ಬಿಗ್​ಬಾಸ್ ಮನೆಯಲ್ಲಿ ತುಕಾಲಿ ಸಂತು ಬಿತ್ತು ಹೆಂಡತಿ ಕೈಲಿ ಏಟು

Tukali Santhosh: ಕುಟುಂಬ ಸದಸ್ಯರು ಮನೆಗೆ ಬರಲಿದ್ದಾರೆ ಎಂಬ ಸೂಚನೆ ಸಿಕ್ಕಾಗಿನಿಂದಲೂ ತುಕಾಲಿ ಸಂತೋಷ್​, ನನ್ನ ಹೆಂಡತಿಯನ್ನು ಮಾತ್ರ ಕಳಿಸಬೇಡಿ ಎನ್ನುತ್ತಿದ್ದರು. ಆದರೆ ಅವರ ಹೆಂಡತಿ ಮಾನಸ ಮನೆ ಒಳಗೆ ಬಂದಾಗಲೇ ಗೊತ್ತಾಗಿದ್ದು, ತುಕಾಲಿ ಹಾಗೆ ಏಕೆ ಹೇಳುತ್ತಿದ್ದರೆಂದು!

ಬಿಗ್​ಬಾಸ್ ಮನೆಯಲ್ಲಿ ತುಕಾಲಿ ಸಂತು ಬಿತ್ತು ಹೆಂಡತಿ ಕೈಲಿ ಏಟು
ಬಿಗ್​ಬಾಸ್ ಸಂತು
Follow us
|

Updated on:Dec 26, 2023 | 11:18 PM

ತುಕಾಲಿ ಸಂತೋಷ್ (Tukali Santhosh), ಬಿಗ್​ಬಾಸ್ (Bigg Boss)  ಮನೆಯಲ್ಲಿ ಎಲ್ಲರ ಬಗ್ಗೆಯೂ ಕಾಮಿಡಿ ಮಾಡುತ್ತಾ, ಎಲ್ಲರ ಕಾಲೆಳೆಯುತ್ತಾ ಬಿಂದಾಸ್ ಆಗಿದ್ದಾರೆ. ಬೇಕಾದ ಜಗಳವೂ ಆಡುತ್ತಾರೆ, ನಮ್ರತಾ, ತನಿಷಾ ಅವರೊಟ್ಟಿಗೆ ಫ್ಲರ್ಟ್ ಮಾಡುತ್ತಾ ಕಾಲಕಳೆಯುತ್ತಿದ್ದಾರೆ. ಆದರೆ ಮಂಗಳವಾರದ ಎಪಿಸೋಡ್​ನಲ್ಲಿ ಮನೆಯ ಸದಸ್ಯರ ಕುಟುಂಬದವರು ಒಬ್ಬೊಬ್ಬರಾಗಿ ಬಿಗ್​ಬಾಸ್ ಮನೆಯೊಳಗೆ ಬರುತ್ತಿದ್ದರು. ಕುಟುಂಬ ಸದಸ್ಯರು ಮನೆಗೆ ಬರುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ತುಕಾಲಿ ಸಂತು ‘ಬಿಗ್​ಬಾಸ್ ದಯವಿಟ್ಟು ನನ್ನ ಹೆಂಡತಿಯನ್ನು ಕಳಿಸಬೇಡಿ’ ಎಂದು ಕೇಳಿಕೊಳ್ಳುತ್ತಿದ್ದರು. ಅಂತಿಮವಾಗಿ ಅವರ ಹೆಂಡತಿ ಮಾನಸ ಒಳಗೆ ಬಂದ ಬಳಿಕ ಗೊತ್ತಾಯ್ತು ಅವರು ಯಾಕೆ ಹಾಗೆ ಹೇಳಿದರೆಂದರು.

ತುಕಾಲಿ ಸಂತು ಅವರ ಮಡದಿ, ಕೈಯಲ್ಲಿ ಕೋಲು ಹಿಡಿದುಕೊಂಡೇ ಮನೆಯ ಒಳಗೆ ಬಂದವರು. ಒಳಗೆ ಬಂದವರೇ ಪಾಸ್ ಆಗಿದ್ದ ತುಕಾಲಿಗೆ ಬಾರಿಸಲು ಆರಂಭಿಸಿದರು. ತುಕಾಲಿ ಮನೆಯ ಒಳಗೆಲ್ಲ ಓಡಾಡಿದರೂ ಬಿಡದೆ ಓಡಾಡಿಸಿಕೊಂಡು ಹೊಡೆದರು ಅವರ ಮಡದಿ.

