AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶೋ​ಗೆ, ಹೆಣ್ಣುಮಕ್ಕಳಿಗೆ ಗೌರವ ಕೊಡು’; ಅಶ್ಲೀಲವಾಗಿ ವರ್ತಿಸಿದ ಮೈಕೆಲ್​ ವಿರುದ್ಧ ನಮ್ರತಾ ಸಿಟ್ಟು

ನಾಮಿನೇಷನ್​ ಆದವರ ಹಣೆಗೆ ಒಂದು ಪಟ್ಟಿ ಹಚ್ಚಬೇಕಿತ್ತು. ತನಿಷಾ ಅಂಟಿಸಿದ ಪಟ್ಟಿಯನ್ನು ಮೈಕೆಲ್ ಬ್ಯಾಕ್​ಗೆ ಅಂಟಿಸಿಕೊಂಡಿದ್ದರು. ನಮ್ರತಾ ಬಂದ ತಕ್ಷಣ ಅವರು ಬ್ಯಾಕ್​ ತೋರಿಸಿದರು. ಇದು ನಮ್ರತಾಗೆ ಇಷ್ಟ ಆಗಲಿಲ್ಲ.

‘ಶೋ​ಗೆ, ಹೆಣ್ಣುಮಕ್ಕಳಿಗೆ ಗೌರವ ಕೊಡು’; ಅಶ್ಲೀಲವಾಗಿ ವರ್ತಿಸಿದ ಮೈಕೆಲ್​ ವಿರುದ್ಧ ನಮ್ರತಾ ಸಿಟ್ಟು
ನಮ್ರತಾ-ಮೈಕೆಲ್
ರಾಜೇಶ್ ದುಗ್ಗುಮನೆ
|

Updated on:Nov 01, 2023 | 10:25 AM

Share

ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಸ್ಪರ್ಧಿಗಳ ಮಧ್ಯೆ ಜಗಳ ಆಗೋದು ಕಾಮನ್. ಅದರಲ್ಲೂ ಸಣ್ಣ ಪುಟ್ಟ ವಿಚಾರಗಳೇ ದೊಡ್ಡ ಸಮಸ್ಯೆ ತಂದೊಡ್ಡುತ್ತವೆ. ‘ಕನ್ನಡ ಬಿಗ್ ಬಾಸ್ ಸೀಸನ್​ 10’ರಲ್ಲೂ ಇದು ಮುಂದುವರಿದಿದೆ. ಇತ್ತೀಚೆಗೆ ನಮ್ರತಾ ಗೌಡ (Namrata Gowda) ಹಾಗೂ ತನಿಷಾ ಕುಪ್ಪಂಡ ಸಾಕಷ್ಟು ಕಿತ್ತಾಡಿಕೊಂಡಿದ್ದರು. ಈಗ ನಮ್ರತಾ ಹಾಗೂ ಮೈಕೆಲ್ ವಿರುದ್ಧ ದೊಡ್ಡ ಕಲಹ ನಡೆದಿದೆ. ಮೈಕೆಲ್ ಅಗೌರವ ತೋರಿಸಿದರು ಎಂದು ನಮ್ರತಾ ಆರೋಪಿಸಿದ್ದಾರೆ. ಅಷ್ಟಕ್ಕೂ ಅಲ್ಲಾಗಿದ್ದೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಮಂಗಳವಾರದ (ಅಕ್ಟೋಬರ್ 31) ಎಪಿಸೋಡ್​​ನಲ್ಲಿ ನಾಮಿನೇಷನ್ ಪ್ರಕ್ರಿಯೆ ತೋರಿಸಲಾಯಿತು. ಈ ಬಾರಿ ನಾಮಿನೇಷನ್ ಅಧಿಕಾರ ಪಡೆಯಲು ಬಿಗ್ ಬಾಸ್ ಹೊಸ ರೀತಿಯ ಆಯ್ಕೆ ನೀಡಿದ್ದರು. ಹೀಗಾಗಿ ಬಿಗ್ ಬಾಸ್​ ಮನೆಯ ಕೆಲವೇ ಕೆಲವು ಮಂದಿಗೆ ನಾಮಿನೇಷನ್ ಮಾಡುವ ಅಧಿಕಾರ ಸಿಕ್ಕಿತು. ಡ್ರೋನ್ ಪ್ರತಾಪ್ ಕೃಪೆಯಿಂದ ಬಹುತೇಕ ಮಹಿಳಾ ಸ್ಪರ್ಧಿಗಳು ಈ ಅಧಿಕಾರ ಪಡೆದರು. ತನಿಷಾ ಅವರು ಮೈಕೆಲ್​​ನ ನಾಮಿನೇಟ್ ಮಾಡಿದರು.

