ಕಿಚ್ಚನ ಚಪ್ಪಾಳೆ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ ನಮ್ರತಾ ಗೌಡ; ಫ್ಯಾನ್ಸ್ ಅಸಮಧಾನ

ಒಂದು ವಾರದ ಪರ್ಫಾರ್ಮೆನ್ಸ್​ನ ಗಮನದಲ್ಲಿ ಇಟ್ಟುಕೊಂಡು ಈ ಚಪ್ಪಾಳೆ ಕೊಡಲಾಗುತ್ತದೆ. ಹೀಗಿರುವಾಗ ಅದರ ಬಗ್ಗೆಯೇ ಅನುಮಾನ ವ್ಯಕ್ತಪಡಿಸೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಕಿಚ್ಚನ ಚಪ್ಪಾಳೆ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ ನಮ್ರತಾ ಗೌಡ; ಫ್ಯಾನ್ಸ್ ಅಸಮಧಾನ
ಸುದೀಪ್​-ನಮ್ರತಾ

Updated on: Dec 11, 2023 | 9:25 AM

ಕಿಚ್ಚ ಸುದೀಪ್ (Kichcha Sudeep) ಅವರು ಪ್ರತಿ ವಾರ ಕಿಚ್ಚನ ಚಪ್ಪಾಳೆ ನೀಡುತ್ತಾರೆ. ಆ ವಾರ ಪೂರ್ತಿ ಯಾರು ಒಳ್ಳೆಯ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡಿದರೋ ಅವರಿಗೆ ಈ ಚಪ್ಪಾಳೆ ಸಿಗುತ್ತದೆ. ಎಂಟನೇ ವಾರ ಈ ಚಪ್ಪಾಳೆ ನಮ್ರತಾಗೆ ಸಿಕ್ಕಿತ್ತು. ಒಂಭತ್ತನೇ ವಾರ ಕಾರ್ತಿಕ್ ಮಹೇಶ್ ಅವರು ಸುದೀಪ್ ನೀಡುವ ಈ ಗೌರವವನ್ನು ಪಡೆದರು. ಈಗ ನಮ್ರತಾ ಗೌಡ ಅವರು ಕಿಚ್ಚನ ಚಪ್ಪಾಳೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ವಿನಯ್ ಹಾಗೂ ನಮ್ರತಾ ಈ ಬಗ್ಗೆ ಚರ್ಚೆ ಮಾಡಿದ್ದಾರೆ.

ಕಳೆದವಾರ ಕಾರ್ತಿಕ್ ಅವರಿಂದ ಕೆಲವು ತಪ್ಪುಗಳು ಆಗಿದ್ದವು. ಉಳಿದ ಎಲ್ಲರಿಗೆ ಹೋಲಿಸಿದರೆ ಅವರ ಪರ್ಫಾರ್ಮೆನ್ಸ್ ಉತ್ತಮವಾಗಿತ್ತು. ಈ ವಾರ ಯಾರಿಗೂ ಕಿಚ್ಚನ ಚಪ್ಪಾಳೆ ಸಿಗುವುದಿಲ್ಲ ಎಂದು ಕೆಲವರು ಭಾವಿಸಿದ್ದರು. ಆದರೆ, ಸುದೀಪ್ ಅವರು ಕಾರ್ತಿಕ್ ಅವರಿಗೆ ಕಿಚ್ಚನ ಚಪ್ಪಾಳೆ ನೀಡಿದರು. ಇದನ್ನು ನೋಡಿ ವಿನಯ್ ಅವರು ಸಾಕಷ್ಟು ಉರಿದುಕೊಂಡರು. ನಮ್ರತಾ ಅವರಿಗಂತೂ ಇದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಶನಿವಾರದ ಎಪಿಸೋಡ್ ಮುಗಿದ ಬಳಿಕ ಈ ಬಗ್ಗೆ ಚರ್ಚೆ ಮಾಡಿದ್ದಾರೆ.

ನಮ್ರತಾ, ವಿನಯ್ ಹಾಗೂ ಮೈಕಲ್ ಕುಳಿತಿದ್ದರು. ಈ ವೇಳೆ ಕಿಚ್ಚನ ಚಪ್ಪಾಳೆ ಬಗ್ಗೆ ಚರ್ಚೆ ಆಗಿದೆ. ‘ಕಿಚ್ಚನ ಚಪ್ಪಾಳೆಯನ್ನು ಯಾರೂ ಇಲ್ಲ ಎಂದು ಅವರಿಗೆ ನೀಡಿದ್ರಾ ಅಥವಾ ನಿಜವಾಗಲೂ ಅವರ ಸಾಮರ್ಥ್ಯ ನೋಡಿ ಕೊಟ್ರಾ’ ಎಂದು ನಮ್ರತಾ ಪ್ರಶ್ನೆ ಮಾಡಿದ್ದಾರೆ. ಆಗ ವಿನಯ್, ‘ನಾನು ಕೆಟ್ಟದಾಗಿ ಆಡಿದೆ, ಅದಕ್ಕೆ ಕಾರ್ತಿಕ್​ಗೆ ಸಿಕ್ತು’ ಎಂದಿದ್ದಾರೆ. ಸದ್ಯ ನಮ್ರತಾ ಹೇಳಿಕೆಗೆ ಸಾಕಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಕೊಟ್ಟ ಮಾತನ್ನು ಉಳಿಸಿಕೊಂಡ್ರಿ’; ನಮ್ರತಾಗೆ ಕಿಚ್ಚನ ಚಪ್ಪಾಳೆ ಕೊಟ್ಟು ಪ್ರತಾಪ್​ನ​ ಕಾಲೆಳೆದ ಸುದೀಪ್

ಕಿಚ್ಚನ ಚಪ್ಪಾಳೆ ಸುಖಾಸುಮ್ಮನೆ ಯಾರಿಗೂ ಸಿಗುವುದಿಲ್ಲ. ಒಂದು ವಾರದ ಪರ್ಫಾರ್ಮೆನ್ಸ್​ನ ಗಮನದಲ್ಲಿ ಇಟ್ಟುಕೊಂಡು ಈ ಚಪ್ಪಾಳೆ ಕೊಡಲಾಗುತ್ತದೆ. ಹೀಗಿರುವಾಗ ಅದರ ಬಗ್ಗೆಯೇ ಅನುಮಾನ ವ್ಯಕ್ತಪಡಿಸೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ‘ನಮ್ರತಾಗೆ ಚಪ್ಪಾಳೆ ನೀಡಿದ್ದಕ್ಕೆ ಸುದೀಪ್ ಅವರಿಗೆ ವಿಷಾದ ಉಂಟಾಗಿರಬಹುದು’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:38 am, Mon, 11 December 23

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us