ಇದನ್ನೂ ಓದಿ:ವೈಲ್ಡ್​ ಕಾರ್ಡ್ ಎಂಟ್ರಿ ಮೂಲಕ ಬಿಗ್​ಬಾಸ್ ಮನೆಗೆ ಹೋಗಿದ್ದ ಅವಿ ಪಡೆದ ಸಂಭಾವನೆ ಎಷ್ಟು?

ಅಷ್ಟಕ್ಕೆ ನಿಲ್ಲದ ತುಕಾಲಿ ಅವರ ಮಡದಿ ಮನೆಯ ಸದಸ್ಯರ ಎದುರು ತುಕಾಲಿಯ ಸಖತ್ ಕಾಲೆಳೆದರು. ಇಬ್ಬರು ಮಾತಿನಲ್ಲಿಯೇ ಪರಸ್ಪರರ ಕಾಲೆಳೆದು ಮನೆಯ ಸದಸ್ಯರಿಗೆ ಸಖತ್ ಮನೊರಂಜನೆ ಒದಗಿಸಿದರು. ಎಮ್ಮೆ ಮೇಯಿಸಿಕೊಂಡು ಬರುತ್ತಿದ್ದ ಎಂಬ ಡೈಲಾಗ್​ಗಂತೂ ಮನೆಯ ಸದಸ್ಯರು ಬಿದ್ದು-ಬಿದ್ದು ನಕ್ಕರು. ಮನೆಯ ಸ್ಪರ್ಧಿಗಳೊಟ್ಟಿಗೆ ಊಟ ಮಾಡಿದ ಮಾನಸ, ತುಕಾಲಿ ಹಾಗೂ ವರ್ತೂರು ಮನೆಯ ಸದಸ್ಯರ ಬಗ್ಗೆ ಆಡಿಕೊಂಡ ಕೆಲವು ಮಾತುಗಳನ್ನು ಹೇಳಿ, ಗುಟ್ಟು ರಟ್ಟು ಮಾಡಿದರು.

ತುಕಾಲಿ ಹಾಗೂ ಮಾನಸಾರ ಜೋಡಿಯ ಆಪ್ತತೆಯನ್ನು ಮೆಚ್ಚಿಕೊಂಡ ಬಿಗ್​ಬಾಸ್, ತುಕಾಲಿ ಬಗ್ಗೆ ಯಾರಿಗೂ ಗೊತ್ತಿರದ ವಿಷಯಗಳನ್ನು ಹೇಳಿರಿ ಎಂದು ಅವಕಾಶ ಮಾಡಿಕೊಟ್ಟರು. ಆಗ ತುಸು ಭಾವುಕವಾದ ಮಾನಸ, ‘‘ನನಗೆ ಏನೆಂದರೆ ಏನೂ ಗೊತ್ತಿರಲಿಲ್ಲ, ಟೀ ಮಾಡುವುದು ಸಹ ಗೊತ್ತಿರಲಿಲ್ಲ, ಬಹಳ ದಡ್ಡಿ ನಾನು ಆದರೆ ತುಕಾಲಿ ಎಲ್ಲವನ್ನೂ ಕಲಿಸಿದರು. ತುಕಾಲಿಗೆ ಅಪ್ಪ-ಅಮ್ಮ ಇಲ್ಲ, ಆದರೆ ನನ್ನ ತಂದೆ-ತಾಯಿಯನ್ನು ತನ್ನ ಪೋಷಕರು ಎಂಬಂತೆ ಸಾಕುತ್ತಿದ್ದಾರೆ. ಯಾವುದಕ್ಕೂ ಕಡಿಮೆ ಮಾಡಿಲ್ಲ. ಮನೆಯಲ್ಲಿ ನಾನು ಸ್ವಲ್ಪ ಜಗಳ ಹೆಚ್ಚು ಆದರೆ ಇಬ್ಬರೂ ಬಹಳ ಚೆನ್ನಾಗಿದ್ದೇವೆ, ಸಂತು ಬಹಳ ಚೆನ್ನಾಗಿ ಎಲ್ಲದಕ್ಕೂ ಹೊಂದಿಕೊಂಡು ಹೋಗುತ್ತಾರೆ. ಅವರು ನನಗೆ ಸಿಕ್ಕಿರುವುದು ಅದೃಷ್ಟ’’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:17 pm, Tue, 26 December 23

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