AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಟಿಗೆ ಮುತ್ತಿಟ್ಟ ಸಂತೋಷ್; ವಾಕರಿಕೆ ಮಾಡಿಕೊಂಡ ಕಾರ್ತಿಕ್

ಬಿಗ್ ಬಾಸ್ ಮನೆಯಲ್ಲಿ ಹೊಸ ಚಟುವಟಿಕೆ ನೀಡಲಾಯಿತು. ಅದುವೇ ಪೌಸ್ ಹಾಗೂ ಪ್ಲೇ. ಪೌಸ್ ಎಂದಾಗ ಎಲ್ಲರೂ ಹೇಗಿದ್ದಾರೋ ಹಾಗೆಯೇ ನಿಲ್ಲಬೇಕು. ಆಗ ತುಕಾಲಿ ಸಂತೋಷ್​ ಅವರು ಕಾರ್ತಿಕ್​ಗೆ ಮುತ್ತು ಕೊಟ್ಟರು.

ತುಟಿಗೆ ಮುತ್ತಿಟ್ಟ ಸಂತೋಷ್; ವಾಕರಿಕೆ ಮಾಡಿಕೊಂಡ ಕಾರ್ತಿಕ್
ತುಕಾಲಿ-ಕಾರ್ತಿಕ್
ರಾಜೇಶ್ ದುಗ್ಗುಮನೆ
|

Updated on: Dec 27, 2023 | 7:41 AM

Share

ತುಕಾಲಿ ಸಂತೋಷ್ (Tukali Santosh) ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ನಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಸೇರಿದರಂತೂ ಕಾಂಬಿನೇಷನ್ ಭರ್ಜರಿಯಾಗಿ ಇರುತ್ತದೆ. ಈಗ ಕಾರ್ತಿಕ್ ಅವರ ತುಟಿಗೆ ಮುತ್ತಿಡುವ ಪ್ರಯತ್ನ ಮಾಡಿದ್ದಾರೆ ತುಕಾಲಿ ಸಂತೋಷ್. ಇದನ್ನು ನೋಡಿ ಕಾರ್ತಿಕ್ ಅವರು ವಾಕರಿಕೆ ಮಾಡಿಕೊಂಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಡಿಸೆಂಬರ್ 26ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ.

ಬಿಗ್ ಬಾಸ್ ಮನೆಯಲ್ಲಿ ಹೊಸ ಚಟುವಟಿಕೆ ನೀಡಲಾಯಿತು. ಅದುವೇ ಪೌಸ್ ಹಾಗೂ ಪ್ಲೇ. ಪೌಸ್ ಎಂದಾಗ ಎಲ್ಲರೂ ಹೇಗಿದ್ದಾರೋ ಹಾಗೆಯೇ ನಿಲ್ಲಬೇಕು. ಪ್ಲೇ ಎಂದಾಗ ಮುಂದುವರಿಯಬೇಕು. ಕಾರ್ತಿಕ್​ಗೆ ಪೌಸ್ ಎಂದರು ಬಿಗ್ ಬಾಸ್. ಕಾರ್ತಿಕ್ ಅವರು ಸ್ಟ್ಯಾಚ್ಯೂ ತರ ನಿಂತರು. ಅಲ್ಲಿಯೇ ಇದ್ದ ತುಕಾಲಿ ಸಂತೋಷ್ ಅವರು ಮಹಿಳಾ ಸ್ಪರ್ಧಿಯಿಂದ ಲಿಪ್​ಸ್ಟಿಕ್ ತೆಗೆದುಕೊಂಡು ಬಂದಿದ್ದಾರೆ.

ತುಟಿಗೆ ಲಿಪ್​ಸ್ಟಿಕ್ ಹಚ್ಚಿಕೊಂಡು ಕಾರ್ತಿಕ್ ತುಟಿಗೆ ಮುತ್ತಿಡಲು ಹೋಗಿದ್ದಾರೆ. ಆ ಮುತ್ತು ತುಟಿಯ ಬದಲು ಕೆನ್ನೆಗೆ ಬಿದ್ದಿದೆ. ಸ್ವಲ್ಪ ತುಟಿಗೂ ತಾಗಿದೆ. ‘ತುಟಿಗೆ ಮುತ್ತು ಕೊಟ್ಟಿಲ್ಲ ನೀವು’ ಎಂದು ನಮ್ರತಾ ಹೇಳಿದರು. ಆ ಬಳಿಕ ತುಕಾಲಿ ಸಂತೋಷ್ ಅವರಿಗೂ ಪೌಸ್ ಎಂದು ಹೇಳಲಾಯಿತು. ಆಗ ಕೆಲವರು ತುಕಾಲಿ ಸಂತೋಷ್ ಅವರ ಶರ್ಟ್ ಒಳಗೆ ಐಸ್ ಹಾಕಿದರು.

ಇದನ್ನೂ ಓದಿ:‘ಸಂಗೀತಾ ಕಳಪೆ, ವಿನಯ್​ ಉತ್ತಮ’: ಮುಖಕ್ಕೆ ಹೊಡೆದಂತೆ ಹೇಳಿದ ಕಾರ್ತಿಕ್​ ಮಹೇಶ್​

ಕೊನೆಗೆ ಕಾರ್ತಿಕ್​ಗೆ ಪ್ಲೇ ಎಂದರು. ತುಕಾಲಿ ಸಂತೋಷ್ ಕಿಸ್ ಕೊಟ್ಟಿದ್ದನ್ನು ನೆನಪಿಸಿಕೊಂಡು ಅವರಿಗೆ ವಾಕರಿಕೆ ಬಂತು. ಹೀಗಾಗಿ ಅವರು ಸಿಂಕ್ ಬಳಿ ಹೋಗಿ ಬಾಯಿ ತೊಳೆದುಕೊಂಡರು. ಅಲ್ಲದೆ, ‘ಥೂ.. ಥೂ..’ ಎಂದು ಉಗಿದುಕೊಂಡರು. ಬಿಗ್ ಬಾಸ್ ಮನೆಯಲ್ಲಿ ಈ ವಾರ ಅಭಿಮಾನಿಗಳಿಗೆ ಸಖತ್ ಸರ್​ಪ್ರೈಸಿಂಗ್ ಆಗಿತ್ತು. ಕುಟುಂಬದವರು ದೊಡ್ಮನೆಗೆ ಬಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್