ನಾಮಿನೇಷನ್​ ಆದವರ ಹಣೆಗೆ ಒಂದು ಪಟ್ಟಿ ಹಚ್ಚಬೇಕಿತ್ತು. ತನಿಷಾ ಅಂಟಿಸಿದ ಪಟ್ಟಿಯನ್ನು ಮೈಕೆಲ್ ಬ್ಯಾಕ್​ಗೆ ಅಂಟಿಸಿಕೊಂಡಿದ್ದರು. ನಮ್ರತಾ ಬಂದ ತಕ್ಷಣ ಅವರು ಬ್ಯಾಕ್​ ತೋರಿಸಿದರು. ಇದು ನಮ್ರತಾಗೆ ಇಷ್ಟ ಆಗಲಿಲ್ಲ. ‘ನಾನು ನಿಮ್ಮನ್ನು ಗೌರವಿಸಲ್ಲ’ ಎಂದರು ಮೈಕೆಲ್. ‘ನಾನು ಕೂಡ ನಿನ್ನ ರೆಸ್ಪೆಕ್ಟ್ ಮಾಡಲ್ಲ. ನಾನು ಶೋಗೆ ಗೌರವ ಕೊಡ್ತೀನಿ. ನೀನು ಕೂಡ ಶೋಗೆ ಗೌರವ ಕೊಡು. ಮಹಿಳೆಯರಿಗೆ ಗೌರವ ಕೊಡು. ಅಲ್ಲಂಟಿಸಿಕೊಂಡು ಇದನ್ನು ತೋರಿಸೋಕೆ ನೀನ್ಯಾರು’ ಎಂದು ಜೋರಾಗಿಯೇ ಮಾತನಾಡಿದರು ನಮ್ರತಾ.

ಇದನ್ನೂ ಓದಿ: ನಾಮಿನೇಷನ್ ನಿಂದ ಜಗಳ, ವಿನಯ್ ಅಬ್ಬರ, ತುಕಾಲಿ, ಭಾಗ್ಯಶ್ರೀ ಕಣ್ಣೀರು, ನಮ್ರತಾ ಜಗಳ

ಈ ಬೆಳವಣಿಗೆ ನೋಡುತ್ತಿದ್ದ ವಿನಯ್ ಅವರು, ‘ಇದು ಹಾಸ್ಯಕ್ಕಾಗಿತ್ತು ಅಷ್ಟೇ. ಅವನ ಪರವಾಗಿ ನಾನು ಕ್ಷಮೆ ಕೇಳುತ್ತೇನೆ’ ಎಂದರು. ನಂತರ ಮೈಕೆಲ್ ಹಾಗೂ ನಮ್ರತಾ ನಡುವಿನ ಕಿತ್ತಾಟ ಮುಂದುವರಿಯಿತು. ಈಶಾನಿ ಕೂಡ ಬಂದು ಮೈಕೆಲ್​ಗೆ ಬುದ್ಧಿವಾದ ಹೇಳಿದರು. ಮೈಕೆಲ್ ತಮ್ಮ ತಪ್ಪಿಲ್ಲ ಎಂದು ವಾದಿಸಿದರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:11 am, Wed, 1 November 23

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