Dinesh Phadnis: ‘ಸಿಐಡಿ’ ಧಾರಾವಾಹಿ ನಟ ದಿನೇಶ್​ ಫಡ್ನಿಸ್​ ಇನ್ನಿಲ್ಲ; ಲಿವರ್​ ಸಮಸ್ಯೆಯಿಂದ ನಿಧನ

Fredericks: ಹಿಂದಿ ಕಿರುತೆರೆಯ ಖ್ಯಾತ ನಟ ದಿನೇಶ್​ ಫಡ್ನಿಸ್​ ಅವರು ನಿಧನರಾಗಿದ್ದಾರೆ. ಈ ಕಹಿ ಸುದ್ದಿ ಕೇಳಿ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ‘ಸಿಐಡಿ’ ಸೀರಿಯಲ್​ ಮೂಲಕ ದಿನೇಶ್​ ಅವರು ಫೇಮಸ್​ ಆಗಿದ್ದರು. ತೀವ್ರ ಅನಾರೋಗ್ಯದಿಂದ ಅವರು ಕೊನೆಯುಸಿರು ಎಳೆದಿದ್ದಾರೆ. ಪತ್ನಿ ನಯನಾ ಮತ್ತು ಪುತ್ರಿ ತನು ಅವರನ್ನು ದಿನೇಶ್​ ಅಗಲಿದ್ದಾರೆ.

Dinesh Phadnis: ‘ಸಿಐಡಿ’ ಧಾರಾವಾಹಿ ನಟ ದಿನೇಶ್​ ಫಡ್ನಿಸ್​ ಇನ್ನಿಲ್ಲ; ಲಿವರ್​ ಸಮಸ್ಯೆಯಿಂದ ನಿಧನ
ದಿನೇಶ್​ ಫಡ್ನಿಸ್​

Updated on: Dec 05, 2023 | 12:14 PM

ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದ್ದ ‘ಸಿಐಡಿ’ಯಲ್ಲಿ ಫ್ರೆಡ್ರಿಕ್ಸ್​ (Fredericks) ಎಂಬ ಪಾತ್ರ ಮಾಡುತ್ತಿದ್ದ ನಟ ದಿನೇಶ್​ ಫಡ್ನಿಸ್​ ನಿಧನರಾಗಿದ್ದಾರೆ. ಲಿವರ್​ ಸಮಸ್ಯೆಯಿಂದ (Liver Damage) ಅವರು ಬಳಲುತ್ತಿದ್ದರು. ಕೆಲವೇ ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತರಾಗಿದ್ದಾರೆ. ಡಿಸೆಂಬರ್​ 2ರಿಂದ ಅವರನ್ನು ವೆಂಟಿಲೇಟರ್​ನಲ್ಲಿ ಇರಿಸಲಾಗಿತ್ತು. ಸೋಮವಾರ (ಡಿಸೆಂಬರ್​ 4) ರಾತ್ರಿ ಅವರು ನಿಧನರಾದರು ಎಂದು ತಿಳಿದುಬಂದಿದೆ. ಇಂದು (ಡಿ.5) ದಿನೇಶ್​ ಫಡ್ನಿಸ್​ (Dinesh Phadnis) ಅವರ ಅಂತ್ಯಕ್ರಿಯೆ ನಡೆಯಲಿದೆ.

ದಿನೇಶ್​ ಫಡ್ನಿಸ್​ ಅವರಿಗೆ ಹೃದಯಾಘಾತ ಆಗಿತ್ತು ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿತ್ತು. ಆದರೆ ಅವರಿಗೆ ಹೃದಯಾಘಾತ ಆಗಿಲ್ಲ ಎಂದು ಅವರ ಸ್ನೇಹಿತ ದಯಾನಂದ್​ ಶೆಟ್ಟಿ ಸ್ಪಷ್ಟನೆ ನೀಡಿದ್ದರು. ‘ಇದು ಬೇರೆ ಚಿಕಿತ್ಸೆ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ’ ಎಂದು ಅವರು ಹೇಳಿದ್ದರು. ‘ಸಿಐಡಿ’ ಸೀರಿಯಲ್​ನಲ್ಲಿ ದಿನೇಶ್​ ಮತ್ತು ಫಡ್ನಿಸ್​ ಜೊತೆಯಾಗಿ ನಟಿಸಿದ್ದರು.

ಡಿಟೆಕ್ಟೀವ್​ ಕಥಾಹಂದರದ ‘ಸಿಐಡಿ’ ಧಾರಾವಾಹಿಯು 1998ರಿಂದ 2018ರ ತನಕ ಪ್ರಸಾರವಾಯಿತು. ಭಾರತೀಯ ಕಿರುತೆರೆತಲ್ಲಿ ಅತಿ ಹೆಚ್ಚು ಕಾಲ ಪ್ರಸಾರವಾದ ಸೀರಿಯಲ್​ಗಳಲ್ಲಿ ಇದು ಕೂಡ ಒಂದು. ಈ ಸೀರಿಯಲ್​ನಲ್ಲಿ ದಿನೇಶ್​ ಫಡ್ನಿಸ್​ ಅವರು ಮಾಡಿದ್ದ ಫ್ರೆಡ್ರಿಕ್ಸ್​ ಎಂಬ ಪಾತ್ರವನ್ನು ಜನರು ತುಂಬ ಇಷ್ಟಪಟ್ಟಿದ್ದರು. ನಗು ಉಕ್ಕಿಸುವ ಕಾರಣದಿಂದ ಆ ಪಾತ್ರ ಫೇಮಸ್​ ಆಗಿತ್ತು. ದಿನೇಶ್​ ಫಡ್ನಿಸ್​ ನಿಧನಕ್ಕೆ ಅಭಿಮಾನಿಗಳು, ಆಪ್ತರು ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಲಾಗುತ್ತಿದೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಖ್ಯಾತ ಕಿರುತೆರೆ ನಟ ನಿಧನ, ಮೂವರ ಸ್ಥಿತಿ ಗಂಭೀರ

ನಟನೆ ಮಾತ್ರವಲ್ಲದೇ ಇದೇ ಸೀರಿಯಲ್​ನ ಕೆಲವು ಸಂಚಿಕೆಗಳಿಗೆ ಬರಹಗಾರನಾಗಿಯೂ ದಿನೇಶ್ ಫಡ್ನಿಸ್​ ಅವರು ಕೆಲಸ ಮಾಡಿದ್ದರು. ‘ತಾರಕ್​ ಮೆಹ್ತಾ ಕಾ ಉಲ್ಟಾ ಚಷ್ಮಾ’ ಸೀರಿಯಲ್​ನಲ್ಲಿ ಅವರು ಅತಿಥಿ ಪಾತ್ರವನ್ನೂ ಮಾಡಿದ್ದರು. ‘ಸೂಪರ್​ 30’, ‘ಸರ್ಫರೋಷ್​’ ಮುಂತಾದ ಸಿನಿಮಾಗಳಲ್ಲಿಯೂ ದಿನೇಶ್​ ನಟಿಸಿದ್ದರು. 57ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. ದೌಲತ್​ ನಗರ್​ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us