕೊಂಡು ಬಂದಿದ್ದರು.

ಅದಾದ ಬಳಿಕ ವರ್ತೂರು ಸಂತು ಅವರ ತಾಯಿ ಬಂದರು. ಇದು ಎರಡನೇ ಬಾರಿ ವರ್ತೂರು ಅವರ ತಾಯಿ ಮನೆಗೆ ಬಂದಿದ್ದು, ಮಗನ ಜೊತೆಗೆ ಮನೆಯ ಸದಸ್ಯರಿಗೆಲ್ಲ ತಮ್ಮದೇ ಶೈಲಿಯಲ್ಲಿ ಬುದ್ಧಿವಾದ ಹೇಳಿದರು. ವಿನಯ್ ಅನ್ನು ವಿಲನ್ ಎಂದು ಸಹ ಕರೆದರು. ವರ್ತೂರು ಸಂತುಗೆ ತಲೆಗೆ ಎಣ್ಣೆ ಹಾಕಿ, ಹೊಸ ಬಟ್ಟೆ ಕೊಟ್ಟು ಹೋದರು.

ಆ ಬಳಿಕ ತುಕಾಲಿ ಸಂತು ಹೆಂಡತಿ ಮಾನಸ ಮನೆಗೆ ಬಂದು ಹಂಗಾಮ ಎಬ್ಬಿಸಿದರು. ತುಕಾಲಿಗೆ ಮನೆಯೆಲ್ಲ ಓಡಾಡಿಸಿಕೊಂಡು ಹೊಡೆದರು. ಪರಸ್ಪರ ಹಾಸ್ಯ ಮಾಡುತ್ತಾ ಮನೆಯ ಸದಸ್ಯರಿಗೆ ಒಳ್ಳೆ ಮನೊರಂಜನೆ ಒದಗಿಸಿದರು. ಜೊತೆಗೆ ತುಕಾಲಿ ಬಗ್ಗೆ ಕೆಲವು ಅಪರೂಪದ ಸಂಗತಿಗಳನ್ನು ಹೇಳಿ ಭಾವುಕರಾದರು. ಸಂತು ಸಹ ಪತ್ನಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು.

ಇದನ್ನೂ ಓದಿ:ವೈಲ್ಡ್​ ಕಾರ್ಡ್ ಎಂಟ್ರಿ ಮೂಲಕ ಬಿಗ್​ಬಾಸ್ ಮನೆಗೆ ಹೋಗಿದ್ದ ಅವಿ ಪಡೆದ ಸಂಭಾವನೆ ಎಷ್ಟು?

ಮಾನಸಾ ಮನೆಯಲ್ಲಿರುವಂತೆ ಮನೆಗೆ ಬಂದರು ಮೈಖಲ್​ರ ತಾಯಿ. ಕ್ರಿಸ್​ಮಸ್​ಗಾಗಿ ಮನೆಯ ಸದಸ್ಯರಿಗೆ ಚಾಲಕೇಟ್ ಇನ್ನಿತರೆ ಐಟಂಗಳನ್ನು ತಂದಿದ್ದರು. ಎಲ್ಲರನ್ನೂ ಬಹಳ ಪ್ರೀತಿಯಿಂದ ಮಾತನಾಡಿಸಿದರು. ಸಂಗೀತಾ ಜೊತೆ ಮಾತನಾಡುತ್ತಾ, ನಿಮ್ಮಿಬ್ಬರ ನಡುವೆ ಶಾಂತಿಧೂತೆಯಾಗಿ ನಾನು ಬಂದಿದ್ದೇನೆ, ನಿಮ್ಮಿಬ್ಬರ ನಡುವೆ ಸಂಧಾನ ಮಾಡಲೆಂದು ನಾನು ಪನ್ನೀರ್ ತಂದಿದ್ದೇನೆ. ಪನ್ನೀರ್​ಗಾಗಿ ಎಷ್ಟು ಅತ್ತಿದ್ದೆ ನೀನು ಎಂದು ಹೇಳಿ, ಪನ್ನೀರ್ ನೀಡಿದರು.

ಮೈಖಲ್​ಗೂ ಸಹ ಬುದ್ಧಿವಾದ ಹೇಳಿದ ಅವರ ತಾಯಿ, ಸಂಗೀತಾ ಜೊತೆ ಸ್ನೇಹ ಬೆಳೆಸಿಕೋ, ಕೋಪ ಪ್ರದರ್ಶಿಸಬೇಡ, ಬುದ್ಧಿಯಿಂದ ಆಡುವುದು ಬೇಡ ಹೃದಯದಿಂದ ಆಡು. ಮಹಿಳೆಯರ ಮೇಲೆ ಜಗಳ ಮಾಡಬೇಡ. ಯಾರ ಮೇಲೂ ಜಗಳ ಮಾಡಬೇಡ ಎಂದರು. ಹೋಗುವಾಗಲೂ ಸಹ ಮನೆಯ ಹುಡುಗರಿಗೆ ಮಹಿಳೆಯರ ಮೇಲೆ ಜಗಳ ಮಾಡಬೇಡಿ, ಅವರಿಗೆ ಬೈಯ್ಯಬೇಡಿ ಎಂದು ಬುದ್ಧಿವಾದ ಹೇಳಿ ಹೋದರು. ಮೈಖಲ್​ರ ತಾಯಿಯನ್ನು ಸಂಗೀತಾ ಅಪ್ಪಿಕೊಂಡು ಬೀಳ್ಕೊಟ್ಟರು. ಮಾನಸ, ತನಗೆ ಸಂಗೀತಾ ಕ್ಯಾಪ್ಟನ್ ಆಗಬೇಕು ಅಂದರೆ, ಮೈಖಲ್​ರ ತಾಯಿ, ತನಿಷಾ ಈ ಬಾರಿ ಕ್ಯಾಪ್ಟನ್ ಆಗಲಿ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:39 pm, Tue, 26 December 23

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us