ವರ್ತೂರು ಸಂತೋಷ್​ ಬಿಗ್ ಬಾಸ್ ಮನೆಯಿಂದ ಎಗ್ಸಿಟ್ ಆಗಿದ್ದು ಹೇಗಿತ್ತು? ಎಪಿಸೋಡ್​ನಲ್ಲಿ ತೋರಿಸಿದ್ದಿಷ್ಟು

ಮಿಡ್ ವೀಕ್ ಎಲಿಮಿನೇಷನ್ ಬಿಗ್ ಬಾಸ್​ಗೆ ಹೊಸದೇನು ಅಲ್ಲ. ಆದರೆ, ಈ ರೀತಿಯ ಎಲಿಮಿನೇಷನ್​ಗಳು ಸೀಸನ್​ ಆರಂಭದಲ್ಲಿ ಇರುವುದಿಲ್ಲ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಬಿಗ್ ಬಾಸ್ ಸ್ಪರ್ಧಿಗಳನ್ನು ಈ ರೀತಿ ಹೊರಕ್ಕೆ ಕಳುಹಿಸಲಾಗಿದೆ. ಈಗ ಸೀಸನ್ 10ರಲ್ಲೂ ಹಾಗೆಯೇ ಆಗಿದೆ.

ವರ್ತೂರು ಸಂತೋಷ್​ ಬಿಗ್ ಬಾಸ್ ಮನೆಯಿಂದ ಎಗ್ಸಿಟ್ ಆಗಿದ್ದು ಹೇಗಿತ್ತು? ಎಪಿಸೋಡ್​ನಲ್ಲಿ ತೋರಿಸಿದ್ದಿಷ್ಟು
ಸಂತೋಷ್

Updated on: Oct 24, 2023 | 9:36 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿ ವರ್ತೂರು ಸಂತೋಷ್ (Varthur Santosh) ಅವರನ್ನು ಅರಣ್ಯಾಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ಹುಲಿ ಉಗುರು ಹೊಂದಿರುವ ಆರೋಪ ಅವರ ಮೇಲಿದೆ. ಸದ್ಯ ಅವರನ್ನು 14 ದಿನ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈ ಮೂಲಕ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು ಬಹುತೇಕ ಖಚಿತವಾಗಿದೆ. ಅವರು ಎಗ್ಸಿಟ್ ಆಗುವ ಸಂದರ್ಭದ ದೃಶ್ಯವನ್ನು ಕೆಲವೇ ಸೆಕೆಂಡ್​ನಲ್ಲಿ ತೋರಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಮಿಡ್ ವೀಕ್ ಎಲಿಮಿನೇಷನ್ ಬಿಗ್ ಬಾಸ್​ಗೆ ಹೊಸದೇನು ಅಲ್ಲ. ಆದರೆ, ಈ ರೀತಿಯ ಎಲಿಮಿನೇಷನ್​ಗಳು ಸೀಸನ್​ ಆರಂಭದಲ್ಲಿ ಇರುವುದಿಲ್ಲ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಬಿಗ್ ಬಾಸ್ ಸ್ಪರ್ಧಿಗಳನ್ನು ಈ ರೀತಿ ಹೊರಕ್ಕೆ ಕಳುಹಿಸಲಾಗಿದೆ. ಈಗ ಸೀಸನ್ 10ರಲ್ಲೂ ಹಾಗೆಯೇ ಆಗಿದೆ. ಸಂತೋಷ್ ಅವರು ಹುಲಿ ಉಗುರು ಹೊಂದಿದ್ದರಿಂದ ಅವರನ್ನು ‘ವನ್ಯಜೀವಿ ಸಂರಕ್ಷಣಾ ಕಾಯ್ದೆ’ ಅಡಿಯಲ್ಲಿ ಬಂಧಿಸಲಾಗಿದೆ.

ಅಕ್ಟೋಬರ್ 23ರ ಎಪಿಸೋಡ್​ನಲ್ಲಿ ಸಂತೋಷ್ ಅವರ ಎಲಿಮಿನೇಷನ್ ನೋಡಲು ಕಾದಿದ್ದರು. ಆದರೆ, ಅದನ್ನು ಎಪಿಸೋಡ್ ಕೊನೆಯಲ್ಲಿ ಕೆಲವೇ ಸೆಕೆಂಡ್ ತೋರಿಸಲಾಗಿದೆ. ಕನ್ಫೆಷನ್ ರೂಂಗೆ ಕರೆದು ಸಂತೋಷ್ ಅವರ ಹಣೆಗೆ ಪಟ್ಟಿ ಕಟ್ಟಲಾಗಿದೆ. ಆ ಬಳಿಕ ಅವರನ್ನು ಕರೆದೊಯ್ಯಲಾಗಿದೆ. ಆದರೆ, ಇದನ್ನು ಎಪಿಸೋಡ್​ನಲ್ಲಿ ತೋರಿಸಿಲ್ಲ. ಸಂತೋಷ್ ಹೊರ ಹೋದ ಬಗ್ಗೆ ಬಿಗ್ ಬಾಸ್​ನಲ್ಲೂ ಯಾವುದೇ ಚರ್ಚೆ ಆಗಿಲ್ಲ.

ಸದ್ಯ ಸಂತೋಷ್ ಅವರನ್ನು ವಿಚಾರಣೆ ಮಾಡಲಾಗುತ್ತಿದೆ. ಒಂದೊಮ್ಮೆ ಅಪರಾಧ ಸಾಬೀತಾದರೆ ಸಂತೋಷ್​ ಅವರಿಗೆ 3-7 ವರ್ಷಗಳವರೆಗೆ ಶಿಕ್ಷೆ ಹಾಗೂ 10,000ರಿಂದ 25,000ದವರೆಗೆ ದಂಡ ವಿಧಿಸುವ ಅವಕಾಶ ಇದೆ. ಮುಂದೇನಾಗುತ್ತದೆ ಎಂಬ ಬಗ್ಗೆ ಅವರ ಅಭಿಮಾನಿಗಳಿಗೆ ಆತಂಕ ಇದೆ.

ಇದನ್ನೂ ಓದಿ: ವರ್ತೂರು ಸಂತೋಷ್ ಧರಿಸಿದ್ದು ಹುಲಿ ಉಗುರು ಅನ್ನೋದು ಸಾಬೀತು, ಶೀಘ್ರವೇ ಕೋರ್ಟ್​ಗೆ ಹಾಜರು 

ವರ್ತೂರು ಸಂತೋಷ್ ಅವರು ರೈತ. ಟೊಮ್ಯಾಟೋ ಬೆಳೆದು ಅವರು ಸಾಕಷ್ಟು ಲಾಭ ಕಂಡರು. ಹಳ್ಳಿಕಾರ್ ಕ್ಯಾಟಲ್​ ಬ್ರೀಡ್​​ನ ಬಗ್ಗೆ ಅವರು ಹೆಚ್ಚು ಕಾಳಜಿ ಹೊಂದಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆಗೆ ಒಳಗಾಗುತ್ತಾರೆ. ಬಿಗ್ ಬಾಸ್​ಗೆ ಹೋದ ಬಳಿಕ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು.

ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಕ್ಕೆ ನಿತ್ಯದ ಎಪಿಸೋಡ್ ಪ್ರಸಾರ ಆಗುತ್ತದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

 

 

 

Published On - 7:10 am, Tue, 24 October 23

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us