AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಟಿಗೆ ಮುತ್ತಿಟ್ಟ ಸಂತೋಷ್; ವಾಕರಿಕೆ ಮಾಡಿಕೊಂಡ ಕಾರ್ತಿಕ್

ಬಿಗ್ ಬಾಸ್ ಮನೆಯಲ್ಲಿ ಹೊಸ ಚಟುವಟಿಕೆ ನೀಡಲಾಯಿತು. ಅದುವೇ ಪೌಸ್ ಹಾಗೂ ಪ್ಲೇ. ಪೌಸ್ ಎಂದಾಗ ಎಲ್ಲರೂ ಹೇಗಿದ್ದಾರೋ ಹಾಗೆಯೇ ನಿಲ್ಲಬೇಕು. ಆಗ ತುಕಾಲಿ ಸಂತೋಷ್​ ಅವರು ಕಾರ್ತಿಕ್​ಗೆ ಮುತ್ತು ಕೊಟ್ಟರು.

ತುಟಿಗೆ ಮುತ್ತಿಟ್ಟ ಸಂತೋಷ್; ವಾಕರಿಕೆ ಮಾಡಿಕೊಂಡ ಕಾರ್ತಿಕ್
ತುಕಾಲಿ-ಕಾರ್ತಿಕ್
ರಾಜೇಶ್ ದುಗ್ಗುಮನೆ
|

Updated on: Dec 27, 2023 | 7:41 AM

Share

ತುಕಾಲಿ ಸಂತೋಷ್ (Tukali Santosh) ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ನಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಸೇರಿದರಂತೂ ಕಾಂಬಿನೇಷನ್ ಭರ್ಜರಿಯಾಗಿ ಇರುತ್ತದೆ. ಈಗ ಕಾರ್ತಿಕ್ ಅವರ ತುಟಿಗೆ ಮುತ್ತಿಡುವ ಪ್ರಯತ್ನ ಮಾಡಿದ್ದಾರೆ ತುಕಾಲಿ ಸಂತೋಷ್. ಇದನ್ನು ನೋಡಿ ಕಾರ್ತಿಕ್ ಅವರು ವಾಕರಿಕೆ ಮಾಡಿಕೊಂಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಡಿಸೆಂಬರ್ 26ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ.

ಬಿಗ್ ಬಾಸ್ ಮನೆಯಲ್ಲಿ ಹೊಸ ಚಟುವಟಿಕೆ ನೀಡಲಾಯಿತು. ಅದುವೇ ಪೌಸ್ ಹಾಗೂ ಪ್ಲೇ. ಪೌಸ್ ಎಂದಾಗ ಎಲ್ಲರೂ ಹೇಗಿದ್ದಾರೋ ಹಾಗೆಯೇ ನಿಲ್ಲಬೇಕು. ಪ್ಲೇ ಎಂದಾಗ ಮುಂದುವರಿಯಬೇಕು. ಕಾರ್ತಿಕ್​ಗೆ ಪೌಸ್ ಎಂದರು ಬಿಗ್ ಬಾಸ್. ಕಾರ್ತಿಕ್ ಅವರು ಸ್ಟ್ಯಾಚ್ಯೂ ತರ ನಿಂತರು. ಅಲ್ಲಿಯೇ ಇದ್ದ ತುಕಾಲಿ ಸಂತೋಷ್ ಅವರು ಮಹಿಳಾ ಸ್ಪರ್ಧಿಯಿಂದ ಲಿಪ್​ಸ್ಟಿಕ್ ತೆಗೆದುಕೊಂಡು ಬಂದಿದ್ದಾರೆ.

ತುಟಿಗೆ ಲಿಪ್​ಸ್ಟಿಕ್ ಹಚ್ಚಿಕೊಂಡು ಕಾರ್ತಿಕ್ ತುಟಿಗೆ ಮುತ್ತಿಡಲು ಹೋಗಿದ್ದಾರೆ. ಆ ಮುತ್ತು ತುಟಿಯ ಬದಲು ಕೆನ್ನೆಗೆ ಬಿದ್ದಿದೆ. ಸ್ವಲ್ಪ ತುಟಿಗೂ ತಾಗಿದೆ. ‘ತುಟಿಗೆ ಮುತ್ತು ಕೊಟ್ಟಿಲ್ಲ ನೀವು’ ಎಂದು ನಮ್ರತಾ ಹೇಳಿದರು. ಆ ಬಳಿಕ ತುಕಾಲಿ ಸಂತೋಷ್ ಅವರಿಗೂ ಪೌಸ್ ಎಂದು ಹೇಳಲಾಯಿತು. ಆಗ ಕೆಲವರು ತುಕಾಲಿ ಸಂತೋಷ್ ಅವರ ಶರ್ಟ್ ಒಳಗೆ ಐಸ್ ಹಾಕಿದರು.

ಇದನ್ನೂ ಓದಿ:‘ಸಂಗೀತಾ ಕಳಪೆ, ವಿನಯ್​ ಉತ್ತಮ’: ಮುಖಕ್ಕೆ ಹೊಡೆದಂತೆ ಹೇಳಿದ ಕಾರ್ತಿಕ್​ ಮಹೇಶ್​

ಕೊನೆಗೆ ಕಾರ್ತಿಕ್​ಗೆ ಪ್ಲೇ ಎಂದರು. ತುಕಾಲಿ ಸಂತೋಷ್ ಕಿಸ್ ಕೊಟ್ಟಿದ್ದನ್ನು ನೆನಪಿಸಿಕೊಂಡು ಅವರಿಗೆ ವಾಕರಿಕೆ ಬಂತು. ಹೀಗಾಗಿ ಅವರು ಸಿಂಕ್ ಬಳಿ ಹೋಗಿ ಬಾಯಿ ತೊಳೆದುಕೊಂಡರು. ಅಲ್ಲದೆ, ‘ಥೂ.. ಥೂ..’ ಎಂದು ಉಗಿದುಕೊಂಡರು. ಬಿಗ್ ಬಾಸ್ ಮನೆಯಲ್ಲಿ ಈ ವಾರ ಅಭಿಮಾನಿಗಳಿಗೆ ಸಖತ್ ಸರ್​ಪ್ರೈಸಿಂಗ್ ಆಗಿತ್ತು. ಕುಟುಂಬದವರು ದೊಡ್ಮನೆಗೆ ಬಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?